ಪುಟಗಳು

ಬೀದರ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೀದರ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜನವರಿ 19, 2025

ಜಗನ್ನಾಥ ಕಮಲಾಪೂರೆ

ಸಾಹಿತಿ ಜಗನ್ನಾಥ ಕಮಲಾಪೂರೆ ಯವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪ ಮತ್ತು ಸರಸ್ವತಿ ದಂಪತಿ ಗಳಿಗೆ ದಿನಾಂಕ 1-6-1970 ರಲ್ಲಿ ಜನಿಸಿದ್ದಾರೆ. ಎಂ.ಎ.ಎಂ.ಎಡ್. ಎಂ.ಫಿಲ್, ಪಿ.ಜಿ.ಬಿ. ಎಚ್.ಇ.ಪದವೀಧರರಾದ ಇವರು ಬೀದರದ ಕರ್ನಾಟಕ ಬಿ.ಇಡಿ.ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಪುಸ್ತಕಗಳು ಹೊರ ತಂದಿದ್ದಾರೆ. 'ಬುಲಾಯಿ ಹಾಡುಗಳು ಒಂದು ಅಧ್ಯಯನ' ಎಂಬುದು ಇವರ ಎಂ.ಫಿಲ್. ಪ್ರಬಂಧವಾಗಿದೆ. ಮತ್ತು 2017 ರಲ್ಲಿ 'ಅಕ್ಷರ ಕಾರಂಜಿ', 2018 ರಲ್ಲಿ 'ದಾಂಪತ್ಯ ಗೀತೆ,' (ಸಂಪಾದನೆ) 2019 ರಲ್ಲಿ 'ಡಾ.ರಾಜೇಂದ್ರ ಯರನಾಳೆ' (ಬದುಕು ಬರಹ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧ, ಸೇರಿದಂತೆ ಮೊದಲಾದ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ವಿನೋದಕುಮಾರ ಹೊನ್ನಾ

ಯುವ ಸಾಹಿತಿ ವಿನೋದಕುಮಾರ ಹೊನ್ನಾ ರವರು ಬೀದರ ತಾಲೂಕಿನ ಬಗದಲ್ ಗ್ರಾಮದ ಪ್ರಭುರಾವ ಹೊನ್ನಾ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ 18-8-1981ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಕಲಬುರಗಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 2021ರಲ್ಲಿ 'ಕಂಡದ್ದು ಕೈ ಬರಹದಲ್ಲಿ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕವನ ಲೇಖನ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಶ್ರೀನಿವಾಸ ಕುಲಕಣಿ೯

ಕವಿ ಸಾಹಿತಿಯಾದ ಶ್ರೀನಿವಾಸ ಕುಲಕಣಿ೯ಯವರು ಬೀದರ ಕೈಲಾಸನಗರದ ನಾರಾಯನರಾವ ಮತ್ತು ಅಂಬಾಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೬೧ರಲ್ಲಿ ಜನಿಸಿದ್ದಾರೆ.ಬಿ.ಎಸ್ಸಿ.ಪದವಿಧರರಾದ ಇವರು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೮೭ರಲ್ಲಿ ಸಂಚಯನ ಮತ್ತು ೧೯೯೩ರಲ್ಲಿ ಸಂತೋಷ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ.ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಡಾ.ಜಗದೇವಿ ತಿಬಶೆಟ್ಟಿ.

ಸಾಹಿತಿ ಡಾ.ಜಗದೇವಿ ತಿಬಶೆಟ್ಟಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವಣಪ್ಪ ಮತ್ತು ಗೋದಾವರಿ ದಂಪತಿಗಳಿಗೆ ದಿನಾಂಕ ೧೭-೯-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪಿ.ಎಚ್.ಡಿ. ನೆಟ್. ಪದವಿಧರರಾದ ಇವರು ಹಾಲಹಳ್ಳಿ ಜ್ನಾನ ಕಾರಂಜಿ ಪಿ.ಜಿ.ಸೆಂಟರ್ ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅನರ್ಘ್ಯ ರತ್ನ' (ಲೇಖನ ಸಂಕಲನ) `ಸೋಮನಾಥ ಯಾಳವಾರ' ( ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಶರಣರ ದಾಂಪತ್ಯ ದರ್ಶನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ಬಸವಪಥ, ಲೋಕಸಿರಿ, ಶರಣರ ದರ್ಶನ, ವಚನ ಚಂದ್ರಿಕೆ, ಬಸವ ಪರಿಶೋಧ, ಶರಣ ಸೌರಭ, ಮೊದಲಾದ ಮಾಸಪತ್ರಿಕೆ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಕಸಾಪ ಸಮ್ಮೇಳನಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಚೇತನ ಪ್ರಕಾಶನ ಬೆಂಗಳೂರಿನಿAದ `ಸರೋಜಿನಿ ಚವಲಾರ' ರಾಜ್ಯ ಪ್ರಶಸ್ತಿ, ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರಿನಿAದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಮತ್ತು ೨೦೧೯ರಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರಿನಿAದ ಕಾವ್ಯ ಶಾರದೆ ರಾಜ್ಯ ಪ್ರಶಸ್ತಿ, ೨೦೧೮ರಲ್ಲಿ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಮಾಜ ಕಲಾ ರತ್ನ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಡಾ.ಸಿ.ಎಸ್.ಪಾಟೀಲ್.

ಸಾಹಿತಿ ಡಾ.ಸಿ.ಎಸ್.ಪಾಟೀಲ್ ರವರ ಪೂರ್ಣನಾಮ 'ಚಂದ್ರಕಾAತ ಸಂಗಶೆಟ್ಟಿ ಪಾಟೀಲ್ ' ಎಂದಾಗಿದೆ. ಇವರು ಬೀದರ ತಾಲ್ಲೂಕಿನ ಕಂಗನಕೋಟೆ ಗ್ರಾಮದ ಸಂಗಶೆಟ್ಟಿ ಪಾಟೀಲ್ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨೯-೨-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಎಚ್.ಡಿ.ಪದವಿ ಪಡೆದು ೧೯೮೪ರಲ್ಲಿ ಸುರಪುರದ ಪ್ರಭು ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ ನಂತರ ಬೆಂಗಳೂರಿನ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ೧೦ವರ್ಷ ಬೀದರದ ಬಿ.ವಿ.ಬಿ. ಕಾಲೇಜಿನಲ್ಲಿ ೫ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೦ ವರ್ಷ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ, ೩ ವರ್ಷ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿ ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎಸ್.ಐ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ೧೯೯೫ರಲ್ಲಿ `ಹೊಂಗಿರಣ' (ಕವನ ಸಂಕಲನ) ೨೦೦೨ರಲ್ಲಿ `ತಳಿ ತಂತ್ರಜ್ಞಾನ' (ವೈಜ್ಞಾನಿಕ ಬರಹಗಳ ಸಂಕಲನ) `ವಚನಗಳಲ್ಲಿ ವಿಜ್ಞಾನ' ಮತ್ತು 'ಅಕ್ಕನ ವಚನಗಳಲ್ಲಿ ಪರಿಸರ' ಎಂಬ ಕನ್ನಡ ಕೃತಿಗಳು ಪ್ರಕಟಿಸಿದರೆ ೨೦೦೮ರಲ್ಲಿ `ಬಯ ಟಿಕ್ನಾಲಜಿ, ಮತ್ತು ಮಲೆಕ್ವಲೋಡ್ ಬಯೊಲಜಿ’ ಎಂಬ ಕೃತಿಗಳು ಹೊರತಂದು ೨೦೧೦ರಲ್ಲಿ `ಸೆಲ್ ಬಯೋಲಜಿ’ ೨೦೧೨ರಲ್ಲಿ `ಬಯೋ ಇನ್ ಫಾರ್ಮೆಟಿಕ್' ಮತ್ತು ೨೦೧೪ರಲ್ಲಿ `ಮೈಟೊಕಾಂಡ್ರಿಯಲ್ ಇಂಜಿನಿಯರಿAಗ್' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ತರಂಗ, ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿಯೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ಇವರು ೬ ವರ್ಷ ಬೀದರ ಜಿಲ್ಲೆಯ ವಿಜ್ಞಾನ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ, ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿ ಐದಾರು ದೇಶ ವಿದೇಶಗಳಿಗೆ ಸುತ್ತಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಿದ್ದರಿಂದ. ೨೦೧೧ರಲ್ಲಿ ದೆಹಲಿಯಿಂದ ಅಂತರಾಷ್ಟ್ರೀಯ ಭಾರತ ಸೇವಾ ಪ್ರಶಸ್ತಿ, ೨೦೧೩ರಲ್ಲಿ ಮಲ್ಲೆಷಿಯಾದಿಂದ 'ಜೈವಿಕ ತಂತ್ರಜ್ಞಾನದ ಫೆಲೋಷಿಪ್ ಪ್ರಶಸ್ತಿ, ಪಡೆದು ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ತಮ್ಮ ವಿಶ್ರಾಂತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.

ವಿದ್ಯಾವತಿ. ಎಸ್. ಹಿರೇಮಠ

ಸಾಹಿತಿ ವಿದ್ಯಾವತಿ. ಎಸ್. ಹಿರೇಮಠ ರವರು ಬೀದರ ಜಿಲ್ಲೆ ಲಾಡಗೇರಿ ಗ್ರಾಮದ ಪೂಜ್ಯ. ಶ್ರೀ. ವೇ.ಶಾಂತಲಿAಗಯ್ಯಾ ಸ್ವಾಮಿ ಮತ್ತು ಸುಭದ್ರಾದೇವಿ ದಂಪತಿಗಳಿಗೆ ದಿನಾಂಕ ೪-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA. ಎಂ. ಫೀಲ್. ಎಂ.ಎಡ್.ಪದವಿಧರರಾದ ಇವರು ರಾಯಚೂರ ಜಿಲ್ಲೆಯಲ್ಲಿ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡು `ಮನೆಮದ್ದು' ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರಿಗೆ ಐದು ವರ್ಷವಿರುವಾಗ ಜ್ವರದ ಚುಚ್ಚು ಮದ್ದು ಕೊಡಿಸಿದ್ದರಿಂದ ಅವರ ಎಡಗೈ ನಿಷ್ಕ್ರಿಯ ಗೊಂಡಿದೆ. ಆದರೂ ಛಲ ಬಿಡದ ಇವರು ಆತ್ಮ ಸ್ಥೈರ್ಯದಿಂದ ಮುಂದೆ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ ರಾಜ್ಯ ಮಟ್ಟದ, ೧೭ನೇ ೧೮ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಮತ್ತು ೨೦೧೭ರಲ್ಲಿ, ೨೦೧೮ರಲ್ಲಿ ನೇಪಾಳದಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದು ರಾಷ್ಟ್ರ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.೨೦೧೯ರಲ್ಲಿ ಶ್ರೀಲಂಕಾದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಮತ್ತು ತಮ್ಮ ತಂದೆಯವರು ಬರೆದ ೨೩ ಕೃತಿಗಳ ಸಂಪಾದಕರಾಗಿ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಶ್ರೀ ಶಾಂತ ವಚನಗಳು’ ಎಂಬ ೧ ಸಾವಿರ ಆಧುನಿಕ ವಚನಗಳು `ಶಿವ ಶಿವಾ’ ಎಂಬ ಅಂಕಿತ ನಾಮದಲ್ಲಿ ಬರೆದ ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣಗಳಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಡಾನಬಾಸ್ಕೋ’ ಹೊರತರುವ `ಬಾಸ್ಕೋ - ಬಾಂಧವ್ಯ' ಕ್ಕೆ ೫ವರ್ಷದಿಂದ ಅಂಕಣಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತು ಗುಲ್ಬರ್ಗಾದ ಕ್ರೈಸ್ತ ಧರ್ಮ ಕ್ಷೇತ್ರದವರು ಮುದ್ರಿಸುವ ಸ್ಪಂದನ ಪತ್ರಿಕೆ ಸೇರಿದಂತೆ ಹಲವಾರು ಕಡೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರು ಬೀದರದ ಶಾಂತಿ ಧಾಮ ಟ್ರಸ್ಟ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಬೀದರ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಕರ್ನಾಟಕ ಸರ್ಕಾರ ನೀಡುವ ಕಿತ್ತೂರು ಚನ್ನಮ್ಮ ಪ್ರಶಸ್ತಿ, ೨೫ ಸಾವಿರ ನಗದು ಗೌರವಧನ ಪುರಸ್ಕಾರ, ೨೦೧೮ರಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ ರಾಮನಗರದಿಂದ ಸಾಹಿತ್ಯಶ್ರೀ ಪ್ರಶಸ್ತಿ, ೧೦ ಸಾವಿರ ನಗದು ಗೌರವ ಧನವು ನೀಡಿ ಗೌರವಿಸಿದ್ದಾರೆ. ಮತ್ತು ೨೦೧೮ರಲ್ಲಿ ಬೀದರದ ದೇಶಪಾಂಡೆ ಪ್ರತಿಷ್ಠನದ ವತಿಯಿಂದ ಕಾವ್ಯ ಕುಸುಮಾಂಜಲಿ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಗಂಧರ್ವ ಸೇನಾ

ಪತ್ರಕರ್ತ ಹಾಗೂ ಸಾಹಿತಿಗಳಾದ ಗಂಧರ್ವ ಸೇನಾ ಇವರು ಬೀದರದ ಗಂಗಾಧರ ಮತ್ತು ಚಂದ್ರಕಲಾಬಾಯಿ ದಂಪತಿಗಳಿಗೆ ದಿನಾಂಕ ೧೬-೭-೧೯೫೭ರಲ್ಲಿ ಜನಿಸಿದ್ದಾರೆ. ಇವರು ೧೯೯೬ರಲ್ಲಿ `ಬಿಗಿ ಬಂದೋಬಸ್ತಿನಲ್ಲಿ ಪ್ರಜಾಪ್ರಭುತ್ವ' ಎಂಬ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಮತ್ತು ಇವರಿಗೆ ೧೯೯೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿಗಿದೆ..

ಮಂಗಳವಾರ, ಜನವರಿ 14, 2025

ವಿಜಯಲಕ್ಷ್ಮಿ ಕೌಟಗೆ

ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾವ ಗ್ರಾಮದ ವಿಶ್ವನಾಥ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೧-೬-೧೯೭೮ರಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಶಿವಕುಮಾರ ಕೌಟಗೆಯವರ ಧರ್ಮಪತ್ನಿಯಾಗಿದ್ದು ೨೦೧೪ರಿಂದ ಸಾಹಿತ್ಯದಲ್ಲಿ ಆಸಕ್ತರಾಗಿ `ಪ್ರೀತಿ ಒಂದೆಯಿರಲಿ ' (ಕವನಸಂಕಲನ) `ವಿಶ್ವ ವಿಜಯ', `ಕ್ರಾಂತಿ ಮಾತೆ ಅಕ್ಕನಾಗಮ್ಮ', `ಬಲ್ಲಾಳದ ರಾಣಿ ಅಬ್ಬಕ್ಕ' (ಕಾದಂಬರಿಗಳು) `ಕದಳಿ ಬೆಳಕು' (ಮಹಾಕಾವ್ಯ) `ಅಕ್ಕ ಮಹಾದೇವಿ', `ಆಯ್ದಕ್ಕಿ ಲಕ್ಕಮ್ಮ', `ಕದಳಿ ಕೊಗೀಲೆ' (ಚರಿತ್ರೆಗಳು) ಮತ್ತು `ಹನ್ನೆರಡನೆ ಶತಮಾನದ ಶರಣೆಯರ ಜೀವನ ಚರಿತ್ರೆ', `ಶರಣ ಸಂಕುಲ', `ಲಿಂಗಾರಾಧನೆ ಭವಕ್ಕೆ ಬೀಜ', `ಶರಣೆಯರ ಸಮಗ್ರ ಬದುಕು ಬರಹ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಡಾ.ಚನ್ನಬಸವ ಪಟ್ಟದ್ದೆವರು' ಎಂಬ ಕೃತಿಯು ಮುದ್ರಣದಲ್ಲಿದೆ. ಇವರಿಗೆ ಬಸವ ಮಹಾಮಠ ನಿಡವಂಚ ಮನ್ನಾಐಖೇಳಿಯಿಂದ ಅಕ್ಕ ಮಹಾದೇವಿ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ಸಿಂಧು ಪ್ರಶಸ್ತಿ, ಮತ್ತು ಶರಣ ಕುಸುಮಾಂಜಲಿ ಪ್ರಶಸ್ತಿ, ಇಳಕಲ್ ಮಠದಿಂದ ಬಸವಗುರು ಕಾರುಣ್ಯ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಲಗಂಗಾ ದತ್ತಿ ಪ್ರಶಸ್ತಿ, ಭಾಲ್ಕಿ ಮಠದಿಂದ ಕಲ್ಯಾಣ ಕದಳಿ ಕೃತಿಗೆ ಬೀದರ ಜಿಲ್ಲೆಯ ಉತ್ತಮ ಗ್ರಂಥ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಹುಲಸೂರು ಮಠದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನಿಂದ ವಚನ ಶ್ರೀ ಪ್ರಶಸ್ತಿ, ೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವತಿಯಿಂದ ಸಾಹಿತ್ಯ ಸೇವಾ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.

ಭಾನುವಾರ, ಜನವರಿ 12, 2025

ಕು. ವಚನಾ ಶ್ರೀ

ಬಾಲ ಕವಯತ್ರಿ, ಕು.ವಚನಾಶ್ರೀ ಯವರು ಬೀದರದ ಸಂಜಯ ಮೈನಳ್ಳಿ ಮತ್ತು ಡಾ.ಜಗದೇವಿ ದಂಪತಿಗಳಿಗೆ ದಿನಾಂಕ ೭-೧೧-೨೦೦೬ ರಲ್ಲಿ ಜನಿಸಿದ್ದಾರೆ. ೮ನೇ ತರಗತಿಯ ಗುರುನಾನಕ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯಾದ ಇವರು ಸಾಹಿತಿ ಡಾ.ಜಗದೇವಿ ತಿಬಶೆಟ್ಟಿಯವರ ಪುತ್ರಿಯಾಗಿದ್ದು, ತಮ್ಮ ತಾಯಿಯ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನಗಳನ್ನು ಬರೆಯುತ್ತಿದ್ದಾರೆ . ಮತ್ತು ೨೦೨೦ರಲ್ಲಿ `ಕಂಗಳ ಅಂಗಳ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಲೋಕ ದೃಷ್ಠಿ’ ಎಂಬ ಮತ್ತೊಂದು ಕವನ ಸಂಕಲನ ಮುದ್ರಣದ ಹಂತದಲ್ಲಿದೆ. ಇವರಿಗೆ ರಾಜ್ಯ ಮಟ್ಟದ ಬಾಲ ಪ್ರತಿಭಾ ರತ್ನ, ಶಿಶು ಪ್ರತಿಭಾ ರತ್ನ, ಅಶ್ವಿನಿ ರತ್ನ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ. ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.

ರಾಮಾ ಪವಾರ

ಉದಯೋನ್ಮುಖ ಯುವ ಕವಿ ರಾಮಾ ಪವಾರ. ಇವರ ನಿಜನಾಮ ರಾಜು ತಂದೆ ಮಾರುತಿ ಪವಾರ ಎಂದಾಗಿದೆ. ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಮಾರುತಿ ಮತ್ತು ರಂಗಾಬಾಯಿ ದಂಪತಿಗಳಿಗೆ ದಿನಾಂಕ ೨-೪-೨೦೦೧ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ಅಭ್ಯಾರ್ಥಿಯಾಗಿರುವ ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ `ಅಂಕುರ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಎಳವೆ ಕವಿ ಬಾಲ ರವಿ', `ವಸಂತಗಾನ', 'ಹೂವಿಗೆ ಬಿದ್ದ ಸುಂದರ ಕನಸ್ಸು' ಎಂಬ ಕವನ, ಹನಿಗವನ ಸಂಕಲನಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರು ಬಾಲ್ಯದಲ್ಲಿಯೆ ಪುಸ್ತಕ ಪ್ರಕಟಿದರಿಂದ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಬಾಲ ಪ್ರತಿಭಾ ರತ್ನ ಪ್ರಶಸ್ತಿ, ಕಲಬುರಗಿಯ ವಿಶ್ವ ಜ್ಯೋತಿ ಪ್ರತಿಷ್ಠಾನದವರು ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆದಲ್ಲಿ ಪೂರ್ತಿ ಅಂಕ ಗಳಿಸಿದ್ದರಿಂದ ಅಂಕವೀರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ರಾಯಚೂರಿನ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಇವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಸಾಕಷ್ಟು ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.

ಕಪಿಲ ಹುಮನಾಬಾದೆ

. ಹೊಸ ತಲೆಮಾರಿನ ಯುವ ಸಾಹಿತಿ ಕಪಿಲ ಹುಮನಾಬಾದೆ. ಇವರು ಬೀದರ ತಾಲೂಕಿನ ನೌಬಾದ ಹತ್ತಿರದ ಅಲಿಯಾಬಾದ್ ಗ್ರಾಮದ ಪ್ರಭು ಮತ್ತು ಬೇಬಾವತಿ ದಂಪತಿಗಳಿಗೆ ದಿನಾಂಕ ೨೫-೧-೧೯೯೬ರಲ್ಲಿ ಜನಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎ. ಅರ್ಥಶಾಸ್ತ್ರ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಇವರು ಬಾಲ್ಯದಿಂದಲೂ ಕತೆ, ಕಾದಂಬರಿ, ಕವನ, ಲೇಖನ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೯ರಲ್ಲಿ `ಹಾಣಾದಿ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕತೆ, ಕವನ, ವಿಮರ್ಶಾ ಲೇಖನಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಮಯೂರ, ಸುಧಾ, ಹೊಸತು ಕೆಂಡ ಸಂಪಿಗೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೮ರಲ್ಲಿ ಬೆಂಗಳೂರಿನ ಜಯಲಕ್ಷ್ಮಿ ಪಾಟೀಲ್ ಅವರ `ಈ ಹೊತ್ತಿಗೆ’ ಕಥಾ ಬಹುಮಾನ ಮತ್ತು ವಿಜಯ ಕರ್ನಾಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಟಾಪ್ ೨೫ ಕತೆಗಳಲ್ಲಿ ಇವರ `ಬಾಗಿಲು’ ಎಂಬ ಕತೆ ೫ನೇ ಸ್ಥಾನ ಪಡೆದು ಪುಸ್ತಕ ರೂಪದಲ್ಲಿ ಮುದ್ರಣಗೊಂಡಿದೆ. ಹಾಗೂ ೨೦೨೦ ರ ಪ್ರಜಾವಾಣಿ ಪತ್ರಿಕೆಯ ಯುವ ಕಾದಂಬರಿಕಾರ ಸಾಧಕ ಪ್ರಶಸ್ತಿ, ೨೦೨೦ರಲ್ಲಿ `ಹಾಣಾದಿ’ ಕಾದಂಬರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಯು ಲಭೀಸಿದೆ.

ರಾಜಹಂಸ

ಉದಯೋನ್ಮುಖ ಸೃಜನಶೀಲ ಬರಹಗಾರರಾದ ರಾಜಹಂಸ. ಇವರು ಬೀದರ ತಾಲೂಕಿನ ಕುತ್ತಾಬಾದ ಗ್ರಾಮದ ಜೀವನ್ ಮತ್ತು ಅನೀತಾ ದಂಪತಿಗಳಿಗೆ ದಿನಾಂಕ ೧೬-೧-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎ.ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಸದ್ಯ ಚಲನಚಿತ್ರ ನಟ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿರುವುದರಿಂದ ಕತೆ, ಕವನ, ಲೇಖನ, ಚುಟುಕು, ಹನಿಗವನ ಮೊದಲಾದವು ರಚಿಸಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, ೨೦೧೨ರಲ್ಲಿ `ಬೆಳದಿಂಗಳ ಚಂದ್ರಮ' (ಕವನ ಸಂಕಲನ) ೨೦೧೪ರಲ್ಲಿ `ಕಾವ್ಯ ಕಡಲ ಮುತ್ತುಗಳು' ೨೦೧೫ರಲ್ಲಿ `ಚಂದನ ಕಸ್ತೂರಿ' ೨೦೧೬ರಲ್ಲಿ `ಜೇನ ಹನಿಗಳು' ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರು ಜೀವನ ಪ್ರಕಾಶನ ಚಿಕ್ಕಬಳ್ಳಾಪುರದ ಪ್ರಕಾಶಕರಾಗಿ, ರಾಜ್ಯ ಮಟ್ಟದ ಯುಗಾದಿ, ದಸರಾ ಕಾವ್ಯ ಸ್ಪರ್ಧೆಗಳ ಆಯೋಜನೆಯು ಮಾಡುತ್ತಾರೆ. ಬೀದರದ ಸವಿಗನ್ನಡ ಸಾಹಿತ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತಾವು ಬರೆದು ಪುಸ್ತಕ ಪ್ರಕಟಿಸುವುದರೊಂದಿಗೆ ಇತರ ಉದಯೋನ್ಮುಖ ಬರಹಗಾರರ ಪುಸ್ತಕಗಳು ಪ್ರಕಟಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ವಿಜಯಲಕ್ಷ್ಮಿ ಗೌತಮಕರ್

ಉದಯೋನ್ಮುಖ ಬರಹಗಾರ್ತಿಯಾದ ವಿಜಯಲಕ್ಷ್ಮಿ ಗೌತಮಕರ್. ಇವರು ಬೀದರ ತಾಲೂಕಿನ ಅಲಿಯಂಬರ ಗ್ರಾಮದ ಶಿವರಾಜ ಮತ್ತು ಶ್ರೀದೇವಿ ದಂಪತಿಗಳಿಗೆ ದಿನಾಂಕ ೧೨-೧೦-೧೯೯೦ ರಲ್ಲಿ ಜನಿಸಿದ್ದಾರೆ. ಡಿ.ಎಡ್ ಶಿಕ್ಷಕರ ತರಬೇತಿ ಕೊರ್ಸು ಮುಗಿಸಿ ಬಿ.ಎ.ಪದವಿಯೊಂದಿಗೆ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿ `ಮನದಾಳದ ಮಿಂಚು' ಎಂಬ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬೀದರ ಜಿಲ್ಲೆಯಾದ್ಯಂತ ಹೊಬಳಿ, ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿ ಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರ ಬರಹಗಳು ರಾಜ್ಯಮಟ್ಟದ ಮತ್ತು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಸಂಘ ಸಂಸ್ಥೆಯವರಿAದ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೀದರ ನಗರದ ನಾಗವಂಶ ಕೋ ಆಪರೇಟಿವ್ ಬ್ಯಾಂಕನ ಅಧ್ಯಕ್ಷರಾಗಿ ಬರವಣಿಗೆ ಮುಂದುವರೆಸಿದ್ದಾರೆ.

ವೀರಶೇಟ್ಟಿ ಸಂಗ್ರಾಮ್

`ವಿ.ಎಸ್.ಕೆ.' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಸಾಹಿತಿ ವೀರಶೇಟ್ಟಿ ಸಂಗ್ರಾಮ್. ಇವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಸಂಗ್ರಾಮ ಮತ್ತು ಕಸ್ತೂರಿಬಾಯಿ ದಂಪತಿಗಳಿಗೆ ದಿನಾಂಕ ೩-೫-೧೯೮೯ರಲ್ಲಿ ಜನಿಸಿದ್ದಾರೆ. ಬಿ.ಕಾಂ,ಎA.ಬಿ.ಎ ಪದವಿಧರರಾದ ಇವರು ಬೆಂಗಳೂರಿನ ಎಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೮ರಲ್ಲಿ `ಮೊದಲ ಹೆಜ್ಜೆ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧನಸಹಾಯವು ಲಭಿಸಿದೆ. ಇವರು ಕತೆ, ಕವನ, ಲೇಖನಗಳನ್ನು ಬರೆಯುವುದರೊಂದಿಗೆ ೨೦೧೭ರಲ್ಲಿ ಸಂಗ್ರಾಮ ಎಜುಕೇಶನಲ್ ಟ್ರಸ್ಟ್ (ರಿ) ಒಂದನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿದ್ದಮ್ಮ ಸಂಗ್ರಾಮ ಬಸವಣ್ಣನೋರ್

ಕವಯತ್ರಿ ಸಿದ್ದಮ್ಮ ಸಂಗ್ರಾಮ ಬಸವಣ್ಞನೋರ್. ಇವರು ಚಿಂಚೋಳಿ ತಾಲೂನ ಚಂದಾಪೂರ ಗ್ರಾಮದ ಶರಣಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೨೭-೧೧-೧೯೮೬ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್ ಪದವಿಧರರಾಗಿರುವ ಇವರು ಬೀದರ ಚಿಟ್ಟಾ ವಾಡಿಯ ಸಂಗ್ರಾಮ ರವರ ಧರ್ಮಪತ್ನಿಯಾಗಿದ್ದು. ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು `ಆಶಾ ದೀವಿಗೆ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ವಿವಿಧ ದಿನಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಡಾ. ಮಹಾದೇವಿ ಹೆಬ್ಬಾಳೆ

ಸಾಹಿತಿ ಡಾ.ಮಹಾದೇವಿ ಹೆಬ್ಬಾಳೆ. ಇವರು ಬೀದರ ತಾಲೂಕಿನ ನಾವದಗೇರಿ ಗ್ರಾಮದ ಬಸವರಾಜ ಹೆಬ್ಬಾಳೆ ಮತ್ತು ಗುಂಡಮ್ಮಾ ದಂಪತಿಗಳಿಗೆ ದಿನಾಂಕ ೪-೩-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎಡ್.ಎಂ.ಎ. ಎಂ.ಫಿಲ್. ಪಿ.ಹೆಚ್.ಡಿ. ಪದವಿಧರರಾದ ಇವರು ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಹುಮನಾಬಾದನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೧ರಲ್ಲಿ `ಬೀದರ್ ಜಿಲ್ಲಾ ದೇವರೊತ್ಸವಗಳು’ (ಸಂಶೋಧನಾ) ಮತ್ತು `ಆಧುನಿಕ ಕವಿತೆಗಳ ಸಂಗ್ರಹ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಆಧುನಿಕ ಕವಿತೆಗಳ ಸಂಗ್ರಹ ಪುಸ್ತಕವು ಗುಲ್ಬರ್ಗ ವಿಶ್ವವಿದ್ಯಾಲಯ ಬಿ.ಎಸಿ.ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಪ್ರಕಟವಾಗಿದೆ. ಕಸಾಪ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕೆಲ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳ ಪುಸ್ತಕಗಳಲ್ಲಿ ಇವರ ಮೂವತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು ಪ್ರಕಟಗೊಂಡಿವೆ. ಗುಲ್ಬರ್ಗ ವಿಶ್ವವಿದ್ಯಾಲಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಪರೀಕ್ಷಾ ಮಂಡಳಿ ಹಾಗೂ ಮೌಲ್ಯಮಾಪನ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ `ಗ್ರಾಮ ಚರಿತ್ರೆ ಕೋಶ' ಸಂಶೋಧನಾ ಯೋಜನೆಯಲ್ಲಿ ಹುಮನಾಬಾದ ತಾಲೂಕಿನ ಕ್ಷೇತ್ರ ತಜ್ಞ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರಿಗೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ `ಪಾರ್ತಿಸುಬ್ಬ’ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನಿಂದ ಅಣ್ಣಾ ಹಜಾರೆ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬಿ.ಎಂ.ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರೇಮಾ ಹೂಗಾರ

ಕವಯತ್ರಿ ಪ್ರೇಮಾ ಹೂಗಾರ. ಇವರು ಬೀದರ ತಾಲೂಕಿನ ಅಷ್ಟೂರು ಗ್ರಾಮದ ನಾಗಶೆಟ್ಟಿ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧೨-೫-೧೯೮೩ರಲ್ಲಿ ಜನಿಸಿದ್ದಾರೆ. ಡಿ.ಇಡಿ.ಬಿ.ಇಡಿ.ಎಂ.ಇಡಿ.ಎA.ಎ. ಎಂ.ಫೀಲ್.ಪದವಿಧರರಾದ ಇವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಇವರು ೨೦೧೨ರಲ್ಲಿ `ಪ್ರೇಮಾಂತರAಗ' (ಕವನ ಸಂಕಲನ) ೨೦೧೮ರಲ್ಲಿ `ಲಾಲಿ' (ಮಕ್ಕಳ ಕವನ ಸಂಕಲನ) ೨೦೧೬ರಲ್ಲಿ `ಪ್ರಣೀತೆ' ೨೦೧೯ರಲ್ಲಿ `ಗಜಲ್ ಬಂಧ' (ಗಜಲ್ ಸಂಕಲನಗಳು) `ಹಾಯ್ಕುಗಳು' ಎಂಬ ಕೃತಿ ಪ್ರಕಟಿಸಿದ್ದಾರೆ. ೨೦೧೬ರಲ್ಲಿ `ಗಜಲ್ ಕೂಹೂ ಕೂಹೂ' ಎಂಬ ಧ್ವನಿ ಸುರುಳಿಯು ಬಿಡುಗಡೆಯಾಗಿದೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ಸೇಡಂದ ಮುನ್ನೂರು ಪ್ರತಿಷ್ಠಾನದ ವತಿಯಿಂದ ಅಮ್ಮ ಪ್ರಶಸ್ತಿ, ಮೇದಕ್ ನಿಂದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ಬೆಂಗಳೂರಿನಿAದ ಅಡ್ವೈಸರ್ ಪತ್ರಿಕಾ ಪ್ರಶಸ್ತಿ, ಧಾರವಾಡದಿಂದ ರತ್ನಮ್ಮ ಹೆಗಡೆ ಪ್ರಶಸ್ತಿ, ಮಲ್ಲೇಪುರಂ ಪ್ರತಿಷ್ಠಾನದ ವತಿಯಿಂದ ರಮಾಬಾಯಿ ಪ್ರಶಸ್ತಿ, ಕಲಬುರಗಿಯ ವಿಶ್ವಕರ್ಮ ಶಿಕ್ಷಣ ಸಂಸ್ಥೆಯಿAದ ದೇವನಾಂಪ್ರಿಯ ಪ್ರಶಸ್ತಿ, ಗದಗನಿಂದ ಇವರ ಸಮಗ್ರ ಸಾಹಿತ್ಯ ಸೇವೆಗೆ ನಿರಂತರ ಕಾವ್ಯ ಪುರಸ್ಕಾರ ಲಭಿಸಿದೆ. ಹಾಯ್ಕುಗಳು ಕೃತಿಗೆ ಪಾಳಾದಿಂದ ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಬೀದರ ಜಿಲ್ಲಾ ಯುವ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಗೌರವಿಸಲಾಗಿದೆ. ಪುಷ್ಪಾ ದೀಪಿಕಾ ಮಾಸ ಪತ್ರಿಕೆಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ ಇವರು ಕಲಬುರ್ಗಿಯ ಸಾಹಿತ್ಯ ಸಾರಥಿ ಮಾಸ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೀಣಾ ಎಸ್.ಜಲಾದೆ

ಲೇಖಕಿ ವೀಣಾ ಎಸ್.ಜಲಾದೆಯವರು ಪಠ್ಯ ಪುಸ್ತಕ ಲೇಖಕರಾಗಿಯೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಮೂಲತ: ಬೀದರ ನಗರದ ನಿವಾಸಿಯಾದ ಶಿವಲಿಂಗಪ್ಪ ಹಾಗೂ ಪ್ರಭಾವತಿ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿ ಎಂ.ಎ.ಎA.ಫೀಲ್ .ಪಿ.ಎಚ್.ಡಿ. ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ೧೨ವರ್ಷಗಳಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳೆಂದರೆ, `ಭಾರತೀಯ ಸಮಾಜದಲ್ಲಿ ಶಿಕ್ಷಣ ಹಾಗೂ ಶಿಕ್ಷಕ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶೈಕ್ಷಣಿಕ ತಂತ್ರ ಶಾಸ್ತ್ರ, `ಭಾರತೀಯ ಸಮಾಜದಲ್ಲಿ ಶಿಕ್ಷಣ, ವಿಷಯಾಧಾರಿತ ಇತಿಹಾಸ ಬೋಧನೆ (ಪ್ರಥಮ ಸೆಮಿಸ್ಟರ್) ವಿಷಯಾಧಾರಿತ ಇತಿಹಾಸ ಮತ್ತು ಪೌರನೀತಿ ಬೋಧನೆ, ಶಿಕ್ಷಕ ಮತ್ತು ಭಾರತೀಯ ಸಮಾಜದಲ್ಲಿ ಶಿಕ್ಷಣ, ಕ್ರೀಯಾ ಸಂಶೋಧನೆ , ತತ್ವ ಶಾಸ್ತ್ರ ಮತ್ತು ಸಮಾಜಶಾಸ್ತ್ರ ಆಧಾರಿತ ಶಿಕ್ಷಣ, ವಿಷಯಾಧಾರಿತ ಬೋಧನಾ ಶಾಸ್ತ್ರ ಮತ್ತು ಸಮಾಜ ವಿಜ್ಞಾನ, ಶೈಕ್ಷಣಿಕ ತಂತ್ರ ಶಾಸ್ತ್ರ ಮತ್ತು ಸಂಘಟನೆ, ಇವು ಇವರ ಪ್ರಮುಖ ಕೃತಿಗಳಾಗಿವೆ. ಮತ್ತು ಸುಮಾರು ಹತ್ತು ಕೃತಿಗಳು ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಕನ್ನಡ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಅವು ಗುಲ್ಬರ್ಗ, ಕರ್ನಾಟಕ ಮತ್ತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬಿ.ಇಡಿ.ವಿದ್ಯಾರ್ಥಿಗಳಿಗೆ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪಠ್ಯ ಪುಸ್ತಕಗಳಾಗಿ ಪ್ರಕಟಗೊಂಡಿವೆ. ಇವರ ಸಾಹಿತ್ಯ ಸಾಧನೆಗೆ ಬೀದರ ಜಿಲ್ಲಾ ಆಡಳಿತ ಮಂಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿಸಲಾಗಿದೆ. ಮತ್ತು ನಾಡಿನ ಹಲವಾರು ಕಡೆಗಳಿಂದ ಉತ್ತಮ ಲೇಖಕರು ಎಂಬ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಜಗನ್ನಾಥ ಪನಸಾಳೆ

ಹವ್ಯಾಸಿ ಬರಹಗಾರ ಜಗನ್ನಾಥ ಪನಸಾಳೆಯವರು ಬೀದರದ ಜನವಾಡದವರು. ಸರ್ಕಾರದಲ್ಲಿ ಉನ್ನತ ಅಧಿಕಾರಿಗಳಾದ ಇವರು ಸಾಹಿತಿಗಳಾಗಿದ್ದಾರೆ. ಕವನ, ಲೇಖನ, ಆಧುನಿಕ ವಚನಗಳು ರಚನೆ ಮಾಡಿದ ಇವರು `ನಾನರಿದಂತೆ ನಾನು' ಎಂಬ ಆಧುನಿಕ ವಚನ ಕೃತಿ ರಚಿಸಿದ್ದಾರೆ. ಸದ್ಯ ಇವರು ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ಗಿರಿಜಾ ಧರ್ಮರಡ್ಡಿ

ಹವ್ಯಾಸಿ ಬರಹಗಾರ್ತಿಯಾದ ಇವರು ಗೃಹಿಣಿಯಾಗಿದ್ದು ಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಯ ಒಡನಾಡಿಯಾಗಿದ್ದು ಇವರು ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು `ವಚನ ಪುಷ್ಪಾಂಜಲಿ, ಮತ್ತು `ನಾನೊಂದು ಹುಲ್ಲು ಕಡ್ಡಿಯಂದು ಉದಾಸೀನವೇಕೆ ? ' ಎಂಬ ವಚನ ಸಂಕಲನಗಳು ಪ್ರಕಟಿಸಿದ್ದಾರೆ.