ಮಂಗಳವಾರ, ಜನವರಿ 14, 2025
ಕಲ್ಲಪ ಬಲಂಡೆ
ತತ್ವಪದಕಾರ, ಕವಿ ಕಲ್ಲಪ್ಪ ಬಲಂಡೆಯವರು. ಬೀದರ ತಾಲೂಕಿನ ಮಿರ್ಜಾಪೂರ ಗ್ರಾಮದ ಶಿವಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಮಾತ್ರ ಅಧ್ಯಯನ ಮಾಡಿದ ಇವರು ಅಲ್ಪ ಸ್ವಲ್ಪ ಹಿಂದಿ ಬರವಣಿಗೆ ಕಲಿತು ಮಾಟ ಮಂತ್ರ ಪೀಡಿತರಿಗೆ ಗುಣಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಿಕ ಸೇವೆ ಮಾಡುತ್ತಿದ್ದರು. ಸಾಹಿತ್ಯದಲ್ಲಿ ಆಸಕ್ತರಾಗಿ ಜಾನಪದ ಸವಾಲ್- ಜವಾಬ್ ಹಾಡುಗಳು, ತತ್ವಪದ, ಭಜನೆ ಹಾಡುಗಳು ಬರೆದು ಗಾಯನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸಾಹಿತ್ಯ ರಚನೆಯಿಂದ ಇವರಿಗೆ ಹಲವಾರು ಬಹುಮಾನಗಳು ಲಭಿಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ