ಪುಟಗಳು

ಚಿಟಗುಪ್ಪ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಿಟಗುಪ್ಪ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಫೆಬ್ರವರಿ 13, 2025

ಅಜೇಯ್ ಪಿ ಎಸ್

'ಕವಿ ರಾಕ್ಷಸ' ಎಂಬ ಕಾವ್ಯ ನಾಮದಿಂದ ಬರೆಯುತ್ತಿರುವ ಯುವ ಸಾಹಿತಿ ಅಜೇಯ್ ಪಿ ಎಸ್ (ಎ.ಜೆ) ರವರು ಬೀದರ ಜಿಲ್ಲೆ, ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದವರು. ತಂದೆ ಪ್ರಭು ತಾಯಿ ಅನೀತಾ ರವರ ಸುಪತ್ರನಾಗಿ ದಿನಾಂಕ 20-7-1998 ರಲ್ಲಿ ಜನಿಸಿದ್ದಾರೆ. ಇಂಜಿನಿಯರಿಂಗನಲ್ಲಿ ಪದವೀಧರನಾದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ. ಮತ್ತು 'ಮೊಗ್ಗು' ಎನ್ನುವ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ ' ಅಷ್ಟೇಯಲ್ಲದೇ ಕೆಲ ಕತೆ ಕವನ ಲೇಖನ ಹಾಗೂ ಮಿನಿಕಾದಂಬರಿಗಳು ಬರೆದಿದ್ದು ಅವು ಪ್ರಕಟಣೆಯ ಹಂತದಲ್ಲಿವೆ. ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಸಧ್ಯ ಸಾಫ್ಟವೇರ್ ಇಂಜನಿಯರಾಗಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕಲ್ಯಾಣ ಸಿರಿಗನ್ನಡ ಸಾಹಿತ್ಯ ತಾಣಕ್ಕೆ ಬೇಟಿ ಕೊಡಿ

ಮಂಗಳವಾರ, ಜನವರಿ 14, 2025

ಜ್ಞಾನೇಶ್ವರಿ ಹಳ್ಳಿಖೇಡ

ಯುವ ಕವಯತ್ರಿಯಾದ ಜ್ಞಾನೇಶ್ವರಿ ಹಳ್ಳಿಖೇಡ್ ರವರು ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಮಾಣಿಕಪ್ಪ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧೫-೮-೧೯೯೮ರಲ್ಲಿ ಜನಿಸಿದ್ದಾರೆ. ಬಿ.ಎ. ಎಂ.ಎಸ್ .ಪದವಿ ವಿದ್ಯಾರ್ಥಿನಿಯಾದ ಇವರು ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕಾಲೇಜು ಸೇರಿದ ನಂತರ ಕತೆ, ಕವನ,ಲೇಖನ, ಹನಿಗವನ ರಚನೆಯಲ್ಲಿ ತೊಡಗಿ ವೈದ್ಯ ಸಾಹಿತ್ಯಕ್ಕೆ ಸಂಬAಧಿಸಿದ ಶಾರೀರಿಕ ಸಮಸ್ಯೆ ಮತ್ತು ಆಹಾರ ಪದ್ದತಿಯ ಕುರಿತಾದ ಲೇಖನಗಳು ಮತ್ತು ಸಾಮಾಜಿಕ ಶೋಷಣೆಯ ವಿರುದ್ಧದ ಕವಿತೆಗಳು ಬರೆಯುತ್ತಿದ್ದಾರೆ. ಮತ್ತು `ಭಾವದಲೆ' ಎಂಬ ಕವನ ಸಂಕಲನವೊAದು ಬರೆದಿದ್ದು ಅದು ಅಪ್ರಕಟಿತವಾಗಿದೆ. ಇವರ ಬರಹಗಳು ಶಿವಮೊಗ್ಗದ `ನಿಮಗಾಗಿ ಆಯುರ್ವೇದ' ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರು ಹಲವಾರು ವಿವಿಧ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.

ಶಾಂತಯ್ಯ ಪುರಾಣಿಕ.

ಯುವ ಸಾಹಿತಿ ಶಾಂತಯ್ಯ ಪುರಾಣಿಕ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮೀನಕೇರಾ ಗ್ರಾಮದ ರೇವಣಸಿದ್ದಯ್ಯಾ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨೫-೫-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ.(ಇAಗ್ಲೀಷ) ಸ್ನಾತಕೊತ್ತರ ಪದವಿಧರರಾದ ಇವರು ಶಿಕ್ಷಕ ವೃತ್ತಿಯಲ್ಲಿದ್ದು, ಕೆಲ ಕಾಲ ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದಲ್ಲಿಯು ತುಂಬ ಆಸಕ್ತರಾದ ಇವರು ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಕವನ ಸಂಕಲನವೊAದು ಪ್ರಕಟಣೆಯ ಹಂತದಲ್ಲಿವೆ.

ಸಂಗಮೇಶ ಎನ್.ಜವಾದಿ

ಹವ್ಯಾಸಿ ಬರಹಗಾರ ಸಂಗಮೇಶ ಎನ್.ಜವಾದಿ. ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಹಾಗೂ ಸರಸ್ವತಿ ದಂಪತಿಗಳಿಗೆ ದಿನಾಂಕ ೨-೮-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಂ.ಎಸ್ಸಿ. ಎಚ್.ಆರ್.ಎಂ.ಕAಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಆಗ್ರಿ ಪದವಿಧರರಾದ ಇವರು ಕೃಷಿ ಮತ್ತು ಸಮಾಜ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ, ಕವನ ಲೇಖನಗಳನ್ನು ಬರೆಯುತ್ತಿದ್ದಾರೆ. ಮತ್ತು ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ್ದು, ನೂರಾರು ಲೇಖನ ಬರಹಗಳನ್ನು ಬರೆದಿದ್ದು, ಅವು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಚಿಟಗುಪ್ಪ ತಾಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಹಾಗೂ ಜಿಲ್ಲೆಯ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಅಭಿಯಾನ ಸಮಿತಿಯ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಲೇಖನಗಳ ಪುಸ್ತಕವು ಸದ್ಯದಲ್ಲಿಯೆ ಪ್ರಕಟಿಸಲಿದ್ದಾರೆ. ಇವರಿಗೆ ರಾಜ್ಯ ಮಟ್ಟದ ವಿವಿಧ ೨೩ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ ೮೦ಕ್ಕೂ ಹೆಚ್ಚು ಬಹುಮಾನಗಳು ಲಭಿಸಿವೆ.

ಪ್ರಶಾಂತ ಹೊಸಮನಿ.

ಪತ್ರಕರ್ತ ಹಾಗೂ ಯುವ ಬರಹಗಾರರಾದ ಪ್ರಶಾಂತ ಹೊಸಮನಿ ಯವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೋರಾಳ ಗ್ರಾಮದ ಮಾರುತಿರಾವ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೫-೬-೧೯೮೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೨೦೦೨ರಿಂದ ಪತ್ರಕರ್ತರಾಗಿ ವಚನಕ್ರಾಂತಿ, ಬೀದರ ಕ್ರಾಂತಿ, ಸಂಜೆವಾಣಿ, ಜನದನಿ, ವಿಶ್ವವಾಣಿ, ಪ್ರಜಾವಾಣಿ, ಕರ್ನಾಟಕ ಸಂದ್ಯಾ ಕಾಲ ಪತ್ರಿಕೆಗಳ ವರದಿಗಾರರಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅನೇಕ ಕವನ, ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಓಂಕಾರ ಎನ್. ಮಠಪತಿ

ಯುವ ಬರಹಗಾರ, ಪತ್ರಕರ್ತರಾದ ಓಂಕಾರ ಮಠಪತಿಯವರು. ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ವೇದಮೂರ್ತಿ ನಾಗಯ್ಯ ಸ್ವಾಮಿ ಮಠಪತಿ ಮತ್ತು ಸಂಗಮ್ಮ ನಾಗಯ್ಯ ಸ್ವಾಮಿ ಮಠಪತಿ ದಂಪತಿಗಳಿಗೆ ದಿನಾಂಕ ೨೫-.೬-೧೯೭೬ರಲ್ಲಿ ಜನಿಸಿದ್ದಾರೆ. ಡಿ.ಫಾರ್ಮಸಿ, ಎಂ.ಎ ಪತ್ರಿಕೋದ್ಯಮ ಪದವಿಧರರಾದ ಇವರು ಕೆಲ ವರ್ಷ ಸಂಯುಕ್ತ ಕರ್ನಾಟಕ, ಸಂಜೆವಾಣಿ, ಪತ್ರಿಕೆಯ ವರದಿಗಾರರಾಗಿ, ನಂತರ ಸುವರ್ಣ, ಸಮಯ ಚಾನಲ್‌ಗಳ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ ಸದ್ಯ ಬಿ.ಟಿವಿಯ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಇತ್ಯಾದಿ ಬರಹಗಳು ಬರೆದಿದ್ದು ಅವು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಮತ್ತು ಪತ್ರಿಕಾ ರಂಗದ ಸೇವೆಯನ್ನು ಕಂಡು ರಾಜ್ಯದಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ತೀರ ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ಸುದ್ದಿ ವಿಷಯದಲ್ಲಿ ಎಂದೂ ರಾಜಿಮಾಡಿಕೊಂಡಿಲ್ಲ ಎಂಬುದು ಮೆಚ್ಚುವಂತಹದ್ದು. ಯಾವುದೇ ವಿಷಯ ಇದ್ದರೂ ತೀರ ಹರಿತವಾಗಿ ಬರೆದು ಬಿತ್ತರಿಸುತ್ತಿರುವುದು ರಾಜ್ಯದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿದ್ದಾರೆ.

ರಮೇಶ ಸಲಗರ

ಉದಯೋನ್ಮುಖ ಬರಹಗಾರ ರಮೇಶ ಸಲಗರ ರವರು ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ಚಂದ್ರಶೆಟ್ಟಿ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧೫-೧೧-೧೯೬೮ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾಗಿರುವ ಇವರು ಮುಸ್ತರಿಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಕತೆ ಕವನ ಲೇಖನ ಚುಟುಕು ರೂಪಕಗಳನ್ನು ಬರೆದಿದ್ದಾರೆ. `ಶರಣ ಸಂಸ್ಕೃತಿ' ಮತ್ತು `ಕಂದಾಚಾರ' ಎಂಬ ರೂಪಕಗಳನ್ನು ಬರೆದು ನಿರ್ದೇಶಕರಾಗಿ ಬಸವಕಲ್ಯಾಣ ಅನುಭವ ಮಂಟಪದ ಶರಣ ಕಮ್ಮಟದಲ್ಲಿ ಹಾಗೂ ಕೊಡಂಬಲ ಮೊದಲಾದ ಹಳ್ಳಿಗಳಲ್ಲಿ ಪ್ರದರ್ಶಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರಿಗೆ `ಜನ ಮೆಚ್ಚಿದ ಶಿಕ್ಷಕ', `ಶಿಕ್ಷಕ ರತ್ನ', `ಶಿಕ್ಷಣ ಸಿರಿ' `ಆದರ್ಶ ಶಿಕ್ಷಕ ' ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಇವರು ಚಿಟಗುಪ್ಪ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಎಸ್.ಎಲ್.ದಂಡಿನ್

ಹವ್ಯಾಸಿ ಬರಹಗಾರ ಡಾ.ಎಸ್.ಎಲ್.ದಂಡಿನ್ ರವರು ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಲಕ್ಷ್ಮಣ ಮತ್ತು ಸಮವ್ವ ದಂಪತಿಗಳಿಗೆ ದಿನಾಂಕ ೧-೬-೧೯೫೫ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ನಾಟಿ ವೈದ್ಯರಾಗಿ, ಸಮಾಜ ಸೇವಕರಾಗಿ ದುಡಿದಿದ್ದಾರೆ. ಮತ್ತು ೧೯೭೭ರಿಂದ ೧೯೮೧ರ ವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ದಲಿತಪರ ಕವನ, ಲೇಖನ, ಚುಟುಕು ಮತ್ತು ಬೀದಿ ನಾಟಕಗಳನ್ನು ರಚಿಸಿದ್ದಾರೆ. ನರಗುಂದದ ಬಂಡಾಯದ ವೇಳೆ ಕೆಲ ನಾಟಕಗಳು ಪ್ರದರ್ಶನ ಮಾಡಿದ್ದಾರೆ.

ವೀರಭದ್ರಪ್ಪ ಉಪ್ಪಿನ

ಕವಿ, ಕಲಾವಿದ, ನಾಟಕಕಾರಾದ ವೀರಭದ್ರಪ್ಪ ಉಪ್ಪಿನ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಶರಣಪ್ಪ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೫-೯-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರದ ಕರ್ನಾಟಕ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ, ಕಛೇರಿಯ ಅಧಿಕ್ಷಕರಾಗಿ, ಮತ್ತು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಉಪಹಣಕಾಸು ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೧೬ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತರಾಗಿ ಬೆಳೆದಂತೆ ಪದ್ಯಗಳನ್ನು ಬರೆದು ರಾಗಬದ್ದವಾಗಿ ಹಾಡುವುದು ಹಾಗೂ ಭಾಷಣ, ಲೇಖನ ಪ್ರಬಂಧಗಳನ್ನು ಬರೆದು ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ೨೦೨೦ ರಲ್ಲಿ ಕೋರಾನ ಮಹಾಮಾರಿಯ ಕನ್ನಡ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ವಿಜಯಕರ್ನಾಕ,ವಿಜಯವಾಣಿ,ಕನ್ನಡ ಪ್ರಭ,ಉದಯವಾಣಿ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ `ಕರೋನಾ ಯಮರ್ಜೆನ್ಸಿ ಕೋವಿಡ್-೧೯’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ೧೯೯೦ರಿಂದ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳು ಬರೆದಿದ್ದಾರೆ. ಮತ್ತು ಕಲಬುರಗಿ ಆಕಾಶವಾಣಿಯಿಂದ ಇವರ ಚಿಂತನ, ವೈಚಾರಿಕ ಭಾಷಣ ಬರಹಗಳು ಕೂಡ ಪ್ರಸಾರಗೊಂಡಿವೆ. ಮತ್ತು `ಸಿಂಹಾಸನ ಖಾಲಿ ಇದೆ, ಜಲ, ಯಮನ ದರ್ಬಾರ್' ಎಂಬ ನಾಟಕಗಳಲ್ಲಿಯು ನಟಿಸಿದ್ದಾರೆ. ಅಷ್ಟೇಯಲ್ಲದೆ ೧೯೮೯ ಮತ್ತು ೧೯೯೨ರಲ್ಲಿ ಬೀದರದ ರಂಗ ಮಂದಿರದಲ್ಲಿ ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಉಷಾ ಮಂಗೇಶ್ಕರ್ ರವರಿಂದ ರಸಮಂಜರಿ ಕಾರ್ಯಕ್ರಮವು ಆಯೋಜಿಸಿದ್ದರು.

ಸಿದ್ರಾಮ ಪಂಡಿತಜಿ

ನಿಜಾಮನ ವಿರುದ್ಧ ಬಂಡಾಯದ ಗೀತೆ ಹಾಡಿದ ಕವಿಯೆಂದರೆ ಸಿದ್ರಾಮ ಪಂಡಿತಜಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯ ಲಾಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ೧೯೧೦ರಲ್ಲಿ ಜನಿಸಿದ್ದಾರೆ. ಮೋಡಿ, ಬಾಲಬೇಧ ಮತ್ತು ಹಿಂದಿ ಭಾಷೆ ಅರಿತುಕೊಂಡಿದ್ದರೆAದು ಮತ್ತು ಹಾರ್ಮೋನಿಯಂ ವಾದಕರಾಗಿದ್ದರೆಂದು ತಿಳಿದುಬಂದಿದೆ. ಇವರ ವಿದ್ಯಾರ್ಹತೆ ,ವೃತ್ತಿ, ತಿಳಿದು ಬಂದಿರುವುದಿಲ್ಲ. ಇವರು ನಿಜಾಮರ ವಿರುದ್ಧದ ದಂಗೆಯಲ್ಲಿಯು ಭಾಗವಹಿಸಿದ ಬಂಡಾಯ ಕವಿ ಹೋರಾಟಗಾರರಾಗಿದ್ದು ಇವರ ನಿಧನದ ಬಗ್ಗೆಯೂ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ.

ಶುಕ್ರವಾರ, ಜನವರಿ 10, 2025

ಬಸವಪ್ರಕಾಶ ಬಿ.ಕೊಡಂಬಲ್

ಉದಯೋನ್ಮುಖ ಬರಹಗಾರ ಬಸವಪ್ರಕಾಶ ಬಿ.ಕೊಡಂಬಲ್ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಬೇಮಳಖೇಡ ಗ್ರಾಮದ ಭದ್ರಶೆಟ್ಟಿ ಮತ್ತು ಮಾಯಾದೇವಿ ದಂಪತಿಗಳಿಗೆ ದಿನಾಂಕ ೨೧-೧೦-೧೯೯೫ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಬಿ.ಎಡ್.ಪದವಿಧರರಾದ ಇವರು ಖಾಸಗಿ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿ ಇರುವುದರಿಂದ ಕತೆ, ಕವನ, ಚುಟುಕು, ಹನಿಗವನ, ಲೇಖನ ಮೊದಲಾದವು ರಚಸಿ `ಸಮರಸದ ಅಲೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಚಿಂಚೊಳಿಯ ಕಸಾಪ ಮತ್ತು ನೈಜದೀಪ ಸಾಹಿತ್ಯ ಸಂಸ್ಕೃತಿ ವೇದಿಕೆಯ ವತಿಯಿಂದ `ಪ್ರಶಸ್ತಿ ಪತ್ರ' ನೀಡಿ ಗೌರವಿಸಿದ್ದಾರೆ. ಇವರು ಬರೆದ ಕವನ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ