ಪುಟಗಳು

ಮಂಗಳವಾರ, ಜನವರಿ 14, 2025

ವಿಜಯಲಕ್ಷ್ಮಿ ಕೌಟಗೆ

ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾವ ಗ್ರಾಮದ ವಿಶ್ವನಾಥ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೧-೬-೧೯೭೮ರಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಶಿವಕುಮಾರ ಕೌಟಗೆಯವರ ಧರ್ಮಪತ್ನಿಯಾಗಿದ್ದು ೨೦೧೪ರಿಂದ ಸಾಹಿತ್ಯದಲ್ಲಿ ಆಸಕ್ತರಾಗಿ `ಪ್ರೀತಿ ಒಂದೆಯಿರಲಿ ' (ಕವನಸಂಕಲನ) `ವಿಶ್ವ ವಿಜಯ', `ಕ್ರಾಂತಿ ಮಾತೆ ಅಕ್ಕನಾಗಮ್ಮ', `ಬಲ್ಲಾಳದ ರಾಣಿ ಅಬ್ಬಕ್ಕ' (ಕಾದಂಬರಿಗಳು) `ಕದಳಿ ಬೆಳಕು' (ಮಹಾಕಾವ್ಯ) `ಅಕ್ಕ ಮಹಾದೇವಿ', `ಆಯ್ದಕ್ಕಿ ಲಕ್ಕಮ್ಮ', `ಕದಳಿ ಕೊಗೀಲೆ' (ಚರಿತ್ರೆಗಳು) ಮತ್ತು `ಹನ್ನೆರಡನೆ ಶತಮಾನದ ಶರಣೆಯರ ಜೀವನ ಚರಿತ್ರೆ', `ಶರಣ ಸಂಕುಲ', `ಲಿಂಗಾರಾಧನೆ ಭವಕ್ಕೆ ಬೀಜ', `ಶರಣೆಯರ ಸಮಗ್ರ ಬದುಕು ಬರಹ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಡಾ.ಚನ್ನಬಸವ ಪಟ್ಟದ್ದೆವರು' ಎಂಬ ಕೃತಿಯು ಮುದ್ರಣದಲ್ಲಿದೆ. ಇವರಿಗೆ ಬಸವ ಮಹಾಮಠ ನಿಡವಂಚ ಮನ್ನಾಐಖೇಳಿಯಿಂದ ಅಕ್ಕ ಮಹಾದೇವಿ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ಸಿಂಧು ಪ್ರಶಸ್ತಿ, ಮತ್ತು ಶರಣ ಕುಸುಮಾಂಜಲಿ ಪ್ರಶಸ್ತಿ, ಇಳಕಲ್ ಮಠದಿಂದ ಬಸವಗುರು ಕಾರುಣ್ಯ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಲಗಂಗಾ ದತ್ತಿ ಪ್ರಶಸ್ತಿ, ಭಾಲ್ಕಿ ಮಠದಿಂದ ಕಲ್ಯಾಣ ಕದಳಿ ಕೃತಿಗೆ ಬೀದರ ಜಿಲ್ಲೆಯ ಉತ್ತಮ ಗ್ರಂಥ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಹುಲಸೂರು ಮಠದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನಿಂದ ವಚನ ಶ್ರೀ ಪ್ರಶಸ್ತಿ, ೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವತಿಯಿಂದ ಸಾಹಿತ್ಯ ಸೇವಾ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ