ಬಂಡಾಯದ ಧಮ್ಮ ಗೀತೆಗಳನ್ನು ರಚನೆ ಮಾಡಿದ ಕವಿ ತಿಪ್ಪಣ್ಣ ಜ್ಯೋತಿಯವರು. ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಸಂಬಣ್ಣ ಮತ್ತು ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧೫-೮-೧೯೪೭ರಂದು ನಮ್ಮ ದೇಶಕ್ಕೆ ಸ್ವತಂತ್ರ ಬಂದ ದಿನವೇ ಜನಿಸಿದ್ದಾರೆ. ದಲಿತ ಕವಿ ದಿ. ಪಂಚಶೀಲ ಗವಾಯಿಗಳ ಪ್ರಭಾವದಿಂದಾಗಿ ಬುದ್ದ, ಬಾಬಾ ಸಾಹೇಬ ಅಂಬೇಡ್ಕರ್ ರವರ ತತ್ವಕ್ಕೆ ಮಾರು ಹೋಗಿ ಮೂಢ ನಂಬಿಕೆಗಳ ವಿರುದ್ಧ ಬಂಡೆದ್ದು ಕ್ರಾಂತಿಕಾರಿ ಸಾಹಿತ್ಯ ರಚಿಸಿದ್ದಾರೆ. ಅವರಿಗೆ `ಬೌದ್ಧಾಚಾರ್ಯ' ಎಂಬ ಬಿರುದು ನೀಡಲಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ