ಪುಟಗಳು

ಮಂಗಳವಾರ, ಜನವರಿ 14, 2025

ನಾಗಪ್ಪ ನಿಣ್ಣೆ

ಪತ್ರಕರ್ತ ನಾಗಪ್ಪ ನಿಣ್ಣೆಯವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವುಳ್ಳ ಉದಯೋನ್ಮುಖ ಹವ್ಯಾಸಿ ಬರಹಗಾರರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ಶಹಾಪುರ ಓಣಿಯ ಬಸಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. (ಹಿಂದಿ) ಪದವಿಧರರಾದ ಇವರು ಕೆಲ ವರ್ಷ ಖಾಸಗಿ ಶಾಲಾ ಶಿಕ್ಷಕರಾಗಿ, ಗ್ರೀನೋಬಲ್ಸ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿ ೧೯೯೭ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ೨೦೦೯ರಲ್ಲಿ ಬಡ್ತಿ ಹೊಂದಿ ಸರಕಾರಿ ಪ್ರೌಢ ಶಾಲೆ ಬೆಟಗೇರಾ ಗ್ರಾಮದಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕನ್ನಡ ಹಿಂದಿ ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಕೆಲ ಬರಹಗಳು ಬಹಿರಂಗ ಸುದ್ದಿ, ಉತ್ತರ ಕರ್ನಾಟಕ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉರ್ದುವಿನಲ್ಲಿ ಶಾಹಿರಿ, ಕನ್ನಡದಲ್ಲಿ ನಗೆಹನಿ ಬರೆದ ಹಾಸ್ಯ ಬರಹಗಾರರು. ಹಿಂದಿ ಚಿತ್ರನಟ ಖಾದರಖಾನ್ ಅವರ ಅಭಿಮಾನಿಯಾದ ಇವರು, ಅವರ ಕುರಿತು ಉರ್ದು, ಕನ್ನಡ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಪ್ರಚುರಪಡಿಸಿದ್ದಾರೆ. ಇವರಿಗೆ ಪತ್ರಿಕಾ ರತ್ನ, ಉತ್ತಮ ವರದಿಗಾರ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯು ಪಡೆದಿದ್ದಾರೆ. ಇವರು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕ್ರಾಂತಿ ಯುವ ಪರಿಷತ್ತಿನ ಅಧ್ಯಕ್ಷರಾಗಿ, ಕಲ್ಯಾಣ ಕಲಾ ಪ್ರತಿಭೆಯ ಸಂಪಾದಕರಾಗಿ, ಮತ್ತು ಬಸವಕಲ್ಯಾಣ ತಾಲೂಕಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ರಾಜ್ಯ ಮಟ್ಟದ ಪತ್ರಿಕಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಕಾರ್ಯಗಾರ ಸೇರಿದಂತೆ ವಿವಿಧ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ