ಹುಮನಾಬಾದ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಹುಮನಾಬಾದ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಸೋಮವಾರ, ಜನವರಿ 20, 2025
ರಮೇಶ ಸ್ವಾಮಿ ಕನಕಟ್ಟಾ
ಸಾಹಿತಿ ರಮೇಶ ಸ್ವಾಮಿ ಕನಕಟ್ಟಾ, ರವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಕನಕಟ್ಟಾ ಗ್ರಾಮದ ಕಾರ್ತಿಕ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ 1-6-1963ರಲ್ಲಿ
ಜನಿಸಿದ್ದಾರೆ. ಡಿಪ್ಲೊಮಾ ಇನ್ ಎಲೆಕ್ನಿಕಲ್ ಇಂಜಿನಿಯರಿಂಗ್, ಮತ್ತು ಎಂ.ಎ.ಪತ್ರಿಕೋದ್ಯಮ ಪದವಿಧರರಾಗಿದ್ದು, 1983ರಲ್ಲಿ ಜೇವರ್ಗಿಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ ಇವರು ಸದ್ಯ ಬೀದರಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, 2011 ರಲ್ಲಿ 'ವಚನಕ್ಕೊಂದು ಕತೆ', 'ಶ್ರಾವಣ ಸಂಪದ', 2014ರಲ್ಲಿ 'ಸಂಸಾರದಲ್ಲಿ ಸದ್ಧತಿ, 'ಅನುಭವ ಮಂಟಪದಲ್ಲಿ ಸಿದ್ದರಾಮ' 2015ರಲ್ಲಿ 'ಗುರು ಕರುಣೆ, `ಅಕ್ಕನ ದರ್ಶನ' 2016ರಲ್ಲಿ 'ಜೀವನ ದರ್ಶನ', 2017ರಲ್ಲಿ 'ಬಸವದರ್ಶನ', 'ವಚನಾಮೃತಧಾರೆ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರ 'ಬಸವ ದರ್ಶನ' ಕೃತಿಗೆ 2017ರಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಉತ್ತಮ ಪುಸ್ತಕ ಪ್ರಶಸ್ತಿಯು ಲಭಿಸಿದೆ.
ಬಿ.ಬಿ.ಪೂಜಾರಿ
`ಕನ್ನಡದ ಪೂಜಾರಿ' ಎಂದು ಕನ್ನಡ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಪ್ರಾಧ್ಯಾಪಕರಾಗಿ, ಕವಿ,ಸಾಹಿತಿ, ಲೇಖಕರಾಗಿ ಖ್ಯಾತರಾದ ಹಿರಿಯ ಸಾಹಿತಿಯೆಂದರೆ ಡಾ. ಬಿ.ಬಿ.ಪೂಜಾರಿಯವರು. ಇವರು ಬೀದರ ಜಿಲ್ಲೆ ಹುಮನಾಬಾದಿನ ಶ್ರೀ ಬಂಡೆಪ್ಪ ಮತ್ತು ವೀರಮ್ಮ ದಂಪತಿಗಳಿಗೆ ದಿನಾಂಕ 1-8-1959ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವಿಧರರಾದ ಇವರು 1986ರಿಂದ ಮಹಾರಾಷ್ಟ್ರ ಸೊಲ್ಲಾಪುರದ ಸಂಗಮೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾಗಿದ್ದು, ಮತ್ತು 2020ರಿಂದ ಕರ್ನಾಟಕ ಕೇಂದ್ರೀಯ
ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕತೆ, ಕವನ, ಹನಿಗವನ, ಲೇಖನ, ಪ್ರಬಂಧ ಮೊದಲಾದ ಬರಹಗಳು ಬರೆದ ಇವರು 'ಮೂರು ಬಣ್ಣ ನೂರು ಕವನ, ನಮ್ಮ ದನಿಗೆ ನಿಮ್ಮ ದನಿ, ಜನಮನ ಗೆದ್ದವರು, ಚಿಟ್ಟೆ ಬಂತು ಚಿಟ್ಟೆ, ಮುಕುಂದೂರು ಸ್ವಾಮಿ, ಕರ್ಮಯೋಗಿ, ಗಂಗಮ್ಮನ ಬೋರ್.' ಎಂಬಿತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು 10ವರ್ಷ ಮಹಾರಾಷ್ಟ್ರ ರಾಜ್ಯದ ಕನ್ನಡ ಪಠ್ಯ ಪುಸ್ತಕ ಮಂಡಳಿಯ ಸದಸ್ಯರಾಗಿ, ಶಿವಾಜಿ ಮತ್ತು ಸೊಲ್ಲಾಪುರ ವಿಶ್ವ ವಿದ್ಯಾಲಯದ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಏಳು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಇವರಿಗೆ ದರ್ಶನ ರತ್ನ, ಗಡಿ ಕನ್ನಡ ವೀರ, ಮಿನಿ ಕವಿತೆಗಳ ಸರದಾರ.
ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಸಂಗಮ್ಮ ಚ.ಬಮ್ಮಣಿ
ಸಾಹಿತಿ ಸಂಗಮ್ಮ ಚ. ಬಮ್ಮಣಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ವಿಠಲರಾವ ಜೂಜಾ ಮತ್ತು ತೋಟಮ್ಮಾ ದಂಪತಿಗಳಿಗೆ ದಿನಾಂಕ 1-6-
1973 ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ.ಎ. ಸಮಾಜ ಶಾಸ್ತ್ರ, ಎಂ.ಎ. ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದ ವಿಧರರಾದ ಇವರು 1997 ರಲ್ಲಿ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಹಲವಾರು ವರ್ಷ ಸೇವೆ ಸಲ್ಲಿಸಿದ ಇವರು ಸದ್ಯ ಹಳ್ಳಿಖೇಡ (ಕೆ) ಗ್ರಾಮದ ಪ್ರೌಢ ಶಾಲೆಯ ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿದ್ಯಾರ್ಥಿಯಾಗಿದಾಗಲೆ ಕತೆ ಕವನ ಲೇಖನ ಪ್ರಬಂಧ ಚುಟುಕುಗಳನ್ನು ಬರೆಯುವ ಗೀಳು ಬೆಳೆಸಿಕೊಂಡು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ, 2015 ರಲ್ಲಿ 'ಅರಳುವ ಪ್ರತಿಭೆ' ಎಂಬ ವ್ಯಕ್ತಿತ್ವ ವಿಕಸನದ ಕೃತಿಯೊಂದು ಹೊರತಂದು 2017 ರಲ್ಲಿ 'ಮಹಾತಾಯಿ' ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ 2017ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2018 ರಲ್ಲಿ ಪರಿಸರ ವಾಹಿನಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಮಹಾನಂದಾ ಬಿರಾದಾರ
ಯುವ ಕವಯತ್ರಿಯಾದ ಮಹಾನಂದಾ ಬಿರಾದಾರ ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ಜಗನ್ನಾಥ ಮತ್ತು ಗೌರಮ್ಮ ದಂಪತಿಗಳ ಪುತ್ರಿಯಾಗಿದ್ದು ಇವರು ಅಫಜಲಪೂರದ ಪ್ರಕಾಶ ಜೈನರವರ ಧರ್ಮಪತ್ನಿಯಾಗಿದ್ದಾರೆ. ಬಿ.ಎ., ಡಿ.ಎಡ್ ಪದವಿಧರರಾದ ಇವರು 'ಹೊಂಗಿರಣ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಸದ್ಯ ಇವರು ಅಫಜಲಪೂರದಲ್ಲಿ ವಾಸವಾಗಿದ್ದಾರೆ.
ಸಂಗಪ್ಪಾ ತೌಡಿ
ಯುವ ಸಾಹಿತಿ ಸಂಗಪ್ಪಾ ತೌಡಿಯವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಚಂದ್ರಪ್ಪ ತೌಡಿ ಮತ್ತು ಭಾರತಿ ತೌಡಿ ದಂಪತಿಗಳಿಗೆ ದಿನಾಂಕ ೧-೬-೧೯೯೨ರಲ್ಲಿ ಜನಿಸಿದ್ದಾರೆ. ಎಂ,ಎ, ಸ್ನಾತಕೊತ್ತರ ಪದವಿ ಪಡೆದ ಇವರು ಪಿ.ಎಚ್,ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು `ಭಾವ ಚಿಗುರು' ಮತ್ತು `ಅವ್ವನಿಗೆ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಲೇಖನ ಸಂಶೋಧನಾ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ `ಮನೆಗೊಂದು ಗೊಂದಲದ ಹಾಡು' ಎಂಬ ಕತೆ ಕ್ರೈಸ್ತ ಟು ಬಿ ಯುನಿವರ್ಸಿಟಿಯಿಂದ ಅ.ನ.ಕೃ. ಪ್ರಶಸ್ತಿ ಪಡೆದಿದೆ. ಮತ್ತು ದ.ರಾ ಬೇಂದ್ರೆ ಶೃತಿ ಅಂತರರಾಜ್ಯ ಮಟ್ಟದ ಕಾಲೇಜು ಕಾವ್ಯ ಸ್ವರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮತ್ತು ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದು, ಮತ್ತು ರಾಜ್ಯ ಮಟ್ಟದ ಕಥೆ, ಕಾವ್ಯ, ಗಜಲ್, ಕಾದಂಬರಿ ಕಮ್ಮಟಗಳಲ್ಲಿಯೂ ಪಾಲ್ಗೊಂಡಿದ್ದಾರೆ.
ಪ್ರಿಯಾ ಲಂಜವಾಡಕರ್
ಉದಯೋನ್ಮುಖ ಕಾದಂಬರಿಗಾರ್ತಿ ಪ್ರಿಯಾ ಲಂಜವಾಡಕರ್. ಇವರು ಬೀದರ ಜಿಲ್ಲೆ ಹುಮನಾಬಾದಿನ ಮಾರುತಿರಾವ ಮತ್ತು ಸುಮಂಗಲಾ ದಂಪತಿಗಳಿಗೆ ದಿನಾಂಕ ೧-೪-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಎಂ.ಎ. ಬಿ,ಇಡಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕಾದಂಬರಿ ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಇವರು ಮುಂದೆ ಸ್ವತಃ ಕಾದಂಬರಿ ಬರೆದು ೨೦೧೫ರಲ್ಲಿ `ತಲ್ಲಣಿಸದಿರು...’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ಬೀದರದ `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಸೇರಿದಂತೆ ಕನ್ನಡದ ಕೆಲ ಸ್ಥಳಿಯ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದ ವತಿಯಿಂದ ಸಿದ್ಧಾರ್ಥ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ಮಂಗಳವಾರ, ಜನವರಿ 14, 2025
ಡಾ.ಬಂಡೆಪ್ಪಾ ಕಾಳಗಿ.
ಹಿರಿಯ ತಲೆಮಾರಿನ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕಗಳು ಪ್ರಕಟಿಸಿದ ಲೇಖಕರೆಂದರೆ, ಡಾ.ಬಂಡೆಪ್ಪಾ ಕಾಳಗಿ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ನಂದಗಾAವ ಗ್ರಾಮದ ಶ್ರೀ ಭೀಮಣ್ಣಾ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೪-೪-೧೯೫೪ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾಗಿ ೧೯೮೨ ರಿಂದ ೧೯೮೭ ರವರೆಗೆ ಬೀದರದ ಅಂಬೇಡ್ಕರ ಪ.ಪೂ.ಕಾಲೇಜು, ಬಿ.ವಿ.ಬಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಂತರ ೧೯೮೭ ರಲ್ಲಿ ಬಸವಕಲ್ಯಾಣದ ಎಸ್.ಎಸ್.ಕೆ.ಬಿ.ಕಾಲೇಜಿನ ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೧೪ರಲ್ಲಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಹನಿಗವನ,ಲೇಖನ ಬರಹಗಳು ಬರೆದು ೧೯೯೪ರಲ್ಲಿ `ಸಂಘಟನೆಯ ಸಾಫಲ್ಯ’ ಎಂಬ ಲೇಖನ ಸಂಕಲನ ೨೦೦೪ರಲ್ಲಿ `ವೃಕ್ಷ ಗಂಗಾ' ಎಂಬ ಕವನ ಸಂಕಲನ, ಮತ್ತು ೨೦೦೭ರಲ್ಲಿ `ದಿ.ಶೇಡ್ಯೂಲ್ಡ ಟ್ರಬ್ಸ ಇನ್ ಟ್ರಾನಸಿಷನ್’ ಎಂಬ ಮೂರು ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ೨೦೦೪ರಲ್ಲಿ ಬಸವಕಲ್ಯಾಣದ ಕಸಾಪ ಪದಾಧಿಕಾರಿಯಾಗಿ ಲಾಯನ್ಸ ಕ್ಲಬನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ಬಸವಕಲ್ಯಾಣದ ತ್ರೀಪೂರಾಂತದಲ್ಲಿ ತಮ್ಮ ವಿಶ್ರಾಂತಿ ಜೀವನದೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ. ಇವರ ಕುರಿತು ೨೦೧೭ರಲ್ಲಿ ಕನ್ನಡ ಮತ್ತು ಸಾಂಸ್ಕಿçತಿಕ ಇಲಾಖೆ ಬೀದರ ರವರು `ಕವಿ ಮನಸ್ಸಿನ ಸಮಾಜ ಶಾಸ್ತçಜ್ಞ ಡಾ.ಬಂಡಪ್ಪ ಭೀಮಣ್ಣ ಕಾಳಗಿ’ ಎಂಬ ಸಾಕ್ಷö್ಯ ಚಿತ್ರವು ನಿರ್ಮಿಸಿದ್ದಾರೆ.
ಶನಿವಾರ, ಜನವರಿ 11, 2025
ಡಾ.ಚಿದಾನಂದ ಚಿಕ್ಕಮಠ
ಉದಯೋನ್ಮುಖ ಬರಹಗಾರ ಡಾ.ಚಿದಾನಂದ ಚಿಕ್ಕಮಠ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶ್ರೀ ಗಂಗಾಧರಯ್ಯ ಚಿಕ್ಕಮಠ ಮತ್ತು ಶ್ರೀಮತಿ ಸಂಗಮ್ಮ ದಂಪತಿಗಳಿಗೆ ದಿನಾಂಕ ೧೧-೧೦-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ೨೦೧೮ರಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ, ಸೇವೆ ಸಲ್ಲಿಸುತ್ತಿದ್ದಾರೆ. `ಕಿನ್ನರಿ ಬ್ರಹ್ಮಯ್ಯ-ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ವಚನ ಸಾಹಿತ್ಯ, ವೀರಶೈವ ಸಾಹಿತ್ಯ, ನಡುಗನ್ನಡ, ಹಸ್ತಪ್ರತಿ,ಗ್ರಂಥ ಸಂಪಾದನೆ ಕಾರ್ಯದಲ್ಲಿ ಆಸಕ್ತರಾಗಿ ೨೦೧೮ರಲ್ಲಿ `ಕಿನ್ನರಿ ಬ್ರಹ್ಮಯ್ಯ ಕೆಲವು ಒಳನೋಟಗಳು’ ಮತ್ತು ೨೦೧೯ರಲ್ಲಿ `ಕಿನ್ನರಿ ಬ್ರಹ್ಮಯ್ಯ’ ಎಂಬ ಈ ಕೃತಿಗಳು ೧೨ನೇ ಶತಮಾನದ ಶರಣ ಕಿನ್ನರಿ ಬೊಮ್ಮಯ್ಯನ ಕುರಿತು ಬರೆದಿದ್ದಾರೆ. ಮತ್ತು ೨೦೧೯ರಲ್ಲಿ `ನಿರಂಜನ ಪ್ರಭೆ' ಮತ್ತು `ಭವ್ಯ ಮಾನವ ಸಂಗ್ರಹ' ಮತ್ತಿತರ ಕೃತಿಗಳು ಸಂಪಾದಿಸಿದ್ದಾರೆ. ಇವರ `ಭವ್ಯ ಮಾನವ' ಕೃತಿಯು ಕಲಬುರಗಿ ಶ್ರೀ ಶರಣ ಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಮುದ್ರಣದಗೊಂಡಿದೆ. ಇವರು ವಿಶ್ವವಿದ್ಯಾಲಯ ಅಭ್ಯಾಸ ಮತ್ತು ಪರೀಕ್ಷಾ ಮಂಡಳಿಗಳ ಸದಸ್ಯರಾಗಿ, ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿಯು ಕಾರ್ಯನಿರ್ವಹಿಸುತ್ತಿದ್ದು, ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೯ರಲ್ಲಿ ಹಳ್ಳಿಖೇಡ (ಕೆ) ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಸಂಗಪ್ಪಾ ತೌಡಿ
ಯುವ ಸಾಹಿತಿ ಸಂಗಪ್ಪಾ ತೌಡಿಯವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಚಂದ್ರಪ್ಪ ತೌಡಿ ಮತ್ತು ಭಾರತಿ ತೌಡಿ ದಂಪತಿಗಳಿಗೆ ದಿನಾಂಕ ೧-೬-೧೯೯೨ರಲ್ಲಿ ಜನಿಸಿದ್ದಾರೆ. ಎಂ,ಎ, ಸ್ನಾತಕೊತ್ತರ ಪದವಿ ಪಡೆದ ಇವರು ಪಿ.ಎಚ್,ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು `ಭಾವ ಚಿಗುರು' ಮತ್ತು `ಅವ್ವನಿಗೆ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಲೇಖನ ಸಂಶೋಧನಾ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ `ಮನೆಗೊಂದು ಗೊಂದಲದ ಹಾಡು' ಎಂಬ ಕತೆ ಕ್ರೈಸ್ತ ಟು ಬಿ ಯುನಿವರ್ಸಿಟಿಯಿಂದ ಅ.ನ.ಕೃ. ಪ್ರಶಸ್ತಿ ಪಡೆದಿದೆ. ಮತ್ತು ದ.ರಾ ಬೇಂದ್ರೆ ಶೃತಿ ಅಂತರರಾಜ್ಯ ಮಟ್ಟದ ಕಾಲೇಜು ಕಾವ್ಯ ಸ್ವರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮತ್ತು ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದು, ಮತ್ತು ರಾಜ್ಯ ಮಟ್ಟದ ಕಥೆ, ಕಾವ್ಯ, ಗಜಲ್, ಕಾದಂಬರಿ ಕಮ್ಮಟಗಳಲ್ಲಿಯೂ ಪಾಲ್ಗೊಂಡಿದ್ದಾರೆ.
ಪೀರಪ್ಪ ಸಜ್ಜನ.
ಯುವ ಸಾಹಿತಿ ಪೀರಪ್ಪ ಸಜ್ಜನ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೋರಂಪಳ್ಳಿ ಗ್ರಾಮದ ಭೂಷಣ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩೧-೭-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾದ ಇವರು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ವಿದ್ಯಾರ್ಥಿಯಾಗಿರುವಾಗಲೆ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ೨೦೧೪ರಲ್ಲಿ `ಬೀದರ ಜಿಲ್ಲಾ ದಲಿತ ಸಾಹಿತ್ಯ' ೨೦೧೮ರಲ್ಲಿ `ಸಮಾಜ ಮುಖಿ ಮಂಥನ'. ೨೦೧೯ರಲ್ಲಿ `ಮಹಿಳಾ ಬೆಳಕು ಡಾ.ಬಿ.ಆರ್.ಅಂಬೇಡ್ಕರ್' ಎಂಬ ಲೇಖನ ಕೃತಿಗಳು, ೨೦೧೯ `ಸಮರಸ ಜೀವಿ' ಎಂಬ ಸಂಪಾದಿತ ಕೃತಿಯು ಪ್ರಕಟಿಸಿದ್ದಾರೆ. ಇವರ `ಸಮಾಜ ಮುಖಿ ಮಂಥನ' ಮತ್ತು `ಬೀದರ ಜಿಲ್ಲೆಯ ದಲಿತ ಸಾಹಿತ್ಯ' ಈ ಎರಡು ಕೃತಿಗಳು ಪುಸ್ತಕ ಅಭಿವೃದ್ಧಿ ಪ್ರಾಧಿಕಾರದಿಂದ ಚೊಚ್ಚಿಲ ಕೃತಿ ಹಾಗೂ ದಲಿತ ಯುವ ಲೇಖಕರಿಗೆ ನೀಡುವ ಯೋಜನೆಯ ಅನುದಾನ ಪಡೆದು ಮುದ್ರಣಗೊಂಡಿವೆ. ಇವರು ಬರೆದ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಹಲವಾರು ವಿಷಯಗಳ ಮೇಲೆ ಪ್ರಬಂಧ ಮಂಡಿಸಿದ್ದಾರೆ.
ಪ್ರವೀಣಕುಮಾರ ಕಲ್ಬುರ್ಗಿ
ಉದಯೋನ್ಮುಖ ಬರಹಗಾರ ಪ್ರವೀಣಕುಮಾರ ಕಲ್ಬುರ್ಗಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದ ಈಶ್ವರ ಮತ್ತು ರಾಚಮ್ಮ ದಂಪತಿಗಳಿಗೆ ದಿನಾಂಕ ೨೦-೧-೧೯೮೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ.ಸ್ನಾತಕೋತ್ತರ ಪದವಿ ಹಾಗೂ ನೆಟ್ ಪರೀಕ್ಷೆಯು ಪಾಸು ಮಾಡಿದ ಇವರು ಹುಮನಾಬಾದಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿಯನ್ನು ಬೆಳೆಸಿಕೊಂಡಿದ್ದರಿAದ ಅವರ ಅಜ್ಜನವರಾದ ಹಿರಿಯ ಸಾಹಿತಿ ಬಿ.ಎಸ್.ಖೂಬಾ ರವರ ಪ್ರೇರಣೆಯಿಂದ ೨೦೧೧ರಲ್ಲಿ `ಕಾವ್ಯ ಸಂಭ್ರಮ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರು ಹಲವಾರು ಬಿಡಿ ಲೇಖನಗಳು, ನೂರಾರು ಕವನ,ಆಧುನಿಕ ವಚನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೊಷ್ಠಿಗಳಲ್ಲಿಯು ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ಶಕೀಲ್ ಐ.ಎಸ್.
ಸಾಹಿತಿ ಶಕೀಲ್ ಐ.ಎಸ್. ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಖೇಣಿ ರಂಜೋಳ ಗ್ರಾಮದ ಎಕ್ಬಾಲ್ ಸಾಬ್ ಸಿದ್ದೇಸೂರವಾಲೆ, ಮತ್ತು ಶಹನಾಜ್ ಬೇಗಂ ಎಂಬ ದಂಪತಿಗಳಿಗೆ ದಿನಾಂಕ ೩-೬-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಪದವಿವರೆಗೆ ಅಧ್ಯಯನ ಮಾಡಿದ ಇವರು ೨೦೦೫ರಲ್ಲಿ ಪೋಲಿಸ್ ಪೆದೆಯಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಅಭಿವೃದ್ಧಿ ಪಥ', 'ಕರ್ನಾಟಕ ಇತಿಹಾಸ, `ಹುಮನಾಬಾದ ತಾಲೂಕು ಇತಿಹಾಸ' ಎಂಬ ಲೇಖನ ಕೃತಿಗಳು, `ಮೂರು ನಾಟಕಗಳು' ಎಂಬ ನಾಟಕ ಕೃತಿಯು ರಚಿಸಿ ಪ್ರಕಟಿಸಿದ್ದಾರೆ. `ಭ್ರಷ್ಟಾಚಾರ ದೇಹಕ್ಕೂ ಮಾರಕ' ಎಂಬ ನಾಟಕ ಕಿರುಚಿತ್ರವಾಗಿ ತಯಾರಿಸಿ ಪುಣೆಯಲ್ಲಿ ನಡೆಯುವ ಕಿರುಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. `ಬೀದರ ಜಿಲ್ಲೆಯ ಸೂಫಿಗಳು' ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. `ನಳದಮಯಂತಿ' ಇದು ಪೌರಾಣಿಕ ಕತೆಯಾದರೆ . `ಗರ್ಭಕೋಶದಲ್ಲಿ ಮಹಾಯುದ್ಧ' (ಕಥಾಸಂಕಲನ) `ಧರಿನಾಡಿನ ಗಂಡುಗಲಿ '(ವ್ಯಕ್ತಿಚಿತ್ರಣ) ಇವು ಅವರ ಅಪ್ರಕಟಿತ ಕೃತಿಗಳಾಗಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ವಿವಿಧ ಕನ್ನಡಪರ ಸಂಘ ಸಂಸ್ಥೆಯವರು `ಕನ್ನಡ ರತ್ನ' `ಕಲ್ಯಾಣ ಚನ್ನಶ್ರೀ, ಕನ್ನಡ ಕಠಿರವ, ಸಾಹಿತ್ಯ ಚೂಡಾಮಣಿ, ಧರಿರತ್ನ, ಯುವಶಕ್ತಿ ಕಲಾ ಶ್ರೀ, ಸಿದ್ದಾರ್ಥ’ ಎಂಬ ಪ್ರಶಸ್ತಿಗಳು ಹಾಗೂ ಪೋಲಿಸ್ ಇಲಾಖೆಯಲ್ಲಿ ಇವರ ಕಾರ್ಯ ಸಾಧನೆಗೆ ಮೆಚ್ಚಿ ಸಾಕಷ್ಟು ಸಲ ಬಹುಮಾನಗಳು ನೀಡಿ ಗೌರವಿಸಿದ್ದಾರೆ. ಇವರು ಸೂಫಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ, ಮಾಣಿಕ ಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಯಾಗಿ, ಬೀದರ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ರತ್ನಾಕರ್ ಡಿ.ಹೊಸಮನಿ
ಯುವ ಸಾಹಿತಿ ಡಾ.ರತ್ನಾಕರ್ ಡಿ.ಹೊಸಮನಿಯವರು. ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಉಡಮನಳ್ಳಿ ಗ್ರಾಮದ ದೇವಿಂದ್ರ ಮತ್ತು ಸಮವ್ವ ದಂಪತಿಗಳಿಗೆ ದಿನಾಂಕ ೨-೭-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ (ಇತಿಹಾಸ). ಬಿ.ಎಡ್. ಪಿ.ಎಚ್.ಡಿ. ಪಿ.ಡಿ.ಎಫ್.ಪದವಿಧರರಾಗಿದ್ದು, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಬೀದರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು' (ಐತಿಹಾಸಿಕ) `ದೇವರಾಜ ಅರಸು' (ಚರಿತ್ರೆ) `ಕರ್ನಾಟಕ ಅರಚಿಟೆಚರ್ ಬೀದರ' ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರಿಗೆ ಇಂಡಿಯನ್ ಕೌನ್ಸಿಲ್ ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ ನವದೆಹಲಿಯಿಂದ ೨೦೧೮ರಲ್ಲಿ ಸಂಶೋಧನಾ ಶಿಷ್ಯ ವೇತನ ಪ್ರಶಸ್ತಿ, ಮತ್ತು ಯುಜಿಸಿ ನವದೆಹಲಿಯಿಂದ ಉನ್ನತ ಸಂಶೋಧಕ ಪ್ರಶಸ್ತಿ, ಹಾಗೂ ೨೦೧೯ರಲ್ಲಿ ಡಾ.ಅಂಬೇಡ್ಕರ್ ರಾಷ್ಟ್ರೀಯ ಶಿಷ್ಯ ವೇತನ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ಪ್ರಜಾ ರಾಜ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಸಿಂಧೆ ರಾಜಕುಮಾರ ಎ
.
ಯುವ ಸಾಹಿತಿ ಸಿಂಧೆ ರಾಜಕುಮಾರ ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೊರಂಪಳ್ಳಿ ಗ್ರಾಮದ ಅಣ್ಣಾರಾವ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೮-೮-೧೯೮೧ರಲ್ಲಿ ಜನಿಸಿದ್ದಾರೆ. ಇವರು `ಮನದಾಳದ ಮುತ್ತುಗಳು' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಮತ್ತು ಇವರು ಬೀದರದ ಖಾಸಗಿ ಬಿ.ಎಡ್ ಪದವಿ ಮಹಾವಿದ್ಯಾಲಯವೊಂದರ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುತ್ತಿದ್ದು, ಇವರ ಕವನ, ಲೇಖನ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಸಾಹಿತ್ಯಿಕ ಕಾರ್ಯಕ್ರಮ ಹಾಗೂ ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿ, ಉಪನ್ಯಾಸವು ನೀಡಿದ್ದಾರೆ.
ಸುನಿತಾ ಎಸ್. ಪಾಟೀಲ
ಕವಯತ್ರಿ ಸುನೀತಾ ಎಸ್.ಪಾಟೀಲ. ಇವರು ಬಸವಕಲ್ಯಾಣದ ಉಮಾಕಾಂತ ಹಾಗೂ ಮಹಾದೇವಿ ದಂಪತಿಗಳಿಗೆ ದಿನಾಂಕ ೧೫-೦೩-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಎಡ್ ಎಂ.ಎ. ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಕಂದಗುಳ್ ಗ್ರಾಮದ ಶಂಭುಲಿAಗ ಪೋಲಿಸ್ ಪಾಟೀಲ್ ರವರ ಧರ್ಮ ಪತ್ನಿಯಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕಾಲೇಜು ದಿನಗಳಲ್ಲಿ ಸುನೀತಾ ಅಂಬಲಗೆ ಎಂಬ ಹೆಸರಿನಲ್ಲಿ ಕವನ ರಚನೆ ಮಾಡಿ ಸಾಹಿತಿಯಾಗಿ ಗುರುತಿಸಿಕೊಂಡವರು. ೨೦೦೮ರಲ್ಲಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿದ ನಂತರ ಸುನೀತಾ ಎಸ್,ಪಾಟೀಲ್ ಎಂಬ ಹೆಸರಿನಲ್ಲಿ `ಕಂದಗೂಳದ ಕುಂದನ ಹರಳು' ಎಂಬ ಕೃತಿಯನ್ನು ರಚಿಸಿ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಕತೆ ಕವನ ಲೇಖನಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕಲಬುರಗಿ ವಿಭಾಗ ಮಟ್ಟದ `ಸಾಧಕ ಶಿಕ್ಷಕಿ' ಹಾಗೂ `ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ.
ಡಾ.ರೂತಾ ಪ್ರಭುರಾವ
ಕವಯತ್ರಿ ಡಾ.ರೂತಾ ಪ್ರಭುರಾವ ರವರು ಬೀದರ ಜಿಲ್ಲೆ ಹಮನಾಬಾದಿನ ಶಿವರಾಮ ಮತ್ತು ತುಳಸಮ್ಮಾ ದಂಪತಿಗಳಿಗೆ ದಿನಾಂಕ ೯-೧೨-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫಿಲ್. ಪಿಎಚ್.ಡಿ. ವಚನ ಡಿಪ್ಲೋಮಾ. ನೆಟ್. ಪದವಿಧರರಾದ ಇವರು ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೦೭ರಲ್ಲಿ `ವಸಂತ ಕುಷ್ಟಗಿಯವರ ಬದುಕು ಬರಹ’ ಎಂಬ ಕೃತಿ ಪ್ರಕಟಿಸಿದ್ದಾರೆ. ಇವರು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ `ಕನಕ ಸಿರಿ' ಮತ್ತು `ಡಾ.ಬಿ.ಆರ್.ಅಂಬೇಡ್ಕರ' ಪ್ರಶಸ್ತಿಗಳು ಲಭಿಸಿವೆ. ಇವರು ಹುಮನಾಬಾದ ತಾಲೂಕಿನ ವಿಶ್ವ ವಚನ ಫೌಂಡೇಷನ್ ಮತ್ತು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಶಿವರಾಜ ಮೇತ್ರೆ
ಸಾಹಿತಿ ಶಿವರಾಜ ಮೇತ್ರೆಯವರು. ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ತಾಳಮಡಗಿ ಗ್ರಾಮದ ದವಲಪ್ಪಾ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೨೨-೭-೧೯೭೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ಶಿಕ್ಷಣ ಪಡೆದು ೨೦೦೨ರಿಂದ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ದುಮ್ಮನಸೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೯ರಲ್ಲಿ `ಕಾವ್ಯ ಬುಗ್ಗೆ' (ಕವನ ಸಂಕಲನ) ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬೆಂಗಳೂರಿನ ವಿಶ್ವ ವಚನ ಟ್ರಸ್ಟ್ ವತಿಯಿಂದ `ಚಿನ್ಮಯ ಜ್ಣಾನಿ ಪ್ರಶಸ್ತಿ, ಬೀದರಿನ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕವಿಜ್ಯೋðತಿ ಪ್ರಶಸ್ತಿ, ಭಾರತದ ಸೇವಾದಲ ಸಹಾಯಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ, ಸದ್ಯ ಇವರು ಹುಮನಾಬಾದ ತಾಲ್ಲೂಕಿನ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಪ್ರಥಮ ಹುಮನಾಬಾದ ದಲಿತ ತಾಲೂಕಾ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ನಡೆಸಿದ್ದಾರೆ.
ದಿ.ಶಿವಕುಮಾರ ಎಂ.ಲಕ್ಕಾ
ಸಾಹಿತಿ ಶಿವಕುಮಾರ ಎಂ.ಲಕ್ಕಾ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶ್ರೀ ಮಹಾರುದ್ರಪ್ಪ ಮತ್ತು ಶ್ರೀಮತಿ ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೭೪ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಕೋರ್ಸ್ನ್ನು ಪಡೆದ ಇವರು ಬಸವಕಲ್ಯಾಣದ ಶ್ರೀ ಶರಣ ಬಸವೇಶ್ವರ ಖೂಬಾ ಜೆ.ಒ.ಸಿ ಕಾಲೇಜಿನಲ್ಲಿ ಲ್ಯಾಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರಿಗೆ ವರ್ಗಾವಣೆಗೊಂಡು ಕೆಲ ವರ್ಷಗಳ ನಂತರ ಅಂದರೆ ದಿನಾಂಕ ೨೯-೧೦-೨೦೧೫ರಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಇವರು ೨೦೦೪ರಲ್ಲಿ `ಮೊಗ್ಗು ಅರಳಿದಾಗ' ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮೊಗ್ಗಾಗಿ ಅರಳುವ ಹೊತ್ತಿನಲ್ಲಿಯೆ ಉದುರಿ ಹೊಂದದ್ದು ತುಂಬ ನೋವಿನ ಸಂಗತಿಯಾಗಿದೆ. ಬದುಕಿನುದ್ದಕ್ಕೂ ಕವನ, ಲೇಖನ, ಹನಿಗವನ ಬರಹಗಳಲ್ಲಿ ತಲ್ಲಿನರಾಗುತ್ತಿದ್ದ ಅವರು ಹಲವಾರು ಕವಿಗೊಷ್ಠಿಯಲ್ಲಿ ಭಾಗವಹಿಸಿ ಪರಿಚಿತರಾಗಿದ್ದರು.
ಡಾ.ಜಗದೇವಿ ತಿಬಶೆಟ್ಟಿ
ಕವಯತ್ರಿ ಡಾ.ಜಗದೇವಿ ತಿಬಶೆಟ್ಟಿಯವರು. ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವಣಪ್ಪ ಮತ್ತು ಗೋದಾವರಿ ದಂಪತಿಗಳಿಗೆ ದಿನಾಂಕ ೧೭-೯-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಪಿ.ಎಚ್.ಡಿ. ನೆಟ್. ಪದವಿಧರರಾದ ಇವರು ಕೆಲ ವರ್ಷ ವಿವಿಧ ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಹಾಲಹಳ್ಳಿಯ ಜ್ನಾನ ಕಾರಂಜಿ ಪಿ.ಜಿ.ಸೆಂಟರ್ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೆ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು `ಅನರ್ಘ್ಯ ರತ್ನ' (ಲೇಖನ ಸಂಕಲನ) ಮತ್ತು `ಸೋಮನಾಥ ಯಾಳವಾರ' (ಜೀವನ ಚರಿತ್ರೆ) `ಶರಣರ ದಾಂಪತ್ಯ ದರ್ಶನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬಹುತೇಕ ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಕಸಾಪ ಸಮ್ಮೇಳನಗಳಲ್ಲಿ ಪಾಲ್ಗೊಂಡು ಹಲವು ಪ್ರಬಂಧಗಳನ್ನು ಮಂಡಿಸಿ ಉಪನ್ಯಾಸವು ನೀಡಿದ್ದಾರೆ. ಇವರಿಗೆ ೨೦೧೯ರಲ್ಲಿ ಚೇತನ ಪ್ರಕಾಶನ ಬೆಂಗಳೂರಿನಿAದ `ಸರೋಜಿನಿ ಚವಲಾರ ರಾಜ್ಯ ಪ್ರಶಸ್ತಿ, ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರಿನಿAದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಮತ್ತು ೨೦೧೯ರಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರಿನಿAದ ಕಾವ್ಯ ಶಾರದೆ ರಾಜ್ಯ ಪ್ರಶಸ್ತಿ, ೨೦೧೮ರಲ್ಲಿ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಮಾಜ ಕಲಾ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ.
ವೀರಶೆಟ್ಟಿ ಎಂ.ಪಾಟೀಲ್
‘ವೀ.ಪಾಟೀಲ್’ ಎಂದೇ ಖ್ಯಾತರಾದ ವೀರಶೆಟ್ಟಿ ಎಂ.ಪಾಟೀಲ ರವರು ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ಮಾರುತಿರಾವ ಹಾಗೂ ಕಮಳಾಬಾಯಿ ದಂಪತಿಗಳಿಗೆ ದಿನಾಂಕ ೫-೭-೧೯೭೨ರಂದು ಜನಿಸಿದ್ದಾರೆ. ಎಂ.ಎಫ್.ಎ. ಪದವಿಧರರಾದ ಇವರು ಕೆಲಕಾಲ ಚಿತ್ರಕಲಾ ಶಿಕ್ಷಕರಾಗಿ, ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಫೋಟೊಗ್ರಾಫರಾಗಿ ಗುರುತಿಸಲ್ಪಡುತ್ತಾರೆ ಅನ್ನೋದಕ್ಕೆ ಅವರು ರಚಿಸಿದ ಚಿತ್ರಗಳಿಗೆ ಚಿತ್ರಕಲೆ ಹಾಗೂ ಫೋಟೊಗ್ರಾಫಿಯಲ್ಲಿ ಸಂದ ರಾಜ್ಯ, ರಾಷ್ಟç, ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿಗಳೇ ಸಾಕ್ಷಿಯಾಗಿವೆ. ಥರ್ಮಾಕೋಲ್ಡಿಸೈನ್, ನೆನಪಿನ ಕಾಣಿಕೆ ವಿಭಿನ್ನ ರೀತಿಯಲ್ಲಿ ವಿನೂತನ ಸೊಬಗನ್ನು ಚಿತ್ರಿಸುತ್ತ ಈ `ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಪುಸ್ತಕಗಳಿಗೆ ಮುಖಪುಟ ರಚಿಸಿದ್ದಾರೆ. ಮತ್ತು ‘ಓ ನನ್ನ ಕನ್ನಡ’, ‘ಮೂರನೇ ಮಹಾಯುದ್ಧ’ (ಕವನ ಸಂಕಲನ) ‘ನಾರಾಯಣಪೂರ ವಾಸ್ತು ಶಿಲ್ಪ ಕಲೆಗಳ ವೈಭವ', ‘ವ್ಯಸನಮುಕ್ತ ಸಮಾಜಕ್ಕಾಗಿ ಅಭಿನವ ಘನಲಿಂಗ ಜೋಳಿಗೆ' (ಲೇಖನ) ‘ಸಾತ್ವಿಕ', ‘ವೈರಾಣು ಹೈರಾಣು ವಿಶ್ವ ಮಹಾಯುದ್ಧ' (ಹನಿಗವನ ಸಂಕಲನ) ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಕಲೆ, ಸಾಹಿತ್ಯ ಮತ್ತು ಛಾಯಾಗ್ರಾಹಕರಾಗಿ ಬಹುಮುಖ ಪ್ರತಿಭೆ ವ್ಯಕ್ತಿಯಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ೨೦ಕ್ಕಿಂತ ಹೆಚ್ಚು ರಾಜ್ಯ ಹಾಗೂ ರಾಷ್ಟç, ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ೨೦೧೮ರಲ್ಲಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ ಶಿವಾಚಾರ್ಯ ತ್ರೀಪೂರಾಂತ ವತಿಯಿಂದ ‘ಅಭಿನವ ಘನಲಿಂಗ ಶ್ರೀ ಪ್ರಶಸ್ತಿ, ರೋಣ-ಗಜೇಂದ್ರಗಡದ ಕನ್ನಡ ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ ರಾಜ್ಯ ಮಟ್ಟದ ಪುಸ್ತಕ ಸ್ಪರ್ಧೆಯಲ್ಲಿ ಇವರ ‘ಸಾತ್ವಿಕ' ಹನಿಗವನ ಸಂಕಲನಕ್ಕೆ ‘ಸಾಹಿತ್ಯ ಚಿಗುರು ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ. ಇವರ ಕತೆ, ಕವನ, ಚುಟುಕು ಲೇಖನ ಬರಹಗಳು ಪ್ರಜಾವಾಣಿ, ಸಂಯುಕ ್ತಕರ್ನಾಟಕ, ಕರ್ಮವೀರ, ತುಷಾರ, ಛಾಯಾ ಚಂದನ, ಮೊದಲಾದ ಪತ್ರಿಕೆ ಹಾಗೂ ಆಕಾಶವಾಣಿ, ಮಂಗಳೂರು ಕುಡ್ಲ ವಾಹಿನಿಯಿಂದ ಪ್ರಕಟ, ಪ್ರಸಾರವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)