ಪುಟಗಳು

ಮಂಗಳವಾರ, ಜನವರಿ 21, 2025

ಡಾ.ರಣಧೀರ ಬೇಲೂರ

ಉದಯೋನ್ಮುಖ ಯುವ ಬರಹಗಾರರಲ್ಲಿ ಒಬ್ಬರಾಗಿ ಕಾವ್ಯ ಲೇಖನ, ವಿಮರ್ಶೆ, ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ ಯುವ ಲೇಖಕರೆಂದರೆ, ಡಾ.ರಣಧೀರ ಬೇಲೂರ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಬಸ್ಸಪ್ಪ ಭರಮಣೆ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ 24-6-1990ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರ ರಾದ ಇವರು 2018ರಿಂದ ಶಿವಮೊಗ್ಗದ ಡಿ.ವಿ .ಎಸ್.ಅನುದಾನಿತ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕೆಲ ಕೃತಿಗಳು ಹೊರ ತಂದಿದ್ದಾರೆ. ಅವುಗಳೆಂದರೆ 2018ರಲ್ಲಿ 'ಹೊಸ ಹೆಜ್ಜೆ' ಎಂಬ ವಿಮರ್ಶಾ ಕೃತಿ, ಮತ್ತು 'ನವೋದಯ ಕವಿ ಕಾವ್ಯ' ಎಂಬ ಸಂಪಾದಿತ ಕೃತಿಯು ಪ್ರಕಟಿಸಿದರೆ, 2019ರಲ್ಲಿ 'ಶಿವ ನೆನೆ' ಎಂಬ ಮತ್ತೊಂದು ಸಂಶೋಧನಾ ಲೇಖನಗಳ ಕೃತಿಯೂ ಪ್ರಕಟಿಸಿದ್ದಾರೆ. ಮತ್ತು 'ಬಸವ ಮುಖಿ ಪ್ರಜ್ಞೆ' ಹಾಗೂ 'ಬಸವಣ್ಣ' ಎಂಬ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಲೇಖನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸ೦ವಾದ,ಅರಹು-ಕುರಹು, ಕವಿಮಾರ್ಗ,ಹೊಸತು, ಲಿಂಗಾಯತ ದರ್ಶನ,ಚಿಂತನಾ,ಶಿಕ್ಷಣ ಸೌಧ ಇತ್ಯಾದಿ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಸದ್ಯ ಇವರು ಶಿವಮೊಗ್ಗದಲ್ಲಿ ವಾಸವಾಗಿದ್ದು, ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ