ಪುಟಗಳು

ಮಂಗಳವಾರ, ಜನವರಿ 14, 2025

ಪರಮೇಶ್ವರ ಸಂಗ್ರಾಮ್

ಯುವ ಬರಹಗಾರ, ಕಲಾವಿದರೆಂದರೆ ಪರಮೇಶ್ವರ ಸಂಗ್ರಾಮ್ ರವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಸಂಗ್ರಾಮ್ ಗಿರಣಿ ಮತ್ತು ಕಸ್ತೂರಿಬಾಯಿ ದಂಪತಿಗಳಿಗೆ ದಿನಾಂಕ ೧೧-೧-೧೯೮೮ ರಲ್ಲಿ ಜನಿಸಿದ್ದಾರೆ. ಬಿ.ಎ. ಮತ್ತು ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು ಬೆಂಗಳೂರಿನಲ್ಲಿ ಸಿನಿಮಾ ನಿರ್ದೇಶಕರಾಗಿ, ಚಲನಚಿತ್ರ ಸಂಭಾಷಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಮಾಜದ ಅಹಿತಕರ ಘಟನೆಗಳನ್ನು ಕಂಡು ಸಮಾಜಕ್ಕೆ ಸರಿ ತಪ್ಪುಗಳ ಅರಿವು ಮೂಡಿಸಿ ಬದಲಾವಣೆ ತರುವಲ್ಲಿ ಸಿನಿಮಾ ಮಾಧ್ಯಮವೇ ಸರಿ ಎಂದು ತಿಳಿದು ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿ ಕಥೆಗಾರ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೬ನೇ ತರಗತಿಯಲ್ಲಿರುವಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿ `ಪರಮೇಶ್ವರ ಸಂಗ್ರಾಮ್.' ಎಂಬ ಅಂಕಿತನಾಮದಲ್ಲಿ ೩೦೦ಕ್ಕೂ ಅಧಿಕ ಆಧುನಿಕ ವಚನಗಳು ಬರೆದಿದ್ದಾರೆ. `ಹೃದಯ ಸಾಕ್ಷಿ, ಹಾಗೂ `ಕುಂತಿ’ ಧಾರಾವಾಹಿಗಳಿಗೆ ಮೊದಲ ಬಾರಿಗೆ ಸಹಾಯಕ ನಿರ್ದೇಶನ ಕೆಲಸಕ್ಕೆ ಸೇರಿ ನಂತರ ಕೆಲ ಧಾರಾವಾಹಿಗಳಲ್ಲಿ ಮತ್ತು ಸೇವಂತಿ ಸೇವಂತಿ, ಆಟೊ, ಜಾಜಿಮಲ್ಲಿಗೆ, ಶಿವ, ಹೀಗೆ ಕೆಲ ಚಲನಚಿತ್ರಗಳಿಗೂ ಸಹಾಯಕ ಹಾಗೂ ಸಹ ನಿರ್ದೇಶನ ಮಾಡಿದ್ದಾರೆ. ಪೌರಾಣಿಕ ಮಹಾಕಾವ್ಯ `ಮಾಹಾಭಾರತ' ಎಂಬ ಕನ್ನಡ ಧಾರವಾಹಿಯಲ್ಲಿಯೂ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಾಹಿಸಿದ್ದಾರೆ. ಮತ್ತು ಝೀ ಕನ್ನಡ, ಸುರ್ಣ, ಈ ಟಿವಿ ವಾಹಿನಿಗಳಲ್ಲಿ ಕೆಲ ರಿಯಾಲಿಟಿ ಶೋಗಳಿಗೆ ಪ್ರೊಡ್ಯುಸರ್ ಆಗಿ ಕಾರ್ಯನಿರ್ವಹಿಸಿದಲ್ಲದೆ, `ಉದಯ ಕಾಮಿಡಿ’ ವಾಹಿನಿಯಲ್ಲಿ ಬರುತಿದ್ದ ಕಥೆ ಅಲ್ಲ ಕಾಮಿಡಿ. ೧೦೦ನೇ ಸಂಚಿಕೆ ಹಾಗೂ `ಡುಬಾಕ್ ಜೋಡಿ’ ೫೦೦ನೇ ಸಂಚಿಕೆಗಳಿಗೆ ಕಾಮಿಡಿ ಡೈಲಾಗ್ ಬರೆದು ನಿರ್ದೇಶನ ಮಾಡಿ, ಕೇಂದ್ರ ಸರ್ಕಾರದ ೫ ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಹಾಗೂ ೯೧.೧. ಎಫ್.ಎಂ. ರೇಡಿಯೋ ಕೇಂದ್ರದ ಕೆಲ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿಯು ನೀಡಿದ್ದಾರೆ. ಸದ್ಯದಲ್ಲಿಯೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ