ಮಂಗಳವಾರ, ಜನವರಿ 14, 2025
ವಿ.ಎಂ.ಡಾಕುಳಗಿ
`ಕವಿಮಡಾ' ಎಂಬ ಕಾವ್ಯನಾಮ ಹೊಂದಿದವರು ವಿ.ಎಂ.ಡಾಕುಳಗಿಯವರು. ಇವರು ಭಾಲ್ಕಿ ತಾಲೂಕಿನ ಕಟಕ ಚಿಂಚೋಳಿ ಗ್ರಾಮದ ಮಹಾರುದ್ರಯ್ಯ ಮತ್ತು ಪಾರ್ವತಿದೇವಿ ದಂಪತಿಗಳಿಗೆ ೫-೩-೧೯೫೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಎಡ್.ಪದವಿಧರರಾದ ಇವರು ೧೯೮೩ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ. ಕವನ, ಲೇಖನ, ಆಧುನಿಕ ವಚನ, ಚಿಂತನ, ವಿಮರ್ಶೆ, ಚರಿತ್ರೆ ಮೊದಲಾದ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರಗೊಂಡಿವೆ. ಇವರು ೪೦ಕಿಂತ ಹೆಚ್ಚು ವ್ಯಕ್ತಿಚಿತ್ರ ಲೇಖನಗಳು, ೧೦೦ಕಿಂತ ಹೆಚ್ಚು ಚರಿತ್ರೆ ಹೇಳುವ ಕವಿತೆಗಳು, ೨೦೦ಕಿಂತ ಹೆಚ್ಚು ಆಧುನಿಕ ವಚನಗಳು, ಹತ್ತಾರು ಕತೆಗಳು ೫೦೦ಕಿಂತ ಹೆಚ್ಚು ಕವನಗಳನ್ನು ರಚಿಸಿದ್ದು, ಅವು ಅಪ್ರಕಟಿತವಾಗಿವೆ. ಇವರ `ಮುದ್ದು ಕೊಟ್ಟ ತಪ್ಪು', `ಸಂಚಲನಾ ' ಎಂಬ ಕತೆಗಳು ಕಮಲಾಕರ್ ಜೋಶಿ ರವರು ಹಿಂದಿಗೆ ಅನುವಾಸಿದ್ದಾರೆ. ಇವರ ಕರಾಳ ದಿನ ಕಾವ್ಯಕ್ಕೆ ರಾಜ್ಯ ಪ್ರಶಸ್ತಿ. ಮಂತ್ರ ಸ್ವಾತಂತ್ರ್ಯ ಕಾವ್ಯಕ್ಕೆ ವಿಭಾಗಿಯ ಪ್ರಶಸ್ತಿ, ಹಾಗೂ ಗದಗದಿಂದ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಮೊದಲಾದವು ಪಡೆದಿದ್ದಾರೆ. ಯುನೆಸ್ಕೋ ಸಮಿತಿಯ ನಿರ್ದೇಶಕರಾಗಿ, ಜಿಲ್ಲಾ ಪಂಚಾಯತ್ ನಾಮನಿರ್ದೇಶನ ಸದಸ್ಯರಾಗಿ, ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಚಳುವಳಿಗಾರರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ