ಮಂಗಳವಾರ, ಜನವರಿ 14, 2025
ಸೂರ್ಯಕಾಂತ ಸಸಾನೆ.
ಕನ್ನಡ, ಮರಾಠಿಯಲ್ಲಿ ಸಾಹಿತ್ಯ ರಚಿಸಿದ ಲೇಖಕರೆಂದರೆ ಸೂರ್ಯಕಾಂತ ಸಸಾನೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಳಬೋಗ ಗ್ರಾಮದ ಸಂಭಾಜಿ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೦-೧೯೭೩ ಜನಿಸಿದ್ದಾರೆ. ಬಿ.ಎಸ್ಸಿ.ಬಿ.ಇಡಿ. ಪದವಿಧರರಾದ ಇವರು ಭಾಲ್ಕಿಯ ಡಾವರಗಾಂವದ ಅನುದಾನಿತ ವಸಂತ ಪ್ರೌಢ ಶಾಲೆಯಲ್ಲಿ ಮರಾಠಿ ಮಾಧ್ಯಮದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾದರು ವ್ಯವಹಾರಿಕ ಭಾಷೆ ಕನ್ನಡವಾಗಿದೆ. ಇವರು ಕನ್ನಡದಲ್ಲಿ ಶಿಕ್ಷಣ ಕಲಿಯದೆ `ಅಂಕಲಿಪಿ' ಮೂಲಕ ಅಕ್ಷರ ಕಲಿತು ದ್ವಿ ಭಾಷಾ ಕವಿಯಾಗಿ ಹೊರಹೊಮ್ಮಿದ್ದಾರೆ.
ಇವರು ಮರಾಠಿಯಲ್ಲಿ `ಅಣ್ಣಾ ಭಾವು ಸಾಠೆ’ ಎಂಬ ಜೀವನ ಚರಿತ್ರೆ, `ವಿನಯ’ ಎಂಬ ಕವನಸಂಕಲನ ಪ್ರಕಟಿಸಿದ್ದು ಮತ್ತು `ಏಕ ಸೇ ಏಕ್ ಜ್ಞಾನಿಚಾ ಪರಿಚಯ ಆಣಿ ಸಂದೇಶ' ಹಾಗೂ `ಜ್ಣಾನ ದೀಪ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಹಾಗೂ ಕನ್ನಡದಲ್ಲಿ `ಕ್ರಾಂತಿ ಗುರು ಲಹುಜಿ ಸಾಳವೆ’ ಎಂಬ ಕೃತಿ ಪ್ರಕಟಿಸಿ `ಅಣ್ಣಾ ಬಾವು ಸಾಠೆ’ ಜೀವನ ಚರಿತ್ರೆಯು ಕನ್ನಡಕ್ಕೆ ಅನುವಾದಿಸಿದ್ದಾರೆ. ಮತ್ತು ಅಣ್ಣಾಭಾವು ಸಾಠೆಯವರ ಹುಟ್ಟು ಹಬ್ಬವನ್ನು ೧೯೯೪ರಿಂದ ಕರ್ನಾಟಕದಲ್ಲಿ ಮೊದಲು ಪ್ರಾರಂಭ ಮಾಡಿದ ಇವರು ತಮ್ಮ ಹುಟ್ಟೂರಿನಲ್ಲಿ ಪ್ರತಿವರ್ಷ ಜಯಂತಿ ಆಚರಿಸುತ್ತಾರೆ. ಇವರಿಗೆ ೨೦೦೪ರಲ್ಲಿ ಬೀದರ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ, ೨೦೧೨ರಲ್ಲಿ ವೀರಶೈವ ಮಹಾಸಭಾ ಬೆಂಗಳೂರಿನಿAದ `ಬಸವಶ್ರೀ ಪ್ರಶಸ್ತಿ' ೨೦೨೦ರಲ್ಲಿ ಹುಮನಾಬಾದಿನ ಎಕ್ಸಿಲೆಂಟ್ ಶಿಕ್ಷಣ ಸಂಸ್ಥೆಯಿAದ `ಅಣ್ಣಾ ಭಾವು ಸಾಠೆ' ಕೃತಿ ಕನ್ನಡಕ್ಕೆ ಅನುವಾದಿಸಿದ್ದರಿಂದ `ಕಾರಂಜಾ ರತ್ನ' ಪ್ರಶಸ್ತಿಯು ನೀಡಿ ಸತ್ಕರಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ