ಪುಟಗಳು

ಮಂಗಳವಾರ, ಜನವರಿ 14, 2025

ದಿ.ಶಾಂತಪ್ಪಾ ಸೊನಾರೆ

ತತ್ವ ಪದ, ಭಜನೆ ಗೀತೆಗಳನ್ನು ಬರೆದಿರುವ ಇವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿಯ ಶ್ರೀ ನಿಂಗಪ ಮತ್ತು ಶ್ರೀಮತಿ ದ್ರೌಪದಿ ದಂಪತಿಗಳಿಗೆ ೧೯೦೬ರಲ್ಲಿ ಜನಿಸಿದ್ದಾರೆ. ಮತ್ತು ನೂರಾರು ತತ್ವ ಪದಗಳನ್ನು ರಚಿಸಿ ಖ್ಯಾತರಾಗಿದ್ದಾರೆ. `ಲಂಕ ಹಾರಿದನೆ ಹನುಮಂತ, ಭಜಿಸಣ್ಣ ಭಜಿಸಣ್ಣ, ಗಜಮುಖನೆ ! ಝನನನನ ನಾದ ನೋಡಣ್ಣಾ ! ' ಎಂಬ ಮೊದಲಾದ ಹಾಡುಗಳು ಜನಪ್ರಿಯವಾಗಿವೆ. ಇವರು ದಿನಾಂಕ ೨೪-೫-೧೯೮೯ರಲ್ಲಿ ನಿಧನಹೊಂದಿದ್ದು, ಇವರ ಶವವನ್ನು ಊರೆಲ್ಲ ಮೆರವಣಿಗೆ ತೆಗೆದು ಜನ ಅವರ ಮನೆಯಲ್ಲಿಯೇ ಸಮಾಧಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ