ಪುಟಗಳು

ಕಮಲನಗರ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಮಲನಗರ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 14, 2025

ಶ್ರೀದೇವಿ ರಾಜಕುಮಾರ

ಹವ್ಯಾಸಿ ಬರಹಗಾರ್ತಿ ಶ್ರೀದೇವಿ ರಾಜಕುಮಾರ ರವರು ಔರಾದ ತಾಲೂಕಿನ ವಡಗಾಂವದ ಗುರುನಾಥ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೮೨ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಎ. ಬಿ.ಇಡಿ.ಪದವೀಧರರಾದ ಇವರು ಹೊಳಸಮುದ್ರದ ರಾಜಕುಮಾರ ಖಡ್ಕೆಯವರ ಧರ್ಮಪತ್ನಿಯಾಗಿದ್ದು. ಬೀದರಿನ ಮದರ ತೇರೆಸಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕವನ, ಲೇಖನ, ಹನಿಗವನ ಮೊದಲಾದ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ್ದಾರೆ. ಇವರಿಗೆ ಹಲವು ಕನ್ನಡ ಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಸತ್ಕಾರಿಸಿ ಗೌರವಿಸಲಾಗಿದೆ.

ಶಿವಾಜಿರಾವ ಕಾಳೆ

ಹವ್ಯಾಸಿ ಬರಹಗಾರರಾದ ಶಿವಾಜಿರಾವ ಕಾಳೆ ಯವರು. ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಯಾದವರಾವ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೧-೧೯೪೮ರಲ್ಲಿ ಜನಿಸಿದ್ದಾರೆ. ಇವರು ಮರಾಠಿ ಮಾತೃಭಾಷೆಯಲ್ಲಿ ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿ, ಮರಾಠಿ ಮತ್ತು ಹಿಂದಿಯಲ್ಲಿ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ಹಿಂದಿಯಲ್ಲಿ `ಬೀದರ ಕಾ ಇತಿಹಾಸ', `ಬಿಜಲಿ ಕಿ ಕರಾಮತ್', `ಸ್ಟೇಟ್ ಕಾಂಗ್ರೆಸ್ ಹೈದರಾಬಾದ್', ಎಂಬ (ಐತಿಹಾಸಿಕ ಕೃತಿಗಳು) `ಸತಿ ಜಾತೆ ಹೈ ಕ್ಯಾ, ಸತಿ ದಿಲಾತೆ ಹೈ', `ಜಾನೆ ಹೇ ರಾಮಘಾಟ್'. (ಕವನ ಸಂಕಲನಗಳು) `ಉಗಡಾ ಬಾಳಾ', `ಮಾಹೇರ್ ಮರಾಠಿ', `ಆಯಿ ಹಂಬರಡಾ', `ಆವಾ ಚಾಲೇಲಿ ಪಂಡರಾಪುರ', `ಮೀ ತಯಾರ್ ಆಯೆ', `ಲಗ್ನಾ ಚೆ ಪಂಚಿನ್ ವರ್ಷಾ', `ಬದಲ್ ಚಾಲತ್ ನಾಯಿ', `ಭೂಮಿಗೀತ ಕ್ರಾಂತಿ ಕಾರಕ್ ಹೈದರಾಬಾದ್ ಸತ್ಯಾಗ್ರಹ', `ಕಾಗದಾಳಿ ನ್ಯಾಯ ಸಾಬಡ್ಲಾ ಹಾ ದೇಹ', `ಸಾಹಸಿ ವೀರ ಹೋಳಸಮುದ್ರ ಚೆ', `ಗುರು ಮಹಿವi '. (ಮರಾಠಿ ಕವನ ಸಂಕಲನಗಳು) ಎಂಬ ಕೃತಿಗಳು ಮರಾಠಿ ಮತ್ತು ಹಿಂದಿಯಲ್ಲಿ ಬರೆದಿದ್ದಾರೆ. ಆದರೆ ಅವು ಅಪ್ರಕಟಿತವಾಗಿವೆ. ಇವರ ಬರೆಹಗಳು ಹೈದರಾಬಾದಿನ `ಸ್ವಾತಂತ್ರ‍್ಯ ವಾರ್ತೆ' ಎಂಬ ಹಿಂದಿ ವಾರಪತ್ರಿಕೆ, `ಬೀದರ ಕಿ ಅವಾಜ್’ ಎಂಬ ದೈನಿಕದಲ್ಲಿ ಪ್ರಕಟವಾಗಿವೆ. ಮತ್ತು ಇವರ ಮರಾಠಿ ಬರಹಗಳು ಪುಣೆಯಿಂದ ಪ್ರಕಟವಾಗುವ `ಪುಣ್ಯ ನಗರಿ’ ಲಾತೂರದ `ಏಕ್ ಜೂಟ್' ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೦ರಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತರವರು ಬೀದರ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಹಾಗೂ ನಿಜಾಮ ಸರ್ಕಾರದ ರಜಾಕಾರರ ಹಾವಳಿಯಲ್ಲಿ ನಡೆದ ಬಾಳುರು ಹತ್ಯಾಕಾಂಡದ ಕುರಿತು ಮರಾಠಿಯಲ್ಲಿ ಲೇಖನ ಬರೆದಿದ್ದರಿಂದ ಅಂದಿನ ಮಹಾರಾಷ್ಟ್ರ ಮುಖ್ಯ ಮಂತ್ರಿ ವಿಲಾಸರಾವ ದೇಶಮುಖ ರವರು ಇವರ ಸಾಹಿತ್ಯಕ್ಕೆ ಮೆಚ್ಚಿ ಸತ್ಕರಿಸಿದ್ದಾರೆ. ಇವರು ಕೆಲವರ್ಷ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಮತ್ತು ಸಾಹಿತಿಯಾಗಿ ಮಾಡಿದ ಕಾರ್ಯ ಸಾಧನೆ ಕಂಡು ಮಾಜಿ ಸಚಿವ ಗುರುಪಾದಪ್ಪಾ ನಾಗಮಾರಪಳ್ಳಿಯವರು ಇವರಿಗೆ ಪ್ರೀತಿಯಿಂದ `ಸುಧಾಮ' ಎಂದು ನಾಮಕರಣ ಮಾಡಿರುವುದು ತಿಳಿದು ಬರುತ್ತದೆ.