ಪುಟಗಳು

ಶನಿವಾರ, ಫೆಬ್ರವರಿ 8, 2025

ಸಿದ್ಧಾರ್ಥ ಟಿ ಮಿತ್ರಾ.

ಉದಯೋನ್ಮುಖ ಯುವ ಕವಿ, ಸಾಹಿತಿ ಹಾಗೂ ಲೇಖಕರಾದ ಸಿದ್ಧಾರ್ಥ ಟಿ.ಮಿತ್ರಾ ರವರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ದುಬಲಗುಂಡಿ ಗ್ರಾಮದವರು. 3-11-1989 ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ತುಂಬ ಆಸಕ್ತರಾಗಿ ಕವನ ಲೇಖನ ಮೊದಲಾದ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಜನ ಮೆಚ್ಚುಗೆ ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 'ಕಲ್ಯಾಣದಲ್ಲಿ ಕಾಯಕಯೋಗಿ ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ, ಲೋಕದ ಡೊಂಕು ತಿದ್ದುವ ಭರದಲ್ಲಿ ಕಾವಿಗೆ ಕಳಂಕ ತಂದ ಕಾವಿಧಾರಿಗಳು, ಕೊರತೆಗಳ ನಡುವೆಯೂ ವಿಶ್ವದ ಗಮನ ತನ್ನತ ಸೆಳೆದ ಈ ನೇಲದ ವೀರ ಮಾತೆಯರು, ಸಾಹೇಬ್ ನಾನು ಬರುತ್ತೆನೆ ನೀಮ್ಮ ಜೊತೆ, ಶೌರ್ಯ ಭೂಮಿ ಭೀಮಾಕೊರೆಗಾಂವ , ಬುದ್ದನಷ್ಟೆ ಪರಿಶುದ್ಧ ವ್ಯೆಕ್ತಿ ಅಂಬೇಡ್ಕರ್. ಇತ್ಯಾದಿಗಳಾಗಿವೆ. ಸಾಹಿತ್ಯ ಕೃಷಿಗೆ ಮೆಚ್ಚಿ ಜಿಲ್ಲಾ ಮಟ್ಟದ 'ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಸಾಹಿತ್ಯ ಸೌರಭ, ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ