ಮಂಗಳವಾರ, ಜನವರಿ 14, 2025
ಪ್ರದೀಪರೆಡ್ಡಿ ಚಿನಕೇರಾ
ಹೊರ ನಾಡಿನಲ್ಲಿದ್ದುಕೊಂಡು ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಬರಹಗಾರ ಪ್ರದೀಪರೆಡ್ಡಿ ಚಿನಕೇರಾ. ರವರು ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೧೨.-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಪದವಿಧರರಾದ ಇವರು ಹೈದ್ರಾಬಾದಿನ ಕಂಪನಿಯೊAದರ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಚುಟುಕು, ಲೇಖನ ಬರಹಗಳು ಬರೆದಿದ್ದು, ಅವು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಯರಬಾಗಿನಲ್ಲಿ ಶಾಯಿರೆಡ್ಡಿ ಸಾಹಿತ್ಯ ಬಳಗವನ್ನು ಸ್ಥಾಪಿಸಿ ಅದರ ಮೂಲಕ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುವುದರೊಂದಿಗೆ ಸಹೋದರ ದಯಾನಂದ ರೆಡ್ಡಿಯವರು ಪ್ರಾರಂಭಿಸಿದ `ಸತ್ಯ ಮಾತು' ಮಾಸ ಪತ್ರಿಕೆಯ ಪ್ರಸಾರಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಸಿರಿಗನ್ನಡ ವೇದಿಕೆಯಿಂದ ಕನ್ನಡ ಕಾವ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಕನ್ನಡ ಸೇವಾ ರತ್ನ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ