ಪುಟಗಳು

ಬಸವಕಲ್ಯಾಣ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಸವಕಲ್ಯಾಣ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 14, 2025

ಕೀರ್ತಿಲತಾ ಹೊಸ್ಸಾಳೆ

ಉದಯೋನ್ಮಖ ಬರಹಗಾರ್ತಿಯಾದ ಕೀರ್ತಿಲತಾ ಹೊಸ್ಸಾಳೆ ಯವರು ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದ ಈರಣ್ಣಾ ಮತ್ತು ಸರಸ್ವತಿ ದಂಪತಿಗಳಿಗೆ ೧೫-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್ ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಬೀದರದ ಕುಂಬಾರವಾಡ ಕ್ಷೇತ್ರದ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ಕವಿತೆ, ಲೇಖನ, ಚುಟುಕು ಮೊದಲಾದ ಬರಹಗಳು ಬರೆದಿದ್ದಾರೆ. ಮತ್ತು ೨೦೦ಕಿಂತಲೂ ಹೆಚ್ಚು ಕವಿತೆಗಳು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ನಾಡಿನ ಹಲವಾರು ಕವಿಗೊಷ್ಠಿಗಳಲ್ಲಿ ಕವನ ವಾಚನೆಯು ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಕವಿತೆಗಳಿಗೆ ವಿವಿಧ ಕಡೆಯಲ್ಲಿ ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನವು ಲಭಿಸಿವೆ. ೨೦೧೮ರಲ್ಲಿ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ಇವರಿಗೆ ಸತ್ಕರಿಸಲಾಗಿದೆ.

ಅಂಬರೀಶ್ ಎಂ.ಭಿಮಾಣಿ

ಹವ್ಯಾಸಿ ಬರಹಗಾರ ಅಂಬರೀಶ್ ಎನ್.ಭಿಮಾಣಿ ರವರು ಬಸವಕಲ್ಯಾಣ ತಾಲೂಕಿನ ಚಿತ್ತಕೊಟಾ (ಕೆ) ಗ್ರಾಮದ ಸುಬ್ಬಣ್ಣ ಮತ್ತು ರಾಚಮ್ಮ ದಂಪತಿಗಳಿಗೆ ದಿನಾಂಕ ೨೨-೬-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಬಸವಕಲ್ಯಾಣದ ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಗಜಲ್ ಮೊದಲಾದವು ರಚಿಸುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಅನೇಕ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರಿಗೆ ೨೦೧೯ರಲ್ಲಿ ಬಸವಕಲ್ಯಾಣ ತಾಲೂಕಾ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶ್ರೀದೇವಿ ಎಂ.ಖಂಡಾಳೆ.

ಉದಯೋನ್ಮುಖ ಕವಯತ್ರಿಯಾದ ಶ್ರೀದೇವಿ ಎಂ.ಖAಡಾಳೆಯವರು ಬಸವಕಲ್ಯಾಣ ತಾಲೂಕಿನ ಮಹಾದಪ್ಪ ಖಂಡಾಳೆ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೪-೧೧-೧೯೮೪ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಬೀದರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಮನ್ನಳಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಸಾಹಿತ್ಯದಲ್ಲಿ ಆಸಕ್ತರಾಗಿ ಅನೇಕ ಕವನ,ಲೇಖನ ಹನಿಗವನಗಳನ್ನು ಬರೆದಿದ್ದು,ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸವು ನೀಡಿ ಸುಮಧುರ ಕಂಠದಿAದ ಗಾಯನ ಮಾಡಿ ಕೇಳುಗರ ಮನಸೂರೆಗೊಳಿಸಿದ್ದಾರೆ.

ನಾಗೇಂದ್ರ ಎಲ್.ಗಾಯಕವಾಡ

ಉದಯೋನ್ಮುಖ ಕಾದಂಬರಿಕಾರ ನಾಗೇಂದ್ರ ಎಲ್.ಗಾಯಕವಾಡ ರವರು ಬಸವಕಲ್ಯಾಣ ತಾಲೂಕಿನ ಧನ್ನೂರ್ (ಆರ್) ಗ್ರಾಮದ ಲಾಲಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಡತನದಲ್ಲಿ ಮುಂದೆ ಕಲಿಯಲು ಆಗದೆ ಹೊಲದಲ್ಲಿ ಎತ್ತುಗಳು ಕಾಯುವುದು, ಕೃಷಿ ಕೆಲಸ ಮಾಡುವುದರೊಂದಿಗೆ ಸುಮಾರು ೪೬ಕ್ಕೂ ಹೆಚ್ಚು ಕಾದಂಬರಿಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲ ಕಾದಂಬರಿಗಳು ರಾಗಸಂಗಮ, ನವರಾಗಸಂಗಮ, ಥ್ರೀಲ್ ಮಾಸಪತ್ರಿಕೆಗಳಲ್ಲಿ `ಖ್ಯಾತ ಕಾದಂಬರಿಕಾರ ನಾಗೇಂದ್ರ ಗಾಯಕವಾಡ’ ಎಂಬ ಮುಖಪುಟದ ಶೀರೊನಾಮೆಯಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾಗಿ `ನಾ ನಿನ್ನ ಕ್ಷೇಮಿಸಿದ್ದೇನೆ', `ಭ್ರಮೆ', `ಅಮರ ಜ್ಯೋತಿ', `ಪ್ರೇಮ', `ವಿಷಕನ್ಯೆ', `ಸಮಯ', `ವಿಲಕ್ಷಣ', `ರಕ್ತ ದಾಹದ ನಾಗ', `ಸೈಕೊ ಕಿಲ್ಲರ್', `ಅನುರಾಗ ಅಳಿಸದು', `ನನ್ನನ್ನು ಕ್ಷಮಿಸು',. `ಬಾಡಿದ ಹೂ', `ದಡ ಸೇರದ ನೌಕೆ', `ಪವಿತ್ರ', `ಇಂಚರ', `ನಿನ್ನ ಪ್ರೀತಿಗಾಗಿ', `ಕಗ್ಗತ್ತಲೆ ಕರಗಿಸಿದ ಸೂರ್ಯ', `ಮೊಡ ಸರಿದ ರವಿ', `ಭ್ರಮೆ ಬದುಕು', `ವಿಪರ್ಯಾಸ' `ನಿಕೃತಿ', `ತೆರೆ ಮರೆಯ ಹಿಂದೆ'. ಹೀಗೆ ಇವರ ಕಾದಂಬರಿ ಪಟ್ಟಿ ಬಹುದೊಡ್ಡದಿದೆ. ಇಲ್ಲಿಯ ಬಹುತೇಕ ಕಾದಂಬರಿಗಳು ರಾಗ ಸಂಗಮ, ನವರಾಗ ಸಂಗಮ, ಥ್ರೀಲ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿವೆ. ಇವರ `ವಿಷಕನ್ಯೆ' ಮತ್ತು `ಸಮಯ ' ಕಾದಂಬರಿಗಳು ಥ್ರೀಲ್ ಮಾಸಪತ್ರಿಕೆಯ ೧೦೬ನೇ ಸಂಚಿಕೆಯಲ್ಲಿ `ಖ್ಯಾತ ಕಾದಂಬರಿಕಾರ ನಾಗೇಶ ಗಾಯಕವಾಡ ಅವರ ಎರಡು ಕಾದಂಬರಿಗಳು' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿ ಇವರಿಗೆ ಕಾದಂಬರಿಕಾರರಾಗಿ ಹೆಸರು ತರಲು ಕಾರಣವಾಗಿವೆ. ಮತ್ತು ಇವರು ಎರಡು ಕಥಾಸಂಕಲನಗಳು ಹಾಗೂ ಒಂದು ಸತ್ಯ ಘಟಕಗಳ ಕಥಾಸಂಕಲನ ಬರೆದಿದ್ದಾರೆ. ಇಷ್ಟು ಕಾದಂಬರಿ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ ಪುಸ್ತಕ ಮಾಡದೆ ಹಳ್ಳಿಯಲ್ಲಿ ಉಳಿದ ಇವರು ಎಲೆಮರೆಯ ಬಲಿತ ಕಾಯಿಯಾಗಿ ಕಂಡು ಬರುತ್ತಾರೆ. ಇವರ ಕುರಿತು ೨೦೧೦ರಲ್ಲಿ ಸಂಯುಕ್ತ ಕರ್ನಾಟಕದ ಮುಡಬಿ ವರದಿಗಾರರಾಗಿದ್ದ ಮಚ್ಚೇಂದ್ರ ಪಿ ಅಣಕಲ್ ರವರು `ಕಲ್ಯಾಣ ಕರ್ನಾಟಕ' ಪುರಾವಣಿಯಲ್ಲಿ ವ್ಯಕ್ತಿ ಪರಿಚಯ ಬರೆದಾಗ ಬಸವಕಲ್ಯಾಣ ತಾಲೂಕಿನ ಆಡಳಿತ ಮಂಡಳಿಯವರು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಗಳು ಇವರಿಗೆ ಉರಿಲಿಂಗಪೆದ್ದಿ ಉತ್ಸವದಲ್ಲಿ ಸನ್ಮಾನಿಸಿದ್ದಾರೆ.

ಶಾಂತಕುಮಾರ ಹಡಪದ

ಉದಯೋನ್ಮುಖ ಬರಹಗಾರ ಶಾಂತಕುಮಾರ ಹಡಪದ ರವರು ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದ ಶಿವಲಿಂಗಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೫-೧೦-೧೯೮೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಅಧ್ಯಯನ ಮಾಡಿದ ಇವರು ಸ್ವಯಂ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಆಧುನಿಕ ವಚನ, ಭಜನೆ ಹಾಡು, ತತ್ವ ಪದಗಳನ್ನು ಬರೆದು `ನನ್ನವ್ವ' ಎಂಬ ಕವನ ಸಂಕಲನವು ಪ್ರಕಟಿಸುವ ಹಂತದಲ್ಲಿದ್ದಾರೆ. ನೂರಾರು ಕವನ, ಆಧುನಿಕ ವಚನಗಳು ಬರೆದಿದ್ದು, ಅವುಗಳಲ್ಲಿ ಕೆಲವು ವಿಜಯವಾಣಿ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಯಾಗಿ, ಮತ್ತು ಹೀರೆನಾಗಾಂವ ಗ್ರಾಮದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಇವರಿಗೆ ಬಸವಕಲ್ಯಾಣದ ಹಡಪದ ಸಮಾಜದ ವತಿಯಿಂದ ಹಡಪದ ಅಪ್ಪಣ್ಣ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.

ಶಾಂತಕುಮಾರ ಮಾಲಿ ಪಾಟೀಲ್.

ಉದಯೋನ್ಮುಖ ಯುವ ಬರಹಗಾರರಾದ ಶಾಂತಕುಮಾರ ಮಾಲಿ ಪಾಟೀಲ್ ರವರು ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಬಸವರಾಜ ಮಾಲಿ ಪಾಟೀಲ್ ಮತ್ತು ವಸಂತಾಬಾಯಿ ದಂಪತಿಗಳಿಗೆ ದಿನಾಂಕ ೨೭-೧೨-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಮತ್ತು ಚಲನಚಿತ್ರದಲ್ಲಿ ಡಿಪ್ಲೋಮಾ ಪದವಿ ಪಡೆದು, ಮುಡಬಿಯಲ್ಲಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ. ಹಾಗೂ `ಜೀವದ ಗೇಳೆಯ’ ಮತ್ತು `ಅಲರ್ಟ’ ಮತ್ತಿತರ ಕಿರುಚಿತ್ರಗಳಲ್ಲಿ ನಟಿಸಿ ಸಂಭಾಷಣೆಕಾರರಾಗಿಯು ಕಾರ್ಯನಿರ್ವಹಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ, ಲೇಖನ, ಹನಿಗವನಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಕವನ ಸಂಕಲನವೊAದು ಮುದ್ರಿಸುವ ಹಂತದಲ್ಲಿದ್ದಾರೆ.

ಗೌಸೋದಿನ್ ಪಠಾಣ.

ಉದಯೋನ್ಮುಖ ಹವ್ಯಾಸಿ ಬರಹಗಾರರಾದ ಗೌಸೋದಿನ್ ಪಠಾಣ ರವರು ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಕಮಲೋದಿನ್ ಮತ್ತು ದಿಲ್‌ದಾರ ಬಿ ದಂಪತಿಗಳಿಗೆ ದಿನಾಂಕ ೧-೬-೧೯೮೨ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊAದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಲೇಖನ, ಹನಿಗವನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಜಗದೇವಿ ಡಿ.ಜವಳಗಿಕರ್

ಉದಯೋನ್ಮುಖ ಕವಯತ್ರಿಯಾದ ಜಗದೇವಿ ಡಿ.ಜವಳಗಿಕರ್ ರವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ರಾಮಶೆಟ್ಟಿ ಮತ್ತು ಶಾರದಾಬಾಯಿ ದಂಪತಿಗಳಿಗೆ ದಿನಾಂಕ ೧-೧೨-೧೯೮೧ರಂದು ಜನ್ಮ ತಳೆದು ಬಿ.ಎ.ಬಿ.ಎಡ್. ಮತ್ತು ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾಗಿ ವಿವಿಧ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಾಜೇಶ್ವರದ ದತ್ತಾತ್ರಿ ಜವಳಗಿಕರ್ ರವರ ಧರ್ಮ ಪತ್ನಿಯಾಗಿದ್ದು, ಹಲವಾರು ಕವನ, ಲೇಖನ, ಹನಿಗವನಗಳು ಬರೆಯುತ್ತಿದ್ದಾರೆ. ಇವರ ಬರಹಗಳು ವಿಜಯವಾಣಿ ಸೇರಿದಂತೆ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೩ರಲ್ಲಿ ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಮತ್ತು ವಿವಿಧ ಕನ್ನಡಪರ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಬರೆದ ಪುಸ್ತಕವೊಂದು ಮುದ್ರಣದ ಹಂತದಲ್ಲಿದೆ. ಸದ್ಯ ಇವರು ಬಸವಕಲ್ಯಾಣದಲ್ಲಿ ನೆಲೆಸಿದ್ದಾರೆ.

ಮಧುಕರ ಎನ್.ಘೋಡಕೆ

ಕವಿ, ಕಲಾವಿದ ಮಧುಕರ ಎನ್.ಘೋಡಕೆ ರವರು. ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ನರಸಿಂಗರಾವ ಮತ್ತು ಸುಗಂಧಬಾಯಿ ದಂಪತಿಗಳಿಗೆ ದಿನಾಂಕ. ೮-೬-೧೯೭೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ಮತ್ತು ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ. ಕವನ, ತತ್ವಪದ, ಜಾನಪದ, ಭಜನೆ ಗೀತೆಗಳು ಬರೆದು ಸ್ವತಃ ರಾಗ ಸಂಯೋಜನೆಯಲ್ಲಿ ಹಾಡುವ ಇವರು ವಾರ್ತಾ ಇಲಾಖೆಯ ಸರ್ಕಾರಿ ಯೋಜನೆಯ ಕುರಿತು ಬೀದಿ ನಾಟಕ, ರೂಪಕಗಳನ್ನು ರಚಿಸಿ ನೂರಾರು ವೇದಿಕೆಯಲ್ಲಿ ಅವು ಪ್ರದರ್ಶಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಾಗಿ ಗುರುತಿಸಿಕೊಂಡ್ಡಿದ್ದು, ಬೀದರ ಜಿಲ್ಲಾ ವಿಭಾಗ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯ, ಸಕಾಲ ಮಾಹಿತಿ, ಭಾನಾಮತಿ ನಿರ್ಮೂಲನ ಜನಾಂದೊಲನ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಇತ್ಯಾದಿ ಸರ್ಕಾರಿ ಕಾರ್ಯಕ್ರಮಗಳು ಪಡೆದು, ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಅಷ್ಟೇಯಲ್ಲದೆ ತಾವೆ ಬರೆದ ಹಾಡುಗಳನ್ನು ಹಾಡಿ ಜನಜಾಗೃತಿ ಮೂಡಿಸುತ್ತಾರೆ. .

ಶಿವಕುಮಾರ ಸ್ವಾಮಿ ಯರಬಾಗ

ಸೃಜನಶೀಲ ಬರಹಗಾರ ಶಿವಕುಮಾರ ಸ್ವಾಮಿ ಯರಬಾಗ ರವರು ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ಚನ್ನವಿರಯ್ಯಾ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಪತ್ರಿಕೋದ್ಯಮ, ವಾಣಿ ಸರ್ಟಿಫಿಕೇಟ್ ಕೋರ್ಸ್, ಮತ್ತು `ಜ್ಯೋತಿಷ್ಯ ಆಚಾರ್ಯ ಕೋರ್ಸ್' ಅಧ್ಯಯನ ಮಾಡಿದ ಇವರು ೨೦೦೪ರಿಂದ ೨೦೦೮ರ ವರೆಗೆ ಕಲಬುರಗಿ ಆಕಾಶವಾಣಿಯಲ್ಲಿ ನಿರೂಪಕ, ವಾರ್ತಾ ವಾಚಕರಾಗಿ ಸೇವೆ ಸಲ್ಲಿಸಿ, ೯೩.೫ ರೆಡ್ ಎಫ್.ಎಂ.ನಲ್ಲಿಯು ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದ ಎಲ್.ಐ.ಸಿ. ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬರಹ ರೂಪಕಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ, ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೦ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯವರು ಏರ್ಪಡಿಸಿದ ವಿಜ್ಞಾನ ಬರಹ ಶಿಬಿರ, ಮತ್ತು ಕಲಬುರಗಿಯಲ್ಲಿ ಕಸಾಪದವರು ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಚಯಿಸುವ ವ್ಯಾಖ್ಯಾನ ಶಿಬಿರ, ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯವರು ಏರ್ಪಡಿಸಿದ ಯುವ ಸಂವಹನ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಸಾಹಿತ್ಯ ರಚನೆಯೊಂದಿಗೆ ವಾಸ್ತು ಶಾಸ್ತ್ರದ ಕುರಿತು ವೈಚಾರಿಕ ಬರಹಗಳು ಬರೆದಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ಹಂತದಲ್ಲಿದ್ದಾರೆ. ಮತ್ತು ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ೨೦೧೨ರಿಂದ ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ನಡೆಸುವುದರೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.

ಕರಬಸಯ್ಯ ಚನ್ನವೀರಯ್ಯ ಸ್ವಾಮಿ

ಹವ್ಯಾಸಿ ಬರಹಗಾರ ಕರಬಸಯ್ಯ ಸಿ. ಸ್ವಾಮಿ. ರವರು ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಚೆನ್ನವೀರಯ್ಯ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೪-೧೯೭೭ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಕೃಷಿ ಜೀವನದೊಂದಿಗೆ ಕವನ, ತತ್ವಪದ, ಭಜನೆ ಗೀತೆಗಳು ಬರೆದು ಹಾಡುತ್ತಾರೆ.ಮತ್ತು ಅನೇಕ ರಾಜ್ಯ ಮಟ್ಟದ ಜಾನಪದ ಮೇಳ, ಸಮ್ಮೇಳನಗಳಲ್ಲಿ ತಮ್ಮ ಸಾಹಿತ್ಯ ಪ್ರಚುರ ಪಡಿಸಿದ್ದಾರೆ. ಹಾಗೂ ಹುಟ್ಟೂರಿನಲ್ಲಿ ಶ್ರೀ ಚನ್ನಮಲ್ಲೇಶ್ವರ ಭಜನಾ ಸಂಘದ ಮೂಲಕ ತಮ್ಮ ಸಾಹಿತ್ಯ ಪ್ರಸಾರ ಗೈಯುತ್ತಿದ್ದಾರೆ. ಇವರ ತತ್ವಪದ ಹಾಡುಗಳು ಹಾರಕೂಡ ಹಿರೇಮಠ ಸಂಸ್ಥಾನ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ' ಎಂಬ ಪ್ರಾತಿನಿಧಿಕ ಸಂಕಲನ ಸೇರಿದಂತೆ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಏರ್ಪಡಿಸಿದ ಚರ್ಮವಾದ್ಯಗಳ ಸಮಾವೇಶ ಹಾಗೂ ಹಂಪಿ ಉತ್ಸವದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.

ಸೂರ್ಯಕಾಂತ ಕೆ.ಪಾಟೀಲ್.

ಹವ್ಯಾಸಿ ಬರಹಗಾರರಾದ ಸೂರ್ಯಕಾಂತ ಕೆ.ಪಾಟೀಲ್ ರವರು ಬಸವಕಲ್ಯಾಣ ತಾಲೂಕಿನ ಖೇಡಾ (ಕೆ) ಗ್ರಾಮದ ಕಂಟೆಪ್ಪಾ ಪಾಟೀಲ್ ಮತ್ತು ಸುಜ್ಞಾನಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೭೬ ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಎಡ್. ಕೆ.ಇ.ಎಸ್. ಪದವಿಧರರಾದ ಇವರು ಭಾಲ್ಕಿ ತಾಲೂಕು ಪಂಚಾಯತ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಕವನ, ಲೇಖನ, ಹನಿಗವನಗಳು ಬರೆದಿದ್ದು, ಅವು ಶಿಕ್ಷಣ ವಾರ್ತೆ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೩ರಲ್ಲಿ 'ಜನ ಮೆಚ್ಚಿದ ಶಿಕ್ಷಕ', ೨೦೧೨ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೀದರ ವತಿಯಿಂದ 'ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಿದ್ದಾರೆ.

ಕಲ್ಯಾಣರಾವ ಮದರಗಾಂವಕರ್

ಯುವ ಬರಹಗಾರ ಪತ್ರಕರ್ತ ಕಲ್ಯಾಣಿ ಮದರಗಾಂವಕರ್ ರವರು ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ ಪದವಿಧರರಾದ ಇವರು ಸುಮಾರು ಇಪ್ಪತ್ತು ವರ್ಷಗಳಿಂದ ಕಾರಂಜಾ ಎಕ್ಷಪ್ರೇಸ್, ಕನ್ನಡಪ್ರಭ, ವಿಶ್ವವಾಣಿ, ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಉದಯಕಾಲ ಪತ್ರಿಕೆಯ ವರದಿಗಾರರಾಗಿದ್ದಾರೆ ಇವರ ಬರಹಗಳು ನಾಡಿನ ವಿವಿಧ ಪತ್ರಿಕೆ ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೨ರಲ್ಲಿ ರಾಜ್ಯ ಮಟ್ಟದ ಕಲಾಂಜಲಿ ಸಾಹಿತ್ಯ ಪ್ರಶಸ್ತಿ, ಕನ್ನಡ ಕಾವ್ಯ ರತ್ನ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ಸಮಾಜರತ್ನ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ರಾಜ್ಯ ಮಟ್ಟದ ಪತ್ರಿಕೆಗಳ ವಿವಿಧ ವರದಿಗಾರರ ಸಂಘದ ಬಸವಕಲ್ಯಾಣ ತಾಲೂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರೇಣುಕಾದೇವಿ ದಿಲೀಪಕುಮಾರ ಸ್ವಾಮಿ

ಕವಯತ್ರಿ ರೇಣುಕಾದೇವಿ ಯವರು ಬಸವಕಲ್ಯಾಣ ತಾಲೂಕಿನ ಮೈಸಲಗಾ ಗ್ರಾಮದ ಶ್ರೀ ಶಿವಶರಣಯ್ಯಾ ಮತ್ತು ಶ್ರೀಮತಿ ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಬಿ.ಎ (ಹಿಂದಿ) ಪದವಿ ಪಡೆದ ಇವರು ರಾಜೇಶ್ವರದ ಶ್ರೀ ದಿಲೀಪಕುಮಾರ ಸ್ವಾಮಿಯವರ ಧರ್ಮಪತ್ನಿಯಾಗಿದ್ದು, ಬಾಲ್ಯದಿಂದಲೂ ಹಾರಕೂಡ ಶ್ರೀಗಳ ಪ್ರವಚನದ ಪ್ರಭಾವದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕವನ, ಲೇಖನ, ಮೊದಲಾದವು ಬರೆದು ಕವಯತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಹಾರಕೂಡ ಹಿರೇಮಠ ಸಂಸ್ಥಾನದ ಆರಾಧ್ಯ ದೈವ ಭಕ್ತರಾದ ಇವರು ಬರೆದ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರು ವಿಶೇಷ ದಂಪತಿ ಸಹಿತವಾಗಿ ಸನ್ಮಾನಿಸಿ ಸತ್ಕಾರಿಸಿದ್ದಾರೆ.

ರೇವಣಸಿದ್ದಪ್ಪ ಸೂಗೂರೆ

ಹವ್ಯಾಸಿ ಬರಹಗಾರ ರೇವಣಸಿದ್ದಪ್ಪ ಸೂಗೂರೆ ಯವರು. ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಗುರುಲಿಂಗಪ್ಪ ಮತ್ತು ಸುಗಲಾಬಾಯಿ ದಂಪತಿಗಳಿಗೆ ದಿನಾಂಕ ೧-೮-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಕೃಷಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಬರಹಗಳು ಬರೆಯುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಹಾಗೂ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಹೊರತಂದ `ಚೆನ್ನ ಸಂಭ್ರಮ-೫೭.’ ಮತ್ತು `ಕೊಹಿನೂರು ಕುಸುಮ' ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರ ೫೫ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಶ್ರೀ ಚೆನ್ನ ರತ್ನ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ. ಮತ್ತು ಇವರಿಗೆ ಬಸವಕಲ್ಯಾಣ ತಾಲೂಕಾ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.

ಅಂಬಾರಾವ ಉಗಾಜಿ

ಹವ್ಯಾಸಿ ಬರಹಗಾರ ಅಂಬಾರಾಯ ಉಗಾಜಿಯವರು. ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಸಾಯಬಣ್ಣ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೨೨-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಪದವಿಧರರಾದ ಇವರು ಬೊಸಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ವೃತ್ತಿಗೆ ಸೇರಿದ ನಂತರ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಕವನ, ಲೇಖನ, ಹನಿಗವನ, ಚುಟುಕು, ಆಧುನಿಕ ವಚನಗಳನ್ನು ಬರೆದಿದ್ದಾರೆ. ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಸಾಹಿತ್ಯಿಕ ಸಂಘಟಕರು ಆಗಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ಅವಧಿ ಕೊಹಿನೂರು ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ `ಜನ ಮೆಚ್ಚಿದ ಉತ್ತಮ ಶಿಕ್ಷಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀ ಚೆನ್ನರತ್ನ ಪ್ರಶಸ್ತಿ, ಕಸಾಪದ ಸಮಾಜ ರತ್ನ ಪ್ರಶಸ್ತಿ, ಎಸ್ಸಿ, ಎಸ್ಟಿ, ಶಿಕ್ಷಕರ ಸಂಘದ ಉತ್ತಮ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಹಾಗೂ ಅಜಿಂ ಪ್ರೇಮಂ ಜಿ ಫೌಂಡೇಶನ್ ವತಿಯಿಂದ ಇವರಿಗೆ ಅಭಿನಂದನಾ ಪತ್ರವು ನೀಡಿ ಗೌರವಿಸಿದ್ದಾರೆ.

ನಾಗಪ್ಪ ನಿಣ್ಣೆ

ಪತ್ರಕರ್ತ ನಾಗಪ್ಪ ನಿಣ್ಣೆಯವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವುಳ್ಳ ಉದಯೋನ್ಮುಖ ಹವ್ಯಾಸಿ ಬರಹಗಾರರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ಶಹಾಪುರ ಓಣಿಯ ಬಸಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. (ಹಿಂದಿ) ಪದವಿಧರರಾದ ಇವರು ಕೆಲ ವರ್ಷ ಖಾಸಗಿ ಶಾಲಾ ಶಿಕ್ಷಕರಾಗಿ, ಗ್ರೀನೋಬಲ್ಸ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿ ೧೯೯೭ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ೨೦೦೯ರಲ್ಲಿ ಬಡ್ತಿ ಹೊಂದಿ ಸರಕಾರಿ ಪ್ರೌಢ ಶಾಲೆ ಬೆಟಗೇರಾ ಗ್ರಾಮದಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕನ್ನಡ ಹಿಂದಿ ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಕೆಲ ಬರಹಗಳು ಬಹಿರಂಗ ಸುದ್ದಿ, ಉತ್ತರ ಕರ್ನಾಟಕ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉರ್ದುವಿನಲ್ಲಿ ಶಾಹಿರಿ, ಕನ್ನಡದಲ್ಲಿ ನಗೆಹನಿ ಬರೆದ ಹಾಸ್ಯ ಬರಹಗಾರರು. ಹಿಂದಿ ಚಿತ್ರನಟ ಖಾದರಖಾನ್ ಅವರ ಅಭಿಮಾನಿಯಾದ ಇವರು, ಅವರ ಕುರಿತು ಉರ್ದು, ಕನ್ನಡ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಪ್ರಚುರಪಡಿಸಿದ್ದಾರೆ. ಇವರಿಗೆ ಪತ್ರಿಕಾ ರತ್ನ, ಉತ್ತಮ ವರದಿಗಾರ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯು ಪಡೆದಿದ್ದಾರೆ. ಇವರು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕ್ರಾಂತಿ ಯುವ ಪರಿಷತ್ತಿನ ಅಧ್ಯಕ್ಷರಾಗಿ, ಕಲ್ಯಾಣ ಕಲಾ ಪ್ರತಿಭೆಯ ಸಂಪಾದಕರಾಗಿ, ಮತ್ತು ಬಸವಕಲ್ಯಾಣ ತಾಲೂಕಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ರಾಜ್ಯ ಮಟ್ಟದ ಪತ್ರಿಕಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಕಾರ್ಯಗಾರ ಸೇರಿದಂತೆ ವಿವಿಧ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.

ಶ್ರೀದೇವಿ ಬಿ.ಹಿರೇಮಠ

ಅಧ್ಯಾತ್ಮಿಕ ದೃಷ್ಟಿಕೋನದಿಂದ ತತ್ವಪದ ಜಾನಪದ ಹಾಡುಗಳು ರಚಿಸಿ ಕವಯತ್ರಿಯರಾಗಿ ಗುರುತಿಸಿಕೊಂಡಿರುವ ಶ್ರೀದೇವಿ ಬಿ.ಹಿರೇಮಠ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಆಳಂದಿ ಗ್ರಾಮದ ಸಿದ್ದಯ್ಯಾ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೨೭-೧-೧೯೬೬ರಲ್ಲಿ ಜನಿಸಿದ್ದಾರೆ. ಇವರು ಹಾರಕೂಡ ಶ್ರೀಗಳ ಸಹೋದರರಾದ ಶ್ರೀ ಬಸವರಾಜ ತಂದೆ ಕರಿಬಸಯ್ಯನವರ ಧರ್ಮ ಪತ್ನಿಯಾದ ಇವರು ಓದಿದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಅದು ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಕನ್ನಡ ಕಲಿತದ್ದು ತಮ್ಮ ಮೈದುನ ಮಲ್ಲಿನಾಥ ಹಿರೇಮಠ ಅವರಿಂದ. ಕನ್ನಡ ಲಿಪಿ, ಅಕ್ಷರ ಕಲಿತು ಕನ್ನಡ ಭಾಷೆಯು ಸರಳ ಹಾಗೂ ಸಲಿಲವಾಗಿ ಮಾತನಾಡುವುದು ಕಲಿತು, ಕನ್ನಡ ಸಾಹಿತ್ಯ ರಚಿಸುವಷ್ಟು ಪ್ರಬುದ್ಧತೆ ಹೊಂದಿರುವುದು ನೋಡಿದರೆ ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ. ಇವರು ಬಾಲ್ಯದಲ್ಲಿ ತಮ್ಮ ದೊಡ್ಡಪ್ಪನವರ ಮನೆಯಲ್ಲಿ ಪ್ರತಿ ಸೋಮವಾರ ಭಜನೆ ಮಾಡುವುದು, ಹಾರಕೂಡ ಶ್ರೀಗಳ ಕುರಿತು ಹಾಡು ಹಾಡುವುದು. ಶರಣ - ಶರಣೆಯರ ವಚನಗಳನ್ನು ಕಂಠಪಾಠ ಮಾಡಿ ಹಾಡುವುದನ್ನು ರೂಢಿಸಿಕೊಂಡು ಸಂಗೀತದಲ್ಲಿಯು ತುಂಬ ಆಸಕ್ತಿ ಬೆಳೆಸಿಕೊಂಡು ಬೆಳೆದವರು. ಮುಂದೆ ಇವರು ಹಾರಕೂಡ ಶ್ರೀಗಳ ಕುಟುಂಬದಲ್ಲಿ ನಾಲ್ಕು ಜನ ಭಾವ-ಮೈದುನ ನಾದಿನಿಯರು ಹಾಗೂ ಮಾವ ವೇ.ಮೂ. ಕರಿಬಸವಯ್ಯ ಅತ್ತೆ ಸುಭದ್ರಾಬಾಯಿಯವರೊಂದಿಗೆ ತುಂಬ ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದರೊಂದಿಗೆ ಕನ್ನಡದಲ್ಲಿ ಕವನಗಳು, ಆಧುನಿಕ ವಚನಗಳು, ಬರೆದಿದ್ದಾರೆ. ಅವು ಎಂ.ಎಸ್.ಲಠ್ಠೆ ಸಂಪಾದಿಸಿರುವ `ಕಲ್ಯಾಣನಾಡಿನ ಪರಂ ಜ್ಯೋತಿ’ ಎಂಬ ಪುಸ್ತಕದಲ್ಲಿ ಇವರು ಬರೆದ ಹತ್ತಾರು ಹಾಡುಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ಕವನಗಳು ಪ್ರಸಾರವಾಗಿವೆ. ಗದಲೇಗಾಂವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನದಲ್ಲಿ ಇವರು ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೧೦ರಲ್ಲಿ ಕಲಬುರ್ಗಿಯ ಜಯನಗರ ಅನುಭವ ಮಂಟಪದಲ್ಲಿ ಜರುಗಿದ ಅಕ್ಕಗಳ ಸಮ್ಮೇಳನದಲ್ಲಿ ಪಾಲ್ಗೊಂಡು ವಚನ ಸ್ಪರ್ಧೆ, ವಚನ ರೂಪಕದಲ್ಲಿ ಆಯ್ದಕ್ಕಿ ಲಕ್ಕಮ್ಮನ ಪಾತ್ರ ಮಾಡಿದ್ದರಿಂದ ಅಂದಿನ ಮಂತ್ರಿಗಳಾದ ಶ್ರೀಮತಿ ಲೀಲಾವತಿ ಆರ್ ಪ್ರಸಾದ, ಅರವಿಂದ ಜತ್ತಿ, ವಿಲಾಸವತಿ ಖೂಭಾ ಅವರ ಸಮ್ಮುಖದಲ್ಲಿ ವಿಶೇಷ ಪುರಸ್ಕಾರವು ಲಭಿಸಿದೆ. ಕಲಬುರ್ಗಿಯ ಆಕಾಶವಾಣಿಯವರು ಏರ್ಪಡಿಸಿದ ನಾಗರ ಪಂಚಮಿ ಹಬ್ಬದ ಕಾರ್ಯಕ್ರಮದಲ್ಲಿಯು ಪಾಲ್ಗೊಂಡು ಕಾರ್ಯಕ್ರಮ ನೀಡಿ ಹಲವಾರು ಸಂಪ್ರದಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇಯಲ್ಲದೆ ಚನ್ನಬಸವ ಶಿವಯೋಗಿಗಳ ಕುರಿತು ಹಾಡುಗಳು ಮತ್ತು ವಚನಗಳು ಬರೆದಿದ್ದರಿಂದ ಮುಂಬರುವ ದಿನಗಳಲ್ಲಿ ಅವು ಪ್ರಕಟಿಸುವ ಹಂತದಲ್ಲಿದ್ದಾರೆ. ಇವರು ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹಾರಕೂಡ ಚನ್ನಬಸವೇಶ್ವರ ಶಿಕ್ಷಣ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಇವರಿಗೆ ಹಾರಕೂಡ ಶ್ರೀಗಳು ದಸರಾ ಮಹೋತ್ಸವದ ಮಹಾನವಮಿಯ ಬ್ರಹತ್ ಸಭೆಯಲ್ಲಿ ಇವರ ಯಜಮಾನರಾದ ಬಿ.ಕೆ.ಹಿರೇಮಠ ದಂಪತಿಸಹಿತ ಸತ್ಕರಿಸಿ ಆರ್ಶಿವದಿಸಿದ್ದಾರೆ. ಅಷ್ಟೇಯಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ದಿ. ಡಾ.ಅಮರನಾಥ ನಾಯಕ

ಸಾಹಿತಿ ಡಾ.ಅಮರನಾಥ ನಾಯಕ ರವರು ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಮದರಶಾ ಮತ್ತು ತಿಪ್ಪವ್ವಾ ದಂಪತಿಗಳಿಗೆ ದಿನಾಂಕ ೧೫-೩-೧೯೬೨ರಲ್ಲಿ ಜನಿಸಿದರು. ಬಿ.ಎಸ್ಸಿ. ಬಿ.ಇ.ಎಂ.ಎಸ್. ಪದವಿ ಪಡೆದು ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿ, ದಿನಾಂಕ ೨೮-೧೦-೨೦೨೦ರಲ್ಲಿ ನಿಧನರಾಗಿದ್ದಾರೆ. ತತ್ವಪದ, ಜಾನಪದ, ಮೊಹರಮ್ ಪದ, ಭಜನೆ ಗೀತೆ, ಹಂತಿ ಹಾಡುಗಳು ಪರಿಚಿತರಾದವರು. ಇವರು ೧೯೯೩ರಿಂದ ೧೯೯೭ರ ವರೆಗೆ ಕೊಹಿನೂರು ಗ್ರಾಂ.ಪA. ಅಧ್ಯಕ್ಷರಾಗಿ, ೨೦೦೦ರಿಂದ ೨೦೦೫ರ ವರೆಗೆ ತಾ. ಪಂ. ಸದಸ್ಯರಾಗಿ, ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ'ಎಂಬ ಪ್ರಾತಿನಿಧಿಕ ಸಂಕಲನದಲ್ಲಿ ಪ್ರಕಟವಾಗಿವೆ.

ಕೆ.ಎಸ್.ರಾಮಬಾಣ

ಸಾಹಿತಿ ಕೆ.ಎಸ್.ರಾಮಬಾಣ ರವರ ಪೂರ್ಣನಾಮ ಕಾಶಪ್ಪ ತಂದೆ ಶರಣಪ್ಪಾ ರಾಮಬಾಣ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದ ಶ್ರೀ ಶರಣಪ್ಪ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೨೬-೬-೧೯೫೫ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ೧೯೮೫ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿದಾಗಲೇ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡು ೨೦೦೪ರಲ್ಲಿ ಹತ್ತು ಜನ ಲೇಖಕರ ಜತೆಗೂಡಿ `ನೂರು ಭಾವಗಳು ಹತ್ತು ಮುಖಗಳು' ಎಂಬ ಪ್ರಾತಿನಿಧಿಕ ಸಂಕಲನದಲ್ಲಿ ೧೦ ಕವನಗಳು ಪ್ರಕಟಿಸಿದ್ದಾರೆ. `ಒಂದಾಗಿ ಬಾಳೋಣ' (ನಾಟಕ) `ಮೊಸರು ಮಾರುವವನು' (ಕತೆ) ಬರೆದಿದ್ದು, ಅವು ಅಪ್ರಕಟಿತವಾಗಿವೆ. ಇವರಿಗೆ ಭಾಲ್ಕಿ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.