ಶುಕ್ರವಾರ, ಜನವರಿ 10, 2025
ಅರುಣ ವಿ.ಸಿಂಧೆ
ಉದಯೋನ್ಮುಖ ಬರಹಗಾರ ಅರುಣ ವಿ.ಸಿಂಧೆ. ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹಿಪ್ಪಳಗಾಂವ ಗ್ರಾಮದ ವಿಠಲ ಮತ್ತು ಇಟಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಹಿಂದಿ, ಬಿ.ಎಡ್. ಪದವಿಧರರಾದ ಇವರು ಔರಾದ ತಾಲೂಕಿನ ಅಮರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಯ ಪ್ರಾವೀಣ್ಯತೆ ಹೊಂದಿದ್ದ ಇವರು ಸಾಹಿತಿ `ಬಾಲಚಂದ್ರ ಜಯಶೆಟ್ಟಿಯವರ ಜೀವನ ಚರಿತ್ರೆ ’ ಎಂಬ ಕೃತಿ ಹಿಂದಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಇವರ ಕವನ ಲೇಖನ, ಹನಿಗವನUಳು `ಭೀಮವಾದ' ಎಂಬ ಮಾಸ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನ ಮತ್ತು ಕೆಲವರ ಅಭಿನಂದನಾ ಗ್ರಂಥಗಳಲ್ಲಿಯೂ ಪ್ರಕಟವಾಗಿವೆ. ಇವರಿಗೆ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ಕುಸುಮ' 'ಜ್ಣಾನ ರತ್ನ' ಎಂಬ ಪ್ರಶಸ್ತಿಗಳು ಲಭಿಸಿದ್ದು, ಹುಲಸೂರು ತಾಲೂಕಿನ ಬೇಲೂರು ಉರಿಲಿಂಗ ಪೆದ್ದಿ ಮಠದ ಗೌರವ ಪ್ರಶಸ್ತಿ ಪತ್ರವು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ