ಮಂಗಳವಾರ, ಜನವರಿ 14, 2025
ದಯಾನಂದ ರೆಡ್ಡಿ.
ಯುವ ಸಾಹಿತಿ ದಯಾನಂದ ರೆಡ್ಡಿ ಯವರು ಹುಮನಾಬಾದ ತಾಲೂಕಿನ ಚೀನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮಾ ದಂಪತಿಗಳಿಗೆ ದಿನಾಂಕ ೩-೭-೧೯೮೧ರಲ್ಲಿ ಜನಿಸಿದ್ದಾರೆ. ಎಂ.ಎ. ಮತ್ತು ಡಿಪ್ಲೋಮಾ ಇನ್ ಪೆಂಟಿAಗ್ ಪದವಿಧರರಾದ ಇವರು ದುಬೈ, ಕುವೈತ್ ನಲ್ಲಿ ಪೇಟಿಂಗ್ ಸುಪರ ವೈಜರ್ ರಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ ಇವರು ಸದ್ಯ ತಮಿಳುನಾಡಿನ ಚನೈಯ ಕಂಪನಿಯೊAದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು, ಅವು ಕೆಲ ಪ್ರಾಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು `ಬ್ಲಾಸ್ಟಿಂಗ್ ಪೆಂಟಿAಗ್ ಮಾಡುವುದು ಹೇಗೆ ?’ (ಲೇಖನ) `ಬೀದರ ಜಲ ಸಿರಿ’ (ಸಂಶೋಧನೆ) ಎಂಬ ಕೃತಿಗಳು ರಚಿಸಿದ್ದು, ಅವು ಅಪ್ರಕಟಿತವಾಗಿವೆ. ಇವರು ೨೦೦೧ರಲ್ಲಿ `ಸತ್ಯ ಮಾತು’ ಎಂಬ ಮಾಸಪತ್ರಿಕೆಯನ್ನು ತೆಗೆದು ಕೆಲಕಾಲ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ