ಪುಟಗಳು

ಭಾನುವಾರ, ಜನವರಿ 12, 2025

ವೀಣಾ ಎಸ್.ಜಲಾದೆ

ಲೇಖಕಿ ವೀಣಾ ಎಸ್.ಜಲಾದೆಯವರು ಪಠ್ಯ ಪುಸ್ತಕ ಲೇಖಕರಾಗಿಯೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಮೂಲತ: ಬೀದರ ನಗರದ ನಿವಾಸಿಯಾದ ಶಿವಲಿಂಗಪ್ಪ ಹಾಗೂ ಪ್ರಭಾವತಿ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿ ಎಂ.ಎ.ಎA.ಫೀಲ್ .ಪಿ.ಎಚ್.ಡಿ. ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ೧೨ವರ್ಷಗಳಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳೆಂದರೆ, `ಭಾರತೀಯ ಸಮಾಜದಲ್ಲಿ ಶಿಕ್ಷಣ ಹಾಗೂ ಶಿಕ್ಷಕ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶೈಕ್ಷಣಿಕ ತಂತ್ರ ಶಾಸ್ತ್ರ, `ಭಾರತೀಯ ಸಮಾಜದಲ್ಲಿ ಶಿಕ್ಷಣ, ವಿಷಯಾಧಾರಿತ ಇತಿಹಾಸ ಬೋಧನೆ (ಪ್ರಥಮ ಸೆಮಿಸ್ಟರ್) ವಿಷಯಾಧಾರಿತ ಇತಿಹಾಸ ಮತ್ತು ಪೌರನೀತಿ ಬೋಧನೆ, ಶಿಕ್ಷಕ ಮತ್ತು ಭಾರತೀಯ ಸಮಾಜದಲ್ಲಿ ಶಿಕ್ಷಣ, ಕ್ರೀಯಾ ಸಂಶೋಧನೆ , ತತ್ವ ಶಾಸ್ತ್ರ ಮತ್ತು ಸಮಾಜಶಾಸ್ತ್ರ ಆಧಾರಿತ ಶಿಕ್ಷಣ, ವಿಷಯಾಧಾರಿತ ಬೋಧನಾ ಶಾಸ್ತ್ರ ಮತ್ತು ಸಮಾಜ ವಿಜ್ಞಾನ, ಶೈಕ್ಷಣಿಕ ತಂತ್ರ ಶಾಸ್ತ್ರ ಮತ್ತು ಸಂಘಟನೆ, ಇವು ಇವರ ಪ್ರಮುಖ ಕೃತಿಗಳಾಗಿವೆ. ಮತ್ತು ಸುಮಾರು ಹತ್ತು ಕೃತಿಗಳು ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಕನ್ನಡ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಅವು ಗುಲ್ಬರ್ಗ, ಕರ್ನಾಟಕ ಮತ್ತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬಿ.ಇಡಿ.ವಿದ್ಯಾರ್ಥಿಗಳಿಗೆ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪಠ್ಯ ಪುಸ್ತಕಗಳಾಗಿ ಪ್ರಕಟಗೊಂಡಿವೆ. ಇವರ ಸಾಹಿತ್ಯ ಸಾಧನೆಗೆ ಬೀದರ ಜಿಲ್ಲಾ ಆಡಳಿತ ಮಂಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿಸಲಾಗಿದೆ. ಮತ್ತು ನಾಡಿನ ಹಲವಾರು ಕಡೆಗಳಿಂದ ಉತ್ತಮ ಲೇಖಕರು ಎಂಬ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ