ಪುಟಗಳು

ಕಮಲನಗರ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಮಲನಗರ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 10, 2025

ಅರುಣ ವಿ.ಸಿಂಧೆ

ಉದಯೋನ್ಮುಖ ಬರಹಗಾರ ಅರುಣ ವಿ.ಸಿಂಧೆ. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹಿಪ್ಪಳಗಾಂವ ಗ್ರಾಮದ ವಿಠಲ ಮತ್ತು ಇಟಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಹಿಂದಿ, ಬಿ.ಎಡ್. ಪದವಿಧರರಾದ ಇವರು ಔರಾದ ತಾಲೂಕಿನ ಅಮರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಯ ಪ್ರಾವೀಣ್ಯತೆ ಹೊಂದಿದ್ದ ಇವರು ಸಾಹಿತಿ `ಬಾಲಚಂದ್ರ ಜಯಶೆಟ್ಟಿಯವರ ಜೀವನ ಚರಿತ್ರೆ ’ ಎಂಬ ಕೃತಿ ಹಿಂದಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಇವರ ಕವನ ಲೇಖನ, ಹನಿಗವನUಳು `ಭೀಮವಾದ' ಎಂಬ ಮಾಸ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನ ಮತ್ತು ಕೆಲವರ ಅಭಿನಂದನಾ ಗ್ರಂಥಗಳಲ್ಲಿಯೂ ಪ್ರಕಟವಾಗಿವೆ. ಇವರಿಗೆ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ಕುಸುಮ' 'ಜ್ಣಾನ ರತ್ನ' ಎಂಬ ಪ್ರಶಸ್ತಿಗಳು ಲಭಿಸಿದ್ದು, ಹುಲಸೂರು ತಾಲೂಕಿನ ಬೇಲೂರು ಉರಿಲಿಂಗ ಪೆದ್ದಿ ಮಠದ ಗೌರವ ಪ್ರಶಸ್ತಿ ಪತ್ರವು ಪಡೆದಿದ್ದಾರೆ.

ಸಂಗಮೇಶ್ವರ ಮುರ್ಕೆ

ಯುವ ಸಾಹಿತಿ ಸಂಗಮೇಶ್ವರ ಮುರ್ಕೆಯವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸೂರ್ಯಕಾಂತ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ರಲ್ಲಿ ಜನಿಸಿದ್ದಾರೆ. ಕನ್ನಡ, ಮರಾಠಿ, ಹಿಂದಿ ಭಾಷ್ಯಾ ಪ್ರಾವೀಣ್ಯತೆ ಹೊಂದಿದ ಇವರು ಬಿ,ಎ, ಡಿ,ಇಡಿ, ಪದವಿಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೦೨ರಲ್ಲಿ `ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ' ೨೦೧೧ರಲ್ಲಿ `ಸಂತ ಶ್ರೀ ಹರಿನಾಥ ಚರಿತ್ರೆ' ಎಂಬ ಕೃತಿಗಳು ಪ್ರಕಟಿಸಿದರೆ, ೨೦೧೧ರಲ್ಲಿ `ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ' ಎಂಬ ಮರಾಠಿ ಕೃತಿಯು ಅನಂತ ಚಂಪಾಯಿ ಮಾಧವ ಕದಂ ಅವರೊಂದಿಗೆ ಸಂಪಾದಿಸಿದ್ದಾರೆ. ೨೦೧೨ರಲ್ಲಿ `ಹನಿ ಹನಿ ಜೇನ ಹನಿ' ಎಂಬ ಹನಿಗವನ ಸಂಕಲನ, ೨೦೧೭ರಲ್ಲಿ `ಸಾಧಕರು' ಎಂಬ ವ್ಯಕ್ತಿ ಚಿತ್ರಗಳ ಕೃತಿಯೊಂದು ಪ್ರಕಟಿಸಿದ್ದಾರೆ. ಇವರ ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಉತ್ತರ ಕರ್ನಾಟಕ ಸೇರಿದಂತೆ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಡಾ. ಶಿವಲೀಲಾ ಮಠಪತಿ

ಕವಯತ್ರಿ ಡಾ. ಶಿವಲೀಲಾ ಮಠಪತಿ. ಇವರು ಕಲಬುರಗಿ ಜಿಲ್ಲೆ ಚಿತ್ತಾಪೂರದ ವೀರಯ್ಯಾ ಸ್ಥಾವರಮಠ ಮತ್ತು ಸೌಭಾಗ್ಯಮ್ಮ ದಂಪತಿಗಳಿಗೆ ದಿನಾಂಕ ೧೬-೯-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಕಮಲನಗರ ತಾಲೂಕಿನ ಖೇಡ (ಸಂಗಮ) ಶಾಂತಲಿಂಗ ಮಠಪತಿಯವರ ಧರ್ಮಪತ್ನಿಯಾಗಿದ್ದು, ಇವರು ಬಸವಕಲ್ಯಾಣದ ಎಸ್.ಎಸ್.ಕೆ.ಬಿ.ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ೨೦೧೮ರಲ್ಲಿ `ಶರಣ ಸಂಸ್ಕೃತಿ ಮತ್ತು ಐತಿಹಾಸಿಕ ಚಿಂತನೆ' ಎಂಬ ಚಿಂತನ ಕೃತಿಯು ಪ್ರಕಟಿಸಿದ್ದಾರೆ. `ಶ್ರೀರಾಮಚಂದ್ರ ಮಿಷನ್ನಿನ ಚಾರಿತ್ರಿಕ ಅಧ್ಯಯನ' ಇದು ಅವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಮಹಿಳಾ ಕದಳಿ ವೇದಿಕೆಯ ಉಪಾಧ್ಯಕ್ಷರಾಗಿ, ಬಸವಕಲ್ಯಾಣ ತಾಲೂಕಿನ ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಹುಲಸೂರಿನ ಕಸಾಪ ಅಧ್ಯಕ್ಷರಾಗಿ ಸೇವ ಸಲ್ಲಿಸುತ್ತಿದ್ದಾರೆ.

ಅನಂತ ಕದಮ್

ಮರಾಠಿ ಉದಯೋನ್ಮುಖ ಬರಹಗಾರ ಅನಂತ ಕದಮ್. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಸಾಹಿತಿ ಮಾಧವರಾವ ಮತ್ತು ಚಂಪಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೬೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಉದಗಿರ ತಾಲೂಕಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನ, ಲೇಖನ, ಪ್ರಬಂಧ ಮೊದಲಾದವು ಮರಾಠಿಯಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮತ್ತು `ಶ್ರೀ ಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ' ಎಂಬ ಕೃತಿಯು ಗ್ರಾಮದ ಸಾಹಿತಿ ಸಂಗಮೇಶ್ವರ ಎಸ್.ಮುರ್ಕೆಯವರೊಂದಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಏಕ್ ಜೂಟ್, ಸಕಾಳ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಉದಗಿರ ನಗರದಲ್ಲಿ `ಚಲಾ ಕವಿತಾಚ ಬನಾತ' ಎಂಬ ವೇದಿಕೆಯು ರೂಪಿಸಿಕೊಂಡು ೩೦೦ಕ್ಕೂ ಅಧಿಕ ಮರಾಠಿ ಸಾಹಿತ್ಯದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.

ಡಾ.ರಾಜೇಂದ್ರ ಯರನಾಳೆ

ಹಿರಿಯ ಸಾಹಿತಿ ಡಾ.ರಾಜೇಂದ್ರ ಯರನಾಳೆಯವರು. ಬೀದರ ಜಿಲ್ಲೆ ಕಮಲನಗರ ತಾಲೂಕಿನ ಠಾಣಾ ಕುಸನೂರ ಗ್ರಾಮದ ೧೫-೧೦-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಡಿ.ಫಾರ್ಮಸಿ, ಡಿ.ಓ.ಎಂ. ಎಚ್. ಡಿ.ಎಂ.ಎA.ಎಚ್. ಪದವಿ ಪಡೆದ ಇವರು ೧೯೯೩ರಲ್ಲಿ ಹುಮನಾಬಾದಿನ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ ಇವರು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಗುರುಮಿಠಕಲ್ ಸ.ಪ.ಪೂ.ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾಗಿ, ೨೦೧೭ರಿಂದ ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಸ.ಪ.ಪೂ.ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ೧೧ವರ್ಷ ಸೇವೆ ಸಲ್ಲಿಸಿದ ಇವರು ಕನ್ನಡ ಸಾಹಿತ್ಯದಲ್ಲಿ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, ೧೯೮೭ರಲ್ಲಿ `ಬಯಕೆ ಒಲವು ನೆನೆಯಿತು.' (ಕವನ ಸಂಕಲನ) ೧೯೮೭ರಲ್ಲಿ `ಗೌಡನ ತಂತ್ರ ರಾಣಿಗೆ ಮಂತ್ರ' ೨೦೦೦ರಲ್ಲಿ `ಹುಗ್ಗಿ ತುಪ್ಪ ಮಜಾ ಮಜಾ ನೋಡಪ್ಪ’ (ಏಕಾಂಕ ನಾಟಕಗಳು) ೧೯೮೮ರಲ್ಲಿ `ಮೊಮ್ಮಕ್ಕಳ ಭಾಗ್ಯ ಸಂಗ್ಗವ್ವಜ್ಜಿಗ್ಯಾಕ್ಕಿಲ್ಲ' (ಮಿನಿ ಕಾದಂಬರಿ) ೨೦೦೪ರಲ್ಲಿ `ಹೆಸರಿಲ್ಲದವನು' (ಕಥಾ ಸಂಕಲನ) `ಹುಚ್ಚನ ಗೀಚು' (ಆಧುನಿಕ ವಚನಗಳು) ೧೯೯೦ರಲ್ಲಿ `ಮರೆಯದ ಚಿತ್ರಗಳು' (ವ್ಯಕ್ತಿ ಚಿತ್ರ) ೧೯೯೬ರಲ್ಲಿ `ವಿಶ್ವ ವಿಖ್ಯಾತ ಬಿದ್ರಿಕಲೆ' (ಸಂಶೋಧನೆ) ಈ ಕೃತಿ ಹಿಂದಿ ಭಾಷೆಗೆ ಅನುವಾದಗೊಂಡಿದೆ. ೨೦೦೦ರಲ್ಲಿ `ಬೀದರ ಜಿಲ್ಲೆಯ ಪ್ರಾದೇಶಿಕ ಭಾಷಾ ವೈಶಿಷ್ಟ್ಯ' ೨೦೦೧ರಲ್ಲಿ `ಪೂರ್ವಜ್ಞ ವಚನಗಳು ಒಂದು ಅಧ್ಯಯನ' (ಸಂಶೋಧನಾ ಪ್ರಬಂಧ) `ರಾಮಪುರದ ಬಕ್ಕಪ್ಪನವರ ತತ್ವ ಪದಗಳು ಹಾಗೂ ನಿಜ ಶರಣನ ತ್ರಿವಿಧಿಯ ವಚನಗಳು, ೨೦೦೪ರಲ್ಲಿ `ಜನಪದ ಹೊಲಿಗೆ ಮತ್ತು ಚಿತ್ರಕಲೆ' (ಸಂಶೋಧನೆ) ೧೯೯೪ರಲ್ಲಿ `ಶೀಗಿ ಹಾಡುಗಳು’ ೨೦೦೦ರಲ್ಲಿ `ಜನಪದ ಬಯ್ಗಳ ಪದಗಳು’ ಮತ್ತು `ಐವರ ಐವತ್ತು ಕವನಗಳು,’ ೨೦೦೧ರಲ್ಲಿ `ಬಿಸಿಲು ನಾಡಿನ ಹಸಿರು ಬನದಾಗ’ ೨೦೦೨ರಲ್ಲಿ `ನವಚೇತನ’ ೨೦೦೪ರಲ್ಲಿ `ಬೊಬ್ಬಿ ಹಾಡುಗಳು’ ೨೦೦೬ರಲ್ಲಿ `ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣ’ ೨೦೦೭ರಲ್ಲಿ `ಹಂತಿ ಹಾಡುಗಳು’ ಎಂಬ ಕೃತಿಗಳು ಸಂಪಾಸಿದ್ದಾರೆ. ಇವರ `ಶೀಗಿಯ ಹಾಡುಗಳು' ಎಂಬ ಕೃತಿಯು ೨೦೧೨ರಿಂದ ೨೦೧೫ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿತ್ತು.. ಜನಪದ ಸಾಹಿತ್ಯದಲ್ಲಿ ಅಗಾಧ ಸಾಧನೆ ಮಾಡಿದ ಇವರು ಕಮಲಾಪೂರ ತಾಲೂಕಿನ ನಾವದಗಿ ಗ್ರಾಮದಲ್ಲಿ ೧೫ಎಕರೆ ಪ್ರದೇಶದಲ್ಲಿ `ಸಾಂಸ್ಕೃತಿಕ ಲೋಕ' ಎಂಬ ಜನಪದ ಕಲೆ ಸಾಹಿತ್ಯವನ್ನು ಬಿಂಬಿಸುವ ಸಂಸ್ಥೆಯೊAದು ಸ್ಥಾಪಿಸಿ ಕಲ್ಯಾಣ ಕರ್ನಾಟಕದಲ್ಲಿ ಜನಪದ ಲೋಕಕ್ಕೆ ಮಾದರಿಯಾಗಿದ್ದಾರೆ. ಇವರ ಕುರಿತು ಪ್ರೊ.ಜಗನ್ನಾಥ ಕಮಲಾಪೂರೆಯವರು `ಜಾನಪದ ವಿದ್ವಾಂಸ ಡಾ.ರಾಜೇಂದ್ರ ಯರನಾಳೆ' ಎಂಬ ಅಭಿನಂದನಾ ಗ್ರಂಥವು ಹೊರ ತಂದಿದ್ದಾರೆ.

ಪೂಜ್ಯ ಮಹಾದೇವಮ್ಮಾ ತಾಯಿ

ಸಾಹಿತಿಗಳಾದ ಪೂಜ್ಯ ಮಹಾದೇವಮ್ಮಾ ತಾಯಿಯವರು. ಹುಮನಾಬಾದ ತಾಲ್ಲೂಕಿನ ಕಂದಗೂಳ ಗ್ರಾಮದ ಶಾಮರಾವ ಪೋಲಿಸ್ ಪಾಟೀಲ್ ಮತ್ತು ಭಾಗೀರಥಿ ದಂಪತಿಗಳಿಗೆ ೧-೬- ೧೯೬೨ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಟ್ಟಿದ ಒಂದು ವರ್ಷದೊಳಗೆ ಪೋಲಿಯೊ ರೋಗದಿಂದ ಅಂಗವಿಕಲರಾಗಿ ಕಷ್ಟದ ಜೀವನದೊಂದಿಗೆ ಶಿಕ್ಷಣ ಪಡೆದು ೧೯೯೦ರಲ್ಲಿ ಡಾ.ಚನ್ನಬಸವ ಪಟ್ಟದೇವರಿಂದ ಜಂಗಮ ದಿಕ್ಷೇ ಪಡೆದುಕೊಂಡು ೧೯೯೨ ರಲ್ಲಿ ಬಸವಕಲ್ಯಾಣದ ಶೇಷಪ್ಪ ಗಬ್ಬೂರವರಿಂದ ಸಂಗೀತ ಕಲಿತು `ವಿದ್ವತ್' ಪಾಸಾಗಿ ೧೯೯೬ರಲ್ಲಿ ಕಮಲನಗರ ತಾಲ್ಲೂಕಿನ ಖೇಡ-ಸಂಗಮದ ನೀಲಾಂಬಿಕಾ ಆಶ್ರಮದಲ್ಲಿ ಅಂಧ ಮಕ್ಕಳ ಸಂಗೀತ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶರಣ ತತ್ವ ಮತ್ತು ಬಸವಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅಧ್ಯಾತ್ಮಿಕತೆಯಿಂದ ಅಕ್ಕ ಮಹಾದೇವಿ ಗ್ರಾಮೀಣ ಅಭಿವೃದ್ಧಿ ಮಹಿಳಾ ಜನಕಲ್ಯಾಣ ಟ್ರಸ್ಟ್ (ರಿ) ಅನ್ನು ಸ್ಥಾಪಿಸಿ ಅದರ ಮೂಲಕ ಹೆಣ್ಣು ಮಕ್ಕಳಿಗೆ ಭಜನೆ, ಕೋಲಾಟ, ನಾಟಕ, ರೂಪಕಗಳನ್ನು ಕಲಿಸಿ ಪ್ರೋತ್ಸಾಹಿಸುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. `ನಾ ಕಂಡ ಶರಣೆಯರು', `ಅನುಭಾವ ಬುತ್ತಿ’, `ಅಕ್ಕ ಒಲಿದ ಗೀತೆಗಳು', `ಹೃದಯ ಗೀತೆಗಳು', `ಮಮತೆಯ ಮಡಿಲು', `ತಾಯಿ ನೆನಪು', `ಶರಣರ ಪರಿಮಳ', `ಬಸವ ಸಂದೇಶ'. ಇವು ಅವರ ಕೃತಿಗಳಾಗಿವೆ. ೨೦೧೮ರಲ್ಲಿ ಬಾಗಲಕೋಟೆಯಿಂದ `ಕರ್ನಾಟಕ ಅಕಾಡೆಮಿ ಗೌರವ ಪ್ರಶಸ್ತಿ' ಮತ್ತು ಅಕ್ಕಮಹಾದೇವಿ, ಚನ್ನಬಸವ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಔರಾದ ತಾಲೂಕಿನ ಜನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮತ್ತು ಭಾಲ್ಕಿ ತಾಲೂಕಿನ ಜೋಳದಾಬಕಾ ಗ್ರಾಮದಲ್ಲಿ ನಡೆದ ಮಹಿಳಾ ಕದಳಿ ವೇದಿಕೆಯ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ಇವರು ಬರೆದ ಕೆಲ ಹಾಡುಗಳು `ಓ ಚನ್ನಬಸವ', `ಬೆಳ್ಳಿಯ ಬೆಳಗು'. ಎಂಬ ಧ್ವನಿ ಸುರುಳಿಯಾಗಿ ಮುದ್ರಿತಗೊಂಡಿವೆ.

ಶಿವಕುಮಾರ ಶಿವಣಕರ

ಗಡಿನಾಡಿನ ಸಾಹಿತಿ ಶಿವಕುಮಾರ ಶಿವಣಕರ. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ನಾಗಶೆಟ್ಟಿ ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೨೦-೪-೧೯೬೧ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್ ಸ್ನಾತಕೋತ್ತರ ಪದವಿಧರರಾದ ಇವರು ೧೯೮೫ರಿಂದ ಕಮಲನಗರದ ಶ್ರೀ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ಪ್ರಾಂಶುಪಾಲರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತರಾಗಿರುವ ಇವರು ೧೯೯೬ರಲ್ಲಿ `ಜನಸಂಖ್ಯೆ ಸ್ಪೋಟ’ ಮತ್ತು ೨೦೦೧ರಲ್ಲಿ `ಭಾರತದಲ್ಲಿ ಮಹಿಳೆಯರ ಸ್ಥಾನಮಾನ.' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ ಲೇಖನ ವೈಚಾರಿಕ ಬರಹಗಳು ಕನ್ನಡದ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ೧೯೮೪ರಲ್ಲಿ ಬೀದರದ ಉತ್ತರ ಕರ್ನಾಟಕ, ಕಲಬುರಗಿಯ ಶಾಸನ ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ, ಬಸವಕಲ್ಯಾಣದ ಬಹಿರಂಗ ಸುದ್ಧಿ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೦೩ರಲ್ಲಿ ಬೀದರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಂಡಾಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪನವರು ಉತ್ತಮ ಲೇಖಕರೆಂದು `ಜಿಲ್ಲಾ ಕಸಾಪ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.

ದಿ. ಲೀಲಾ ಮಠಪತಿ

ಕರ್ನಾಟಕ-ಮಹಾರಾಷ್ಟç ಗಡಿನಾಡಿನ ಮರಾಠಿ ಭಾಷಿಕರ ಮಧ್ಯದಲ್ಲಿ ಕನ್ನಡ ಸಾಹಿತ್ಯ ಮತ್ತು ಮಹಿಳಾ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ ಇವರು ಕಮಲನಗರದಲ್ಲಿ ಶಿಕ್ಷಣ ಸಂಸ್ಥೆಯೊAದನ್ನು ಸ್ಥಾಪಿಸಲು ಕಾರಣಿಭೂತರಾಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತರಾಗಿ ನೂರಾರು ಕಾವ್ಯ ರಚನೆ ಮಾಡಿದ ಕವಯತ್ರಿ ದಿ.ಲೀಲಾ ಮಠಪತಿ. ಇವರು ಹಾವೇರಿ ಜಿಲ್ಲೆಯ ಡೊಂಬರ ಮತ್ತೂರು ಗ್ರಾಮದ ಬಸವರಾಜ ಪಾಟೀಲ್ ಮತ್ತು ಮುರಿಗೆಮ್ಮ ದಂಪತಿಗಳಿಗೆ ದಿನಾಂಕ ೧೧-೫-೧೯೬೦ರಲ್ಲಿ ಜನಿಸಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ.ಬಿ.ಇಡಿ.ಪದವಿಧರರಾದ ಇವರು ಕನ್ನಡದ ಖ್ಯಾತ ಬಂಡಾಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ (ಚಂಪಾ) ರವರ ಖಾಸ್ ಸಹೋದರಿಯಾಗಿದ್ದು, ಮತ್ತು ಕಮಲನಗರದ ಜಿ.ಜಿ.ಮಠಪತಿಯವರ ಧರ್ಮಪತ್ನಿ ಹಾಗೂ ಕಮಲನಗರ ಕಸಾಪ ಅಧ್ಯಕ್ಷರಾದ ಪ್ರಶಾಂತ ಮಠಪತಿಯವರ ತಾಯಿಯಾಗಿದ್ದಾರೆ. ಇವರು ಕಮಲನಗರದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಮಹಿಳಾ ಪ್ರೌಢ ಶಾಲಾ ಸ್ಥಾಪನೆಗೆ ಪರಿಕಲ್ಪನೆ ನೀಡಿ ಆ ಶಿಕ್ಷಣ ಸಂಸ್ಥೆಯಲ್ಲಿ ಕೆಲವರ್ಷ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಅಣ್ಣಾ ಡಾ. ಚಂದ್ರಶೇಖರ ಪಾಟೀಲ್ ರವರ ಬಂಡಾಯ ಸಾಹಿತ್ಯಕ್ಕೆ ಮಾರುಹೋಗಿ ನೂರಾರು ಕವಿತೆಗಳು ಬರೆದಿದ್ದು, ಅವು ಓದುಗರ ಮನ ಸೆಳೆಯುವಂತ್ತಿವೆ. ಆದರೆ ದುರಾದೃಷ್ಟ ಇವರು ಆಕಸ್ಮಿಕವಾಗಿ ೧೩-೧೧-೨೦೦೯ರಲ್ಲಿ ನಿಧನ ಹೊಂದಿದ್ದರಿAದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಂತರ ೨೦೧೦ರಲ್ಲಿ ಇವರ ಮಕ್ಕಳು ಅಮ್ಮಳ ಪ್ರೀತಿಯ ನೆನಪಿಗಾಗಿ ಅವರ ಸಮಗ್ರ ಕವಿತೆಗಳು ಒಟ್ಟು ಸೇರಿಸಿ ೨೦೧೦ರಲ್ಲಿ `ಮಿಡಿತ-ತುಡಿತ' ಎಂಬ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ೨೦೦೬ರಲ್ಲಿ ಚಂಪಾ ರವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಸಂಧರ್ಭದಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಮತ್ತು ದೂರದರ್ಶನ ಚಂದನ ವಾಹಿನಿಯವರು ಏರ್ಪಡಿಸಿದ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡಿದ್ದಾರೆ. ಅಷ್ಟೇಯಲ್ಲದೆ ಬೀದರ ಜಿಲ್ಲಾ ಧರಿನಾಡು ಕನ್ನಡ ಸಂಘ ಮತ್ತು ಕಸಾಪದ ಮಹಿಳಾ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸೂರ್ಯಕಾಂತ ದ್ವಾಸೆ

ಸಾಹಿತಿ ಸೂರ್ಯಕಾಂತ ದ್ವಾಸೆಯವರು ಬೀದರ ಜಿಲ್ಲೆ ಕಮಲನಗರದ ಸಿದ್ರಾಮಪ್ಪಾ ಮತ್ತು ಗಂಗಮ್ಮಾ ದಂಪತಿಗಳಿಗೆ ದಿನಾಂಕ ೧-೫-೧೯೫೩ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರು ಮರಾಠಿ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿ ಬಿ,ಎಸ್ಸಿ. ಎಂ.ಎ.ಹಿAದಿ.ಬಿ,ಇಡಿ ಪದವಿಧರರಾದ ಇವರು ೧೯೭೬ರಲ್ಲಿ ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಮಲನಗರದ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿದಾಗಲೆ ಮರಾಠಿ, ಹಿಂದಿ ಭಾಷೆಯಲ್ಲಿ ಕವನ, ಲೇಖನಗಳು ಬರೆದು ಲಾತೂರಿನ `ಲೋಕಮತ' ಮರಾಠಿ ಪತ್ರಿಕೆಯಲ್ಲಿ ಹಾಗೂ ಬೀದರದ `ಬೀದರ ಕಿ.ಅವಾಜ' ಎಂಬ ಹಿಂದಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ೨೦೧೦ರಲ್ಲಿ ಭಾಲ್ಕಿ ತಾಲೂಕಿನ ನಾವದಗಿಯ ರೇವಪ್ಪಯ್ಯ ಅಜ್ಜನವರ ಕುರಿತು 'ವಿಶ್ವಗುರು ರೇವಪಯ್ಯಾ' ಎಂಬ ಜೀವನ ಚರಿತ್ರೆಯು ಹಿಂದಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಇವರಿಗೆ ೨೦೧೧ರಲ್ಲಿ ಬೀದರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಾ.ನಾ.ಸೊಲ್ಲಾಪೂರೆ

`ಬಾಲಕ' ಎಂಬ ಕಾವ್ಯನಾಮದಿಂದ ಖ್ಯಾತರಾದ ಇವರ ನಿಜನಾಮ ಬಾಬು ತಂದೆ ನಿಂಗಪ್ಪಾ ಸೊಲ್ಲಾಪೂರೆ. ಎಂದಾಗಿದೆ. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ನಾಗಪ್ಪ ಹಾಗೂ ಲಕ್ಷಿö್ಮÃಬಾಯಿ ದಂಪತಿಗಳಿಗೆ ದಿನಾಂಕ ೨-೪-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ, ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ೨೦೧೨ ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕವಿ, ಸಾಹಿತಿ, ಚಿಂತನಕಾರರಾಗಿ ಕೆಲ ಕೃತಿಗಳು ರಚಿಸಿದ್ದಾರೆ, ಅವುಗಳೆಂದರೆ, `ಶಿವಾನುಭವ ಗೋಷ್ಠಿಯಲ್ಲಿ ಬಸವಧರ್ಮ’, `ಮನದಳಲು’, `ಪವಿತ್ರ ಶರಣ ಜೀವಿಗಳು’ (ಲೇಖನ) `ಗಾದೆ ಮೇಲೆ ಕುಳಿತು ಕೊಂಡು’ (ಮಕ್ಕಳ ಕೃತಿ) `ಗುರು-ಮೈತ್ರಿ, `ಚುಳುಕಿ’ (ಸಂ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಚಿಂತನ ಬರಹಗಳು ನಾಡಿನ ಕೆಲ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕಮಲನಗರದಲ್ಲಿ ೧೦೮ ಶಿವಾನುಭವಗೊಷ್ಠಿ ನಡೆಸಿದ್ದು, ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಇದ್ದುಕೊಂಡು ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಸುಮನ್ ಕದಮ್

ಮಹಿಳಾ ಮರಾಠಿ ಸಾಹಿತಿಯಾದ ಸುಮನ್ ಕದಮ್. ಇವರು ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಮರಾಠಿ ಸಾಹಿತಿ ಜಿ.ಎನ್.ಕದಮ್ ರವರ ಧರ್ಮ ಪತ್ನಿಯಾಗಿದ್ದು, ೧೯೫೦ರಲ್ಲಿ ಜನಿಸಿದ್ದಾರೆ. ಗೃಹಿಣಿಯಾಗಿದ್ದುಕೊಂಡೆ ಮರಾಠಿಯಲ್ಲಿ ಕವನ ಲೇಖನಗಳು ಬರೆದು ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ `ಮಹಿಲಾನೋ ಜಾಗೆವ್ಹಾ ?' ಮತ್ತು `ಶಿಕ್ ಪಾರೂ ಶಿಕ್' ಎಂಬ ಮಹಿಳಾ ಪರ ಸಾಮಾಜಿಕ ಕಳಕಳಿಯುಳ್ಳ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಸಕಾಳ್, ಏಕ್ ಜೂಟ್ ಮೊದಲಾದ ಮರಾಠಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮಾಧವರಾವ ನಾರಾಯಣ ಕದಮ್

ಗಡಿನಾಡಿನ ಮರಾಠಿ ಸಾಹಿತಿ ಮಾಧವರಾವ ನಾರಾಯಣ ಕದಮ್. ಇವರು ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ನಾರಾಯಣ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ ೧೮-೯-೧೯೩೫ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮರಾಠಿ ಭಾಷೆಯಲ್ಲಿ ಕತೆ, ಕವನ ,ಲೇಖನ, ಕಾದಂಬರಿಗಳನ್ನು ಬರೆದ ಇವರು `ಕ್ಷಿತಿಜಾ ಪಿರಗರಗರಾ, ಪಾಟಾಂಚಾ ಪಾನಿ, ಮಾತಿ ಚಾ ಒಲವಾ, ಮಜ ಯಾ ಕವಿತಾ, ಪ್ರಸ್ಥಾನ ಮತ್ತು ಮನತಲ್ಯಾಗೋಷ್ಠಿ ' ಎಂಬ ಕವನ ಸಂಕಲನಗಳು, ಹಾಗೂ `ಖುರಾಫ್' ಎಂಬ ಕಾದಂಬರಿ ರಚಿಸಿ ಪ್ರಕಟಿಸಿದ್ದಾರೆ. ಈ ಕಾದಂಬರಿ ಮಹಾರಾಷ್ಟ್ರ ನಾಂದೇಡ ಜಿಲ್ಲೆಯ ಶ್ರೀ ರಾಮಾನಂದ ತೀರ್ಥ ವಿಶ್ವವಿದ್ಯಾಲಯದ ಬಿ.ಎ.ಪ್ರಥಮ ವರ್ಷದ ಮರಾಠಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿದೆ. ಮತ್ತು ಇವರ ಬರಹಗಳು ಮಹಾರಾಷ್ಟ್ರದ ಪುಣ್ಯ ನಗರಿ, ಸಕಾಳ್, ಎಕ್ ಜೂಟ್ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಜಿ.ಎನ್.ಕದಂ

ಗಡಿನಾಡಿನ ಮರಾಠಿ ಸಾಹಿತಿ ಜಿ.ಎನ್.ಕದಂ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಹೊಳಸಮುದ್ರ ಗ್ರಾಮದ ನಾರಾಯಣ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೧೩-೧೦-೧೯೩೩ರಲ್ಲಿ ಜನಿಸಿದ್ದಾರೆ. ಇವರ ಪೂರ್ಣನಾಮ `ಜಾಲಂದರನಾಥ ನಾರಾಯಣ ಕದಮ್' ಎಂದಾಗಿದೆ. ಬಿ.ಎ. ಬಿ.ಇಡಿ. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ೩೮ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ, ದಿನಾಂಕ ೯-೭-೨೦೧೩ರಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರಿಂದ ಅವರು ಮರಾಠಿ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿದ್ದು ಮತ್ತು ಆ ಭಾಷೆಯಲ್ಲಿಯೆ ಸಾಹಿತ್ಯ ರಚಿಸಿದ್ದಾರೆ. `ಸುಗಂಧಿ ಸುಮನೆ, ಪಹಾಟ, ನಾಥ ಚಾ ಚುರಾನಿ, ಆಶೆಹಿ ಮಾನಸ ನಾಮ ವಾಜಲೇಲೆ' ಇತ್ಯಾದಿ ಕೃತಿಗಳು ರಚಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ಪುಣ್ಯ ನಗರಿ, ಎಕ್ ಜೂಟ್, ಸಕಾಳ್ ಮೊದಲಾದ ಮರಾಠಿ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಕರ್ನಾಟಕ ರಾಜ್ಯದ ಮರಾಠಿ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.