ಹೊರ ಜಿಲ್ಲೆಗಳಿಂದ ಬೀದರಿಗೆ ಬಂದ ಹವ್ಯಾಸಿ ಬರಹಗಾರರು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಹೊರ ಜಿಲ್ಲೆಗಳಿಂದ ಬೀದರಿಗೆ ಬಂದ ಹವ್ಯಾಸಿ ಬರಹಗಾರರು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಗುರುವಾರ, ಜನವರಿ 16, 2025
ಪಂಚಾಕ್ಷರಿ ಪುಣ್ಯಶೆಟ್ಟಿ
ಹಿರಿಯ ಸಾಹಿತಿಯಾದ ಪಂಚಾಕ್ಷರಿ ಪುಣ್ಯಶೆಟ್ಟಿಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಶಿವರುದ್ರಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩-೨-೧೯೩೫ರಲ್ಲಿ ಜನಿಸಿದ್ದಾರೆ. ೮ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಅಧ್ಯಯನ ಮಾಡಿ ನಂತರ ಕನ್ನಡ ಮಾಧ್ಯಮದಲ್ಲಿ ಎಚ್.ಎಸ್.ಸಿ. ಟಿ.ಸಿ.ಎಚ್. ಸಿ.ಪಿ.ಎಡ್. ಬಿ.ಪಿ.ಎಡ್. ಶಿಕ್ಷಣ ಪಡೆದು ೧೯೫೩ರಲ್ಲಿ ಹುಮನಾಬಾದ ತಾಲೂಕಿನ ದುಮ್ಮನಸೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ, ೧೯೯೩ರಲ್ಲಿ ನಿವೃತ್ತರಾಗಿದ್ದಾರೆ.
ಕಲ್ಯಾಣ ಸಿರಿಗನ್ನಡ ತಾಣಕ್ಕೆ ಬೇಟಿ ಕೊಡಿ
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೧೯೬೩ರಲ್ಲಿ `ಅಜಾದ್ ಚಂದ್ರಶೇಖರ’ (ನಾಟಕ) `ಶಿವಶರಣ ರೇವಪ್ಪಯ್ಯನವರು' `ಸಮಾಜವಾದಿ ಹೋರಾಟಗಾರ ವೈಜಿನಾಥ ಪಾಟೀಲ್'. `ಮಹಾಯೋಗಿಣಿ ಚಕ್ರಕೋಟೆ ಬಾಯವ್ವ' `ಡಾ.ಚನ್ನಬಸವ ಪಟ್ಟದ್ದೆವರ ಹೋರಾಟದ ಬದುಕು' `ಮಹಾದೇವಪ್ಪಾ ಮಿಸೆ' `ಹುತಾತ್ಮ ಬಸವರಾಜ ಹುಡಗಿ'. `ಬಿಜಪಾಲ್ ಸಿಂಗ ಸ್ವತಂತ್ರ ಹೋರಾಟಗಾರ' `ಬಿ.ಟಿ.ಸಾಸನೂರ' `ವಿರೂಪಾಕ್ಷಯ್ಯಾ ಸ್ವಾಮಿ ಐನ್ನೋಳ್ಳಿ’ `ಹುಟ್ಟು ಹೋರಾಟಗಾರ ಪಿ.ಎನ್.ಪಾಟೀಲ್'. (ಚರಿತ್ರೆಗಳು) `ಸಜ್ಜನರ ಸಂಘದಲ್ಲಿ' (ವ್ಯಕ್ತಿ ಚಿತ್ರಣ) `ಬೀದರದಿಂದ ಸಿಂಗಾಪುರಕ್ಕೆ' `ಕಲ್ಯಾಣದಿಂದ ಕಾಶ್ಮೀರಕ್ಕೆ’ (ಪ್ರವಾಸ ಕಥನಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಚಿಂಚೋಳಿ ತಾಲೂಕಿನ ಪ್ರಥಮ ಕಸಾಪ ಅಧ್ಯಕ್ಷರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಭಾಲ್ಕಿ ಮಠದಿಂದ ಉತ್ತಮ ಲೇಖಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದಿAದ ಚನ್ನಶ್ರೀ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಜಯದೇವಿ ತಾಯಿ ಲಿಗಾಡೆಯವರ ಸ್ಮರಣಾರ್ಥ ರಾಷ್ಟ್ರೀಯ ಪುರಸ್ಕಾರ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವನ, ಲೇಖನ, ಬರಹಗಳು ಭಾಲ್ಕಿಯ ಶಾಂತಿ ಕಿರಣ ದ್ವೆöÊಮಾಸಿಕ ಹಾಗೂ ಉತ್ತರ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ಕಲಬುರಗಿ ಜಿಲ್ಲಾ ಸಾಹಿತಿಗಳ ಪರಿಚಯ ಓದಿರಿ
ಮಂಗಳವಾರ, ಜನವರಿ 14, 2025
ಡಾ.ಮಹಾನಂದಾ ಮಡಕೆ
ಉದಯೋನ್ಮುಖ ಬರಹಗಾರ್ತಿಯಾದ ಡಾ.ಮಹಾನಂದಾ ಮಡಕೆ ಯವರು ಕಲಬುರಗಿಯ ಶಿವಶರಣಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೯-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ. ಎಂ.ಫೀಲ್. ಪಿಎಚ್.ಡಿ ಪದವಿಧರರಾದ ಇವರು ಬೀದರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಹನಿಗವನಗಳು ಬರೆದು ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. `ಜಾನಪದ ಮಹಿಳೆ', `ಪ್ರೊ.ವೀರೇಂದ್ರ ಸಿಂಪಿ’, `ಬೆಳ್ಳಿ ದಾಂಪತ್ಯ.'. ಎಂಬ ಕೃತಿಗಳು ರಚಿಸಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳು ಮಂಡಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಿಂದ ಶಿಕ್ಷಣ ಶ್ರೀ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿ, ಕಮಲಾಪೂರದಿಂದ ಮನುಕುಲ ರತ್ನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಕೆ.ಖಂಡೊಬಾ ಪ್ರಶಸ್ತಿ, ಮತ್ತು ಚಿನ್ನದ ಪದಕ, ಮತ್ತು ಎಂ.ಎ. ಸ್ನಾತಕ್ಕೊತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಇವರು ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ. ಆರ್.ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೀರಂತರೆಡ್ಡಿ ಜಂಪಾ
ಉದಯೋನ್ಮುಖ ಬರಹಗಾರರಾದ ವೀರಂತರೆಡ್ಡಿ ಜಂಪಾ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ಗುಂಡಾರೆಡ್ಡಿ ಮತ್ತು ಬಕ್ಕಮ್ಮಾ ದಂಪತಿಗಳಿಗೆ ದಿನಾಂಕ ೫-೭-೧೯೬೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್.ಎಂ.ಎ.ಬಿ.ಎಡ್.ಪದವಿಧರರಾದ ಇವರು ೧೯೮೯ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸದ್ಯ ಹುಮನಾಬಾದ ತಾಲೂಕಿನ ಕನಕಟ್ಟಾ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಹನಿಗವನ, ಲೇಖನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೧೯೮೭ರಲ್ಲಿ ಪಿ.ಯು. ವಿದ್ಯಾರ್ಥಿಯಾಗಿದಾಗ ಬೆಂಗಳೂರಿನ ರಾಜ್ಯ ಮಟ್ಟದ ಪರ-ವಿರೋಧ ಚರ್ಚೆ, ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಸಾಹಿತ್ಯದೊಂದಿಗೆ ಉತ್ತಮ ಸಂಘಟಕರು ಆಗಿರುವ ಇವರು ೨೦೦೧ ರಿಂದ ೨೦೦೪. ೨೦೦೮ ರಿಂದ ೨೦೧೧ ರವರೆಗೆ ಹುಮನಾಬಾದ ತಾಲೂಕಾ ಕಸಾಪ ಅಧ್ಯಕ್ಷರಾಗಿ, ೨೦೦೫ ರಿಂದ ೨೦೦೮ ರವರೆಗೆ ನೃಪತುಂಗ ಕನ್ನಡ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಶಿಕ್ಷಕ ರತ್ನ ಪ್ರಶಸ್ತಿ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ, ಹಿಂದಿ ಪ್ರತಿಷ್ಠಾನ ಧಾರವಾಡದಿಂದ ಶಿಕ್ಷಕ ಸಾಹಿತ್ಯ ರತ್ನ ಪ್ರಶಸ್ತಿ, ಹುಮನಾಬಾದ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿ, ಬೀದರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತಾಲೂಕಾ ರಾಜ್ಯೋತ್ಸವ ಪ್ರಶಸಿ, ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)