ಮಂಗಳವಾರ, ಜನವರಿ 14, 2025
ರಾಜೇಂದ್ರ ಎಲ್. ಗೋಖಲೆ.
ಪತ್ರಕರ್ತ ಹಾಗೂ ಯುವ ಬರಹಗಾರರಾದ ರಾಜೇಂದ್ರ ಎಲ್. ಗೋಖಲೆ ಯವರು ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಲಕ್ಷö್ಮಣ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೧೦-೮-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎಫ್.ಎ. ಚಿತ್ರಕಲಾ ಪದವಿಯನ್ನು ಪಡೆದ ಇವರು ೨೦೦೨ರಿಂದ ಬಸವಕಲ್ಯಾಣದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಶೋಕಾ ಕೋಟೆ, ಕ್ರಾಂತಿ, ಯುವರಂಗ, ಸಂಜೆವಾಣಿ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ ಇವರು ಸದ್ಯ `ಕಲ್ಯಾಣ ಜಂಗ’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಅನೇಕ ಲೇಖನಗಳು ತಮ್ಮ ಪತ್ರಿಕೆಗಳಲ್ಲಿ ಬರೆದು ಲೇಖಕರಾಗಿಯು ಗುರ್ತಿಸಿಕೊಂಡಿದ್ದಾರೆ. ಮತ್ತು ಸಾಹಿತಿ `ಮಚ್ಚೇಂದ್ರ ಅಣಕಲ್ ರವರ ದಲಿತ ಸಂವೇದನಿಯ ಕತೆಗಳು’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸುತ್ತಿದ್ದಾರೆ. ಇವರು ೨೦೧೪ ರಿಂದ ೨೦೧೮ ರ ವರೆಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ