ಪುಟಗಳು

ಶನಿವಾರ, ಜನವರಿ 11, 2025

ಪ್ರವೀಣಕುಮಾರ ಕಲ್ಬುರ್ಗಿ

ಉದಯೋನ್ಮುಖ ಬರಹಗಾರ ಪ್ರವೀಣಕುಮಾರ ಕಲ್ಬುರ್ಗಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದ ಈಶ್ವರ ಮತ್ತು ರಾಚಮ್ಮ ದಂಪತಿಗಳಿಗೆ ದಿನಾಂಕ ೨೦-೧-೧೯೮೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ.ಸ್ನಾತಕೋತ್ತರ ಪದವಿ ಹಾಗೂ ನೆಟ್ ಪರೀಕ್ಷೆಯು ಪಾಸು ಮಾಡಿದ ಇವರು ಹುಮನಾಬಾದಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತಿಯನ್ನು ಬೆಳೆಸಿಕೊಂಡಿದ್ದರಿAದ ಅವರ ಅಜ್ಜನವರಾದ ಹಿರಿಯ ಸಾಹಿತಿ ಬಿ.ಎಸ್.ಖೂಬಾ ರವರ ಪ್ರೇರಣೆಯಿಂದ ೨೦೧೧ರಲ್ಲಿ `ಕಾವ್ಯ ಸಂಭ್ರಮ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರು ಹಲವಾರು ಬಿಡಿ ಲೇಖನಗಳು, ನೂರಾರು ಕವನ,ಆಧುನಿಕ ವಚನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೊಷ್ಠಿಗಳಲ್ಲಿಯು ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ