ಪುಟಗಳು

ಮಂಗಳವಾರ, ಜನವರಿ 14, 2025

ಬುದ್ಧದೇವಿ ಅಶೋಕ ಸಂಗಮ್.

ಉದಯೋನ್ಮುಖ ಕವಯತ್ರಿಯಾದ ಬುದ್ಧದೇವಿ ಅಶೋಕ ಸಂಗಮ್ ರವರು ಬೀದರ ತಾಲೂಕಿನ ಅಷ್ಟೂರ ಗ್ರಾಮದ ಶಂಕರರಾವ ಮೆಲ್ಲದೊಡ್ಡಿ ಮತ್ತು ಘಾಳೆಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಶಿಕ್ಷಣ ಪಡೆದ ಇವರು ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಸದ್ಯ ಜನವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತಿಚಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಬುದ್ದ, ಬಸವ, ಅಂಬೇಡ್ಕರ್ ತತ್ವದಡಿಯಲ್ಲಿ ಕವನ ಲೇಖನಗಳು ರಚಿಸುತ್ತಿದ್ದಾರೆ. ಇವರ ಬರಹಗಳು ಬೆಳಗಾವಿಯ ಹಸಿರು ಕ್ರಾಂತಿ. ಮತ್ತು ಬುಕ್ ಬ್ರಹ್ಮ ಜಾಲತಾಣದಲ್ಲಿ ಪ್ರಕಟವಾಗಿವೆ. ಮತ್ತು ಬುಕ್ ಬ್ರಹ್ಮ ಜಾಲತಾಣದವರು ಏರ್ಪಡಿಸಿದ ೨೦೨೦ ರ ಅಕ್ಟೊಬರ್ ತಿಂಗಳ ಜನ ಮೆಚ್ಚಿದ ಕವನ ಸ್ಪರ್ಧೆಯಲ್ಲಿ ಇವರ ಕವನಕ್ಕೆ ರಾಜ್ಯ ಮಟ್ಟದ ದ್ವಿತೀಯ ಬಹುಮಾನ ಲಭಿಸಿದೆ. ಇವರಿಗೆ ೨೦೧೮ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಇಂಡಿಯನ್ ಲಿಟರೆಸ್ಸಿ ಮಿಷನ್ ರೋಟರಿ ಕ್ಲಬ್ ವತಿಯಿಂದ `ರಾಷ್ಟ್ರ ನಿರ್ಮಾಣ ಪ್ರಶಸ್ತಿ,’ ೨೦೧೯ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ ವತಿಯಿಂದ ಉತ್ತಮ ಗೈಡ್ಸ ಪ್ರಶಸ್ತಿ, ಮತ್ತು ಕರ್ನಾಟಕ ರಾಜ್ಯ ನೌಕರರ ಕ್ರೀಡಾ ಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರಿಗೆ ವಿವಿಧ ಕ್ರೀಡೆಗಳಲ್ಲಿ ೧೨ಕ್ಕಿಂತ ಹೆಚ್ಚು ಪ್ರಥಮ ದ್ವಿತೀಯ ಬಹುಮಾನಗಳು ಪಡೆದು ೧ ಚಿನ್ನದ ಪದಕ ಮತ್ತು ೮. ಬೆಳ್ಳಿಯ ಪದಕಗಳು ಪಡೆದು ಉತ್ತಮ ಕ್ರೀಡಾ ಪಟುವಾಗಿಯು ಗುರುತಿಸಿಕೊಂಡಿದ್ದಾರೆ. ಸದ್ಯ ಇವರು ಬೀದರ ನಗರದ ನಿವಾಸಿಯಾಗಿದ್ದು, ಕತೆ ಕವನ ಲೇಖನ ಮೊದಲಾದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರ ಕವನ ಸಂಕಲನವೊAದು ಮುದ್ರಣದ ಹಂತದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ