ಪುಟಗಳು

ಮಂಗಳವಾರ, ಜನವರಿ 14, 2025

ಗಣಪತಿ ಕಲ್ಲೂರೆ

ಸಾಕ್ಷರ ಗೀತೆಗಳನ್ನು ರಚಿಸಿದ ಸಾಹಿತಿ ಗಣಪತಿ ಕಲ್ಲೂರೆ ರವರು ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಂಬಾಜಿ ಮತ್ತು ಚಂದ್ರಮ ದಂಪತಿಗಳಿಗೆ ದಿನಾಂಕ ೧೧-೩-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಭಾಲ್ಕಿ ತಾಲೂಕಿನ ಸಾಕ್ಷರತಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾರತೀಯ ದಲಿತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈಗಾಗಲೇ ಕವನ, ಲೇಖನ ಹನಿಗವನಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ