ಭಾನುವಾರ, ಜನವರಿ 19, 2025
ಡಾ.ಸಿ.ಎಸ್.ಪಾಟೀಲ್.
ಸಾಹಿತಿ ಡಾ.ಸಿ.ಎಸ್.ಪಾಟೀಲ್ ರವರ ಪೂರ್ಣನಾಮ 'ಚಂದ್ರಕಾAತ ಸಂಗಶೆಟ್ಟಿ ಪಾಟೀಲ್ ' ಎಂದಾಗಿದೆ. ಇವರು ಬೀದರ ತಾಲ್ಲೂಕಿನ ಕಂಗನಕೋಟೆ ಗ್ರಾಮದ ಸಂಗಶೆಟ್ಟಿ ಪಾಟೀಲ್ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨೯-೨-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಎಚ್.ಡಿ.ಪದವಿ ಪಡೆದು ೧೯೮೪ರಲ್ಲಿ ಸುರಪುರದ ಪ್ರಭು ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ ನಂತರ ಬೆಂಗಳೂರಿನ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ೧೦ವರ್ಷ ಬೀದರದ ಬಿ.ವಿ.ಬಿ. ಕಾಲೇಜಿನಲ್ಲಿ ೫ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೦ ವರ್ಷ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ, ೩ ವರ್ಷ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿ ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎಸ್.ಐ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ೧೯೯೫ರಲ್ಲಿ `ಹೊಂಗಿರಣ' (ಕವನ ಸಂಕಲನ) ೨೦೦೨ರಲ್ಲಿ `ತಳಿ ತಂತ್ರಜ್ಞಾನ' (ವೈಜ್ಞಾನಿಕ ಬರಹಗಳ ಸಂಕಲನ) `ವಚನಗಳಲ್ಲಿ ವಿಜ್ಞಾನ' ಮತ್ತು 'ಅಕ್ಕನ ವಚನಗಳಲ್ಲಿ ಪರಿಸರ' ಎಂಬ ಕನ್ನಡ ಕೃತಿಗಳು ಪ್ರಕಟಿಸಿದರೆ ೨೦೦೮ರಲ್ಲಿ `ಬಯ ಟಿಕ್ನಾಲಜಿ, ಮತ್ತು ಮಲೆಕ್ವಲೋಡ್ ಬಯೊಲಜಿ’ ಎಂಬ ಕೃತಿಗಳು ಹೊರತಂದು ೨೦೧೦ರಲ್ಲಿ `ಸೆಲ್ ಬಯೋಲಜಿ’ ೨೦೧೨ರಲ್ಲಿ `ಬಯೋ ಇನ್ ಫಾರ್ಮೆಟಿಕ್' ಮತ್ತು ೨೦೧೪ರಲ್ಲಿ `ಮೈಟೊಕಾಂಡ್ರಿಯಲ್ ಇಂಜಿನಿಯರಿAಗ್' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ತರಂಗ, ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿಯೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ಇವರು ೬ ವರ್ಷ ಬೀದರ ಜಿಲ್ಲೆಯ ವಿಜ್ಞಾನ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ, ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿ ಐದಾರು ದೇಶ ವಿದೇಶಗಳಿಗೆ ಸುತ್ತಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಿದ್ದರಿಂದ. ೨೦೧೧ರಲ್ಲಿ ದೆಹಲಿಯಿಂದ ಅಂತರಾಷ್ಟ್ರೀಯ ಭಾರತ ಸೇವಾ ಪ್ರಶಸ್ತಿ, ೨೦೧೩ರಲ್ಲಿ ಮಲ್ಲೆಷಿಯಾದಿಂದ 'ಜೈವಿಕ ತಂತ್ರಜ್ಞಾನದ ಫೆಲೋಷಿಪ್ ಪ್ರಶಸ್ತಿ, ಪಡೆದು ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ತಮ್ಮ ವಿಶ್ರಾಂತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ