ಸೋಮವಾರ, ಜನವರಿ 20, 2025
ಸಂಗಪ್ಪಾ ತೌಡಿ
ಯುವ ಸಾಹಿತಿ ಸಂಗಪ್ಪಾ ತೌಡಿಯವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಚಂದ್ರಪ್ಪ ತೌಡಿ ಮತ್ತು ಭಾರತಿ ತೌಡಿ ದಂಪತಿಗಳಿಗೆ ದಿನಾಂಕ ೧-೬-೧೯೯೨ರಲ್ಲಿ ಜನಿಸಿದ್ದಾರೆ. ಎಂ,ಎ, ಸ್ನಾತಕೊತ್ತರ ಪದವಿ ಪಡೆದ ಇವರು ಪಿ.ಎಚ್,ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು `ಭಾವ ಚಿಗುರು' ಮತ್ತು `ಅವ್ವನಿಗೆ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಲೇಖನ ಸಂಶೋಧನಾ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ `ಮನೆಗೊಂದು ಗೊಂದಲದ ಹಾಡು' ಎಂಬ ಕತೆ ಕ್ರೈಸ್ತ ಟು ಬಿ ಯುನಿವರ್ಸಿಟಿಯಿಂದ ಅ.ನ.ಕೃ. ಪ್ರಶಸ್ತಿ ಪಡೆದಿದೆ. ಮತ್ತು ದ.ರಾ ಬೇಂದ್ರೆ ಶೃತಿ ಅಂತರರಾಜ್ಯ ಮಟ್ಟದ ಕಾಲೇಜು ಕಾವ್ಯ ಸ್ವರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮತ್ತು ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದು, ಮತ್ತು ರಾಜ್ಯ ಮಟ್ಟದ ಕಥೆ, ಕಾವ್ಯ, ಗಜಲ್, ಕಾದಂಬರಿ ಕಮ್ಮಟಗಳಲ್ಲಿಯೂ ಪಾಲ್ಗೊಂಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ