ಮಂಗಳವಾರ, ಜನವರಿ 14, 2025
ನಾಗಶೆಟ್ಟಿ ಧರಮಪೂರ
ಸಾಹಿತಿ ಹಾಗೂ ಪತ್ರಕರ್ತರಾದ ನಾಗಶೆಟ್ಟಿ ಧರಮಪೂರ ರವರು ಬೀದರ ತಾಲೂಕಿನ ಧರಂಪುರ ಗ್ರಾಮದ ವೀರಶೆಟ್ಟಿ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨೩-೫-೧೯೬೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ಇಂಟ್ರನಶಿಪ್ ಹಾಗೂ ಬಿ.ಎ ಪದವಿಧರರಾದ ಇವರು `ಕ್ರಾಂತಿ ಭೂಮಿ’ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೀರ ಬಡಕುಟುಂಬದಲ್ಲಿ ಜನಿಸಿದ ಇವರು ಪಿ.ಯು.ವಿದ್ಯಾರ್ಥಿಯಾಗಿರುವಾಗಲೇ ಸುಭಾಶ ಗಾದಗಿಯವರ ಯುವ ಗರ್ಜನೆ ಮತ್ತು ಕಲಬುರ್ಗಿಯ ಗ್ರೀನೋಬಲ್ಸ ಪತ್ರಿಕೆಗಳನ್ನು ಮನೆ ಮನೆಗೂ ವಿತರಿಸಿ ಪತ್ರಿಕಾ ಲೋಕ ಪ್ರವೇಶ ಮಾಡಿದರು. ನಂತರ ಯುವ ಗರ್ಜನೆ, ನವನಾಡು , ಕನ್ನಡಮ್ಮ, ಗ್ರೀನೋಬಲ್ಸ್, ಜನದನಿ,ಉತ್ತರ ಕರ್ನಾಟಕ, ಬಸವ ದನಿ,ವಿಶ್ವಾಸಿಗ, ಈ ಸೂರ್ಯಸ್ಥ, ಕ್ರಾಂತಿ ಕಲ್ಯಾಣ, ಪ್ರಜಾ ಚಳುವಳಿ, ಮೊದಲಾದ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸುವುದರೊಂದಿಗೆ ಕ್ರಾಂತಿ ಭೂಮಿ ಪತ್ರಿಕೆಯ ಸಂಪಾದಕರಾಗಿ, ಅನೇಕ ಲೇಖನ, ಬರಹಗಳು ಬರೆದಿದ್ದಾರೆ. ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಬೀದರನಲ್ಲಿ ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿ ನಿರಂತರವಾಗಿ ತಿಂಗಳಿಗೊAದು ಸಾಹಿತ್ಯಿಕ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ೧೪ ವರ್ಷಗಳಿಂದ ಬೀದರ ಜಿಲ್ಲಾ ಬರಹಗಾರ ಮತ್ತು ಕಲಾವಿದರ ಸಂಘದ ಕಾರ್ಯದರ್ಶಿಯಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಾಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ವರದಿಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಬೀದರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಜಿಲ್ಲಾ ಬರಹಗಾರ ಹಾಗೂ ಕಲಾವಿದ ಬಳಗದ ಕರ್ನಾಟಕ ಗಡಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಮಾತೆ ಮಾಣಿಕೇಶ್ವರಿಯ ಸಾಮಾಜಿಕ, ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರಿಗೆ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರೀಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ