ಪುಟಗಳು

ಭಾಲ್ಕಿ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾಲ್ಕಿ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 14, 2025

ಪಂಕಜಾ ಸುಂಟೆ.

ಸಾಹಿತಿ ಪಂಕಜಾ ಸುಂಟೆ ಯವರು ಭಾಲ್ಕಿನಗರದ ಚಾವಡಿಗಲ್ಲಿ ನಿವಾಸಿಯಾಗಿದ್ದು, ಇವರು ಅನೇಕ ಕತೆ ಕವನ, ಲೇಖನ, ಹನಿಗವನ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಇವರ `ಪ್ರೇಮ ಕಾವ್ಯ’ ಎಂಬ ಕತೆ ಹಂಶಕವಿಯವರು ಸಂಪಾದಿಸಿರುವ `ಬೀದರ ಜಿಲ್ಲೆಯ ಆಯ್ದ ಕತೆಗಳು’ ಎಂಬ ಪ್ರಾತಿನಿಧಿಕ ಕಥಾ ಸಂಕಲನ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಇತರರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳಲ್ಲಿ ಪ್ರಕಟವಾಗಿವೆ.

ಗೀತಾ ಎಸ್.ಪಾಟೀಲ್

ಹವ್ಯಾಸಿ ಬರಹಗಾರ್ತಿ ಗೀತಾ ಎಸ್.ಪಾಟೀಲ್ ರವರು ಭಾಲ್ಕಿ ತಾಲೂಕಿನ ನೀಲಮನಳ್ಳಿಯವರು .ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಕತೆ, ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ.

ವೀರಶೆಟ್ಟಿ ಶಹಾಪುರೆ

`ವಿಶ್ವಗುರು ಸಂಗನ ಬಸವ' ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆಯುತ್ತಿರುವ ಇವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದವರು. ಇವರು ಹವ್ಯಾಸಿ ಬರಹಗಾರರಾಗಿ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.

ದಿ.ರುದ್ರಪ್ಪ ಕುರನೆ

ಕವಿ, ಕಲಾವಿದ, ನಾಟಕಕಾರರಾದ ದಿ. ರುದ್ರಪ್ಪ ಕುರನೆ ಯವರು ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಸಂಬಣ್ಣ ಮತ್ತು ಸಮವ್ವ ದಂಪತಿಗಳಿಗೆ ಜನಿಸಿದ್ದಾರೆ. ಇವರ ಜನ್ಮ ದಿನಾಂಕ, ವಿದ್ಯಾರ್ಹತೆ ತಿಳಿದು ಬಂದಿಲ್ಲ. ಆದರೆ ಇವರು ಸಾಹಿತಿ ತಿಪರಂತಿ ಮಾಸ್ತರ ಅವರ ವಿದ್ಯಾರ್ಥಿಯಾಗಿದ್ದು, ಮತ್ತು ಅಣದೂರಿನ ಮೊನಪ್ಪ ಮಾಸ್ತರ ಅವರ ಸಹಪಾಠಿ ಸ್ನೇಹಿತರಾಗಿದ್ದರೆಂದು ತಿಳಿದು ಬರುತ್ತದೆ. ಕವಿ ಸಾಹಿತಿಯಾಗಿ ಗುರ್ತಿಸಿಕೊಂಡ ಇವರು ಮಹಾಭಾರತ, ಪಾಂಡವ ಪ್ತತಾಪ, ರಾಮಾಯಣ' ಎಂಬ ನಾಟಕಗಳು ಹಾಗೂ ಮೊಹರಮ್ ಪದ, ಭಕ್ತಿ ಗೀತೆ, ಭಜನೆ ಪದಗಳು ಬರೆದಿದ್ದಾರೆ.

ಕೆ.ಎಸ್.ಕರಂಜೆ

ಹವ್ಯಾಸಿ ಬರಹಗಾರರಾದ ಇವರ ಮೂಲ ನಾಮ ಕಾಶಿನಾಥ ಕರಂಜೆಯಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದವರಾಗಿದ್ದು `ಗುಪ್ತಲಿಂಗ' ಎಂಬ ಅಂಕಿತನಾಮದಲ್ಲಿ ಹಲವಾರು ಅಧ್ಯಾತ್ಮೀಕ ವಚನಗಳು ಬರೆದು ಕೆಲವು ಕಡೆ ಪ್ರಕಟಿಸಿದ್ದಾರೆ.

ಚಂದ್ರಮ್ಮಾ ಬಬಚೌಡಿ

ಹಿರಿಯ ಕವಯತ್ರಿ ಚಂದ್ರಮ್ಮಾ ಬಬಚೌಡಿ ರವರು ಭಾಲ್ಕಿ ತಾಲೂಕಿನ ರುದನೂರು ಗ್ರಾಮದ ತುಳಜಪ್ಪಾ ಮತ್ತು ಶಿವಮ್ಮ ದಂಪತಿಗಳ ಜೇಷ್ಠ ಪುತ್ರಿಯಾಗಿ ಜನಿಸಿದರು. ಇವರು ಬೀದರ ತಾಲೂಕಿನ ಬಬಚೌಡಿಯ ಸಂಬಣ್ಣ ತಂದೆ ತಿಪ್ಪಣ್ಣ ರವರ ಧರ್ಮ ಪತ್ನಿಯಾಗಿದ್ದು. ಇವರ ಮಾವ ತಿಪ್ಪಣ್ಣ ಚಿಡಗುಪ್ಪಿ ತಿಪರಂತಿ ಮಾಸ್ತರ ರವರ ಶಿಷ್ಯರಾಗಿದ್ದರು. ಅವರಿಂದ ಅನೇಕ ಹಾಡುಗಳನ್ನು ಕಲಿತು ಸ್ವತಃ ಹಾಡು, ಪದ್ಯ, ಭಜನೆ ಪದಗಳನ್ನು ಬರೆದಿದ್ದಾರೆ. ಇವರ ಕಲೆ ಸಾಹಿತ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಜ್ಞಾನ ಸಮಿತಿ, ಹಾಗೂ ಸಾಕ್ಷರತಾ ಸಮಿತಿಯವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಮೈಲಾರ (ಖಾನಾಪುರ) ದಲ್ಲಿ ವಾಸವಾಗಿದ್ದಾರೆ.

ಗೀತಾ ಪಾಟೀಲ್

ಹವ್ಯಾಸಿ ಬರಹಗಾರ್ತಿ ಗೀತಾ ಪಾಟೀಲ್ ರವರು ಭಾಲ್ಕಿಯ ರಾಮಲಿಂಗೇಶ್ವರ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೪-೩-೧೯೯೧ರಲ್ಲಿ ಜನಿಸಿದ್ದಾರೆ. ಇವರು ಹಲವಾರು ಕವನ ಲೇಖನಗಳು ಬರೆದಿದ್ದು ಅವು ಕೆಲಪತ್ರಿಕೆ ಹಾಗೂ ವಿವಿಧ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಸಂಗಮೇಶ ಜ್ಯಾಂತೆ

ಯುವ ಸಾಹಿತಿ ಸಂಗಮೇಶ ಜ್ಯಾಂತೆ ಯವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಜೈನಾಪೂರ ಗ್ರಾಮದ ಬಾಬುರಾವ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೧೪-೧೧-೧೯೮೮ರಲ್ಲಿ ಜನಿಸಿದ್ದಾರೆ. ಪದವಿಧರರಾದ ಇವರು ಸಾಹಿತ್ಯ ರಚನೆಯಲ್ಲಿ ತೊಡಗಿ ನೂರಾರು ಕವನ ಲೇಖನಗಳನ್ನು ಬರೆದು ಪರಿಚಿತರಾಗಿದ್ದಾರೆ. ಮತ್ತು ಕವನ ಸಂಕಲನವು ಕೂಡ ಮುದ್ರಿಸುವ ತವಕದಲ್ಲಿದ್ದಾರೆ. ಇವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ, ಭಾಲ್ಕಿ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಆರೇಳು ಸಂಘ ಸಂಸ್ಥೆಗಳಲ್ಲಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಕೆರಳದ ಕಾಸರಗೋಡಿನಿಂದ 'ಕಾಯಕ ರತ್ನ ಪ್ರಶಸ್ತಿ' ಮತ್ತು ಹಾಸನದ ಕವಿ ಸಮ್ಮೇಳನದ ರಾಜ್ಯ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ.

ಅಂಬಿಕಾ ಠಮಕೆ

ಯುವ ಕವಯತ್ರಿಯಾದ ಅಂಬಿಕಾ ಠಮಕೆಯವರು ಭಾಲ್ಕಿಯ ಬಸವರಾಜ ಮತ್ತು ಸುನಂದಾ ದಂಪತಿಗಳಿಗೆ ದಿನಾಂಕ ೨೫-೩-೧೯೮೮ರಲ್ಲಿ ಜನಿಸಿದ್ದಾರೆ. ಪದವಿಧರರಾದ ಇವರು ಕವನ, ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಮಂಜುನಾಥ ಬೆಳಕೆರೆ

ಹವ್ಯಾಸಿ ಬರಹಗಾರ ಮಂಜುನಾಥ ಬೆಳಕೆರೆ ಯವರು. ಭಾಲ್ಕಿಯ ಪ್ರಭಾಕರ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೫-೫-೧೯೮೭ರಲ್ಲಿ ಜನಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿ ಅನೇಕ ಕತೆ, ಕವನ, ಲೇಖನ, ಹನಿಗವನ ಮತ್ತು ವಿಜ್ಞಾನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.

ವಿನೋದ ಬ್ಯಾಲಹಳ್ಳಿ

ಹವ್ಯಾಸಿ ಬರಹಗಾರ ವಿನೋದ ಬ್ಯಾಲಹಳ್ಳಿ ಯವರು ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ ಗ್ರಾಮದ ನಾಗಶೆಟ್ಟಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಐಟಿಐ ಮತ್ತು ಪಿ.ಜಿ.ಡಿ.ಸಿ.ಎ. ಅಧ್ಯಯನ ಮಾಡಿದ ಇವರು ವೃತ್ತಿಪರ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ, ಆಧುನಿಕ ವಚನ ಮೊದಲಾದವು ರಚಿಸಿದ್ದಾರೆ. ಇವರ ಬರಹಗಳು ಕನ್ನಡದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಮತ್ತು ಹಲವಾರು ಕನ್ನಡಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಇವರಿಗೆ ಸತ್ಕರಿಸಿ ಗೌರವಿಸಲಾಗಿದೆ.

ಸಂಜೀವಕುಮಾರ ವೈ. ಕಂಟೆ

ಯುವ ಬರಹಗಾರ ಸಂಜೀವಕುಮಾರ ವೈ.ಕಂಟೆ. ರವರು ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ವೈಜಿನಾಥ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೪-೪-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಸುಮಾರು ಐವತ್ತಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ ಇವರು ಇತ್ತೀಚೆಗೆ ಕನ್ನಡ ಚಲನ ಚಿತ್ರವೊಂದರಲ್ಲಿ ಕೂಡ ನಟಿಸಿದ್ದಾರೆ. ಇವರು ಬರೆದ ಚೊಚ್ಚಲ ಕೃತಿ `ನನ್ನ ಮುತ್ತುಗಳು' ಕವನಸಂಕಲನ ಪ್ರಕಟಣೆಯ ಹಂತದಲ್ಲಿದೆ. ೨೦೦೪ರಲ್ಲಿ ಅಂದಿನ ತಾಲೂಕಾ ಕಸಾಪ ಅಧ್ಯಕ್ಷರು ಇವರನ್ನು ಖಟಕಚಿಂಚೋಳಿ ಹೊಬಳಿ ಕಸಾಪ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರಿಂದ ನಿರುದ್ಯೋಗಿಯಾಗಿದ್ದ ಇವರು ಕಸಾಪ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಹಣಕಾಸಿನ ತೊಂದರೆ ಎದುರಾದಾಗ ಬೆರಳಿಗೆ ಅಪ್ಪ ತೊಡಿಸಿದ ಅರ್ಧತೊಲೆ ಚಿನ್ನದುಂಗುರ ಮಾರಿ ಕಾರ್ಯಕ್ರಮ ಮಾಡಿ ಕನ್ನಡಾಭಿಮಾನ ಮೆರದಿದ್ದಾರೆ. ಇವರ ಅವಧಿಯಲ್ಲಿ `ಶಾಲೆಗೊಂದು ಕನ್ನಡ ಕಾರ್ಯಕ್ರಮ' ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವು ಮಾಡಿದ್ದರಿಂದ ಇವರಗೆ ಕೆಲ ಕನ್ನಡಪರ ಸಂಘ-ಸAಸ್ಥೆಯವರು ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.ಮತ್ತು ಕ್ರಾಂತಿ ಗಣೇಶ ಯುವಕ ಸಂಘವು ಅತ್ಯುತ್ತಮ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.

ಡಾ. ರವೀಂದ್ರ ಲಂಜವಾಡಕರ್

ಹವ್ಯಾಸಿ ಬರಹಗಾರ ಡಾ.ರವೀಂದ್ರ ಲಂಜವಾಡಕರ್ ರವರು ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ವಿಲಾಸರಾವ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನುಭಾವ ಸಾಹಿತ್ಯ ಪ್ರಚಾರ ಮತ್ತು ದಾಸ ಸಾಹಿತ್ಯದ ಹೊಸ ಆಯಾಮಗಳ ಚಿಂತನೆ ಹಾಗೂ ದಾಸರ ಕ್ಷೇತ್ರ ದರ್ಶನಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಅಮೆರಿಕಾದ ಯುಗಾ ಯುನಿವರ್ಸಿಟಿಯ ಹುಬ್ಬಳ್ಳಿ ಶಾಖೆಯಲ್ಲಿ `ದಾಸ ಸಾಹಿತ್ಯದ ಮಹತ್ವ ಮತ್ತು ಪ್ರಸ್ತುತತೆ’ ಎಂಬ ವಿಷಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. `ಕನಕದಾಸರ ಪ್ರತಿಮಾ ಲೋಕ' ಎಂಬುದು ಇವರು ರಚಿಸಿದ ಕೃತಿಯಾಗಿದ್ದು ಅದು ಅಪ್ರಕಟಿತವಾಗಿದೆ. ಅಷ್ಟೇಯಲ್ಲದೆ ಕೆಲ ಅನುಭಾವ ಲೇಖನಗಳು ಇತರರು ಸಂಪಾದಿಸಿದ ಸ್ಮರಣ ಸಂಚಿಕೆ, ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ಸಮಾಜ ಮುಖಿ ಕೀರ್ತನೆಗಳು' ಎಂಬ ನಾಲ್ಕು ಸಂಪುಟಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿರುವ ಇವರು ಬೀದರದಿಂದ ಪ್ರಕಟವಾಗುತ್ತಿರುವ `ಸಾಹಿತ್ಯ ಸಿಂಚನ' ತ್ರೈಮಾಸಿಕ ಪತ್ರಿಕೆಯ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜನಿವಾದ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಮೈಸೂರಿನಲ್ಲಿ ನಡೆದ ಆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸತ್ಕರಿಸಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜೇಂದ್ರ ಎಲ್. ಗೋಖಲೆ.

ಪತ್ರಕರ್ತ ಹಾಗೂ ಯುವ ಬರಹಗಾರರಾದ ರಾಜೇಂದ್ರ ಎಲ್. ಗೋಖಲೆ ಯವರು ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಲಕ್ಷö್ಮಣ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೧೦-೮-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎಫ್.ಎ. ಚಿತ್ರಕಲಾ ಪದವಿಯನ್ನು ಪಡೆದ ಇವರು ೨೦೦೨ರಿಂದ ಬಸವಕಲ್ಯಾಣದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಶೋಕಾ ಕೋಟೆ, ಕ್ರಾಂತಿ, ಯುವರಂಗ, ಸಂಜೆವಾಣಿ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ ಇವರು ಸದ್ಯ `ಕಲ್ಯಾಣ ಜಂಗ’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಅನೇಕ ಲೇಖನಗಳು ತಮ್ಮ ಪತ್ರಿಕೆಗಳಲ್ಲಿ ಬರೆದು ಲೇಖಕರಾಗಿಯು ಗುರ್ತಿಸಿಕೊಂಡಿದ್ದಾರೆ. ಮತ್ತು ಸಾಹಿತಿ `ಮಚ್ಚೇಂದ್ರ ಅಣಕಲ್ ರವರ ದಲಿತ ಸಂವೇದನಿಯ ಕತೆಗಳು’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸುತ್ತಿದ್ದಾರೆ. ಇವರು ೨೦೧೪ ರಿಂದ ೨೦೧೮ ರ ವರೆಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.

ಪರಮೇಶ್ವರಯ್ಯ

`ನಿತ್ಯ ನಿರಂಜನ ಮೃತ್ಯುಂಜಯ' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಕವಿ ಸಾಹಿತಿಯೆಂದರೆ ಪರಮೇಶ್ವರಯ್ಯನವರು. ಇವರು ಭಾಲ್ಕಿ ತಾಲೂಕಿನ ಶರಣಯ್ಯ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೧೧-೧೯೭೭ ರಲ್ಲಿ ಜನಿಸಿದ್ದಾರೆ. ಇವರು ೧೯೯೯ರಿಂದ ಕವನ, ಲೇಖನ, ಹನಿಗವನ, ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.

ವಿಜಯಲಕ್ಷ್ಮಿ ಹೂಗಾರ

ಕವಯತ್ರಿ ವಿಜಯಲಕ್ಷ್ಮಿ ಹೂಗಾರ. ರವರು ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಮಾರುತಿರಾವ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ ಪದವಿಧರರಾದ ಇವರು ಸಂಗೀತ ಶಿಕ್ಷಕರಾದ ರಾಜಕುಮಾರ ಮದಕಟ್ಟಿಯವರ ಧರ್ಮ ಪತ್ನಿಯಾಗಿದ್ದು, ಕೆಲ ವರ್ಷ ಬಸವಕಲ್ಯಾಣದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ಕಾನೂನು ವ್ಯಾಜ್ಯಗಳ ಜಂಜಡದಲ್ಲಿಯೂ ಕೆಲ ಸಮಯ ಕವಿ ಸಮಯವಾಗಿ ಉಳಿತಾಯ ಮಾಡಿ ಕವಿತೆಗಳನ್ನು ಬರೆಯುವ ಗೀಳು ಬೆಳೆಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ಉತ್ತಮ ವಾಗ್ಮಿಗಳು ಆಗಿದ್ದು ಹಲವು ಕಡೆಗಳಲ್ಲಿ ಸಾಹಿತ್ಯ ಮತ್ತು ಕಾನೂನು ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಬರಹಗಳು ಉತ್ತರ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಅಶೋಕ ಸಿಂಧೆ

ಚಿತ್ರ ಕಲಾವಿದರು ಹಾಗೂ ಹವ್ಯಾಸಿ ಬರಹಗಾರರಾದ ಅಶೋಕ ಸಿಂಧೆಯವರು. ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದ ಲಕ್ಷ್ಮಣ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೩-೭-೧೯೭೦ರಲ್ಲಿ ಜನಿಸಿದ್ದಾರೆ. ಚಿತ್ರಕಲೆಯಲ್ಲಿ ಡಿ.ಎಂ.ಸಿ. ಮತ್ತು ಎ.ಎಂ.ಸಿ. ಶಿಕ್ಷಣ ಪಡೆದು ಭಾಲ್ಕಿ ತಾಲೂಕಿನ ಬಾಳೂರಿನ ಸರ್ಕಾರಿ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕಲೆ, ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಕಸಾಪದ ವಿವಿಧ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಕವನ ವಾಚನ ಮತ್ತು ಉಪನ್ಯಾಸವು ನೀಡಿದ್ದಾರೆ. ಇವರಿಗೆ ೨೦೧೧ರಲ್ಲಿ ಭಾಲ್ಕಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೩ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೪ರಲ್ಲಿ ರಾಜ್ಯ ಕಲಾ ರತ್ನ ಮಾರ್ಗದರ್ಶನ ಪ್ರಶಸ್ತಿ, ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.

ಬಾಲಾಜಿ ತಾಡಮಲ್ಲೆ

ಹವ್ಯಾಸಿ ಬರಹಗಾರ ಬಾಲಾಜಿ ತಾಡಮಲ್ಲೆಯವರು ಭಾಲ್ಕಿಯ ಪಂಡರಿನಾಥ ಮತ್ತು ಗಂಗಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಅನೇಕ ಕವನ ಲೇಖನ ಬರಹಗಳು ಬರೆದಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ ಶಿಕ್ಷಕ ಶ್ರೀ ಪ್ರಶಸ್ತಿ, ಮತ್ತು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಚಂದ್ರಕಾಂತ ಎಸ್. ಬಿರಾದಾರ.

ಹವ್ಯಾಸಿ ಬರಹಗಾರರಾದ ಚಂದ್ರಕಾAತ ಎಸ್.ಬಿರಾದಾರ ರವರು ಭಾಲ್ಕಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಶರಣಪ್ಪಾ ಬಿರಾದಾರ ಮತ್ತು ಪ್ರಯಾಗಬಾಯಿ ದಂಪತಿಗಳಿಗೆ ದಿನಾಂಕ ೧೫-೭-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಮತ್ತು ಎಂ.ಎ.ಪತ್ರಿಕೊದ್ಯಮದಲ್ಲಿ ಸ್ನಾತಕೊತ್ತರ ಪದವಿಧರರಾದ ಇವರು ಭಾಲ್ಕಿಯ ಶಿವಾಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೩ರಿಂದ ಪತ್ರಕರ್ತರಾಗಿ ಸೇವೆ ಪ್ರಾರಂಭಿಸಿ ಬೀದರದ ಉತ್ತರ ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ, ಮೊದಲಾದ ಪತ್ರಿಕೆಗಳಲ್ಲಿ ೧೨ ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ ಇವರು `ಕಾರ್ಯ ಪ್ರೇಮಿ’ ಎಂಬ ವಾರ ಪತ್ರಿಕೆಯ ಸಂಪಾದಕರಾಗಿ, ೧೫ವರ್ಷ ಕರ್ನಾಟಕ ಪತ್ರಕರ್ತರ ಸಂಘದ ಭಾಲ್ಕಿ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಹಲವಾರು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೨೦ರಲ್ಲಿ ಬೆಂಗಳೂರಿನ ಸಂಸ್ಥೆಯೊAದರಿAದ `ಹೆಮ್ಮಯ ಕನ್ನಡಿಗ’ ಎಂಬ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಗಣಪತಿ ಕಲ್ಲೂರೆ

ಸಾಕ್ಷರ ಗೀತೆಗಳನ್ನು ರಚಿಸಿದ ಸಾಹಿತಿ ಗಣಪತಿ ಕಲ್ಲೂರೆ ರವರು ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಂಬಾಜಿ ಮತ್ತು ಚಂದ್ರಮ ದಂಪತಿಗಳಿಗೆ ದಿನಾಂಕ ೧೧-೩-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಭಾಲ್ಕಿ ತಾಲೂಕಿನ ಸಾಕ್ಷರತಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾರತೀಯ ದಲಿತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈಗಾಗಲೇ ಕವನ, ಲೇಖನ ಹನಿಗವನಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ.