ಮಂಗಳವಾರ, ಜನವರಿ 14, 2025
ಮಾರುತಿ ಮಾಸ್ಟರ್
ಯುವ ಬರಹಗಾರ ಮಾರುತಿ ಮಾಸ್ಟರ್ ರವರು ಬೀದರ ತಾಲೂಕಿನ ಸಿರ್ಸಿ ಗ್ರಾಮದ ಶಿವರಾಜ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಇಡಿ. ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ವಚನ ಹನಿಗವನ, ಮೊದಲಾದವು ಸಾಹಿತ್ಯ ರಚಿಸಿ `ಹಡೆದವ್ವ' (ಕವನ ಸಂಕಲನ) `ಅಂಬಿಗರ ಚೌಡಯ್ಯ' (ಚರಿತ್ರೆ) `ಆಧುನಿಕ ವಚನಗಳು' (ವಚನ ಸಂಕಲನ) ಎಂಬ ಕೃತಿಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ಉತ್ತರ ಕರ್ನಾಟಕ, ಬಿಂದಾಸ್, ಶ್ರೀ ಶಕ್ತಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕಮಠಾಣ, ಬಗದಲ್, ಹೋಬಳಿಗಳ ಕಸಾಪ ಅಧ್ಯಕ್ಷರಾಗಿ, ಸಿರ್ಸಿ ಗ್ರಾಂ.ಪA. ಸದಸ್ಯರಾಗಿ ಸೇವೆ ಸಲ್ಲಿಸಿ, ಸದ್ಯ ಔರಾದ (ಎಸ್) ಹೋಬಳಿಯ ಕಸಾಪ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ತಮ್ಮ ಹುಟ್ಟೂರಲ್ಲಿ ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆಯ ಮೂಲಕ ಸಿರ್ಸಿ, ಕಾಡವಾದಗಳಲ್ಲಿ ವಿದ್ಯಾ ಪ್ರಾಥಮಿಕ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ