ಪುಟಗಳು

ಶನಿವಾರ, ಜನವರಿ 11, 2025

ಸಂಜೀವಕುಮಾರ ಜುಮ್ಮಾ.

ಸಾಹಿತಿ ಸಂಜೀವಕುಮಾರ ಜುಮ್ಮಾ ರವರು ಔರಾಧ ತಾಲೂಕಿನ ಸಂತಪೂರ ಗ್ರಾಮದ ಮಡಿವಾಳಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೭-೧೦೭೧ ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್, ವಚನ ಸಾಹಿತ್ಯದಲ್ಲಿ ಡಿಪ್ಲೋಮಾ ಪದವಿಧರರಾದ ಇವರು ಠಾಣಾ ಕುಸನೂರಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ `ಡಾ.ಚನ್ನಬಸವ ಪಟ್ಟದೇವರ ಜೀವನ ಮತ್ತು ಸಾಧನೆ’ ಎಂಬ ಕೃತಿ ರಚಿಸಿ ಪ್ರಕಟಿಸಿದರೆ, `ಗುರುಕುಲ ದರ್ಶನ, ಚನ್ನಬಸವ ಕಲ್ಯಾಣ, ಕನ್ನಡ ಜಂಗಮ, ಅನುಭವ ಮಂಟಪ ಸ್ಮರಣ ಸಂಚಿಕೆ, ಬಸವಣ್ಣನವರ ಆಯ್ದ ವಚನಗಳು’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ಎರಡು ಅವಧಿ ಔರಾದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ, ಮತ್ತು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ