ಅಧ್ಯಾತ್ಮಿಕ ಭಕ್ತಿ, ಭಾವಗೀತೆಗಳನ್ನು ಬರೆದಿರುವ ಇವರು ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮದ ರುದ್ರಪ್ಪ ಮತ್ತು ಸಮವ್ವ ದಂಪತಿಗಳಿಗೆ ೧೯೨೭ರಲ್ಲಿ ಜನಿಸಿದ್ದಾರೆ. ಇವರ ವಿದ್ಯಾರ್ಹತೆ ವೃತ್ತಿ ಮತ್ತಿತರ ವಿವರ ತಿಳಿದು ಬಂದಿಲ್ಲ ಆದರೆ ಸಾಹಿತ್ಯ ರಚನೆಯಲ್ಲಿ ಇವರು ಬರೆದ ಹಾಡು ಭಜನೆ ಗೀತೆಗಳು ಇಂದು ಜನರ ನಾಲಿಗೆಯ ಮೇಲೆ ಹರಿದಾಡುತ್ತಿವೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿಸಬೇಕೆಂಬ ಉದ್ದೇಶದಿಂದ ಹಲವಾರು ಭಾವ ಭಂಗಿಗಳೊಡನೆ ಕೀರ್ತನೆಗಳನ್ನು ಹೇಳುತ್ತಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ