ಮಂಗಳವಾರ, ಜನವರಿ 21, 2025
ಸಂಜೀವ ಪಿ.ಸರ್ಯವಂಶಿ.
ಉದಯೋನ್ಮುಖ ಕವಿ, ಸಾಹಿತಿಗಳಾಗಿ ಗರ್ತಿಸಿಕೊಂಡು ಮರಾಠಿ ಭಾಷೆಯಲ್ಲಿ ಕತೆ,ಕವನ, ಲೇಖನ ಮೊದಲಾದ ತರಹದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಸಂಜೀವ ಪಿ.ಸರ್ಯವಂಶಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾಟಸಾಂಗವಿ ಗ್ರಾಮದ ಪುಂಡಲೀಕರಾವ ಮತ್ತು ಕೇರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೬ ರಲ್ಲಿ ಜನಿಸಿದ್ದಾರೆ. ಎಂ.ಎ. (ಮರಾಠಿ) ಸ್ನಾತಕೋತ್ತರ ಪದವಿಧರರಾದ ಇವರು ಭಾಲ್ಕಿಯ ಅಕ್ಕ ಮಹಾದೇವಿ ಮಹಿಳಾ ಪದವಿ ಪರ್ವ ಮಹಾವಿದ್ಯಾಲಯದಲ್ಲಿ ಮರಾಠಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರು ಕೂಡ ಕನ್ನಡ, ಹಿಂದಿ, ಇಂಗ್ಲೀಷ್, ಭಾಷಾ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಪ್ರಕಾರದ ಕತೆ ಕವನ ಲೇಖನ ಪ್ರಬಂಧ ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ೨೦೧೪ ರಲ್ಲಿ 'ಚಕ್ರ.' ಎಂಬ (ಕವನ ಸಂಕಲನ) ಮರಾಠಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಕವನ, ಲೇಖನ,ಪ್ರಬಂಧ, ಹನಿಗವನ, ಬರಹಗಳು 'ಅಸ್ಮೀತಾ' ಮತ್ತು 'ಅನುಬಂಧ' ಎಂಬ ಮರಾಠಿ ತ್ರೈಮಾಸಿಕ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ