ಭಾನುವಾರ, ಜನವರಿ 19, 2025
ಎಂ.ಆರ್.ಶ್ರೀಕಾಂತ
ಬೀದರ ಜಿಲ್ಲೆಯ ಉದಯೋನ್ಮುಖ ಬರಹಗಾರರ ಬಳಗದಲ್ಲಿ ಎಲೆ ಮರೆಯ ಕಾಯಿಯಂತೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಸೃಜನಶೀಲ ಕವಿ,ಸಾಹಿತಿಯೆಂದರೆ ಶ್ರೀಕಾಂತ ಮದರಗಾಂವಕರ್.ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೫-೨-೧೯೭೯ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಖಾಸಗಿ ಶಾಲೆಯೊಂದರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತರಾಗಿದ್ದರಿಂದ ಇವರು ಕವನ, ಆಧುನಿಕ ವಚನ, ಚುಟುಕು, ಹನಿಗವನ, ಲೇಖನ ಮೊದಲಾದ ಬರಹಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ' ಕಾಲಜ್ಞಾನ' ಎಂಬ ಕವನಸಂಕಲನ ಮತ್ತು ' ಶುಭೋದಯ' ಎಂಬ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದಾರೆ. ಹಾಗೂ ' ಶಬ್ದಗಳ ಸುಳಿಯಲ್ಲಿ' ಎಂಬ ವಿಮರ್ಶೆ ಕೃತಿ, 'ಕಾಲಜ್ಞಾನ' ಎಂಬ ಕವನಸಂಕಲನ, 'ವ್ಯಾಕರಣ ದರ್ಪಣ' ಎಂಬ ವ್ಯಾಕರಣ ಕೃತಿ, 'ಗಣಕ ರಹಸ್ಯ' ಎಂಬ ಕಂಪ್ಯೂಟರ್ ಶಿಕ್ಷಣ ಕೃತಿ, ಮತ್ತು' ಸಾಹಿತ್ಯ ಸಾಗರ' ಎಂಬ ಕನ್ನಡ ಸಾಹಿತ್ಯ ಕುರಿತಾದ ಲೇಖನಗಳ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಕವನ, ಚುಟುಕು, ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ,ವಿಜಯಕರ್ನಾಟಕ ವಿಜಯವಾಣಿ,ಜನಪರ, ಮಯೂರ, ಮಲ್ಲಿಗೆ,ಕರವೇ ನಲ್ನುಡಿ, ಧೀನರ ಧ್ವನಿ, ಮೊದಲಾದ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಕವನಸಂಕಲನಗಳಲ್ಲಿ ಹಾಗೂ ಕೆಲವು ಅಭಿನಂದನಾ ಗ್ರಂಥಗಳಲ್ಲಿ ಇವರ ಕವನ ಲೇಖನಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ೧೦ ಕವನಗಳು ಪ್ರಸಾರವಗಿವೆ. ಹಾಗೂ ೨೦೦೨ ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘದವರು ಏರ್ಪಡಿಸಿದ ರಾಜ್ಯ ಮಟ್ಟದ ಕವನಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನವು ಬಂದಿರುತ್ತದೆ. ಹಾಗೂ ೨೦೦೩ ರಲ್ಲಿ ಕಲಬುರಗಿಯ ಆಜಾದ್ ವಿಚಾರ ವೇದಿಕೆಯವರು ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ, ಮತ್ತು ಗದಗದ ಗಂಗಮ್ಮ ಪ್ರಕಾಶನದಿಂದ ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಇವರಿಗೆ ಪ್ರೋತ್ಸಾಹಕ ಬಹುಮನವು ಲಭಿಸಿವೆ. ಹೀಗೆ ಇವರ ಸಾಹಿತ್ಯ ಸೇವೆಯನ್ನು ಕಂಡು ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ 'ಕವಿರತ್ನ ಶ್ರೀ ಪ್ರಶಸ್ತಿ' ಮತ್ತು ೨೦೧೫ ರಲ್ಲಿ ಕನ್ನಡ 'ಕಾವ್ಯರತ್ನ ಪ್ರಶಸ್ತಿ ' ನೀಡಿದ್ದಾರೆ. ೨೦೧೬ ರಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘದ ವತಿಯಿಂದ 'ಕನ್ನಡ ಸೇವಾ ರತ್ನ' ಹಾಗೂ ೨೦೧೭ ರಲ್ಲಿ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ 'ಕನಕ ಶ್ರೀ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ