ಬೀದರ ಹೊರನಾಡ ಹವ್ಯಾಸಿ ಬರಹಗಾರರು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಬೀದರ ಹೊರನಾಡ ಹವ್ಯಾಸಿ ಬರಹಗಾರರು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಮಂಗಳವಾರ, ಜನವರಿ 14, 2025
ಎಚ್.ಬಿ.ಪ್ರಿಯಾಂಕಾ
ಹೊರನಾಡಿನಲ್ಲಿರುವ ಕವಯತ್ರಿ ಎಚ್.ಬಿ.ಪ್ರಿಯಾಂಕಾ ರವರು ಮೂಲತಃ ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಎಚ್.ಬಿ.ಜೀತಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೧೭-೧-೧೯೯೧ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ಶಿಕ್ಷಣವನ್ನು ಪಡೆದು ಹೈದರಾಬಾದ್ ನಲ್ಲಿ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ವೃತ್ತಿ ವೈದ್ಯಕೀಯ ಕ್ಷೇತ್ರದಲ್ಲಿದ್ದರು ಕೂಡ ಪ್ರವೃತ್ತಿ ಸಾಹಿತ್ಯ ಕ್ಷೇತ್ರದ ಕಡೆಗೆ ಎಳೆದು ತಂದಿದೆ. ಇವರು ಈಗಾಗಲೇ ಕತೆ, ಕವನ, ಲೇಖನ, ಚುಟುಕು, ಪ್ರಬಂಧ ಮೊದಲಾದ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಇವರು ತಾಲೂಕು, ಜಿಲ್ಲೆ ,ಮೊದಲಾದ ಕಡೆಗಳಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನವಾಚನವು ಮಾಡಿದ್ದಾರೆ. ಮತ್ತು ಸದ್ಯದಲ್ಲಿಯೇ ಒಂದು ಕವನ ಸಂಕಲನವು ಪ್ರಕಟಿಸುವ ತವಕದಲ್ಲಿದ್ದಾರೆ. ಸದ್ಯ ಇವರು ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.
ಪ್ರದೀಪರೆಡ್ಡಿ ಚಿನಕೇರಾ
ಹೊರ ನಾಡಿನಲ್ಲಿದ್ದುಕೊಂಡು ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಬರಹಗಾರ ಪ್ರದೀಪರೆಡ್ಡಿ ಚಿನಕೇರಾ. ರವರು ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೧೨.-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಪದವಿಧರರಾದ ಇವರು ಹೈದ್ರಾಬಾದಿನ ಕಂಪನಿಯೊAದರ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಚುಟುಕು, ಲೇಖನ ಬರಹಗಳು ಬರೆದಿದ್ದು, ಅವು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಯರಬಾಗಿನಲ್ಲಿ ಶಾಯಿರೆಡ್ಡಿ ಸಾಹಿತ್ಯ ಬಳಗವನ್ನು ಸ್ಥಾಪಿಸಿ ಅದರ ಮೂಲಕ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುವುದರೊಂದಿಗೆ ಸಹೋದರ ದಯಾನಂದ ರೆಡ್ಡಿಯವರು ಪ್ರಾರಂಭಿಸಿದ `ಸತ್ಯ ಮಾತು' ಮಾಸ ಪತ್ರಿಕೆಯ ಪ್ರಸಾರಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಸಿರಿಗನ್ನಡ ವೇದಿಕೆಯಿಂದ ಕನ್ನಡ ಕಾವ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಕನ್ನಡ ಸೇವಾ ರತ್ನ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ದಯಾನಂದ ರೆಡ್ಡಿ.
ಯುವ ಸಾಹಿತಿ ದಯಾನಂದ ರೆಡ್ಡಿ ಯವರು ಹುಮನಾಬಾದ ತಾಲೂಕಿನ ಚೀನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮಾ ದಂಪತಿಗಳಿಗೆ ದಿನಾಂಕ ೩-೭-೧೯೮೧ರಲ್ಲಿ ಜನಿಸಿದ್ದಾರೆ. ಎಂ.ಎ. ಮತ್ತು ಡಿಪ್ಲೋಮಾ ಇನ್ ಪೆಂಟಿAಗ್ ಪದವಿಧರರಾದ ಇವರು ದುಬೈ, ಕುವೈತ್ ನಲ್ಲಿ ಪೇಟಿಂಗ್ ಸುಪರ ವೈಜರ್ ರಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ ಇವರು ಸದ್ಯ ತಮಿಳುನಾಡಿನ ಚನೈಯ ಕಂಪನಿಯೊAದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು, ಅವು ಕೆಲ ಪ್ರಾಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು `ಬ್ಲಾಸ್ಟಿಂಗ್ ಪೆಂಟಿAಗ್ ಮಾಡುವುದು ಹೇಗೆ ?’ (ಲೇಖನ) `ಬೀದರ ಜಲ ಸಿರಿ’ (ಸಂಶೋಧನೆ) ಎಂಬ ಕೃತಿಗಳು ರಚಿಸಿದ್ದು, ಅವು ಅಪ್ರಕಟಿತವಾಗಿವೆ. ಇವರು ೨೦೦೧ರಲ್ಲಿ `ಸತ್ಯ ಮಾತು’ ಎಂಬ ಮಾಸಪತ್ರಿಕೆಯನ್ನು ತೆಗೆದು ಕೆಲಕಾಲ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ.ಚಂದ್ರಕಾಂತ ಮೇತ್ರೆ
ಉದಯೋನ್ಮಖ ಬರಹಗಾರರಾದ ಡಾ.ಚಂದ್ರಕಾಂತ ಮೇತ್ರೆಯವರು ಔರಾದ ತಾಲೂಕಿನ ಶೇಂಬೆಳ್ಳಿ ಗ್ರಾಮದ ಮಾರುತಿ ಮತ್ತು ಪದ್ಮಾವತಿ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪಿ.ಎಚ್.ಡಿ. ಪದವಿಧರರಾದ ಇವರು ಉದಯಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ, ಕವನ, ಲೇಖನ, ಹನಿಗವನ, ಪ್ರಬಂಧಗಳನ್ನು ಬರೆಯುವ ಪ್ರವೃತ್ತಿ ಹೊಂದಿದ್ದಾರೆ `ಪಿ.ಕೆ.ಖಂಡೋಬಾ ರವರ ಬದುಕು ಬರಹ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ಬಸವಣ್ಣನ ವಚನಗಳಲ್ಲಿ ಆಧ್ಯಾರ ಸ್ಮರಣೆ' `ಆದರ್ಶ ಶರಣೆ ದುಗ್ಗಾಳೆ, ಪ್ರಸ್ತುತ ಬುಡಕಟ್ಟು ಜನಾಂಗದ ಸ್ಥಿತಿ-ಗತಿ, ಜಾನಪದ ಮತ್ತು ಆಧುನಿಕ ಬದುಕು, ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕತೆ, ಪಿ.ಕೆ.ಖಂಡೋಭಾ ರವರ ಸಂಸ್ಕೃತಿ ಶೋಧ' ಬಸವಣ್ಣನವರ ಆದರ್ಶ ತತ್ವ, ವಿರಕ್ತ ಸಂಪ್ರದಾಯ ಮೂಲ ಒಂದು ಇಣುಕು ನೋಟ, ರನ್ನ ಮತ್ತು ಗದಾಯುದ್ಧ ಒಂದು ಇಣುಕು ನೋಟ ಇತ್ಯಾದಿ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆಗಳಲ್ಲಿ ಹಾಗೂ ಡಾ.ರಮೇಶ ಮೂಲಗೆಯವರ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)