ಮಂಗಳವಾರ, ಜನವರಿ 14, 2025
ಡಾ.ಚಂದ್ರಕಾಂತ ಮೇತ್ರೆ
ಉದಯೋನ್ಮಖ ಬರಹಗಾರರಾದ ಡಾ.ಚಂದ್ರಕಾಂತ ಮೇತ್ರೆಯವರು ಔರಾದ ತಾಲೂಕಿನ ಶೇಂಬೆಳ್ಳಿ ಗ್ರಾಮದ ಮಾರುತಿ ಮತ್ತು ಪದ್ಮಾವತಿ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪಿ.ಎಚ್.ಡಿ. ಪದವಿಧರರಾದ ಇವರು ಉದಯಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ, ಕವನ, ಲೇಖನ, ಹನಿಗವನ, ಪ್ರಬಂಧಗಳನ್ನು ಬರೆಯುವ ಪ್ರವೃತ್ತಿ ಹೊಂದಿದ್ದಾರೆ `ಪಿ.ಕೆ.ಖಂಡೋಬಾ ರವರ ಬದುಕು ಬರಹ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ಬಸವಣ್ಣನ ವಚನಗಳಲ್ಲಿ ಆಧ್ಯಾರ ಸ್ಮರಣೆ' `ಆದರ್ಶ ಶರಣೆ ದುಗ್ಗಾಳೆ, ಪ್ರಸ್ತುತ ಬುಡಕಟ್ಟು ಜನಾಂಗದ ಸ್ಥಿತಿ-ಗತಿ, ಜಾನಪದ ಮತ್ತು ಆಧುನಿಕ ಬದುಕು, ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕತೆ, ಪಿ.ಕೆ.ಖಂಡೋಭಾ ರವರ ಸಂಸ್ಕೃತಿ ಶೋಧ' ಬಸವಣ್ಣನವರ ಆದರ್ಶ ತತ್ವ, ವಿರಕ್ತ ಸಂಪ್ರದಾಯ ಮೂಲ ಒಂದು ಇಣುಕು ನೋಟ, ರನ್ನ ಮತ್ತು ಗದಾಯುದ್ಧ ಒಂದು ಇಣುಕು ನೋಟ ಇತ್ಯಾದಿ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆಗಳಲ್ಲಿ ಹಾಗೂ ಡಾ.ರಮೇಶ ಮೂಲಗೆಯವರ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ