ಪುಟಗಳು

ಔರಾಧ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಔರಾಧ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 14, 2025

ಸಂಗೀತಾ ಎನ್.ಕಲಬುರ್ಗೆ

ಉದಯೋನ್ಮುಖ ಕವಯತ್ರಿ ಸಂಗೀತಾ ಎನ್.ಕಲಬುರ್ಗೆ ರವರು ಔರಾದ ತಾಲೂಕಿನ ಕರಕ್ಯಾಳ ಗ್ರಾಮದ ಸಿದ್ರಾಮ ಮತ್ತು ಕಲಾವತಿ ದಂಪತಿಗಳಿಗೆ ದಿನಾಂಕ ೮-೯-೨೦೦೬ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಎಸ್.ಎಸ್.ಎಲ್.ಸಿ ಅಧ್ಯಯನ ಮಾಡುತ್ತಿದ್ದಾರೆ. ಸದಾ ಒಂದಿಲ್ಲೊAದು ಪತ್ರಿಕೆ ಅಂತರಜಾಲ ತಾಣಗಳಲ್ಲಿ ಕವನ, ಲೇಖನ, ಹನಿಗವನಗಳನ್ನು ರಚನೆ ಮಾಡುತ್ತಿರುವ ಇವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ, ಕತೆ, ಕವನ, ಲೇಖನ ಬರಹಗಳು ರಚಿಸುತ್ತಿದ್ದಾರೆ. ಇವರ ಬರಹಗಳಿಗೆ ಅನೇಕ ಕಡೆಯ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳು ಲಭಿಸಿವೆ. ಮತ್ತು ಕೆಲ ಪತ್ರಿಕೆ ಹಾಗೂ `ಸಂಪಿಗೆ’ ಸೇರಿದಂತೆ ಮತ್ತಿತರ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟಗೊಂಡಿವೆ.

ಪೂಜಾ ಪಟ್ನೆ

ಯುವ ಕವಯತ್ರಿ ಪೂಜಾ ಪಟ್ನೆ ರವರು. ಔರಾದ ತಾಲೂಕಿನ ವಡಗಾಂವ (ದೇ) ಗ್ರಾಮದ ಶಂಕರರಾವ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ ೩೧-೭-೧೯೯೭ರಲ್ಲಿ ಜನಿಸಿದ್ದಾರೆ. ಸಿವಿಲ್ ಇಂಜಿನಿಯರಿAಗ್ ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ಮುನ್ನೂರಕ್ಕೂ ಅಧಿಕ ಕವಿತೆಗಳು ಬರೆದಿದ್ದಾರೆ. ಇವರ ಕೆಲ ಬರಹಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನಗಳು ಪಡೆದಿವೆ. ಮತ್ತು ಇವರಿಗೆ `ಕಾವ್ಯ ಚೂಡಾಮಣಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಹಲವರು ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಸದ್ಯ ಇವರು ಬೀದರದ ಕೆ.ಬಿ.ಕಾಲೋನಿಯ ನಿವಾಸಿಯಾಗಿ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.

ಪರಮೇಶ್ವರ ಬಿ.ಬಿರಾದಾರ

ಯುವ ಬರಹಗಾರ ಪರಮೇಶ್ವರ ಬಿ.ಬಿರಾದಾರ ರವರು ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀ ಬಸವರಾಜ ಬಿರಾದಾರ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೧೬-೧-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ ಮೊದಲಾದವು ಬರೆದಿದ್ದು, ಅವು ವಿಜಯ ಕರ್ನಾಟಕ, ವಿಜಯ ವಾಣಿ, ಸಂಯುಕ್ತ ಕರ್ನಾಟಕ, ಉದಯಕಾಲ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಸಂಪಾದಕರಾಗಿ `ನಿನ್ನಂತರAಗ' ಹಾಗೂ `ಅನನ್ಯ' ಎಂಬ ನಿಯತಕಾಲಿಕೆಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧಗಳಿಗೆ ನಾಡಿನ ವಿವಿಧ ಸ್ಪರ್ಧೆಯಲ್ಲಿ ಬಹುಮಾನ, ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಬೀದರ ಜಿಲ್ಲೆಗೆ ಸಂಬAಧಿಸಿದ ಕೆಲ ಸಾಕ್ಷ್ಯಚಿತ್ರಗಳು ಕೂಡ ತಯಾರಿಸಿದ್ದು ಅವು ತುಮಕೂರಿನ ಸಿದ್ಧಾರ್ಥ್ ಟಿ.ವಿ.ಚಾನಲ್‌ನಲ್ಲಿ ಇವರ ಸಂದರ್ಶನದೊAದಿಗೆ ಪ್ರಸಾರವಾಗಿವೆ. ಹಾಗೂ ೯೦.೮. ಎಫ್.ಎಂ. ರೇಡಿಯೋ ನಲ್ಲಿಯೂ ಇವರ ಕೆಲ ಕಾರ್ಯಕ್ರಮಗಳು ಬಿತ್ತರಗೊಂಡಿವೆ.

ಡಾ.ಸುರೇಖಾ ಪಾಟೀಲ್

ಕವಯತ್ರಿ ಡಾ.ಸುರೇಖಾ ಪಾಟೀಲ್ ರವರು ಔರಾದ ತಾಲೂಕಿನ ಲಾಧಾ ಗ್ರಾಮದ ಅಂಬಾದಾಸರಾವ ಮತ್ತು ಪರೇಗಬಾಯಿ ದಂಪತಿಗಳಿಗೆ ದಿನಾಂಕ ೧-೯-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್, ಪಿ.ಎಚ್.ಡಿ.ಪದವಿಧರರಾದ ಇವರು ಕಾಲೇಜು ದಿನಗಳಿಂದಲೆ ಕತೆ, ಕವನ, ಲೇಖನ, ಹನಿಗವನ, ಪ್ರಬಂಧಗಳು ಬರೆದಿದ್ದು, ಅವು ಕೆಲ ಪತ್ರಿಕೆ, ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ವಿಚಾರ ಸಂಕಿರಣ. ಸಭೆ ಸಮಾರಂಭಗಳಲ್ಲಿ ಉಪನ್ಯಾಸ, ಪ್ರಬಂಧ ಮಂಡಿಸಿದ್ದಾರೆ. ಮತ್ತು ಮಹಿಳೆಯರ `ಜನಪದ' ಗೀತೆಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಹಲವಾರು ಮಹಿಳಾ ಜಾನಪದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಪಾಲ್ಗೊಂಡು, ಕವನ ವಾಚನ ಮಾಡಿದ್ದಾರೆ. ಇವರಿಗೆ ಬೀದರ ಕರ್ನಾಟಕ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ.

ಲಕ್ಷೀ ತನಯ ಗಂಜೆ

`ಲಕ್ಷ್ಮೀತನಯ ಎಂಬ ಕಾವ್ಯನಾಮ ಹೊಂದಿರುವ ಶಿವರಾಜ ಗಂಜೆ ಯವರು ಔರಾದ ತಾಲೂಕಿನ ಹೆಡಗಾಪೂರ ಗ್ರಾಮದವರಾಗಿದು, ಕತೆ ಕವನ, ಲೇಖನ, ಹನಿಗವನ ಮೊದಲಾದ ಪ್ರಕಾರದ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಇವರ `ಸಂಬಂಧ’ ಎಂಬ ಕತೆ ಹಂಶಕವಿಯವರು ಸಂಪಾದಿಸಿರುವ `ಬೀದರ ಜಿಲ್ಲೆಯ ಆಯ್ದ ಕತೆಗಳು’ ಎಂಬ ಪ್ರಾತಿನಿಧಿಕ ಕಥಾ ಸಂಕಲನ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಇತರರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳಲ್ಲಿ ಪ್ರಕಟವಾಗಿವೆ.

ನಿತ್ಯಾನಂದ ಘೂಳೆ

ಮೂಲತಃ ಬೀದರ ಜಿಲ್ಲೆ ಔರಾದನವರಾದ ಇವರು ಹಲವಾರು ಕವನ, ಲೇಖನ, ಆಧುನಿಕ ವಚನಗಳನ್ನು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಜಯದೇವಿ ಯದಲಾಪುರೆ

ಹವ್ಯಾಸಿ ಬರಹಗಾರ್ತಿಯಾದ ಜಯದೇವಿ ಯದಲಾಪುರೆಯವರು ಔರಾದ ತಾಲೂಕಿನ ಸುಂದಾಳ ಗ್ರಾಮದವರು. ಬೀದರಿನ ಖಾಸಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಅನೇಕ ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ.

ಜೈ ಸಮೀನಾ. (ಜಯರಾಜ .ಎಸ್.)

ಹವ್ಯಾಸಿ ಬರಹಗಾರರಾದ ಇವರು ಔರಾದ ತಾಲೂಕಿನ ನಾಗೂರ (ಬಿ) ಗ್ರಾಮವರು. ಎಂ.ಎ. ಎಂ.ಪೀಲ್.ಪದವಿಧರರಾದ ಇವರು ಅನೇಕ ಕತೆ. ಕವನ ಲೇಖನ, ಆಧುನಿಕ ವಚನ ಮೊದಲಾದವು ರಚಿಸಿದ್ದು ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.

ಗುರುಶಾಂತಪ್ಪ ನಿಂಗದಳ್ಳಿ

`ಬಸವ ಪ್ರಿಯ ಮಿತ್ರ' ಎಂಬ ಅಂಕಿತನಾಮದಿAದ ಆಧುನಿಕ ವಚನಗಳು ಬರೆಯುತ್ತಿರುವ ಇವರು ಬೀದರ ಕೃಷಿ ಕಾಲೋನಿ ನಿವಾಸಿಯಾಗಿದ್ದಾರೆ. ಸದ್ಯ ಇವರು ವಿಜಯಪುರದ ಕೃಷಿ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದು ,ಅವು ಕೆಲವು ಕಡೆ ಪ್ರಕಟವಾಗಿವೆ.

ಚಿದಾನಂದ ತಾಳಮಡಗೆ

`ಸಚ್ಚಿದಾನಂದ' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆಯುತ್ತಿರುವ ಇವರು ಮೂಲತಃ ಔರಾದ ತಾಲೂಕಿನ ಸಿರ್ಸಿ ಗ್ರಾಮದವರಾಗಿದ್ದು ಅನೇಕ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಬೇಬಿರಾಣಿ ಬಡಿಗೇರ

ಕವಯತ್ರಿ ಬೇಬಿರಾಣಿ ಬಡಿಗೇರ ರವರು ಔರಾದ ತಾಲೂಕಿನ ಬಲ್ಲೂರ್ ಗ್ರಾಮದ. ದಶರಥ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೪-೭-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಮೈಲೂರದ ಅಭಿಮನ್ಯು ಬಡಿಗೇರ ರವರ ಧರ್ಮಪತ್ನಿಯಾಗಿದ್ದು, ಜನಪದ ಗೀತೆಗಳನ್ನು ಹಾಡುವುದಷ್ಟೆಯಲ್ಲದೆ ಸ್ವತಃ ಬರೆದು ಹಾಡುವುದು ಹೇಗೆ ಎಂದು ಇತರರಿಗೆ ಸ್ಪೂರ್ತಿ ನೀಡುತ್ತಾರೆ. ವಿದ್ಯಾನಗರದಲ್ಲಿ ರಮಾಬಾಯಿ ಸಂಗೀತ ಕಲಾ ಮಂಡಳಿಯ ಮೂಲಕ ಗಾಯನ ಮತ್ತು ಪದ್ಯ ಬರೆಯುವುದರಲ್ಲಿ ಸಿದ್ದಹಸ್ತರು. ಇವರ ಪುಸ್ತಕವೊಂದು ಪ್ರಕಟಣೆಯ ಹಂತದಲ್ಲಿದೆ.

ದಶವಂತ ಬಂಡೆ

ಯುವ ಬರಹಗಾರ ದಶವಂತ ಬಂಡೆಯವರು ಔರಾದ ತಾಲೂಕಿನ ಹಿಪ್ಪಳಗಾಂವ ಗ್ರಾಮದ ಮಾರುತಿ ಮತ್ತು ಖಂಡೋಬಾಯಿ ದಂಪತಿಗಳಿಗೆ ದಿನಾಂಕ ೨೫-೫-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ ಪದವಿಧರರಾದ ಇವರು ೨೦೦೯ರಿಂದ ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಲೇಖನ, ಹನಿಗವನ, ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ಕಲ್ಲುಬಂಡೆ' ಎಂಬುದು ಇವರ ವಚನಾಂಕಿತವಾಗಿದೆ. ಉತ್ತಮ ವಾಗ್ಮಿಗಳಾಗಿರುವ ಇವರು ಅನೇಕ ಕಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಅಷ್ಟೇಯಲ್ಲದೆ ಇವರು ಬಸವಕಲ್ಯಾಣದ ಚುಟುಕು ಕನ್ನಡ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘ, ಲೋಹಿಯ ಪ್ರತಿಷ್ಠಾನ, ದಲಿತ ಸಾಹಿತ್ಯ ಪರಿಷತ್ತು ಮೊದಲಾದ ಸಂಘ ಸಂಸ್ಥೆಗಳ ಸಂಚಾಲಕರಾಗಿ, ಗಮಕಕಲಾ ಪರಿಷತ್ತಿನ ಬಸವಕಲ್ಯಾಣ ತಾಲೂಕಾ ಅಧ್ಯಕ್ಷರಾಗಿದ್ದಾರೆ.

ಶೋಭಾವತಿ ಸೋಮರೆ

ಕವಯತ್ರಿ ಶೋಭಾವತಿ ಸೋಮರೆ ಯವರು. ಇವರು ಔರಾದ (ಬಿ) ತಾಲೂಕಿನ ಸಂಗಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೨-೨-೧೯೭೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿ ಪಡೆದ ಇವರು ನರ್ಸರಿ ಶಿಕ್ಷಕಿಯರ ತರಬೇತಿಯನ್ನು ಪಡೆದು ಸುಮಾರು ೧೩ ವರ್ಷಗಳ ಕಾಲ ಬಸವಮುಕ್ತಿ ಮಂದಿರದ ಗುರುಕುಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ನಾರಾಯಣರಾವ ಅವರೊಂದಿಗೆ ವಿವಾಹವಾದ ಇವರು ಸುಖ ದಾಂಪತ್ಯದ ಜೀವನದಲ್ಲಿಯೆ ಗಂಡನನ್ನು ಮತ್ತು ಐದಾರು ವರ್ಷದ ಮಗಳನ್ನು ಕಳೆದುಕೊಂಡು ಒಂಟಿ ಜೀವನದಲ್ಲಿ ನೊಂದು, ಬೆಂದು, ಶೋಕ ಸಾಗರದಲ್ಲಿ ಮುಳುಗಿ ಸಾಹಿತ್ಯ ರಚಿಸಿದ್ದಾರೆ. ತಮ್ಮ ಮಗಳು `ಚೈತನ್ಯ'ಳ ಕುರಿತಾದ ೫೦ಪುಟದ ನೋವಿನ ಕತೆಯೊಂದು ಬರೆದಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಚೈತನ್ಯ ಸಿರಿ ಪ್ರಾತಿನಿಧಿಕ ಕವನಸಂಕಲನದಲ್ಲಿ ಪ್ರಕಟವಾಗಿವೆ. ಬೀದರ ಲೇಖಕಿಯರ ಬಳಗದ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರಿಗೆ ಉತ್ತಮ ಶಿಕ್ಷಕಿ, ಮಾನವತಾವಾದಿ ಪ್ರಶಸ್ತಿ ಗಳು ನೀಡಿ ಗೌರವಿಸಿದ್ದಾರೆ.

ಸಿದ್ದಮ್ಮಾ ಹಳಕಾಯಿ

ಕವಯತ್ರಿ ಸಿದ್ದಮ್ಮಾ ಹಳಕಾಯಿ ರವರು ಔರಾದ ತಾಲೂಕಿನ ಮುಧೋಳ ಗ್ರಾಮದ ಧನರಾಜ ಮತ್ತು ಕಸ್ತೂರಿ ದಂಪತಿಗಳಿಗೆ ದಿನಾಂಕ ೫-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಸ್ನಾತಕೋತ್ತರ ಪದವಿಧರರಾದ ಇವರು ಕೊಳ್ಳುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ, ಲೇಖನ, ಬುಲಾಯಿ ಪದ, ಹನಿಗವನಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯೂ ಕವನ ವಾಚನ ಮಾಡಿದ್ದಾರೆ. ಕೆಲ ಕಾಲ ಶಿಕ್ಷಣ ಇಲಾಖೆಯಲ್ಲಿ ಸಿ.ಆರ್.ಪಿಯಾಗಿ ಸೇವೆ ಸಲ್ಲಿಸಿದ ಇವರು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಮತ್ತು ಬೀದರ ಜಿಲ್ಲಾ ಜಾನಪದ ಪರಿಷತ್ತಿನ ಸದಸ್ಯರಾಗಿ, ಕದಳಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮುಕುಂದರಾವ ಖಾನಾಪುರ

ಸಾಹಿತಿ ಮುಕುಂದರಾವ ಖಾನಾಪುರ ರವರು ಔರಾದ ತಾಲೂಕಿನ ಖಾನಾಪುರ ಗ್ರಾಮದ ಪುಂಡಲೀಕರಾವ ಮತ್ತು ವಿಠಾಬಾಯಿ ದಂಪತಿಗಳಿಗೆ ದಿನಾಂಕ ೫-೩-೧೯೩೫ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ. ಬಿ.ಎ.ಎಲ್.ಎಲ್.ಬಿ. ಪದವಿಧರರಾದ ಇವರು ಬಿ.ಶ್ಯಾಮಸುಂದರ ಅವರ ಅನುಯಾಯಿಗಳಾಗಿದರು. ಮತ್ತು ನಾಂದೇಡದಲ್ಲಿ ಬಿ.ಶ್ಯಾಮಸುಂದರ ಹೆಸರಿನಲ್ಲಿ ಶಾಲೆ ತೆರೆದು ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಅದು ಇಂದಿಗೂ ಕಾರ್ಯರಂಭ ಮಾಡುತ್ತಿದೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕತೆ ಕವನ ಲೇಖನಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ. ಇವರು ೧೯೮೯ರಲ್ಲಿ ಬೀದರ ಸಂಸದ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ರತ್ನಪ್ಪ ಜೀರ್ಗಾ

ಅನುಭಾವಿ ಕವಿ, ತತ್ವಪದಕಾರರಾದ ರತ್ನಪ್ಪ ಜೀರ್ಗಾರವರು ಔರಾದ ತಾಲೂಕಿನ ಜೀರ್ಗಾ (ಕೆ) ಗ್ರಾಮದ ಘಾಳೆಪ್ಪಾ ಮತ್ತು ತುಳಜಮ್ಮಾ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಕಡು ಬಡತನದಲ್ಲಿ ಜೀವನ ಸಾಗಿಸಿದ ಇವರು ಹಲವಾರು ತತ್ವಪದ, ಭಜನೆ ಪದ, ಮೊಹರಮ್ ಪದಗಳನ್ನು ರಚಿಸಿದ್ದಾರೆ. ಇವರ ಬರಹಗಳು ಅನೇಕ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.