ಪುಟಗಳು

ಮಂಗಳವಾರ, ಜನವರಿ 14, 2025

ವೈಭವ ದಡ್ಡೆ

ಉದಯೋನ್ಮುಖ ಯುವ ಬರಹಗಾರ ವೈಭವ ದಡ್ಡೆ. ರವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೧-೪-೧೯೯೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್;ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೮ನೇ ಸ್ಥಾನ ಪಡೆದ ಪ್ರತಿಭಾವಂತರು. ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಪ್ರಬಂಧಗಳು ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. `ಗೀತೋಪಾಸಕ' `ಅಪ್ಪನ ಕೀರ್ತಿ’ `ಬಿಸಿಲು ನಾಡಿನಿಂದ ಹಸಿರು ನಾಡಿಗೆ.' ಎಂಬ ಲೇಖನಗಳು ಬಾಲ್ಯದ ವಿದ್ಯಾರ್ಥಿಯಾಗಿರುವಾಗಲೇ ಬರೆದಿದ್ದು, ಅವು `ಸತ್ಯ ಜ್ಯೋತಿ' ಮೊದಲಾದ ಪ್ರಾತಿನೀಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಪಿಯುಸಿ ಓದುತ್ತಿದ್ದಾಗ ವಾಲಿಬಾಲ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಇವರು ಪಿಯುಸಿಯಲ್ಲಿ ಶೇ.೯೮./. ರಷ್ಟು ಅಂಕಗಳು ಪಡೆದು ಸದ್ಯ ಸರಕಾರಿ ಕಾಲೇಜು ಬೆಳಗಾವಿಯಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಂಗಿತ, ನೃತ್ಯ, ಭಾಷಣಕಾರರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ