ಪುಟಗಳು

ಮಂಗಳವಾರ, ಜನವರಿ 21, 2025

ಪೂಜ್ಯ. ಶ್ರೀ. ಸುರೇಶ ಸ್ವಾಮಿ ಹಿರೇಮಠ.

ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಬರಹಗಾರರಲ್ಲಿ ಒಬ್ಬರಾಗಿ ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪುಸ್ತಕಗಳು ಬರೆದು ಎಲೆ ಮರೆಯ ಕಾಯಿಯಂತೆ ಉಳಿದ ಶ್ರೀಗಳು, ಲೇಖಕರೆಂದರೆ ಪರಮ ಪೂಜ್ಯ ಲಿಂಗೈಕ್ಯ *ಸುರೇಶ ಸ್ವಾಮಿ ಹಿರೇಮಠ ಗೋರ್ಟಾ*. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಐತಿಹಾಸಿಕ ಗ್ರಾಮ ಗೋರ್ಟಾ(ಬಿ)ಯ ಹಿರೇಮಠದ ಶ್ರೀ ವೇದಮೂರ್ತಿ ರೇವಣಸಿದ್ಧ ಸ್ವಾಮಿ ಮತ್ತು ಮಾತೋಶ್ರೀ ಗುರುದೇವಿ ಯವರ ಪುಣ್ಯ ಗರ್ಭದಲ್ಲಿ ಜನಿಸಿದರು. ಪೂಜ್ಯರು ಬಾಲ್ಯದಿಂದಲೆ ವೇದ , ಉಪನಿಷತ್ತು ಪುರಾಣ, ಪಂಚಾAಗ ಅಧ್ಯಾತ್ಮಿಕದ , ಹಲವಾರು ದರ್ಶನಗಳ ಅಧ್ಯಯನವನ್ನು ಮಾಡಿದವರು. ತ್ರೀಕಾಲ ಲಿಂಗಪೂಜಾ ನಿಷ್ಠರಾದ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾನ ಸಾಧನೆಯನ್ನು ಮಾಡಿ, ದೈಹಿಕ ರೂಪದಲ್ಲಿದ್ದ ೧೦೩ ವರ್ಷಗಳ ಕಾಲ ಸಮಾಜಕ್ಕೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆಯನ್ನು ನೀಡಿದ್ದಾರೆ. ಪೂಜ್ಯರು ತಮ್ಮ ಸಂಪೂರ್ಣ ಜೀವನವನ್ನು ಧರ್ಮ ಮತ್ತು ಸಮಾಜದ ಸೇವೆಗಾಗಿ ಸಮರ್ಪಿಸಿದ್ದವರು. ಮಹಾರಾಷ್ಟ್ರದ ಬೀಡ ಜಿಲ್ಲೆಯ ಎಡಸಿ ಪರ್ವತದಲ್ಲಿ *ಮಾನವ ಧರ್ಮ ಸಂಸ್ಥೆ* ಸ್ಥಾಪಿಸಿ ಸಾವಿರಾರು ಜನರಿಗೆ ವೇದ , ಉಪನಿಷತ್ , ಸಂಗೀತ , ಸಾಹಿತ್ಯದ ಪ್ರಶಿಕ್ಷಣವನ್ನು ನೀಡಿದ್ದಾರೆ . ಹಾಗು ೧೯೪೮ ರ ರಜಾಕಾರರ ಹಾವಳಿಯಲ್ಲಿ ನಿರಾಶ್ರಿತರಾಗಿ ಸ್ವಗ್ರಾಮ ತ್ಯಜಿಸಿದವರಿಗೆ ಆಶ್ರಯವನ್ನು ಕಲ್ಪಿಸಿದ್ದರು , ಎಡಸಿಯಲ್ಲು ಸಹ ರಜಾಕಾರರ ಹಾವಳಿ ಹೆಚ್ಚಾದಾಗ ತಮ್ಮ ಆಶ್ರಮವನ್ನು ಸೊಲ್ಲಾಪುರದ ಸಮೀಪದಲ್ಲಿರುವ ಟಿಕ್ಕೆಕರವಾಡಿಗೆ ಸ್ಥಳಾಂತರಿಸಿ ಅಲ್ಲಿಯೂ ಸಹ ವರ್ಷಾನುಗಟ್ಟಲೆ ನಿರಾಶ್ರಿತರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿದರು. ಪೂಜ್ಯರು ಜೀವನ ಪರ್ಯಂತರವಾಗಿ ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ರಾಚೋಟಿಶಿವಾಚಾರ್ಯರ ಜೊತೆ ಗುಡಿ ಜಪಯಜ್ಞ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ. ಅವುಗಳಲ್ಲಿ ಪ್ರಮುಖ ಕಾರ್ಯಕ್ರಮಗಳೆಂದರೆ , ಬಸವಕಲ್ಯಾಣದ ತ್ರೀಪುರಾಂತ , ಮಹಾರಾಷ್ಟ್ರದ ಚಾಕೂರ , ಗೋರ್ಟಾ , ಮೇಹಕರ , ಡೋಣಗಾಪುರ , ಬೀದರನ ಪಾಪನಾಶ ಮುಂತಾದ ಕಡೆಯಲ್ಲಿ ಹಮ್ಮಿಕೊಂಡಿದ್ದ ಜನ-ಜಾಗೃತಿ ಧರ್ಮ ಸಭೆಗಳು. ೧೯೮೨ ರಲ್ಲಿ ವಿಶ್ವ ಶಾಂತಿ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಧಾರ್ಮಿಕ , ಶೈಕ್ಷಣಿಕ , ಸಾಮಾಜಿಕ , ಸಂಸ್ಕೃತಿಕ , ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ದೇಶದಾದ್ಯಂತದ ಲಕ್ಷಾಂತರ ಜನರ ಪ್ರೇಮ ಮತ್ತು ಭಕ್ತಿಗೆ ಪಾತ್ರರಾಗಿದ್ದಾರೆ. ಶ್ರೀ ಸುರೇಶ ಸ್ವಾಮಿಗಳು ಬಹುಭಾಷಾ ಪಂಡಿತರಾಗಿದ್ದು ಕನ್ನಡ , ಮರಾಠಿ , ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಾಹಿತ್ಯ ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ *೧.ಮಾನವ ಧರ್ಮ ಶಾಸ್ತ್ರ*. *೨.ಅಸ್ಪರ್ಶರು ಯಾರು ? ೩) ಧರ್ಮ ಮತ್ತು ರಾಷ್ಟ್ರ ೪) ಜಪಯಜ್ಞ ಸಂವಿಧಾನ ೫) ಸ್ವರಾಜ್ಯ ವಿಜ್ಞಾನ ೬) ಶ್ರೀ ರುದ್ರ ಪೂಜಾ , ೭ ಜಪ ಪ್ರಯೋಗ* ಮುಂತಾದವು ಗಳಾಗಿವೆ. ಪರಮ ಪೂಜ್ಯ ಸುರೇಶ ಸ್ವಾಮಿಗಳು ದಿನಾಂಕ ೩೧-೦೫-೨೦೦೮ ರಂದು ತಮ್ಮ ೧೦೩ ನೆ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅನ್ನೊದು ನೋವಿನ ಸಂಗತಿಯಾಗಿದೆ. ಅವರ ಕನ್ನಡ , ಮರಾಠಿ , ಹಿಂದಿ ಭಾಷೆಗಳಲ್ಲಿ ರಚಿಸಿದ ಸಾಹಿತ್ಯ ಇಂದಿನ ಆಧುನಿಕ ಯುಗದಲ್ಲಿಯು ಅತ್ಯಂತ ಅವಶ್ಯಕವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ