ಶುಕ್ರವಾರ, ಜನವರಿ 10, 2025
ಡಾ.ವಿಜಯಕುಮಾರ ಎಂ. ದೇವಪ್ಪಾ
ಸಾಹಿತಿ ಡಾ.ವಿಜಯಕುಮಾರ ಎಂ.ದೇವಪ್ಪಾ. ರವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಮಲ್ಲಿಕಾರ್ಜುನ ದೇವಪ್ಪಾ ಮತ್ತು ಗುರಮ್ಮಾ ದಂಪತಿಗಳಿಗೆ ದಿನಾಂಕ ೨೧-೨-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಇ (ಸಿವಿಲ್) ಪಧವಿಧರರಾದ ಇವರು ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಆರ್.ಡಿ.ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಿತದ್ದು ಇಂಜಿನಿಯರಿAಗ್ ಪದವಿಯಾದರು, ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೬ರಲ್ಲಿ `ಚಲನೆ' ೨೦೧೭ರಲ್ಲಿ `ಜೀವ ಸೇಲೆ' (ಕವನ ಸಂಕಲನಗಳು) ೨೦೧೫ರಲ್ಲಿ `ಮಳೆಕೊಯ್ಲು' (ಲೇಖನ) ೨೦೧೬ರಲ್ಲಿ `ರಜಾಕಾರರ ಹಾವಳಿ ಮತ್ತು ಮುಚಳಂಬಿ ಗ್ರಾಮ' ೨೦೧೮ರಲ್ಲಿ `ಮುಚಳಂಬಿ ಒಂದು ಐತಿಹಾಸಿಕ ಗ್ರಾಮ' (ಐತಿಹಾಸಿಕ) ಎಂಬ ಕೃತಿಗಳು ರಚಿಸಿದ್ದಾರೆ. ಹಾಗೂ ಎಸ್.ಜಿ.ಮೇಳಕುಂದಿಯವರ ಕುರಿತು `ಶಿವರುದ್ರ' ಎಂಬ ಅಭಿನಂದನಾ ಗ್ರಂಥವು ಹೊರತಂದಿದ್ದಾರೆ. ಇವರ ಬರಹಗಳು ಬೀದರದ ಜನದನಿ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಇವರ `ಮುಚಳಂಬಿ ಒಂದು ಐತಿಹಾಸಿಕ ನೋಟ' ಎಂಬ ಕೃತಿಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀಗಳು `ಉತ್ತಮ ಲೇಖಕರು’ ಎಂಬ ಗೌರವ ಸನ್ಮಾನವು ಮಾಡಿ ಸತ್ಕಾರಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ