ಮಂಗಳವಾರ, ಜನವರಿ 14, 2025
ವಿರೂಪಾಕ್ಷ ಗಾದಗಿ
`ಬಸವ ದನಿ' ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಬರವಣಿಗೆಯಲ್ಲಿ ತೊಡಗಿಸಿರುವ ಬರಹಗಾರ ವಿರೂಪಾಕ್ಷ ಗಾದಗಿ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಸದಾನಂದ ಹಾಗೂ ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೨೪-೧೧-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಕೃಷಿ. ಎಂ.ಎಸ್ಸಿ. ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಪಡೆದು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿಯು ಆಸಕ್ತರಾಗಿ ಕತೆ ಕವನ ಹನಿಗವನಗಳನ್ನು ಬರೆದಿದ್ದಾರೆ. ಅವು ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ನಾಡು- ನುಡಿಗಾಗಿ ೨೦೦೦ರಲ್ಲಿ `ಕನ್ನಡಾಂಬೆ ಗೆಳೆಯರ ಬಳಗ' ರಚಿಸಿ ಯುವ ಜನರನ್ನು ಸಂಘಟಿಸಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಕಲಂ ೩೭೧ ಜಾರಿಗಾಗಿ, ಅವಿರತ ಹೋರಾಟ, ಗಡಿ ಭಾಗದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅಸಮಾನತೆ ವಿರುಧ್ಧ ಧ್ವನಿ ಎತ್ತಿ, ಸರ್ಕಾರವನ್ಮು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ೨೦೦೪ನೇ ಸಾಲಿನಲ್ಲಿ ರಾಜ್ಯ ಅತ್ತ್ಯುತ್ತಮ ಯುವ ಪ್ರಶಸ್ತಿ ಇವರಿಗೆ ನೀಡಿದೆ. ಮತ್ತು ಭಾರತ ಸರ್ಕಾರದ ವತಿಯಿಂದ ಮದ್ಯಪ್ರದೇಶದ ರತಲಾಮ್ ನಲ್ಲಿ ಆಯೊಜಿಸಲಾದ ಯುವ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯುವ ಪ್ರಶಸ್ತಿ ಯು ಪಡೆದಿದ್ದಾರೆ. ಇವರು ಬಂಡಾಯ ಬರಹಗಾರರಾಗಿ ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರ ತರುವ ನಿಟ್ಟಿನಲ್ಲಿದ್ದಾರೆ. ಇವರು ನಾಲ್ಕು ಶಿಕ್ಷಣ ಸಂಸ್ಥೆಗಳನ್ನು ತೆರೆದು ಬೀದರ ನಗರದ ಕೊಳಚೆ ಪ್ರದೇಶಗಳಲ್ಲಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ