ಪುಟಗಳು

ಹುಲಸೂರು ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹುಲಸೂರು ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 21, 2025

ಡಾ.ರಣಧೀರ ಬೇಲೂರ

ಉದಯೋನ್ಮುಖ ಯುವ ಬರಹಗಾರರಲ್ಲಿ ಒಬ್ಬರಾಗಿ ಕಾವ್ಯ ಲೇಖನ, ವಿಮರ್ಶೆ, ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ ಯುವ ಲೇಖಕರೆಂದರೆ, ಡಾ.ರಣಧೀರ ಬೇಲೂರ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಬಸ್ಸಪ್ಪ ಭರಮಣೆ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ 24-6-1990ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರ ರಾದ ಇವರು 2018ರಿಂದ ಶಿವಮೊಗ್ಗದ ಡಿ.ವಿ .ಎಸ್.ಅನುದಾನಿತ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕೆಲ ಕೃತಿಗಳು ಹೊರ ತಂದಿದ್ದಾರೆ. ಅವುಗಳೆಂದರೆ 2018ರಲ್ಲಿ 'ಹೊಸ ಹೆಜ್ಜೆ' ಎಂಬ ವಿಮರ್ಶಾ ಕೃತಿ, ಮತ್ತು 'ನವೋದಯ ಕವಿ ಕಾವ್ಯ' ಎಂಬ ಸಂಪಾದಿತ ಕೃತಿಯು ಪ್ರಕಟಿಸಿದರೆ, 2019ರಲ್ಲಿ 'ಶಿವ ನೆನೆ' ಎಂಬ ಮತ್ತೊಂದು ಸಂಶೋಧನಾ ಲೇಖನಗಳ ಕೃತಿಯೂ ಪ್ರಕಟಿಸಿದ್ದಾರೆ. ಮತ್ತು 'ಬಸವ ಮುಖಿ ಪ್ರಜ್ಞೆ' ಹಾಗೂ 'ಬಸವಣ್ಣ' ಎಂಬ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಲೇಖನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸ೦ವಾದ,ಅರಹು-ಕುರಹು, ಕವಿಮಾರ್ಗ,ಹೊಸತು, ಲಿಂಗಾಯತ ದರ್ಶನ,ಚಿಂತನಾ,ಶಿಕ್ಷಣ ಸೌಧ ಇತ್ಯಾದಿ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಸದ್ಯ ಇವರು ಶಿವಮೊಗ್ಗದಲ್ಲಿ ವಾಸವಾಗಿದ್ದು, ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಪೂಜ್ಯ. ಶ್ರೀ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮಿಜಿ.

ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಒಬ್ಬರಾಗಿ ಗುರುತಿಸಿಕೊಂಡು *,ಚಿಂತನ* *ಶರಣ ಸಾಹಿತ್ಯ*, ಸೇರಿದಂತೆ ಮೊದಲಾದ ಬರಹಗಳು ಬರೆದು,ಶರಣರ ವಚನಗಳು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಲೇಖಕ, ಮಠಾಧೀಶರೆಂದರೆ ಪೂಜ್ಯ. ಶ್ರೀ. ಪಂಚಾಕ್ಷರಿ ಸ್ವಾಮಿಗಳು. ಇವರು ಬೀದರ ಜಿಲ್ಲೆಯ ನೂತನ ಹುಲಸೂರು ತಾಲ್ಲೂಕಿನ ಬೇಲೂರು ಗ್ರಾಮದ ಶಿವಕುಮಾರ ಸ್ವಾಮಿ ಮತ್ತು ಶೇಷಾಬಾಯಿ ದಂಪತಿಗಳಿಗೆ ದಿನಾಂಕ ೯-೯-೧೯೭೩ ರಲ್ಲಿ ಜನಿಸಿದ್ದಾರೆ. ಇವರು ಕಲಿತದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಚಿಕ್ಕಂದಿನಲ್ಲಿ ಮುಂಬೈ, ಅಹಮದಾಬಾದ ನಗರಗಳಿಗೆ ವಲಸೆ ಹೋಗಿ, ಕೂಲಿ ಕಾರ್ಮಿಕರಾಗಿ ದುಡಿದ ಶ್ರೀಗಳು ಆಕಸ್ಮಿಕ ತಮ್ಮ ತಂದೆಯ ಕಾಲವಾದ ನಂತರ ಮಠದ ಪೀಠಾಧ್ಯಕ್ಷರಾಗಿದ್ದ ಚಿಕ್ಕಪ್ಪ ಬಸವಂತ ಸ್ವಾಮಿಯೂ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.ಆಗ ಭಕ್ತರ ಆಶಯದಂತೆ ಪಂಚಾಕ್ಷರಿ ಸ್ವಾಮಿಗಳು ಪಟ್ಟಾಧಿಕಾರ ಹೊಂದಿ, ೪೫ ದಿನ ಅನುಷ್ಠಾನ ತಪಗೈದಿದ್ದಾರೆ. ಪ್ರತಿವರ್ಷ ಶ್ರೀ ಶಿವಲಿಂಗೇಶ್ವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ *ಶರಣ ಸಂಸ್ಕೃತಿ ಉತ್ಸವ, ಉರಿಲಿಂಗ ಪೆದ್ದಿ ಉತ್ಸವ*, ಕಾರ್ಯಕ್ರಮಗಳು ಶ್ರೀಗಳು ಮಾಡುತ್ತಾ ಬರುತ್ತಿದ್ದಾರೆ. ಈ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ' *ಉರಿಲಿಂಗ ಪೆದ್ದಿ ಪ್ರಶಸ್ತಿ*' ಯು ನೀಡುತ್ತಿರುವುದು ವಿಶೇಷವಾಗಿದೆ. ಮೊದಲಿಗೆ ೨೦೦೭ರಲ್ಲಿ ಯುವ ಕತೆಗಾರ *ಮಚ್ಚೇಂದ್ರ ಪಿ.ಅಣಕಲ್* ಅವರಿಗೆ ಈ ಪ್ರಶಸ್ತಿಯೊಂದಿಗೆ ನಗದು ಗೌರವ ಧನ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಪತ್ರಕರ್ತ *ಮಾಣಿಕ ಭುರೆ* ಅವರ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು ೩೫ ಜನ ವಿವಿಧ ಗಣ್ಯರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮತ್ತು ೨೦೧೧ರಿಂದ ಸಾಹಿತಿ *ಡಾ.ಗವಿಸಿದ್ದಪ್ಪಾ ಎಚ್.ಪಾಟೀಲ್* ಅವರ ಸಂಚಾಲನೆಯಲ್ಲಿ ೧೨. ವಿವಿಧ ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ *ಪ್ರಥಮ ಸಾಹಿತ್ಯ ಸಮ್ಮೇಳನಗಳು*' ನಡೆಸಿಕೊಂಡು ಬಂದಿರುವುದು ಮಠದ ಹೆಮ್ಮೆಯ ವಿಷಯವಾಗಿದೆ. ಹೀಗೆ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವ ಶ್ರೀಗಳು ಸ್ವತಃ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕೆಲವು ಚಿಂತನ,ಶರಣರ ಕುರಿತಾದ ಸಾಹಿತ್ಯವು ರಚಿಸಿದ್ದಾರೆ . ಮತ್ತು *ಕಾಳವ್ವೆ, ಉರಿಲಿಂಗದೇವ ಮತ್ತು ಶರಣ ಉರಿಲಿಂಗಪೆದ್ದಿ ವಚನಗಳ ಸಂಗ್ರಹ*' ಎಂಬ ಪುಸ್ತಕವು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ *ಶರಣ ಉರಿಲಿಂಗ ಪೆದ್ದಿ ಮಠ ಟ್ರಸ್ಟ್* ವತಿಯಿಂದ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ, ಅದರಡಿಯಲ್ಲಿ ವಿವಿಧ ಲೇಖಕರ ೨೦ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕುರಿತು ೨೦೧೦ ರಲ್ಲಿ ಪತ್ರಕರ್ತ,ಸಾಹಿತಿ *ಮಾಣಿಕ ಆರ್. ಭುರೆ*' ಯವರು *ದಲಿತ ಪೀಠಾಧಿಪತಿ*' ಎಂಬ ಪುಸ್ತಕವು ಬರೆದಿದ್ದು, ಆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ *ರೇವಯ್ಯ ದತ್ತಿ ಪುಸ್ತಕ ಪ್ರಶಸ್ತಿ* ಯು ಲಭಿಸಿದೆ. ಮತ್ತು ' *ಉರಿಲಿಂಗ ಪೆದ್ದಿ ವಚನಗಳ ಒಳನೊಟ* ' ಎಂಬ ಪುಸ್ತಕವೊಂದು ಇತ್ತಿಚೆಗೆ ಪ್ರಕಟಗೊಂಡಿದೆ. ಅಷ್ಟೇಯಲ್ಲದೆ *ಡಾ.ಸಾಹುಕಾರ ಎಸ್.ಕಾಂಬಳೆ* ಯವರು ಈ ಉರಿಲಿಂಗ ಪೆದ್ದಿ ಮಠಗಳ ಕುರಿತು *ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ* ' ಎಂಬ ವಿಷಯದ ಮೇಲೆ ಪಿ.ಎಚ್.ಡಿ. ಅಧ್ಯಯನ ಮಾಡಿ, ಡಾಕ್ಟರೇಟ್ ಪದವಿಯು ಪಡೆದಿದ್ದಾರೆ. ಸದ್ಯ ಇವರು ಸರಳ ಹಾಗೂ ಸಾದಾ- ಸೀದಾ ಜೀವನದೊಂದಿಗೆ ಬಸವಕಲ್ಯಾಣದ ತ್ರೀಪೂರಾಂತ ಶಾಖಾ ಮಠದಲ್ಲಿ ನೆಲೆಸಿ, ಚಿಂತನ ಹಾಗೂ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಪೂಜ್ಯ. ಶ್ರೀ. ಸುರೇಶ ಸ್ವಾಮಿ ಹಿರೇಮಠ.

ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಬರಹಗಾರರಲ್ಲಿ ಒಬ್ಬರಾಗಿ ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪುಸ್ತಕಗಳು ಬರೆದು ಎಲೆ ಮರೆಯ ಕಾಯಿಯಂತೆ ಉಳಿದ ಶ್ರೀಗಳು, ಲೇಖಕರೆಂದರೆ ಪರಮ ಪೂಜ್ಯ ಲಿಂಗೈಕ್ಯ *ಸುರೇಶ ಸ್ವಾಮಿ ಹಿರೇಮಠ ಗೋರ್ಟಾ*. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಐತಿಹಾಸಿಕ ಗ್ರಾಮ ಗೋರ್ಟಾ(ಬಿ)ಯ ಹಿರೇಮಠದ ಶ್ರೀ ವೇದಮೂರ್ತಿ ರೇವಣಸಿದ್ಧ ಸ್ವಾಮಿ ಮತ್ತು ಮಾತೋಶ್ರೀ ಗುರುದೇವಿ ಯವರ ಪುಣ್ಯ ಗರ್ಭದಲ್ಲಿ ಜನಿಸಿದರು. ಪೂಜ್ಯರು ಬಾಲ್ಯದಿಂದಲೆ ವೇದ , ಉಪನಿಷತ್ತು ಪುರಾಣ, ಪಂಚಾAಗ ಅಧ್ಯಾತ್ಮಿಕದ , ಹಲವಾರು ದರ್ಶನಗಳ ಅಧ್ಯಯನವನ್ನು ಮಾಡಿದವರು. ತ್ರೀಕಾಲ ಲಿಂಗಪೂಜಾ ನಿಷ್ಠರಾದ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾನ ಸಾಧನೆಯನ್ನು ಮಾಡಿ, ದೈಹಿಕ ರೂಪದಲ್ಲಿದ್ದ ೧೦೩ ವರ್ಷಗಳ ಕಾಲ ಸಮಾಜಕ್ಕೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆಯನ್ನು ನೀಡಿದ್ದಾರೆ. ಪೂಜ್ಯರು ತಮ್ಮ ಸಂಪೂರ್ಣ ಜೀವನವನ್ನು ಧರ್ಮ ಮತ್ತು ಸಮಾಜದ ಸೇವೆಗಾಗಿ ಸಮರ್ಪಿಸಿದ್ದವರು. ಮಹಾರಾಷ್ಟ್ರದ ಬೀಡ ಜಿಲ್ಲೆಯ ಎಡಸಿ ಪರ್ವತದಲ್ಲಿ *ಮಾನವ ಧರ್ಮ ಸಂಸ್ಥೆ* ಸ್ಥಾಪಿಸಿ ಸಾವಿರಾರು ಜನರಿಗೆ ವೇದ , ಉಪನಿಷತ್ , ಸಂಗೀತ , ಸಾಹಿತ್ಯದ ಪ್ರಶಿಕ್ಷಣವನ್ನು ನೀಡಿದ್ದಾರೆ . ಹಾಗು ೧೯೪೮ ರ ರಜಾಕಾರರ ಹಾವಳಿಯಲ್ಲಿ ನಿರಾಶ್ರಿತರಾಗಿ ಸ್ವಗ್ರಾಮ ತ್ಯಜಿಸಿದವರಿಗೆ ಆಶ್ರಯವನ್ನು ಕಲ್ಪಿಸಿದ್ದರು , ಎಡಸಿಯಲ್ಲು ಸಹ ರಜಾಕಾರರ ಹಾವಳಿ ಹೆಚ್ಚಾದಾಗ ತಮ್ಮ ಆಶ್ರಮವನ್ನು ಸೊಲ್ಲಾಪುರದ ಸಮೀಪದಲ್ಲಿರುವ ಟಿಕ್ಕೆಕರವಾಡಿಗೆ ಸ್ಥಳಾಂತರಿಸಿ ಅಲ್ಲಿಯೂ ಸಹ ವರ್ಷಾನುಗಟ್ಟಲೆ ನಿರಾಶ್ರಿತರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿದರು. ಪೂಜ್ಯರು ಜೀವನ ಪರ್ಯಂತರವಾಗಿ ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ರಾಚೋಟಿಶಿವಾಚಾರ್ಯರ ಜೊತೆ ಗುಡಿ ಜಪಯಜ್ಞ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ. ಅವುಗಳಲ್ಲಿ ಪ್ರಮುಖ ಕಾರ್ಯಕ್ರಮಗಳೆಂದರೆ , ಬಸವಕಲ್ಯಾಣದ ತ್ರೀಪುರಾಂತ , ಮಹಾರಾಷ್ಟ್ರದ ಚಾಕೂರ , ಗೋರ್ಟಾ , ಮೇಹಕರ , ಡೋಣಗಾಪುರ , ಬೀದರನ ಪಾಪನಾಶ ಮುಂತಾದ ಕಡೆಯಲ್ಲಿ ಹಮ್ಮಿಕೊಂಡಿದ್ದ ಜನ-ಜಾಗೃತಿ ಧರ್ಮ ಸಭೆಗಳು. ೧೯೮೨ ರಲ್ಲಿ ವಿಶ್ವ ಶಾಂತಿ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಧಾರ್ಮಿಕ , ಶೈಕ್ಷಣಿಕ , ಸಾಮಾಜಿಕ , ಸಂಸ್ಕೃತಿಕ , ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ದೇಶದಾದ್ಯಂತದ ಲಕ್ಷಾಂತರ ಜನರ ಪ್ರೇಮ ಮತ್ತು ಭಕ್ತಿಗೆ ಪಾತ್ರರಾಗಿದ್ದಾರೆ. ಶ್ರೀ ಸುರೇಶ ಸ್ವಾಮಿಗಳು ಬಹುಭಾಷಾ ಪಂಡಿತರಾಗಿದ್ದು ಕನ್ನಡ , ಮರಾಠಿ , ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಾಹಿತ್ಯ ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ *೧.ಮಾನವ ಧರ್ಮ ಶಾಸ್ತ್ರ*. *೨.ಅಸ್ಪರ್ಶರು ಯಾರು ? ೩) ಧರ್ಮ ಮತ್ತು ರಾಷ್ಟ್ರ ೪) ಜಪಯಜ್ಞ ಸಂವಿಧಾನ ೫) ಸ್ವರಾಜ್ಯ ವಿಜ್ಞಾನ ೬) ಶ್ರೀ ರುದ್ರ ಪೂಜಾ , ೭ ಜಪ ಪ್ರಯೋಗ* ಮುಂತಾದವು ಗಳಾಗಿವೆ. ಪರಮ ಪೂಜ್ಯ ಸುರೇಶ ಸ್ವಾಮಿಗಳು ದಿನಾಂಕ ೩೧-೦೫-೨೦೦೮ ರಂದು ತಮ್ಮ ೧೦೩ ನೆ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅನ್ನೊದು ನೋವಿನ ಸಂಗತಿಯಾಗಿದೆ. ಅವರ ಕನ್ನಡ , ಮರಾಠಿ , ಹಿಂದಿ ಭಾಷೆಗಳಲ್ಲಿ ರಚಿಸಿದ ಸಾಹಿತ್ಯ ಇಂದಿನ ಆಧುನಿಕ ಯುಗದಲ್ಲಿಯು ಅತ್ಯಂತ ಅವಶ್ಯಕವಾಗಿದೆ.

ಶುಕ್ರವಾರ, ಜನವರಿ 10, 2025

ಡಾ. ರುದ್ರಮಣಿ ಮಠಪತಿ

ಯುವ ಸಾಹಿತಿ ಡಾ.ರುದ್ರಮಣಿ ಮಠಪತಿಯವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ವಿಶ್ವನಾಥಯ್ಯಾ ಮತ್ತು ವಿಮಲಾಬಾಯಿ ದಂಪತಿಗಳಿಗೆ ೫-೭-೧೯೮೧ರಂದು ಜನಿಸಿದ್ದಾರೆ. ಇವರು ಸಾಹಿತ್ಯ , ಸಂಸ್ಕೃತಿಯ ಪರಿಸರದಲ್ಲಿಯೆ ಬೆಳೆದವರು. ಇವರ ಮುತ್ತಜ್ಜ ಶಿವಲಿಂಗಯ್ಯ ಬೀದರ ಜಿಲ್ಲೆಯ ಪ್ರಥಮ ಡೊಪ್ಪಿನಾಟ ರಚನಾಕಾರರು. ಅಜ್ಜ ವಿರೂಪಾಕ್ಷಯ್ಯಾ ಸ್ವಾಮಿ ಸಾಹಿತಿ ಹಾಗೂ ಸಂಗೀತಕಾರರು ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಇವರ ತಂದೆ ವಿಶ್ವನಾಥಯ್ಯಾ ಕೂಡ ಸಂಗಿತಕಾರರಾಗಿ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ತಂದೆ ವಿಶ್ವನಾಥಯ್ಯನವರ ಜೊತೆಗೂಡಿ ೨೦೦೬ರಲ್ಲಿ `ಹರಿಹರ ಮಹತ್ವ' ಮತ್ತು ೨೦೨೦ರಲ್ಲಿ `ಭಕ್ತಿಯ ಬೀಜ’ ಎಂಬ ಆಯ್ದ ವಚನಕಾರರ ೧೦೮ ವಚನಗಳ ಕೃತಿ ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೧೭ ಮಾರ್ಚ ೧೩ರಂದು ಬಸವಕಲ್ಯಾಣ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಮೂರು ತಾಲೂಕಾ ಸಾಹಿತ್ಯ ಸಮ್ಮೇಳನ ಒಂದು ಯುವ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಅಷ್ಟೆಯಲ್ಲದೆ ೧೦೦ಕ್ಕಿಂತಲೂ ಹೆಚ್ಚು ಕವಿತೆಗಳನ್ನು ರಚನೆ ಮಾಡಿದ ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಇತರರು ಸಂಪಾಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ನಾಥ ಪಂಥ ಒಂದು ಸಾಂಸ್ಕೃತಿಕ ಅಧ್ಯಾಯನ' ಇದು ಇವರ ಪಿ.ಎಚ್.ಡಿ ಮಹಾಪ್ರಬಂಧವಾಗಿದೆ. ಸದ್ಯ ಇವರು ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಶಿವಾಜಿ ಮೇತ್ರೆ

ಸಾಹಿತಿ ಡಾ.ಶಿವಾಜಿ ಮೇತ್ರೆ.ಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗಡಿಗೌಂಡಗಾAವ ಗ್ರಾಮದ ತುಕಾರಾಮ ಮೇತ್ರೆ ಮತ್ತು ಸುಗಲಾಬಾಯಿ ದಂಪತಿಗಳಿಗೆ ದಿನಾಂಕ ೨೯-೭-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ.ಬಿ.ಇಡಿ ಪದವಿಧರರಾದ ಇವರು ೨೦೦೭ರಿಂದ ಕಲಬುರಗಿ ನೂತನ ವಿದ್ಯಾಲಯದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ವಿಮರ್ಶಾ ಬರವಣಿಗೆಯಲ್ಲಿ ತೊಡಗಿದ್ದ ಇವರು ೨೦೧೨ರಲ್ಲಿ `ಉರಿಯ ಮಂಟಪ' ಎಂಬ ವಿಮರ್ಶಾ ಕೃತಿಯು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟç ಮಟ್ಟದ ವಿಚಾರ ಸಂಕಿರಣ ಹಾಗೂ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಪ್ರಬಂಧ ಮತ್ತು ಉಪನ್ಯಾಸವನ್ನು ಮಂಡಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ವತಿಯಿಂದ ಆಯೋಜಿಸಿದ್ದ ್ಲ ಕುವೆಂಪು ಓದು ಕಮ್ಮಟದ ಸಂಚಾಲಕನಾಗಿ, ಪದವಿ ಪೂರ್ವ. ಶಿಕ್ಷಣ ಇಲಾಖೆ ಕನ್ನಡ ಉಪನ್ಯಾಸಕರ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಇವರು ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೂಜ್ಯ. ಶ್ರೀ. ಡಾ.ರಾಜಶೇಖರ ಶಿವಾಚಾರ್ಯರು

ಸಾಹಿತಿಗಳಾದ ಪೂಜ್ಯ.ಶ್ರೀ.ಡಾ.ರಾಜಶೇಖರ ಶಿವಾಚಾರ್ಯರು. ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಶ್ರೀ.ವೇದಮೂರ್ತಿ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಶ್ರೀಮತಿ ವೀರಮ್ಮ ದಂಪತಿಗಳಿಗೆ ದಿನಾಂಕ ೪-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಬೆಮಳಖೇಡÀ ಹೀರೆಮಠ ಸಂಸ್ಥಾನದ ಪೀಠಾಧೀಪತಿಗಳಾಗಿದ್ದಾರೆ. `ವೀರಶೈವ ಪಂಚಪೀಠಗಳು ಒಂದು ಅಧ್ಯಯನ' ಎಂಬುದು ಅವರ ಪಿ.ಎಚ್.ಡಿ ಮಹಾಪ್ರಬಂಧವಾಗಿದೆ. ೧೯೯೪ರಲ್ಲಿ ಅಲಹಾಬಾದ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ವಿದ್ವತ್ ಸಂಗೀತ, ವಿದ್ವತ್ ತಬಲಾ, ಸಂಗೀತ ಮಾರ್ತಾಂಡ, ಎಂಬ ಪದವಿಗಳು ಪಡೆದು, ಬೆಂಗಳೂರಿನ ಕಸಾಪದಿಂದ `ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾ’ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಉಭಯ ಕ್ಷೇತ್ರಗಳಲ್ಲಿ ಆಸಕ್ತರಾದ ಶ್ರೀಗಳು ೧೯೯೮ರಲ್ಲಿ `ಹೊಗೆ ಚಿತ್ತಾರ' ಎಂಬ ಕವನಸಂಕಲನ, ೧೯೯೯ರಲ್ಲಿ `ಶಾಸನಗಳಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರು’ ೨೦೦೩ರಲ್ಲಿ `ಕೊಲ್ಲಿಪಾಕ:ಇತಿಹಾಸ ಮತ್ತು ಉಪಾಸನೆ’ ೨೦೦೪ರಲ್ಲಿ `ರಂಭಾಪುರಿ ಬೆಳಗು' ೨೦೦೫ರಲ್ಲಿ `ಶಾಸನಗಳಲ್ಲಿ ಪಂಚಪೀಠಗಳು' ಎಂಬ ಕೃತಿಗಳು ಮತ್ತು `ಮಲಯಾಚಲ ದೀಪ್ತಿ’, `ಮುನೀಂದ್ರ ವಿಜಯ’, `ಕಲ್ಯಾಣ ಕಲ್ಪ’, `ವೀರ ಪ್ರಭೆ’, `ಹೊಂಗಿರಣ’. ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೦೩ರಲ್ಲಿ ಬಸವಕಲ್ಯಾಣ ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಗಳಿಗೆ ೨೦೧೨ ರಲ್ಲಿ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದಲ್ಲಿ ನಡೆದ ೬ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.

ಗುರುನಾಥ ಅಕ್ಕಣ್ಣ

ಕತೆಗಾರ ಗುರುನಾಥ ಅಕ್ಕಣ್ಣನವರು. ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಕಾಶಪ್ಪಾ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೮-೧೨-೧೯೬೩ರಲ್ಲಿ ಜನಿಸಿದ್ದಾರೆ. ಸಿವಿಲ್ ಇಂಜಿನಿಯರ ಪದವಿಧರರಾದ ಇವರು ೧೯೮೩ರಲ್ಲಿ ಅಂಚೆ ಇಲಾಖೆಯಲ್ಲಿ ಸೇವೆಗೆ ಸೇರಿ ಸದ್ಯ ಬೀದರದ ಪ್ರಧಾನ ಅಂಚೆ ಕಛೇರಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಥಾ ರಚನೆಯ ಕಲೆ ಕರಗತ ಮಾಡಿಕೊಂಡ ಇವರು ದ್ಯಾವನೂರು ಮಹಾದೇವರಂತೆ ಬರೆದದ್ದು ಕಡಿಮೆಯಾದರು ಗಟ್ಟಿ ಸಾಹಿತ್ಯವನ್ನೆ ರಚನೆ ಮಾಡಿ ೧೯೯೦ರಲ್ಲಿ `ಯಾರನ್ನು ಪ್ರೀತಿಸಬೇಡ' ೧೯೯೬ರಲ್ಲಿ `ಇದು ಎಂಥ ಲೋಕವಯ್ಯಾ’ ೨೦೦೯ರಲ್ಲಿ `ಕಲ್ಲಣ್ಣನ ಕಾಂಪ್ಲೆAಟ್ ಪ್ರಕರಣ' ಎಂಬ ಕಥಾಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ‘ಬಿಸಿಲು ಬೆಳದಿಂಗಳು' ಎಂಬ ಕತೆಯು ಮಲೆಯಾಳಂ ಭಾಷೆಗೆ ಕೆ.ಟಿ.ರವಿ ಎನ್ನುವರು ಅನುವಾದಿಸಿದ್ದು ಇವರ ನಾಲ್ಕು ಕತೆಗಳು ಮರಾಠಿಗೆ, ಒಂದು ಕತೆ ಹಿಂದಿಗೆ ಭಾಷಾಂತರಗೊAಡಿವೆ. ಇವರ `ಆಯ್ಕೆ' ಎಂಬ ಕತೆ ಬೆಂಗಳೂರು ದೂರದರ್ಶನದಿಂದ ಡಾ.ಬಸವರಾಜ ನಂದಿಧ್ವಜ ಅವರ ನಿರ್ದೇಶನದಲ್ಲಿ ಧಾರವಾಹಿಯಾಗಿ ಪ್ರಸಾರವಾಗಿದೆ. ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದ ಅಮರೇಶ್ವರ ನುಗಡೋಣಿಯವರು ಸಂಪಾದಿಸಿದ ಹೈದರಾಬಾದ್ ಕರ್ನಾಟಕ ಲೇಖಕರ ಪ್ರಾತಿನಿಧಿಕ ಸಂಕಲನ `ಬಿಸಿಲ ಹನಿಗಳು' ಎಂಬ ಕಥಾ ಸಂಕಲನದಲ್ಲಿ ಇವರ `ಈ ಸಂಘರ್ಷಕ ಉಂಟೆನಯ್ಯಾ ಕೊನೆ’ ಎಂಬ ಕತೆಯು ಪ್ರಕಟವಾಗಿದೆ. ೧೯೯೦ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಇವರ `ಕಲ್ಲಣ್ಣನ ಕಾಂಪ್ಲೆAಟ್ ಪ್ರಕರಣ' ಕತೆಗೆ ಬಹುಮಾನ ಮತ್ತು ೨೦೦೧ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜಯತೀರ್ಥ ದತ್ತಿ ಕಥಾಸ್ಪರ್ಧೆಯಲ್ಲಿ ಇವರ `ನೀ ಮಾಯೆಯೊಳಗೊ ! ನಿನ್ನೊಳು ಮಾಯೆಯೋ ! ' ಮತ್ತು ೨೦೦೪ ರಲ್ಲಿ 'ಭವದ ಬೀಜ' ಎಂಬ ಕತೆಗಳಿಗೆ ಎರಡು ಸಲ ಬಹುಮಾನವು ಪಡೆದಿದ್ದಾರೆ. ಇವರು ೧೯೯೧ರಲ್ಲಿ `ಬೀದರ ಜಿಲ್ಲೆಯ ಬರಹಗಾರರು ಮತ್ತು ಕಲಾವಿದರ ಸಂಘವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ, ೨೦೦೪ರಿಂದ ೨೦೦೭ರವರೆಗೆ ಬೀದರ ತಾಲೂಕಿನ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕತೆಗಳು ತರಂಗ ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿ, ದೂರದರ್ಶನದಲ್ಲಿಯು ಪ್ರಕಟ, ಪ್ರಸಾರವಾಗಿವೆ.

ಡಾ.ವಿಜಯಕುಮಾರ ಎಂ. ದೇವಪ್ಪಾ

ಸಾಹಿತಿ ಡಾ.ವಿಜಯಕುಮಾರ ಎಂ.ದೇವಪ್ಪಾ. ರವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಮಲ್ಲಿಕಾರ್ಜುನ ದೇವಪ್ಪಾ ಮತ್ತು ಗುರಮ್ಮಾ ದಂಪತಿಗಳಿಗೆ ದಿನಾಂಕ ೨೧-೨-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಇ (ಸಿವಿಲ್) ಪಧವಿಧರರಾದ ಇವರು ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಆರ್.ಡಿ.ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಿತದ್ದು ಇಂಜಿನಿಯರಿAಗ್ ಪದವಿಯಾದರು, ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೬ರಲ್ಲಿ `ಚಲನೆ' ೨೦೧೭ರಲ್ಲಿ `ಜೀವ ಸೇಲೆ' (ಕವನ ಸಂಕಲನಗಳು) ೨೦೧೫ರಲ್ಲಿ `ಮಳೆಕೊಯ್ಲು' (ಲೇಖನ) ೨೦೧೬ರಲ್ಲಿ `ರಜಾಕಾರರ ಹಾವಳಿ ಮತ್ತು ಮುಚಳಂಬಿ ಗ್ರಾಮ' ೨೦೧೮ರಲ್ಲಿ `ಮುಚಳಂಬಿ ಒಂದು ಐತಿಹಾಸಿಕ ಗ್ರಾಮ' (ಐತಿಹಾಸಿಕ) ಎಂಬ ಕೃತಿಗಳು ರಚಿಸಿದ್ದಾರೆ. ಹಾಗೂ ಎಸ್.ಜಿ.ಮೇಳಕುಂದಿಯವರ ಕುರಿತು `ಶಿವರುದ್ರ' ಎಂಬ ಅಭಿನಂದನಾ ಗ್ರಂಥವು ಹೊರತಂದಿದ್ದಾರೆ. ಇವರ ಬರಹಗಳು ಬೀದರದ ಜನದನಿ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಇವರ `ಮುಚಳಂಬಿ ಒಂದು ಐತಿಹಾಸಿಕ ನೋಟ' ಎಂಬ ಕೃತಿಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀಗಳು `ಉತ್ತಮ ಲೇಖಕರು’ ಎಂಬ ಗೌರವ ಸನ್ಮಾನವು ಮಾಡಿ ಸತ್ಕಾರಿಸಿದ್ದಾರೆ.

ಪ್ರಕಾಶ ಸಿ.ಹರಕುಡೆ

ಸಾಹಿತಿ ಪ್ರಕಾಶ ಸಿ.ಹರಕುಡೆಯವರು ಬೀದರ ಜಿಲ್ಲೆ ಹುಲಸೂರಿನ ಚಂದ್ರಪ್ಪ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೫-೩-೧೯೬೨ರಲ್ಲಿ ಜನಿಸಿದ್ದಾರೆ. ಬಿ.ಇ.ಸಿವಿಲ್, ಎಂ,ಟಿ,ಪಿ, ಎ.ಐ.ಟಿ.ಸಿ.ಪದವಿಧರರಾದ ಇವರು ಕಲಬುರಗಿ ಮಹಾನಗರ ಪಾಲಿಕೆಯ ನಗರ ಯೋಜನೆಯ ಜಂಟಿ ನಿರ್ದೇಶಕರು ಮತ್ತು ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅಮೃತಧಾರೆ', `ಸುಂದರ ಲೋಕ', `ಬಾಳು ಬಂಗಾರ', `ಉತ್ಕರ್ಷ',. 'ಉಜ್ವಲ ಬಾಳಲಿ ಮೂಡಲಿ ಬೆಳಕು', `ಗಂಗಾಜಲ', `ಮಾನವ ಜನ್ಮ ದೊಡ್ಡದು’, `ರಾಮನಾಗದಿದ್ದರೆ ನೀರಾವಣನಾಗಬೇಡ', `ನಿತ್ಯ ಸುಖ', `ಕೂಸನ್ನು ಕೊಂದು ಕಾಶಿಗೆ ಹೋದರೇನು ಫಲ', `ಭಾಗ್ಯೋದಯ', `ಹಣಕ್ಕಾಗಿ ನೀನೇಕೆ ಹೆಣವಾಗುವಿ', `ನಗುತಾ ಮಾಡುವ ಪಾಪ, ಅಳುತಾ ಕಳೆಯ ಬೇಕಾಗುವುದು' ಇವು ಅವರ ಪ್ರಮುಖ ಕೃತಿಗಳಾಗಿವೆ. ಹೀಗೆ ಸಾಹಿತ್ಯ ರಚನೆಯೊಂದಿಗೆ ಗ್ರಾಮದಲ್ಲಿ ನಡೆಯುವ ನಾಟಕಗಳಲ್ಲೂ ಕೂಡ ನಟಿಸುತ್ತಾ ಬಂದಿದ್ದಾರೆ. ಮುಂದೆ ಇವರು ಆಕಸ್ಮಿಕವಾಗಿ ಬೀದರನಲ್ಲಿ ಬರ ಸಿನಿಮಾ ತಂಡ ಪರಿಚಯ ಮಾಡಿಕೊಂಡು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. `ಇಂದ್ರನ ಗೆದ್ದ ನರೇಂದ್ರ’, 'ತುಂಗಭದ್ರ', `ಕೆಂಪಯ್ಯ ಐ.ಪಿ.ಎಸ್’, `ಅಧಿಪತಿ', `ಲೂಟಿಗ್ಯಾಂಗ್’, `ಈಶ್ವರ', `ಲಾಕಪಡೆತ್', ಸಾಂಗ್ಲಿಯಾನ ಭಾಗ-೩, `ಮೀಲ್ಟ್ರಿ ಮಾವಾ'. `ಸಂಭವಾಮಿ ಯುಗೆ ಯುಗೆ', `ಕಪ್ರ‍್ರೂ,' `ಧೈರ್ಯವಂತ'. ಹೀಗೆ ಸುಮಾರು ಇಪ್ಪತ್ತೈದು ಸಿನಿಮಾಗಳಲ್ಲಿ ಖ್ಯಾತ ನಾಯಕ ನಟರಾದ ವಿಷ್ಣುವರ್ಧನ್, ಅನಂತನಾಗ, ದೇವರಾಜ, ಜಗ್ಗೇಶ್, ಸಾಯಿಕುಮಾರ, ಶಶಿಕುಮಾರ್, ಸುಂದರಕೃಷ್ಣ ಅರಸ, ಧೀರೇಂದ್ರ ಗೋಪಾಲ್ ಮೊದಲಾದವರೊಂದಿಗೆ ನ್ಯಾಯಧೀಶರಾಗಿ, ಉಪನ್ಯಾಸಕರಾಗಿ, ಶಾಸಕರಾಗಿ ಮೊದಲಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಕಾರ್ಯ ಸಾಧನೆಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಬರಹಗಳು ವಿವಿದ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.

ಪ್ರೊ.ಶಂಭುಲಿಂಗ ವಿ.ಕಾಮಣ್ಣಾ

ಸಾಹಿತಿ ಶಂಭುಲಿಂಗ ವಿ. ಕಾಮಣ್ಣಾ. ರವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ತೊಗಲೂರು ಗ್ರಾಮದ ವೀರಶೇಟ್ಟೆಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೨೮-೧೧-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಧರರಾದ ಇವರು ೧೯೮೬ರಿಂದ ಭಾಲ್ಕಿಯ ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಚಿಂತನಗಳನ್ನು ಬರೆದಿರುವ ಇವರು ೨೦೦೪ರಲ್ಲಿ `ಚಿಂತನ ಚಿಗುರು' ೨೦೧೨ರಲ್ಲಿ `ಬಾಂದಳದ ಬೆಳಗು' ಎಂಬ ಚಿಂತನ ಕೃತಿಗಳು, ೨೦೧೬ರಲ್ಲಿ `ಶರಣ ಸೌರಭ' ೨೦೧೮ರಲ್ಲಿ `ಶರಣ ದೀಪ್ತಿ' ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಚಿಂತನಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೭ರಲ್ಲಿ ಕಸಾಪ ಬೆಂಗಳೂರಿನಿAದ ಕನ್ನಡ ಶ್ರೀ ಪ್ರಶಸ್ತಿ, ಕನ್ನಡ ಸೇನೆಯಿಂದ ಕನ್ನಡ ರತ್ನ ಪ್ರಶಸ್ತಿ, ಭಾಲ್ಕಿ ತಾಲೂಕು ಆಡಳಿತದಿಂದ ಬಸವ ಶ್ರೀ ಪ್ರಶಸ್ತಿ, ಮತ್ತು ಉತ್ತಮ ಉಪನ್ಯಾಸಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿಗಳು ಲಭೀಸಿವೆ. ೨೦೧೭ರಲ್ಲಿ ಇವರಿಗೆ ಭಾಲ್ಕಿ ತಾಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ. ೨೦೦೪ರಲ್ಲಿ ಭಾಲ್ಕಿ ಕಸಾಪದ ಅಧ್ಯಕ್ಷರಾಗಿ, ೨೦೦೮ರಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶ್ವನಾಥ ಮುಕ್ತಾ

ಸಾಹಿತಿ ವಿಶ್ವನಾಥ ಮುಕ್ತಾ ರವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬಾಬುರಾವ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೧-೧೯೬೦ ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವಿಧರರಾದ ಇವರು ೧೯೮೩ರಲ್ಲಿ ಬಸವಕಲ್ಯಾಣದ ಶ್ರೀ ಬಸವೇಶ್ವರ ಪ್ರಾಥಮೀಕ ಶಾಲಾ ಶಿಕ್ಷಕರಾಗಿ, ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ೧೯೯೪ರಲ್ಲಿ `ಸಮ್ಮಿಲನ', `ಮರಿಚಿಕೆ ’, `ಮಣ್ಣಿನ ಹೂ’ (ಕವನ ಸಂಕಲನಗಳು) `ಮುಗಿಲ ಮೆಟ್ಟಿಲು’, `ಅನ್ವೇಷಣೆ’ (ಚಿಂತನೆ) `ಬೆಳಕಿನ ಸಿರಿ, ಕಲ್ಯಾಣ ಕಲಾಶ್ರೀ’ (ಸಂ) `ಮುಕ್ತೇಶ್ವರ ವಚನಗಳು-೧.೨.೩.೪. ಹಾಗೂ `ಮುಕ್ತಿಯ ಸೂತ್ರಗಳು’ `ನೀನಿಲ್ಲದೆ ನಾನಿಲ್ಲ’ (ಆಧುನಿಕ ವಚನಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಮತ್ತು ಆಕಾಶವಾಣಿ ಪ್ರಕಟ,ಪ್ರಸಾರವಾಗಿವೆ. ಹಾಗೂ ಸಾಕ್ಷರತೆಯ ಕವನಗಳ ೧ ಧ್ವನಿ ಸುರುಳಿ ೨ ಸಿಡಿಗಳಾಗಿ ಮುದ್ರಿತಗೊಂಡಿವೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ೨೦೧೯ರಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗದಲೆಗಾಂವ ಗ್ರಾಮದಲ್ಲಿ ನಡೆದ ೮ನೇ ತಾಲ್ಲುಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ್ಯರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.

ಡಾ. ಗಣಪತಿ ಝ.ಸಿಂಧೆ

ಲೇಖಕರಾದ ಡಾ.ಗಣಪತಿ ಝ.ಸಿಂಧೆಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ತೊಗಲೂರು ಗ್ರಾಮದ ಝಟಿಂಗರಾವ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ. ೧-೬-೧೯೫೯ರಲ್ಲಿ ಜನಿಸಿದ್ದಾರೆ. ಎಂ.ಎ, ಎಂ.ಫೀಲ್, ಎಲ್.ಎಲ್.ಬಿ. ಎಂ.ಎಲ್.ಐ.ಎಸ್.ಸಿ. ಪದವಿಧರರಾದ ಇವರು ಹತ್ತು ವರ್ಷ ಖಾಸಗಿ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ನಂತರ ೧೯೯೫ರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಉಪಗ್ರಂಥ ಪಾಲಕರಾಗಿ ಸೇವೆಗೆ ಸೇರಿ, ಮುಖ್ಯ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಆಂಗ್ಲ ಭಾಷಾ ಪಾಂಡಿತ್ಯ ಹೊಂದಿದ ಇವರು ಆಂಗ್ಲ ಭಾಷೆಯಲ್ಲಿ `ರಿಸರ್ಚ್ ಇನ್ ಸೋಷಿಯಲ್ ಸೈನ್ಸ್' ಎಂಬ ಪುಸ್ತಕ ೨೦೦೪ರಲ್ಲಿ ಬರೆದು ಪ್ರಕಟಿಸಿದ್ದಾರೆ. ಈ ಕೃತಿಗೆ ೨೦೧೨ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ. ಇವರ ಬರಹಗಳು ಕೆಲ ಪ್ರಮುಖ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಉತ್ತಮ ಸಂಘಟಕರು ಆಗಿದ್ದರಿಂದ ೨೦೧೧ರಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ವೃತ್ತಿ ಬಾಂಧವರ ಸಂಘವು ಸ್ಥಾಪಿಸಿ, ಅದರ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಹಲವಾರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಗುಲಬರ್ಗಾ, ಮಂಗಳೂರು, ಮೈಸೂರು, ಬೆಂಗಳೂರು, ವಿಶ್ವವಿದ್ಯಾಲಯಗಳ ಆವರಣದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಮಾಡಿದ್ದಾರೆ. ಮಹಾರಾಷ್ಟ್ರದ ನಾಗಪೂರದ ಧಿಕ್ಷಾ ಭೂಮಿಯಲ್ಲಿಯು ಇವರು ಈ ಸಂಘಟನೆಯ ಕಾರ್ಯಕ್ರಮವು ಆಯೋಜನೆ ಮಾಡಿ ಜಾಗೃತಿ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರು ೩೮ ದೇಶ ವಿದೇಶಗಳಲ್ಲಿ ಪ್ರವಾಸ ಕೈಗೊಂಡು, ಗ್ರಂಥಾಲಯಗಳ ಅನುಭವ ಪಡೆದು ಉತ್ತಮ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಇವರ ಮಿತ್ರ ಬಾಂಧವರು `ಪ್ರೊಫೆಷನಲ್ ಸಸ್ಟೆನನ್ಸ ರಿಚರ್ಸ ಸಪೋರ್ಟ್ ಆ್ಯಂಡ್ ಪ್ರಪ್ರರಿಂಗ್ ಫಾರ್ ನ್ಯಾಕ್ ಇನ್ ಅಕಾಡೆಮಿಕ್’ ಎಂಬ ಅಭಿನಂದನಾ ಗ್ರಂಥವು ಹೊರತಂದಿದ್ದಾರೆ. ಈ ಅಭಿನಂದನಾ ಗ್ರಂಥವನ್ನು ಪಿ.ಎಸ್.ಕಟ್ಟಿಮನಿ ಮತ್ತು ಐ.ಎಸ್.ವಿದ್ಯಾಸಾಗರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದಾರೆ.

ಪ್ರೊ.ಸಿದ್ದರಾಮಯ್ಯ ಮಠಪತಿ

ಸಾಹಿತಿ ಹಾಗೂ ಸಂಗೀತಗಾರರಾದ ಡಾ. ಸಿದ್ದರಾಮಯ್ಯ ಮಠಪತಿಯವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ಗೊರ್ಟಾ (ಬಿ) ಗ್ರಾಮದ ಪಂ.ವಿರೂಪಾಕ್ಷಯ್ಯ ಮತ್ತು ವೀರಮ್ಮ ದಂಪತಿಗಳಿಗೆ ದಿನಾಂಕ ೧-೧೨-೧೯೫೮ರಲ್ಲಿ ಜನಿಸಿದ್ದಾರೆ. ಸಂಗೀತ ಮೇಜರ್ ವಿಷಯದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಇವರು ಬಾಗಲಕೋಟೆ ಜಿಲ್ಲೆಯ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ೧೯೮೨ರಿಂದ ಸಂಗೀತ ಶ್ರೇಣಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೧೯೯೩ರಲ್ಲಿ `ಸಂಗೀತ ರುದ್ರ’ ೧೯೯೫ರಲ್ಲಿ `ಹಿಂದೂಸ್ತಾನಿ ಸಂಗೀತಗಾರರು ಸಂಪುಟ-೧ ಮತ್ತು,೨' ೨೦೦೧ರಲ್ಲಿ 'ಸಂಗೀತ ಶ್ರೀ ರುದ್ರ’ (ಕನ್ನಡ) ೨೦೦೪ರಲ್ಲಿ `ಸಂಗೀತ ಶ್ರೀ ರುದ್ರ' (ಹಿಂದಿ) ೨೦೦೬ರಲ್ಲಿ `ವೀರಶೈವ ಸಂಗೀತಗಾರರು' `ಶ್ರೀ. ಷ.ಬ್ರ.ಗುರುಪಾದ ಶಿವಾಚಾರ್ಯರು’ ೨೦೦೬ರಲ್ಲಿ `ಕರ್ಮಯೋಗಿ ಹುಚ್ಚಪ್ಪಾ ಹತ್ತಿ’ `ಅಕಾಡೆಮಿ ಪ್ರಶಸ್ತಿ ಪುರಸ್ಕೃತರು' ಎಂಬ ಕೃತಿಗಳು ರಚಿಸಿದ್ದು, ಮತ್ತು `ಭಾವಗುಚ್ಚ' `ನಾದ ಲಹರಿ’ `ವಿಶ್ವ ನಿನಾದ’ `ನಾದೊಪಾಸಕ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಸಂಗೀತ ರುದ್ರ ಕೃತಿಗೆ ೧೯೯೩ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸಿ,್ತ ೨೦೦೦ ರೂಪಾಯಿ ಗೌರವ ಧನವು ಪಡೆದರೆ, `ಹಿಂದೂಸ್ತಾನಿ ಸಂಗೀತಗಾರರು ಸಂಪುಟ-೧ ಕ್ಕೆ ೧೯೯೫ರಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ೨೦೦೦ ರೂಪಾಯಿ ಪ್ರೋತ್ಸಾಹ ಧನಸಹಾಯ ಪಡೆದಿದೆ. ಇವರ ಕತೆ,ಲೇಖನ, ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ತುಷಾರ, ಸುಧಾ,ತರಂಗ, ಮೊದಲಾದ ಪತ್ರಿಕೆ ಪ್ರಾತಿನಿಧಿಕ ಸಂಕಲನಗಳಲ್ಲಿ ೨೫೦ಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ಕರ್ನಾಟಕದ ಎಲ್ಲ ಬಾನುಲಿ ಕೇಂದ್ರ ಹಾಗೂ ದೂರದರ್ಶನಗಳಲ್ಲಿ ಸಾಕಷ್ಟು ಸಂಗೀತ ಗೀತ ಗಾಯನ ಕಾರ್ಯಕ್ರಮಗಳು ಪ್ರಸಾರಗೊಂಡು ಮನೆ ಮಾತಾಗಿದ್ದಾರೆ. ಇವರು ಹಾಡಿದ ನೂರಾರು ಗೀತೆಗಳು ಕನ್ನಡ, ಹಿಂದಿಯಲ್ಲಿ ಧ್ವನಿ ಸುರುಳಿಯಾಗಿ ಮುದ್ರಣಗೊಂಡಿವೆ. ಇವರು ರಂಗಭೂಮಿ ಸಂಗೀತ ನಿರ್ದೇಶಕರಾಗಿ, ಹಲವಾರು ನಾಟಕ, ಧಾರಾವಾಹಿಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.ಇವರ ಸಾಹಿತ್ಯ, ಸಂಗೀತ ಕ್ಷೇತ್ರದ ಸಾಧನೆಗೆ ೧೯೮೫ರಲ್ಲಿ ನಾಗಮಂಗಲದ ಗ್ರಂಥ ಗಂಗೋತ್ರಿ ಪ್ರಕಾಶನದ ವತಿಯಿಂದ `ನಿಹಾರಿಕಾ’ ಎಂಬ ಕತೆಗೆ ಅಂತರಾಷ್ಟ್ರೀಯ ಯುವ ಕಥಾ ಪ್ರಶಸ್ತಿ, ೧೯೯೨ರಲ್ಲಿ ಜಗದ್ಗುರು ವಾರಣಾಸಿಯ ಪೀಠದಿಂದ ಸಂಗೀತ ವಿಶಾರದ ಪ್ರಶಸ್ತಿ, ೧೯೯೭ರಲ್ಲಿ ಬೆಂಗಳೂರಿನ ವೀರಶೈವ ಸಮನ್ವಯ ವೇದಿಕೆಯಿಂದ ಸ್ವರಶ್ರೀ ಪ್ರಶಸ್ತಿ, ೨೦೦೪ರಲ್ಲಿ ಗಾನಯೋಗಿ ಪಂ.ಪAಚಾಕ್ಷರಿ ಗಾನಕಲಾ ಪರಿಷತ್ ಗೋಕಾಕ್ ವತಿಯಿಂದ ಸಂಗೀತ ಝೆಂಕಾರ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರು ೧೯೯೪ರಲ್ಲಿ ಕರ್ನಾಟಕ ರಾಜ್ಯ ಸಂಗೀತ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ೧೯೯೮ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೋರ್ಡ ಆಫ್ ಸ್ಟಡೀಸ್ (ಹಿಂದೂಸ್ತಾನಿ ಸಂಗೀತ) ಸದಸ್ಯರಾಗಿ, ೧೯೯೯ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಸಂಗೀತ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ೨೦೦೧ರಲ್ಲಿ ಅಲಹಾಬಾದನಲ್ಲಿ ಹಿಂದೂಸ್ತಾನಿ ಸಂಗೀತ ಪರೀಕ್ಷಾ ಮಂಡಳಿಯ ಪ್ರಯಾಗ್ ಸಂಗೀತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಹಲವಾರು ಸಂಗೀತ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡುವುದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯು ೧೩ ಉತ್ತಮ ಪುಸ್ತಕಗಳು ಬರೆದಿರುವುದರಿಂದ ಇವರಿಗೆ ಮುಚಳಂಬ ಗ್ರಾಮದಲ್ಲಿ ನಡೆದ ಬಸವಕಲ್ಯಾಣದ ೩ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.

ವಿಶ್ವನಾಥ ಬಿರಾದಾರ

ಸಾಹಿತಿ ವಿಶ್ವನಾಥ ಬಿರಾದಾರ ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬ ಗ್ರಾಮದ ಮಾಣಿಕಪ್ಪಾ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೮-೭-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ.ಸ್ನಾತಕೋತ್ತರ ಪದವೀಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕವನ, ಲೇಖನ, ಬರಹಗಳು ಬರೆದ ಇವರು ೨೦೦೨ರಲ್ಲಿ `ಸರ್ಕಾರಿ ನೌಕರರ ಸ್ಮರಣ ಸಂಚಿಕೆ' ಕೃತಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಹಲವಾರು ಬರಹಗಳು ಅನೇಕ ಕಡೆ ಪ್ರಕಟವಾಗಿವೆ.

ಡಾ. ರೇಖಾ ಜ್ಯೊತೆಪ್ಪ (ಮಹಾಜನ್)

ಸಾಹಿತಿ ಡಾ.ರೇಖಾ ಜ್ಯೊತೆಪ್ಪ (ಮಹಾಜನ್)ರವರು. ಬೀದರ ಜಿಲ್ಲೆ ಕಮಲನಗರ ತಾಲೂಕಿನ ಗುರುನಾಥಪ್ಪ ಮತ್ತು ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಲಸೂರು ತಾಲೂಕಿನ ಮುಚಳಂಬದ ಶಿವರಾಜ ಜ್ಯೊತೆಪ್ಪರವರ ಧರ್ಮ ಪತ್ನಿಯಾಗಿದ್ದು. ೧೯೮೪ರಲ್ಲಿ ಗೋರ್ಟಾ (ಬಿ) ಗ್ರಾಮದ ಶ್ರೀ ಗುರುಪಾದ ಶಿವಾಚಾರ್ಯ ಪ.ಪೂ. ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಂತರ ೧೯೮೫ರಲ್ಲಿ ಭಾಲ್ಕಿಯ ಸತ್ಯಾನಿಕೇತನ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೭ರಲ್ಲಿ ನಿವೃತ್ತರಾಗಿದ್ದಾರೆ. ೨೦೦೮ರಲ್ಲಿ `ಸ್ಮೃತಿ ಗಂಧ' ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದು, ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೭ರಲ್ಲಿ ನವದೆಹಲಿಯ ಭಾರತೀಯ ಶಾಂತಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಭಾಲ್ಕಿ ಮಠದಿಂದ `ಡಾ.ಚನ್ನಬಸವ ಪಟ್ಟದೇವರು ಪ್ರಶಸ್ತಿ, ೨೦೦೨ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೧೫ರಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರತಿಷ್ಠಾನದ ವತಿಯಿಂದ ಆದರ್ಶ ದಾಂಪತ್ಯ ಪ್ರಶಸ್ತಿ, ೨೦೧೬ರಲ್ಲಿ ಬೆಂಗಳೂರಿನ ವಂದೇ ಮಾತರಂ ಸಾಂಸ್ಕೃತಿಕ ಸಂಸ್ಥೆಯಿAದ ಸಮಾಜ ಶ್ರೇಷ್ಠ ಶಿಕ್ಷಕ ರತ್ನ ಪ್ರಶಸ್ತಿ, ಸದ್ಯ ಇವರು ಭಾಲ್ಕಿಯ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ, ಜಾನಪದ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೀದರನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಾಹಿತ್ಯ ಸಮ್ಮೇಳನ ಮೊದಲಾದವುಗಳಲ್ಲಿ ಭಾಗವಹಿಸಿ ಕವನ ವಾಚನ, ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಕುರಿತು ಸಾಹಿತಿ ಸಿ.ಎಸ್.ಆನಂದ ಮತ್ತು ವೀರಣ್ಣ ಕುಂಬಾರ ರವರು `ಶಿವ-ರೇಖಾ' ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿ ಗೌರವಿಸಿದ್ದಾರೆ.

ಶಿವಪುತ್ರಪ್ಪಾ ಕಣಜೆ

ಆಧುನಿಕ ವಚನಕಾರ ಶಿವಪುತ್ರಪ್ಪ ಕಣಜೆಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಅಣ್ಣೆಪ್ಪಾ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೫೬ ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಮುಂದೆ ಓದಲು ಆಗದೆ ಕೃಷಿಯಲ್ಲಿ ತೊಡಗಿ ಪ್ರಗತಿಪರ ರೈತ,ಸಮಾಜ ಸೇವಕ, ಬಸವತತ್ವ ಪ್ರಚಾರಕರಾಗಿ ಶರಣರ ಆದರ್ಶ ಜೀವನ ಮತ್ತು ವಚನ ಸಾಹಿತ್ಯಕ್ಕೆ ಮಾರು ಹೋಗಿ ೨೦೧೭ರಲ್ಲಿ `ವಚನ ಪರಿಮಳ' ಎಂಬ ಆಧುನಿಕ ವಚನ ಸಂಕಲನವು ಪ್ರಕಟಿಸಿದ್ದಾರೆ. `ನಿಮ್ಮ ಶಿವಪುತ್ರ ಗುರುಬಸವ ಭಕ್ತರ ತೊತ್ತು.' ಎಂಬುದು ಅವರ ಅಂಕಿತನಾಮವಾಗಿದೆ. ಇವರಿಗೆ ಬೀದರದ ಕಂಬಳಿವಾಲೆ ಪ್ರತಿಷ್ಠಾನ ಮತ್ತು ಸಸ್ತಾಪೂರದ ಯಲ್ಲಾಲಿಂಗೇಶ್ವರ ಆಶ್ರಯದಲ್ಲಿ ನಡೆಯುವ ಆಧುನಿಕ ವಚನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ವಿಶ್ವನಾಥಯ್ಯಾ ಮಠಪತಿ

ಹಸ್ತಪ್ರತಿ ಸಂಶೋಧಕ ಹಾಗೂ ಲೇಖಕರಾದ ವಿಶ್ವನಾಥಯ್ಯಾ ಮಠಪತಿಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮದ ಹಿರಿಯ ಸಾಹಿತಿ ವಿರೂಪಾಕ್ಷಯ್ಯಾ ಸ್ವಾಮಿ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೧೪-೭-೧೯೫೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ವರೆಗೆ ಅಧ್ಯಯನ ಮಾಡಿದ ಇವರು. ಹುಟ್ಟೂರಿನ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆಯಲ್ಲಿ ೧೯೭೪ರಿಂದ ಕರುಣಿಕರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿ ಜೀವನದೊಂದಿಗೆ ೨೦ವರ್ಷ ಸತತವಾಗಿ ಹಳೆ ಮನೆ, ಮಠಗಳಿಗೆ ಬೇಟಿ ನೀಡಿ ೧೦೦ ಕಟ್ಟು ಹಸ್ತಪ್ರತಿಗಳು ಸಂಗ್ರಹಿಸಿದರಿAದ ವಿವಿಧ ವಿಶ್ವವಿದ್ಯಾಲಯದ ಉಪನ್ಯಾಸಕರು, ಸಂಶೋಧಕರು ಹಾಗೂ ಧಾರವಾಡದ ಖ್ಯಾತ ಸಾಹಿತಿ ಎಂ.ಎA.ಕಲ್ಬುರ್ಗಿಯವರು ಸೇರಿದಂತೆ ಮೊದಲಾದವರು ಇವರ ಕಾರ್ಯಕ್ಕೆ ಪ್ರಶಂಸೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರು ಈ ಹಸ್ತಪ್ರತಿಗಳು ಸಂಗ್ರಹಿಸಿದಷ್ಟೇಯಲ್ಲದೆ ಅವುಗಳು ಅಧ್ಯಯನ ಮಾಡಿ ಹೊಸಗನ್ನಡ ರೂಪದಲ್ಲಿ ಮುದ್ರಣ ಮಾಡಿದ್ದಾರೆ. ಮತ್ತು ಹೊಸಗನ್ನಡ ಹಸ್ತಪ್ರತಿ ಕಾರ್ಯವನ್ನು ತಮ್ಮ ಮಗ ಡಾ.ರುದ್ರಮಣಿ ಮಠಪತಿ ಅವರೊಂದಿಗೆ ೨೦೦೭ರಲ್ಲಿ `ಹರಿಹರ ಮಹತ್ವ’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಹತ್ತಿರ ಬಸವಗಣ, ಶಿಖಾಮಣಿ ಹಾಗೂ ಅನೇಕ ಅಪ್ರಕಟಿತ ವಚನಗಳು ಮತ್ತು ಕೃತಿಗಳು ಲಭ್ಯ ಇವೆ. ಇವರ ಬರಹ ಲೇಖನಗಳು ಬಸವಪಥ ಮಾಸಪತ್ರಿಕೆಯಲ್ಲಿಯೂ ಪ್ರಕಟವಾಗಿವೆ. ಇವರಿಗೆ ಬೀದರ ಜಿಲ್ಲಾ ಸಂಶೋಧಕರು ಮತ್ತು `ಸಂಶೋಧನಾ ರತ್ನ’ ಎಂಬ ಬಿರುದು ನೀಡಿ ಗೌರವಿಸಲಾಗಿದೆ.

ಜಗದೇವಿ ದುಬಲಗುಂಡೆ.

ಹಿರಿಯ ಸಾಹಿತಿ ಜಗದೇವಿ ದುಬಲಗುಂಡೆಯವರು ಬೀದರ ಜಿಲ್ಲೆ ಬಸವಕಲ್ಯಾಣದ ಗುರುಪಾದಪ್ಪಾ ಮೆಟಗೆ ಮತ್ತು ಭಾಗೀರಥಿಬಾಯಿ ದಂಪತಿಗಳಿಗೆ ದಿನಾಂಕ ೯-೬-೧೯೪೯ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ೮ನೇ ತರಗತಿಯವರೆಗೆ ಮಾತ್ರ ನಂತರ ಖಾಸಗಿ ಅಭ್ಯಾರ್ಥಿಯಾಗಿ ಎಸ್.ಎಸ್.ಎಲ್.ಸಿ.ಪಾಸು ಮಾಡಿ ೧೯೮೬ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿ ೨೦೦೭ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ತೋಟಗಾರಿಕೆ ಇಲಾಖೆಯಿಂದ ನಿವೃತ್ತರಾಗಿದ್ದಾರೆ. ಇವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಸಿದ್ರಾಮಪ್ಪಾ ದುಬಲಗುಂಡೆಯವರ ಧರ್ಮ ಪತ್ನಿಯಾಗಿದ್ದು, ೨೦೦೮ರಲ್ಲಿ `ಅಪರೂಪದ ಅಪ್ಪ' ಎಂಬ ಜೀವನ ಚರಿತ್ರೆ, ಹಾಗೂ `ವಚನ ಕುಸುಮ’ ಎಂಬ ಆಧುನಿಕ ವಚನ ಸಂಕಲನ ೨೦೧೨ರಲ್ಲಿ `ಸಂಸ್ಕೃತಿ ಸಿಂಚನ' ಎಂಬ ಜಾನಪದ ಕೃತಿ, ೨೦೧೫ರಲ್ಲಿ `ಕಾವ್ಯ ತೊರಣ' ಎಂಬ ಕೃತಿಗಳು ರಚಿಸಿದ್ದಾರೆ. ಇವರು `ಸಿದ್ದರಾಮ ಪ್ರಿಯ ಬಸವನ ಶಿಶು' ಎಂಬ ಅಂಕಿತನಾಮದಿAದ ವಚನಗಳು ಮತ್ತು `ಗುರುಸಿದ್ದ ಬಸವ' ಎಂಬ ಕಾವ್ಯನಾಮದಿಂದ ಬರೆದ ಕವನಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಕಲ್ಯಾಣದ ಅನುಭವ ಮಂಟಪದ ೩೭ನೇ ಶರಣ ಕಮ್ಮಟದಲ್ಲಿ ಇವರ `ಸಂಸ್ಕೃತಿ ಸಿಂಚನ' ಎಂಬ ಕೃತಿಗೆ `ಕ್ರಾಂತಿ ಗಂಗೋತ್ರಿ ಅಕ್ಕನಾಗಾಂಬಿಕಾ ಪುಸ್ತಕ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಶರಣ ರತ್ನ' ಪ್ರಶಸ್ತಿಯು ಪಡೆದಿದ್ದಾರೆ. ೨೦೧೩ರಲ್ಲಿ ಬಸವಕಲ್ಯಾಣ ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದ ೨ನೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.

ಲಕ್ಷ್ಮೀಬಾಯಿ ಪಾಟೀಲ್

ಕವಯತ್ರಿ ಲಕ್ಷಿö್ಮÃಬಾಯಿ ಪಾಟೀಲ್ ರವರು ಮಹಾರಾಷ್ಟ್ರದ ಲಾತೂರ ಜಿಲ್ಲೆ ಔಸಾದ ಚನ್ನಪ್ಪಾ ಪುಲಾರೆ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೩-೯-೧೯೪೬ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಡಿ.ಎಡ್.ಮತ್ತು ಹಿಂದಿ ಪದವಿ ಪಡೆದ ಇವರು ೧೯೭೭ರಲ್ಲಿ ಶಿಕ್ಷಕರಾಗಿ ನೇಮಕಗೊಂಡು, ಹುಲಸೂರ ತಾಲೂಕಿನ ಗಡಿಗ್ರಾಮ ಕೊಟಮಾಳದಲ್ಲಿ ಸೇವೆಗೆ ಸೇರಿ, ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ. ಇವರು ಕಲಿತದ್ದು ಮಾರಾಠಿಯಾದರು ಕನ್ನಡ ಸ್ವಂತ ಅಂಕಲಿಪಿ ಮೂಲಕ ಕಲಿತುಕೊಂಡು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿ ೨೦೦೭ರಲ್ಲಿ `ಕಾಲಚಕ್ರ' ಎಂಬ ಕವನ ಸಂಕಲನ ಕನ್ನಡದಲ್ಲಿ ಬರೆದು ಪ್ರಕಟಿಸಿದ್ದಾರೆ. ಮತ್ತು ಸಾಹಿತಿ ವಿ.ಸಿದ್ದರಾಮಣ್ಣನವರು ರಚಿಸಿದ `ವಿಶ್ವಾತ್ಮ ಬಸವಣ್ಣ', `ಅಕ್ಕ ಮಹಾದೇವಿ', `ಕ್ರಾಂತಿ ಕಲ್ಯಾಣ', `ಮೊಳಿಗೆಯ ಮಾರಯ್ಯ', `ಮಾದಾರ ಚನ್ನಯ್ಯ', `ವೀರಾ ಗಣಾದೀಶ ಮಡಿವಾಳ ಮಾಚಿದೇವ'. ಎಂಬ ನಾಟಕಗಳು, ಹಾಗೂ ಬಸವ ಟಿವಿ ಮುಖ್ಯಸ್ಥರಾದ ಈ ಕೃಷ್ಣಪ್ಪಾನವರು ಬರೆದ `ದೇವರ ಸ್ವರೂಪ' `ಇಷ್ಟಲಿಂಗ ಪೂಜಾ ವಿಧಾನ' ಎಂಬ ಕೃತಿಗಳು ಕನ್ನಡದಿಂದ ಮರಾಠಿಗೆ ಅನುವಾದಿಸಿದ್ದಾರೆ. `ಹೂಗಾರ ಕಂದ’ ಎಂಬ ಅಂಕಿತದಲ್ಲಿ ನೂರಾರು ಆಧುನಿಕ ವಚನಗಳು ರಚಿಸಿದ್ದಾರೆ. ಇವರ ಕವನ, ಲೇಖನ ಬರಹಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಆಕಾಶವಾಣಿ, ಬಸವ ಟಿವಿಯಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ೨೦೧೪ರಲ್ಲಿ ಲಾತೂರಿನಲ್ಲಿ ನಡೆದ ಬಸವ ಮಹಾಮೇಳದ `ಸಮಾಜ ಭೂಷಣ್ ಪ್ರಶಸಿ’, ಸೇರಿದಂತೆ ಮೊದಲಾದವು ಪಡೆದಿದ್ದಾರೆ.

ವಿರೂಪಾಕ್ಷಯ್ಯ ಸಿದ್ರಾಮಯ್ಯ ಸ್ವಾಮಿ

ಹಿರಿಯ ಸಾಹಿತಿ ವಿರೂಪಾಕ್ಷಯ್ಯ ಸ್ವಾಮಿ ಗೋರ್ಟಾ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಸಿದ್ದರಾಮಯ್ಯ ಮತ್ತು ಕಾಶೆಮ್ಮ ದಂಪತಿಗಳಿಗೆ ದಿನಾಂಕ ೧೯-೮-೧೯೨೬ರಲ್ಲಿ ಜನಿಸಿದ್ದಾರೆ. ನಾಲ್ಕನೇ ತರಗತಿಯವರೆಗೆ ಅಧ್ಯಯನ ಮಾಡಿದ ಇವರು ವೇದಗಾಯಕ, ಸಾಂಸ್ಕೃತಿಕ ಹಾಗೂ ಸ್ವತಂತ್ರ ಹೋರಾಟಗಾರರಾಗಿ ಅಧ್ಯಾತ್ಮಿಕ, ಸಾಹಿತ್ಯಕ ಕ್ಷೇತ್ರದಲ್ಲಿ ಒಲವು ಮೂಡಿಸಿಕೊಂಡು ಸಂಗೀತಗಾರಾಗಿ ಜಾನಪದ, ಕಥನ ಗೀತೆಗಳು ಬರೆದು ಗ್ರಾಮದ ಮತ್ತೊರ್ವ ಸಮಕಾಲಿನ ಸಾಹಿತಿ ವಿರೂಪಾಕ್ಷಯ್ಯ ಸ್ವಾಮಿಯವರೊಂದಿಗೆ ೧೯೪೮ರಲ್ಲಿ `ಭುಲಾಯಿ ಪದಗಳು' ಎಂಬ ಜಾನಪದ ಕಥನ ಗೀತೆಗಳ ಪುಸ್ತಕವು ಪ್ರಕಟಿಸಿದ್ದಾರೆ. ಇದು ಸ್ವಾತಂತ್ರ‍್ಯ ನಂತರದ ಬೀದರದ ಮೊದಲ ಗ್ರಂಥವೆAಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೈದರಾಬಾದ ನಿಜಾಮನ ಆಳ್ವಿಕೆಯ ಕಾಲದಲ್ಲಿ ನಡೆದ ರಜಾಕಾರರ ಗೋರ್ಟಾ ಹತ್ಯಾಕಾಂಡದ ನೋವಿನ ಕತೆಗಳು ಇದರಲ್ಲಿವೆ. ಇವರು ೧೯೫೭ರಲ್ಲಿ ಶಾರದಾ ಸಂಗೀತ ವಿದ್ಯಾಲಯ ಸ್ಥಾಪಿಸಿ ಉಚಿತ ಊಟ ವಸತಿಯೊಂದಿಗೆ ಸಂಗೀತ ಶಿಕ್ಷಣ ನೀಡಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನವು ಮಾಡಿದ್ದಾರೆ. ೧೯೪೨ರಲ್ಲಿ ಸಂಗೀತ ರುದ್ರ ಸಂಘ ಸ್ಥಾಪನೆ ಮಾಡಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಗಳಲ್ಲಿ ಸಂಚರಿಸಿ ಅನೇಕ ಕಾರ್ಯಕ್ರಮಗಳು ನಡೆಸಿಕೊಟ್ಟಿದ್ದಾರೆ. ಮತ್ತು ಶ್ರೀ. ಷ.ಬ್ರ.ರಾಚೋಟಿ ಶಿವಾಚಾರ್ಯರ ಶ್ರೀರುದ್ರ ಮಂತ್ರಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ದತಿಯಲ್ಲಿ ಸ್ವರ ಸಂಯೋಜನೆಯು ಮಾಡಿ ಸಂಗೀತ ರುದ್ರ ಪಿತಾಮಹ' ಎನಿಸಿಕೊಂಡಿದ್ದಾರೆ. ಇವರಿಗೆ ೧೯೭೬ರಲ್ಲಿ ಬೀದರ ಕಸಾಪ ಪ್ರಶಸ್ತಿ, ೧೯೮೨ರಲ್ಲಿ ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಉದಗಿರ ಹಾವಗಿ ಮಠದಿಂದ ಪಂ.ಬಸವರಾಜ ರಾಜಗುರು ಪ್ರಶಸ್ತಿ, ೧೯೮೫ರಲ್ಲಿ `ವೇದಗಾನ ಸಾರ್ವಭೌಮ ಪ್ರಶಸ್ತಿ, ೧೯೯೨ರಲ್ಲಿ ಕಾಶಿ ಜಂಗಮವಾಡಿ ಮಠದಿಂದ ಶ್ರೀ ರುದ್ರ ಸಂಗೀತಚಾರ್ಯ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೯ರಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಸಂಗೀತ ರುದ್ರ ವಿಶಾರದ ಪ್ರಶಸ್ತಿ, ೨೦೦೭ರಲ್ಲಿ ಬೀದರ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದಿAದ ಪಂಚಾಕ್ಷರಿ ಪ್ರಶಸ್ತಿ, ೨೦೦೦ರಲ್ಲಿ ಹರಿಯಾಣ ರಾಜ್ಯದ ಪಾಣಿಪತ್ ಪಟ್ಟಣದ ಜೈಮಿನಿ ಅಕಾಡೆಮಿ ಪಾಣಿಪತ್ ವತಿಯಿಂದ ಬಿಸವೀ ಶತಾಬ್ದಿ ರತ್ನ ಸಮ್ಮಾನ್ ಪ್ರಶಸ್ತಿ, ಹಾಗೂ ಹಾರಕೂಡ ಹೀರೆಮಠ ಸಂಸ್ಥಾನದ ವತಿಯಿಂದ ಪೂಜ್ಯ.ಶ್ರೀ. ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು ಗಾನರತ್ನ ಸುಧಾರಕ ಪ್ರಶಸ್ತಿಯು ನೀಡಿ ಗೌರವಿಸಿದರೆ, ೨೦೦೩ರಲ್ಲಿ ಉಜ್ಜಯಿನಿಯ ಪೀಠದಿಂದ ಸಂಗೀತ ರುದ್ರ ವಿಭೂಷಣ ಪ್ರಶಸ್ತಿ, ೨೦೦೬ರಲ್ಲಿ ವೀರಶೈವ ಅರ್ಚಕರ ಮತ್ತು ಪುರೋಹಿತ ಸಂಘದಿAದ ಪುರೋಹಿತ ರತ್ನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೨೦೧೫ರಿಂದ ಗೋರ್ಟಾದ ಶ್ರೀ ಸಂಗೀತ ರುದ್ರೇಶ್ವರ ಸಂಸ್ಥಾನವು ಸಾಹಿತಿ, ಸಂಗೀತಗಾರರು ಮತ್ತು ಸ್ವತಂತ್ರ ಹೋರಾಟಗಾರ ಚಿಂತಕರೊಬ್ಬರಿಗೆ ಪಂ.ವಿರೂಪಾಕ್ಷಯ್ಯ ಸಮ್ಮಾನ್' ಎಂಬ ಇವರ ಹೆಸರಿನ ಪ್ರಶಸ್ತಿಯು ನೀಡಿ ಗೌರವಿಸುತ್ತಿದೆ. ಇವರ ಏಳು ಜನ ಮಕ್ಕಳಲ್ಲಿ ಪ್ರೊ.ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಇವರು ಖ್ಯಾತ ಸಂಗೀತಗಾರರು ಮತ್ತು ಸಾಹಿತಿಗಳಾಗಿದರೆ, ಇನ್ನೊರ್ವರು ಡಾ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಸಾಹಿತಿ ಹಾಗೂ ಬೆಮಳಖೇಡ ಹೀರೆಮಠ ಸಂಸ್ಥಾನದ ಮಠಾಧಿಪತಿಯಾಗಿದ್ದಾರೆ. ಇವರು ೧೯-೫-೨೦೧೨ರಲ್ಲಿ ಲಿಂಗೈಕ್ಯರಾಗಿದ್ದು ಬೀದರ ಜಿಲ್ಲೆಯ ಕನ್ನಡ ಸಾಹಿತ್ಯ ಹಾಗೂ ಸಂಗೀತಕ್ಕೆ ತುಂಬಲಾರದ ನಷ್ಟವಾಗಿದೆ.