ಮಂಗಳವಾರ, ಜನವರಿ 14, 2025
ಶೋಭಾವತಿ ಸೋಮರೆ
ಕವಯತ್ರಿ ಶೋಭಾವತಿ ಸೋಮರೆ ಯವರು. ಇವರು ಔರಾದ (ಬಿ) ತಾಲೂಕಿನ ಸಂಗಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೨-೨-೧೯೭೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿ ಪಡೆದ ಇವರು ನರ್ಸರಿ ಶಿಕ್ಷಕಿಯರ ತರಬೇತಿಯನ್ನು ಪಡೆದು ಸುಮಾರು ೧೩ ವರ್ಷಗಳ ಕಾಲ ಬಸವಮುಕ್ತಿ ಮಂದಿರದ ಗುರುಕುಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ನಾರಾಯಣರಾವ ಅವರೊಂದಿಗೆ ವಿವಾಹವಾದ ಇವರು ಸುಖ ದಾಂಪತ್ಯದ ಜೀವನದಲ್ಲಿಯೆ ಗಂಡನನ್ನು ಮತ್ತು ಐದಾರು ವರ್ಷದ ಮಗಳನ್ನು ಕಳೆದುಕೊಂಡು ಒಂಟಿ ಜೀವನದಲ್ಲಿ ನೊಂದು, ಬೆಂದು, ಶೋಕ ಸಾಗರದಲ್ಲಿ ಮುಳುಗಿ ಸಾಹಿತ್ಯ ರಚಿಸಿದ್ದಾರೆ. ತಮ್ಮ ಮಗಳು `ಚೈತನ್ಯ'ಳ ಕುರಿತಾದ ೫೦ಪುಟದ ನೋವಿನ ಕತೆಯೊಂದು ಬರೆದಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಚೈತನ್ಯ ಸಿರಿ ಪ್ರಾತಿನಿಧಿಕ ಕವನಸಂಕಲನದಲ್ಲಿ ಪ್ರಕಟವಾಗಿವೆ. ಬೀದರ ಲೇಖಕಿಯರ ಬಳಗದ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರಿಗೆ ಉತ್ತಮ ಶಿಕ್ಷಕಿ, ಮಾನವತಾವಾದಿ ಪ್ರಶಸ್ತಿ ಗಳು ನೀಡಿ ಗೌರವಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ