ಭಾನುವಾರ, ಜನವರಿ 19, 2025
ಮೇನಕಾ ಪಾಟೀಲ್.
ಬೀದರ ಜಿಲ್ಲೆಯ ಉದಯೋನ್ಮುಖ ಯುವ ಮಹಿಳಾ ಬರಹಗಾರ್ತಿಯರಲ್ಲಿ ಒಬ್ಬರಾಗಿ ಕವನ,ಲೇಖನ, ಆಧುನಿಕ ವಚನ,ಚುಟುಕು, ಹನಿಗವನ ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ, *ಮೇನಕಾ ಪಾಟೀಲ್*.ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಶರಣಪ್ಪ ನಂದಿ ಮತ್ತು ಜೈ ಶ್ರೀ ದಂಪತಿಗಳಿಗೆ ದಿನಾಂಕ ೧೮-೮-೧೯೮೫ ರಲ್ಲಿ ಜನಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಪಿ.ಯು.ಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ನಂತರ ಒಂದು ವರ್ಷದ *ಪತ್ರಿಕೋದ್ಯಮ* ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಎರಡು ವರ್ಷ ಮಂಗಳೂರಿನಿAದ ಪ್ರಕಟವಾಗುವ ' *ಸ್ತ್ರೀ ಶಕ್ತಿ*' ಎಂಬ ಮಾಸ ಪತ್ರಿಕೆಯಲ್ಲಿ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಆ ಪತ್ರಿಕೆಯಲ್ಲಿ ಲೇಖನ, ಅಂಕಣ ಬರಹಗಳು ಬರೆದ ಇವರು ಪ್ರಜಾವಾಣಿ, ಉದಯವಾಣಿ, ವಿಜಯವಾಣಿ,ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಹಾಗೂ *ಬಸವ ಟಿವಿ* ಯಲ್ಲಿಯೂ ಇವರ ಸಾಹಿತ್ಯದ ಕುರಿತಾದ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹುಟ್ಟಿದ ವರ್ಷವೇ ಹಸುಳೆಯಾದಾಗಲೆ ತಂದೆಯನ್ನು ಕಳೆದುಕೊಂಡ ಇವರು ದೊಡ್ಡವರಾದಂತೆ ಅವರ ತಂದೆ ಬರೆದು ಇಟ್ಟಿದ ದಿನಚರಿ ಸಾಹಿತ್ಯವನ್ನು ಓದಿ, ಅಪ್ಪಾಜಿಯ ಸಾಹಿತ್ಯಕ್ಕೆ ಮಾರುಹೋಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕಲಿತದ್ದು ಆಂಗ್ಲ ಮಾಧ್ಯಮದಲ್ಲಿ ಆದರೂ ಬರೆಯುವುದೆಲ್ಲ *ಕನ್ನಡ ಸಾಹಿತ್ಯ* ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇವರು ೨೦೧೮ ರಲ್ಲಿ ' *ಬಸವ ರಕ್ಷಾ*' ಎಂಬ ಒಂದು ಕವನ ಸಂಕಲನ, ಹಾಗೂ ೨೦೧೯ ರಲ್ಲಿ ಹುಲಸೂರು ಶ್ರೀಗಳ ಕುರಿತು ' *ಒಂದು ಜೀವನ ಚರಿತ್ರೆ*' ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಮತ್ತು ನೂರಾರು ಕವನ,ಲೇಖನ, ಹನಿಗವನಗಳು ಬರೆದ ಇವರು ಬೀದರ ಜಿಲ್ಲೆಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರ ಲೇಖನ ಉದಯವಾಣಿ ಸಂಪಾದಕೀಯ ಪುಟದಲ್ಲೂ ಪ್ರಕಟವಾಗಿವೆ ಅನ್ನೊದು ತುಂಬ ಖುಷಿಯ ವಿಷಯವಾಗಿದೆ. ಆದ್ದರಿಂದ ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ಬೀದರದ ಹಲವಾರು ಕನ್ನಡ ಪರ ಸಾಹಿತ್ಯ ಸಂಘಟನೆಯವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನವರು ಕೂಡ ಹಲವಾರು ಸಲ ಸತ್ಕರಿ ಗೌರವಿಸಿದ್ದಾರೆ. ಸದ್ಯ ಇವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವುದರೊಂದಿಗೆ, ಕೌಟುಂಬಿಕ ಜೀವನದಲ್ಲಿ ಗೃಹಿಣಿಯಾಗಿದ್ದುಕೊಂಡು ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ