ಪುಟಗಳು

ಬೀದರ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೀದರ ತಾಲೂಕಿನ ಹವ್ಯಾಸಿ ಬರಹಗಾರರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಫೆಬ್ರವರಿ 8, 2025

ಅಶ್ವಜೀತ ದಂಡಿನ್.



  ಉದಯೋನ್ಮುಖ ಯುವ ಬರಹಗಾರರಾದ  ಅಶ್ವಜೀತ ದಂಡಿನ   ರವರು ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದವರು. ತಂದೆ ಬಕ್ಕಪ್ಪ ತಾಯಿ ಪಾರ್ವತಿಯವರ ಸುಪತ್ರನಾಗಿ ದಿನಾಂಕ 5-12-1996 ರಲ್ಲಿ ಜನಿಸಿದ್ದಾರೆ. ಪಿಯುಸಿ ಮತ್ತು ಐಟಿಐ ವರೆಗೆ ಅಧ್ಯಯನ ಮಾಡಿದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ.

 ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೇ ಇವರು ಬರೆದ 'ಚಿಮ್ಮಿದ ಬುಗ್ಗೆ, (ಕವನ ಸಂಕಲನ) ಬುದ್ದ ಭೀಮರ ಭಜನೆಹಾಡುಗಳು, ಧರಿನಾಡ ಸಿರಿ, ನೆಲದ ಅಳಲು '' ಎಂಬ ಕೆಲ  ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆದರೆ  ಸಾಹಿತಿ ಅಶ್ವಜೀತ ದಂಡಿನ ರವರು ಬಾಲ್ಯದಲ್ಲಿ ಅಪಘಾತಕ್ಕೆ ಈಡಾಗಿ ಕಾಲಿನ ಮೂಳೆ ಮುರಿದಿದಕ್ಕಾಗಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿದಕ್ಕಾಗಿ ಅದು ಅವರ ಕಿವಿಗಳ ಮೇಲೆ ಅಡ್ಡಪರಿಣಾಮ ಬಿರಿ ಶೇ.೬೯% ಕೇಳುವ ಶಕ್ತಿ ಕಳೆದುಕೊಂಡು ಕೇಳಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ.

ಮಂಗಳವಾರ, ಜನವರಿ 14, 2025

ಕೇಶವ ದಡ್ಡೆ

ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೪-೮-೨೦೧೨ರಲ್ಲಿ ಜನಿಸಿದ ಇವರು ಬಾಲಕರಾದರು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡುತ್ತ ಜನರ ಪ್ರೀತಿಗೆ ಪಾತ್ರವಾಗಿದ್ದು ಶಾಲೆಯಲ್ಲಿ ಪ್ರತಿಭಾವಂತ ಮಗುವಾಗಿ ಸುಮಾರು ಇಪ್ಪತ್ತು ಕವಿತೆಗಳು ಬರೆದಿದ್ದು ಅವು ಕೆಲ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಿದ್ದಾನೆ . ಸಾಮಾಜಿಕ ಜಾಲತಾಣಗಳಲ್ಲಿಯು ಅವು ಪ್ರಕಟ ಮಾಡಲಾಗಿದೆ. ಮೂರನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈತನ ಪ್ರತಿಭೆ ಮೆಚ್ಚುವಂತಹದಾಗಿದೆ.

ಅಭಯಕುಮಾರ

ಹವ್ಯಾಸಿ ಯುವ ಬರಹಗಾರರಾದ ಅಭಯಕುಮಾರ ರವರು ಪಿ.ಯು.ಸಿ ವಿದ್ಯಾರ್ಥಿಯಾಗಿದ್ದು, ಬೀದರದ ಜಗನ್ನಾಥ ಮತ್ತು ಶ್ರೀದೇವಿ ದಂಪತಿಗಳಿಗೆ ದಿನಾಂಕ ೩-೨-೨೦೦೩ರಲ್ಲಿ ಜನಿಸಿದ್ದಾರೆ. ಮತ್ತು ಅನೇಕ ಕವನ, ಲೇಖನ ಬರಹಗಳನ್ನು ಬರೆಯುತ್ತಿರುವ ಇವರು ಕೆಲ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿಯು ಬರದು ಪ್ರಕಟಿಸುತ್ತಿದ್ದಾರೆ. ಮತ್ತು ಹಲವು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆ ಮಾಡಿದ್ದಾರೆ.

ವೈಭವ ದಡ್ಡೆ

ಉದಯೋನ್ಮುಖ ಯುವ ಬರಹಗಾರ ವೈಭವ ದಡ್ಡೆ. ರವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೧-೪-೧೯೯೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್;ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೮ನೇ ಸ್ಥಾನ ಪಡೆದ ಪ್ರತಿಭಾವಂತರು. ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಪ್ರಬಂಧಗಳು ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. `ಗೀತೋಪಾಸಕ' `ಅಪ್ಪನ ಕೀರ್ತಿ’ `ಬಿಸಿಲು ನಾಡಿನಿಂದ ಹಸಿರು ನಾಡಿಗೆ.' ಎಂಬ ಲೇಖನಗಳು ಬಾಲ್ಯದ ವಿದ್ಯಾರ್ಥಿಯಾಗಿರುವಾಗಲೇ ಬರೆದಿದ್ದು, ಅವು `ಸತ್ಯ ಜ್ಯೋತಿ' ಮೊದಲಾದ ಪ್ರಾತಿನೀಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಪಿಯುಸಿ ಓದುತ್ತಿದ್ದಾಗ ವಾಲಿಬಾಲ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಇವರು ಪಿಯುಸಿಯಲ್ಲಿ ಶೇ.೯೮./. ರಷ್ಟು ಅಂಕಗಳು ಪಡೆದು ಸದ್ಯ ಸರಕಾರಿ ಕಾಲೇಜು ಬೆಳಗಾವಿಯಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಂಗಿತ, ನೃತ್ಯ, ಭಾಷಣಕಾರರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಸುನೀತಾ ಬಿಕ್ಲೆ

ಯುವ ಕಲಾವಿದೆ ಹಾಗೂ ಕವಯತ್ರಿಯಾದ ಸುನೀತಾ ಬಿಕ್ಲೆ ರವರು ಬೀದರ ತಾಲೂಕಿನ ಮರಖಲ್ ಗ್ರಾಮದ ಬಸವರಾಜ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧-೮-೧೯೯೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಪದವಿ ಪಡೆದು ವೃತ್ತಿಪರ ಕಲಾವಿದರಾಗಿ ಬದುಕು ಸಾಗಿಸುತ್ತಿದ್ದಾರೆ. ಮತ್ತು ಕತೆ, ಕವನ, ಲೇಖನ, ಹಾಡುಗಳನ್ನು ಬರೆದಿರುವ ಇವರು ಗಾಯಕರಾಗಿ ಹಲವಾರು ವೃತ್ತಿಪರ ಕಾರ್ಯಕ್ರಮಗಳು ನೀಡುತ್ತಾರೆ. ಇವರಿಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ವೀರಶೆಟ್ಟಿ ವ್ಹಿ ಹಳ್ಳಿ

ಹವ್ಯಾಸಿ ಬರಹಗಾರರಾದ ಇವರು ಬಿ.ಎ.ಬಿ.ಇಡಿ. ಎಂ.ಎ. ಪತ್ರಿಕೋದ್ಯಮ ಪದವಿಧರರಾಗಿ ಬೀದರದ ನೈಟಿಂಗೇಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಅನೇಕ ಕವನ, ಲೇಖನ, ಆಧುನಿಕ ವಚನಗಳು ರಚಿಸಿದ್ದು, ಅವು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ.

ಸುಪ್ರೀತಾ ಎಸ್.ಶೀಲವಂತ

ಉದಯೋನ್ಮುಖ ಕವಯತ್ರಿ ಸುಪ್ರೀತಾ ಎಸ್.ಶೀಲವಂತ ರವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಗ್ರಾಮದ ಭದ್ರಪ್ಪಾ ಶೀಲವಂತ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೬-೩-೧೯೯೦ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಾಹ್ಯವಾಗಿ ಬಿ.ಎ.ಪದವಿ ಅಧ್ಯಯನ ಮಾಡುತ್ತಿದ್ದು, ಬೀದರದ ಶ್ರೀ ಸಪಾನಿ ಶಂಕ್ರೇಪ್ಪಾ ಶೀಲವಂತ ಅವರ ಧರ್ಮ ಪತ್ನಿಯಾಗಿಯಾಗಿದ್ದಾರೆ. ಡಾ.ಜಯದೇವಿ ತಾಯಿ ಲಿಗಾಡೆಯವರಂತೆ ಮರಾಠಿಗಿಂತ ಹೆಚ್ಚು ಕನ್ನಡ ಸಾಹಿತ್ಯದ ಕಡೆಗೆ ಒಲವು ಹೊಂದಿ ಕತೆ, ಕವನ, ಲೇಖನ ಸೇರಿದಂತೆ ೩೦೦ಕ್ಕೂ ಹೆಚ್ಚು ಬರಹಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ವಿದ್ಯೂನ್ಮಾನ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಇವರಿಗೆ ಕೆಲ ಪ್ರಶಸ್ತಿ ಬಹುಮಾನವು ಲಭಿಸಿವೆ. ಸದ್ಯ ಇವರು `ಭಾವ ಸಮರ್ಪಣೆ' ಎಂಬ ಕವನ ಸಂಕಲನ ಹೊರ ತರುತ್ತಿದ್ದಾರೆ.

ಜೈ.ಶ್ರೀ. ಮೇತ್ರೆ

ಯುವ ಕವಯತ್ರಿಯಾದ ಜೈ ಶ್ರೀ ಮೇತ್ರೆಯವರು ಬೀದರ ತಾಲೂಕಿನ ಗುನ್ನಳ್ಳಿ ಗ್ರಾಮದ ಶಿವರಾಜ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೫-೫-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಬೀದರದ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ ಬರಹಗಳು ಬರೆದಿದ್ದು, ಅವು ಕೆಲವು ಕಡೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ ಸಾಹಿತ್ಯ ಹಾಗೂ ಸಮಾಜ ಸೇವೆಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪೂಜ್ಯ. ಶ್ರೀ. ಗಣೇಶ್ವರ ಆವಧೂತರು

ಅಧ್ಯಾತ್ಮಿಕ ದೃಷ್ಟಿಕೋನದಿಂದ ಸಾಹಿತ್ಯ ರಚಿಸಿದ ಪೂಜ್ಯ. ಶ್ರೀ. ಗಣೇಶ್ವರ ಅವಧೂತರು. ಬೀದರ ಹತ್ತಿರದ ನೌಬಾದಿನ ಚವಳಿ ಗ್ರಾಮದ ಗಣೇಶ್ವರ ಸುಕ್ಷೇತ್ರದ ಪೀಠಾಧ್ಯಕ್ಷರಾಗಿದ್ದು ಅನೇಕ ಹಾಡು ತತ್ವಪದ ಆಧುನಿಕ ವಚನಗಳನ್ನು ಬರೆದಿದ್ದಾರೆ . ಮತ್ತು ಅವು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ.

ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು

ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪ್ರಕಾರದ ಸಾಹಿತ್ಯ ರಚಿಸುತ್ತಿರುವ ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು ಬೀದರ ಸಮೀಪದ ಯದಲಾಪುರ ಮತ್ತು ಮಹಾರಾಷ್ಟ್ರದ ತೋಳನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಇವರು ಅನೇಕ ತ್ರಿಪದಿಗಳಲ್ಲಿ ಹಾಗೂ ಬಹುಪಾದಗಳಲ್ಲಿ ವಚನಗಳು ಬರೆದಿದ್ದಾರೆ. `ತೋಳನೂರು ಶ್ರೀ ಯದಲಾಪುರ' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಆಧುನಿಕ ವಚನ ಸಂಕಲನಗಳಲ್ಲಿ ಪ್ರಕಟವಾಗಿವೆ.

ಅವಿನಾಶ ಸೋನೆ

ಯುವ ಬರಹಗಾರ ಅವಿನಾಶ ಸೋನೆ ರವರು ಬೀದರದ ಅಮೃತರಾವ ಮತ್ತು ಪದ್ಮಿನಿ ದಂಪತಿಗಳಿಗೆ ದಿನಾಂಕ ೩೦-೧-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಸ್ನಾತಕೋತ್ತರ ಪದವಿಧರರಾದ ಇವರು ಕವನ, ಲೇಖನ, ಹನಿಗವನ, ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ವ ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಗಳ ವತಿಯಿಂದ ಸತ್ಕರಿಸಿ ಗೌರವಿಸಲಾಗಿದೆ.

ವಿದ್ಯಾ ಸಾಗರ

ಯುವ ಬರಹಗಾರ ವಿದ್ಯಾಸಾಗರ ರವರು ಬೀದರ ತಾಲೂಕಿನ ಮರಖಲ ಗ್ರಾಮದ ಶರಣಪ್ಪಾ ಮತ್ತು ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೮ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ಅನೇಕ ಕವನ, ಲೇಖನ, ಹನಿಗವನ, ಚುಟುಕು ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.

ಪರಮೇಶ್ವರ ಸಂಗ್ರಾಮ್

ಯುವ ಬರಹಗಾರ, ಕಲಾವಿದರೆಂದರೆ ಪರಮೇಶ್ವರ ಸಂಗ್ರಾಮ್ ರವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಸಂಗ್ರಾಮ್ ಗಿರಣಿ ಮತ್ತು ಕಸ್ತೂರಿಬಾಯಿ ದಂಪತಿಗಳಿಗೆ ದಿನಾಂಕ ೧೧-೧-೧೯೮೮ ರಲ್ಲಿ ಜನಿಸಿದ್ದಾರೆ. ಬಿ.ಎ. ಮತ್ತು ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು ಬೆಂಗಳೂರಿನಲ್ಲಿ ಸಿನಿಮಾ ನಿರ್ದೇಶಕರಾಗಿ, ಚಲನಚಿತ್ರ ಸಂಭಾಷಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಮಾಜದ ಅಹಿತಕರ ಘಟನೆಗಳನ್ನು ಕಂಡು ಸಮಾಜಕ್ಕೆ ಸರಿ ತಪ್ಪುಗಳ ಅರಿವು ಮೂಡಿಸಿ ಬದಲಾವಣೆ ತರುವಲ್ಲಿ ಸಿನಿಮಾ ಮಾಧ್ಯಮವೇ ಸರಿ ಎಂದು ತಿಳಿದು ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿ ಕಥೆಗಾರ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೬ನೇ ತರಗತಿಯಲ್ಲಿರುವಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿ `ಪರಮೇಶ್ವರ ಸಂಗ್ರಾಮ್.' ಎಂಬ ಅಂಕಿತನಾಮದಲ್ಲಿ ೩೦೦ಕ್ಕೂ ಅಧಿಕ ಆಧುನಿಕ ವಚನಗಳು ಬರೆದಿದ್ದಾರೆ. `ಹೃದಯ ಸಾಕ್ಷಿ, ಹಾಗೂ `ಕುಂತಿ’ ಧಾರಾವಾಹಿಗಳಿಗೆ ಮೊದಲ ಬಾರಿಗೆ ಸಹಾಯಕ ನಿರ್ದೇಶನ ಕೆಲಸಕ್ಕೆ ಸೇರಿ ನಂತರ ಕೆಲ ಧಾರಾವಾಹಿಗಳಲ್ಲಿ ಮತ್ತು ಸೇವಂತಿ ಸೇವಂತಿ, ಆಟೊ, ಜಾಜಿಮಲ್ಲಿಗೆ, ಶಿವ, ಹೀಗೆ ಕೆಲ ಚಲನಚಿತ್ರಗಳಿಗೂ ಸಹಾಯಕ ಹಾಗೂ ಸಹ ನಿರ್ದೇಶನ ಮಾಡಿದ್ದಾರೆ. ಪೌರಾಣಿಕ ಮಹಾಕಾವ್ಯ `ಮಾಹಾಭಾರತ' ಎಂಬ ಕನ್ನಡ ಧಾರವಾಹಿಯಲ್ಲಿಯೂ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಾಹಿಸಿದ್ದಾರೆ. ಮತ್ತು ಝೀ ಕನ್ನಡ, ಸುರ್ಣ, ಈ ಟಿವಿ ವಾಹಿನಿಗಳಲ್ಲಿ ಕೆಲ ರಿಯಾಲಿಟಿ ಶೋಗಳಿಗೆ ಪ್ರೊಡ್ಯುಸರ್ ಆಗಿ ಕಾರ್ಯನಿರ್ವಹಿಸಿದಲ್ಲದೆ, `ಉದಯ ಕಾಮಿಡಿ’ ವಾಹಿನಿಯಲ್ಲಿ ಬರುತಿದ್ದ ಕಥೆ ಅಲ್ಲ ಕಾಮಿಡಿ. ೧೦೦ನೇ ಸಂಚಿಕೆ ಹಾಗೂ `ಡುಬಾಕ್ ಜೋಡಿ’ ೫೦೦ನೇ ಸಂಚಿಕೆಗಳಿಗೆ ಕಾಮಿಡಿ ಡೈಲಾಗ್ ಬರೆದು ನಿರ್ದೇಶನ ಮಾಡಿ, ಕೇಂದ್ರ ಸರ್ಕಾರದ ೫ ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಹಾಗೂ ೯೧.೧. ಎಫ್.ಎಂ. ರೇಡಿಯೋ ಕೇಂದ್ರದ ಕೆಲ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿಯು ನೀಡಿದ್ದಾರೆ. ಸದ್ಯದಲ್ಲಿಯೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದಾರೆ.

ಮಾರುತಿ ಮಾಸ್ಟರ್

ಯುವ ಬರಹಗಾರ ಮಾರುತಿ ಮಾಸ್ಟರ್ ರವರು ಬೀದರ ತಾಲೂಕಿನ ಸಿರ್ಸಿ ಗ್ರಾಮದ ಶಿವರಾಜ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಇಡಿ. ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ವಚನ ಹನಿಗವನ, ಮೊದಲಾದವು ಸಾಹಿತ್ಯ ರಚಿಸಿ `ಹಡೆದವ್ವ' (ಕವನ ಸಂಕಲನ) `ಅಂಬಿಗರ ಚೌಡಯ್ಯ' (ಚರಿತ್ರೆ) `ಆಧುನಿಕ ವಚನಗಳು' (ವಚನ ಸಂಕಲನ) ಎಂಬ ಕೃತಿಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ಉತ್ತರ ಕರ್ನಾಟಕ, ಬಿಂದಾಸ್, ಶ್ರೀ ಶಕ್ತಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕಮಠಾಣ, ಬಗದಲ್, ಹೋಬಳಿಗಳ ಕಸಾಪ ಅಧ್ಯಕ್ಷರಾಗಿ, ಸಿರ್ಸಿ ಗ್ರಾಂ.ಪA. ಸದಸ್ಯರಾಗಿ ಸೇವೆ ಸಲ್ಲಿಸಿ, ಸದ್ಯ ಔರಾದ (ಎಸ್) ಹೋಬಳಿಯ ಕಸಾಪ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ತಮ್ಮ ಹುಟ್ಟೂರಲ್ಲಿ ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆಯ ಮೂಲಕ ಸಿರ್ಸಿ, ಕಾಡವಾದಗಳಲ್ಲಿ ವಿದ್ಯಾ ಪ್ರಾಥಮಿಕ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ.

ನಾಗಪ್ಪ ಚಿಟ್ಟಾ

ಜಾನಪದ ಕವಿ ಕಲಾವಿದರಾದ ನಾಗಪ್ಪ ಚಿಟ್ಟಾ. ರವರು ಬೀದರ ತಾಲೂಕಿನ ಚಿಟ್ಟಾ ಗ್ರಾಮದ ಶೇಷಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೮-೧೦-೧೯೮೦ರಲ್ಲಿ ಜನಿಸಿದ್ದಾರೆ. ೭ನೇ ತರಗತಿವರೆಗೆ ಅಧ್ಯಯನ ಮಾಡಿದ ಇವರು ೧೯೬೪ರಲ್ಲಿ ಪೋಲಿಸ್ ಪೇದೆಯಾಗಿ ನೇಮಕಗೊಂಡು ೧೯೯೮ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಭಜನೆ ಪದ, ಮೊಹರಮ್ ಪದ, ತತ್ವಪದ, ಜಾನಪದ, ಕೋಲಾಟ ಪದ ಮೊದಲಾದವು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.

ಮಾಣಿಕಾದೇವಿ ಪಾಟೀಲ್

ಉದಯೋನ್ಮುಖ ಕವಯತ್ರಿ ಮಾಣಿಕಾದೇವಿ ಎಂ.ಪಾಟೀಲ್ ರವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪಾ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೯ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತರಾದ ಇವರು ಡಿ.ಇಡಿ.ಬಿ.ಇಡಿ ಎಂ.ಎ. ಪದವಿ ಪಡೆದು ಕಪಲಾಪೂರ (ತಿ) ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಮಾಡ್ಯೂಲ್ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿ ಆಸಕ್ತರಾಗಿ ಹಲವಾರು ಕವಿತೆಗಳನ್ನು ಬರೆದು ಪುಸ್ತಕವೊಂದು ಹೊರ ತರುವ ನಿಟ್ಟಿನಲ್ಲಿದ್ದಾರೆ. ಅಷ್ಟೇಯಲ್ಲದೆ ಇವರ ಕವನ ಚುಟುಕು ಲೇಖನ ಮೊದಲಾದ ಬರಹಗಳು ವಿವಿಧ ಪತ್ರಿಕೆ ಹಾಗೂ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರಿಗೆ ವಿವಿಧ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಎನ್.ಪಿ.ಇ.ಜಿ.ಇ.ಎಲ್.ಯೋಜನೆಯಡಿಯಲ್ಲಿ ಬೀದರ ತಾಲೂಕಿನ ಜಂಡರ್ ಕೋ.ಆರ್ಡಿನರಾಗಿ ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುವುದರೊಂದಿಗೆ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ. ಸುನೀತಾ ಕೂಡ್ಲಿಕರ್

ಉದಯೋನ್ಮುಖ ಕವಯತ್ರಿ ಡಾ.ಸುನೀತಾ ಕೂಡ್ಲಿಕರ್ ರವರು ಬೀದರದ ಬಾಬುರಾವ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೬-೬-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ. ಪದವಿಧರರಾಗಿದ್ದು, `ಬೋಮ್ಮಗೊಂಡೆಶ್ವರ ಒಂದು ಅಧ್ಯಯನ' ಎಂಬುದು ಎಂ.ಫೀಲ್ ಪ್ರಬಂಧವಾದರೆ, `ತಾಯ್ತನದ ವಿಭಿನ್ನ ಗ್ರಹಿಕೆಗಳು' ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಪ್ರಬಂಧ, ಹನಿಗವನಗಳು ಬರೆಯುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳು ಮಂಡನೆ ಮಾಡಿದ್ದಾರೆ. ಇವರಿಗೆ ಮಾತೃಶ್ರೀ ಪ್ರಶಸ್ತಿ, ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ, ೨೦೧೮ರಲ್ಲಿ ಆರ್ ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿ, ಸೇರಿದಂತೆ ಮೊದಲಾದವು ಪಡೆದಿದ್ದಾರೆ. ಇವರು ಬೀದರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಗಮ್ಮ ಎಚ್. ಭಂಗರಗಿ

ಕವಯತ್ರಿ ನಾಗಮ್ಮ ಎಚ್. ಭಂಗರಗಿ ರವರು ಕಲಬುರ್ಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಹುಲೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೦೯-೦೭-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ, ಫೀಲ್ ಪದವಿದರರಾದ ಇವರು ೨೦೦೯ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹುಮನಾಬಾದ ತಾಲೂಕಿನ ಮನ್ನಾಏಖೇಳಿಯ ಮಲ್ಲಿಕಾರ್ಜುನ ಅಮಗೊಂಡ ರವರ ಧರ್ಮ ಪತ್ನಿಯಾಗಿದ್ದು, ಬಾಲ್ಯದಿಂದಲೇ ತಮ್ಮ ತಂದೆ ಲೇಖಕರು, ಆಧ್ಯಾತ್ಮವಾದಿಗಳು, ಸಮಾಜ ಸೇವಕರು ಆಗಿದ್ದರಿಂದ ಅವರ ಪ್ರೇರಣೆಯಿಂದ ಕವನ, ಲೇಖನ, ಪ್ರಬಂಧ, ಹನಿಗವನ ಮೊದಲಾದ ಬರಹಗಳು ಬರೆಯುತ್ತಿದ್ದಾರೆ. `ಬೀದರ ಜಿಲ್ಲೆಯ ಮಹಿಳಾ ಕಾವ್ಯಗಳ ಒಂದು ಅಧ್ಯಯನ’ ಎಂಬ ಕಿರುಸಂಶೋಧನೆಯನ್ನು ಪೂರ್ಣಗೊಳಿಸಿ ಮಹಿಳಾ ಕವಯತ್ರಿಯರನ್ನು ಒಗ್ಗೂಡಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ತ್ರೆöÊಮಾಸಿಕ, `ಅಚಲ’ ಮಾಸಪತ್ರಿಕೆ, ಹಾಗೂ ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಕವನ ವಾಚನವು ಮಾಡಿದ ಇವರು ಹಲವಾರು ರಾಜ್ಯ, ರಾಷ್ಟçಮಟ್ಟದ ಕಮ್ಮಟಗಳಲ್ಲಿಯು ಅನೇಕ ಉಪನ್ಯಾಸಗಳು ನೀಡಿದ್ದಾರೆ. ಸದ್ಯ ಇವರು ಬೀದರನಲ್ಲಿದ್ದುಕೊಂಡು ತಮ್ಮ ವೃತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ,

ವಿರೂಪಾಕ್ಷ ಗಾದಗಿ

`ಬಸವ ದನಿ' ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಬರವಣಿಗೆಯಲ್ಲಿ ತೊಡಗಿಸಿರುವ ಬರಹಗಾರ ವಿರೂಪಾಕ್ಷ ಗಾದಗಿ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಸದಾನಂದ ಹಾಗೂ ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೨೪-೧೧-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಕೃಷಿ. ಎಂ.ಎಸ್ಸಿ. ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಪಡೆದು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿಯು ಆಸಕ್ತರಾಗಿ ಕತೆ ಕವನ ಹನಿಗವನಗಳನ್ನು ಬರೆದಿದ್ದಾರೆ. ಅವು ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ನಾಡು- ನುಡಿಗಾಗಿ ೨೦೦೦ರಲ್ಲಿ `ಕನ್ನಡಾಂಬೆ ಗೆಳೆಯರ ಬಳಗ' ರಚಿಸಿ ಯುವ ಜನರನ್ನು ಸಂಘಟಿಸಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಕಲಂ ೩೭೧ ಜಾರಿಗಾಗಿ, ಅವಿರತ ಹೋರಾಟ, ಗಡಿ ಭಾಗದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅಸಮಾನತೆ ವಿರುಧ್ಧ ಧ್ವನಿ ಎತ್ತಿ, ಸರ್ಕಾರವನ್ಮು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ೨೦೦೪ನೇ ಸಾಲಿನಲ್ಲಿ ರಾಜ್ಯ ಅತ್ತ್ಯುತ್ತಮ ಯುವ ಪ್ರಶಸ್ತಿ ಇವರಿಗೆ ನೀಡಿದೆ. ಮತ್ತು ಭಾರತ ಸರ್ಕಾರದ ವತಿಯಿಂದ ಮದ್ಯಪ್ರದೇಶದ ರತಲಾಮ್ ನಲ್ಲಿ ಆಯೊಜಿಸಲಾದ ಯುವ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯುವ ಪ್ರಶಸ್ತಿ ಯು ಪಡೆದಿದ್ದಾರೆ. ಇವರು ಬಂಡಾಯ ಬರಹಗಾರರಾಗಿ ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರ ತರುವ ನಿಟ್ಟಿನಲ್ಲಿದ್ದಾರೆ. ಇವರು ನಾಲ್ಕು ಶಿಕ್ಷಣ ಸಂಸ್ಥೆಗಳನ್ನು ತೆರೆದು ಬೀದರ ನಗರದ ಕೊಳಚೆ ಪ್ರದೇಶಗಳಲ್ಲಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಬುದ್ಧದೇವಿ ಅಶೋಕ ಸಂಗಮ್.

ಉದಯೋನ್ಮುಖ ಕವಯತ್ರಿಯಾದ ಬುದ್ಧದೇವಿ ಅಶೋಕ ಸಂಗಮ್ ರವರು ಬೀದರ ತಾಲೂಕಿನ ಅಷ್ಟೂರ ಗ್ರಾಮದ ಶಂಕರರಾವ ಮೆಲ್ಲದೊಡ್ಡಿ ಮತ್ತು ಘಾಳೆಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಶಿಕ್ಷಣ ಪಡೆದ ಇವರು ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಸದ್ಯ ಜನವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತಿಚಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಬುದ್ದ, ಬಸವ, ಅಂಬೇಡ್ಕರ್ ತತ್ವದಡಿಯಲ್ಲಿ ಕವನ ಲೇಖನಗಳು ರಚಿಸುತ್ತಿದ್ದಾರೆ. ಇವರ ಬರಹಗಳು ಬೆಳಗಾವಿಯ ಹಸಿರು ಕ್ರಾಂತಿ. ಮತ್ತು ಬುಕ್ ಬ್ರಹ್ಮ ಜಾಲತಾಣದಲ್ಲಿ ಪ್ರಕಟವಾಗಿವೆ. ಮತ್ತು ಬುಕ್ ಬ್ರಹ್ಮ ಜಾಲತಾಣದವರು ಏರ್ಪಡಿಸಿದ ೨೦೨೦ ರ ಅಕ್ಟೊಬರ್ ತಿಂಗಳ ಜನ ಮೆಚ್ಚಿದ ಕವನ ಸ್ಪರ್ಧೆಯಲ್ಲಿ ಇವರ ಕವನಕ್ಕೆ ರಾಜ್ಯ ಮಟ್ಟದ ದ್ವಿತೀಯ ಬಹುಮಾನ ಲಭಿಸಿದೆ. ಇವರಿಗೆ ೨೦೧೮ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಇಂಡಿಯನ್ ಲಿಟರೆಸ್ಸಿ ಮಿಷನ್ ರೋಟರಿ ಕ್ಲಬ್ ವತಿಯಿಂದ `ರಾಷ್ಟ್ರ ನಿರ್ಮಾಣ ಪ್ರಶಸ್ತಿ,’ ೨೦೧೯ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ ವತಿಯಿಂದ ಉತ್ತಮ ಗೈಡ್ಸ ಪ್ರಶಸ್ತಿ, ಮತ್ತು ಕರ್ನಾಟಕ ರಾಜ್ಯ ನೌಕರರ ಕ್ರೀಡಾ ಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರಿಗೆ ವಿವಿಧ ಕ್ರೀಡೆಗಳಲ್ಲಿ ೧೨ಕ್ಕಿಂತ ಹೆಚ್ಚು ಪ್ರಥಮ ದ್ವಿತೀಯ ಬಹುಮಾನಗಳು ಪಡೆದು ೧ ಚಿನ್ನದ ಪದಕ ಮತ್ತು ೮. ಬೆಳ್ಳಿಯ ಪದಕಗಳು ಪಡೆದು ಉತ್ತಮ ಕ್ರೀಡಾ ಪಟುವಾಗಿಯು ಗುರುತಿಸಿಕೊಂಡಿದ್ದಾರೆ. ಸದ್ಯ ಇವರು ಬೀದರ ನಗರದ ನಿವಾಸಿಯಾಗಿದ್ದು, ಕತೆ ಕವನ ಲೇಖನ ಮೊದಲಾದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರ ಕವನ ಸಂಕಲನವೊAದು ಮುದ್ರಣದ ಹಂತದಲ್ಲಿದೆ.