ಮಂಗಳವಾರ, ಜನವರಿ 14, 2025
ದಿ.ಶಾಂತಪ್ಪಾ ಸೊನಾರೆ
ತತ್ವ ಪದ, ಭಜನೆ ಗೀತೆಗಳನ್ನು ಬರೆದಿರುವ ಇವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿಯ ಶ್ರೀ ನಿಂಗಪ ಮತ್ತು ಶ್ರೀಮತಿ ದ್ರೌಪದಿ ದಂಪತಿಗಳಿಗೆ ೧೯೦೬ರಲ್ಲಿ ಜನಿಸಿದ್ದಾರೆ. ಮತ್ತು ನೂರಾರು ತತ್ವ ಪದಗಳನ್ನು ರಚಿಸಿ ಖ್ಯಾತರಾಗಿದ್ದಾರೆ. `ಲಂಕ ಹಾರಿದನೆ ಹನುಮಂತ, ಭಜಿಸಣ್ಣ ಭಜಿಸಣ್ಣ, ಗಜಮುಖನೆ ! ಝನನನನ ನಾದ ನೋಡಣ್ಣಾ ! ' ಎಂಬ ಮೊದಲಾದ ಹಾಡುಗಳು ಜನಪ್ರಿಯವಾಗಿವೆ. ಇವರು ದಿನಾಂಕ ೨೪-೫-೧೯೮೯ರಲ್ಲಿ ನಿಧನಹೊಂದಿದ್ದು, ಇವರ ಶವವನ್ನು ಊರೆಲ್ಲ ಮೆರವಣಿಗೆ ತೆಗೆದು ಜನ ಅವರ ಮನೆಯಲ್ಲಿಯೇ ಸಮಾಧಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ