ಪುಟಗಳು

ಭಾಲ್ಕಿ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾಲ್ಕಿ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜನವರಿ 21, 2025

ಸಂಜೀವ ಪಿ.ಸರ‍್ಯವಂಶಿ.

ಉದಯೋನ್ಮುಖ ಕವಿ, ಸಾಹಿತಿಗಳಾಗಿ ಗರ‍್ತಿಸಿಕೊಂಡು ಮರಾಠಿ ಭಾಷೆಯಲ್ಲಿ ಕತೆ,ಕವನ, ಲೇಖನ ಮೊದಲಾದ ತರಹದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಸಂಜೀವ ಪಿ.ಸರ‍್ಯವಂಶಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾಟಸಾಂಗವಿ ಗ್ರಾಮದ ಪುಂಡಲೀಕರಾವ ಮತ್ತು ಕೇರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೬ ರಲ್ಲಿ ಜನಿಸಿದ್ದಾರೆ. ಎಂ.ಎ. (ಮರಾಠಿ) ಸ್ನಾತಕೋತ್ತರ ಪದವಿಧರರಾದ ಇವರು ಭಾಲ್ಕಿಯ ಅಕ್ಕ ಮಹಾದೇವಿ ಮಹಿಳಾ ಪದವಿ ಪರ‍್ವ ಮಹಾವಿದ್ಯಾಲಯದಲ್ಲಿ ಮರಾಠಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರು ಕೂಡ ಕನ್ನಡ, ಹಿಂದಿ, ಇಂಗ್ಲೀಷ್, ಭಾಷಾ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಪ್ರಕಾರದ ಕತೆ ಕವನ ಲೇಖನ ಪ್ರಬಂಧ ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ೨೦೧೪ ರಲ್ಲಿ 'ಚಕ್ರ.' ಎಂಬ (ಕವನ ಸಂಕಲನ) ಮರಾಠಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಕವನ, ಲೇಖನ,ಪ್ರಬಂಧ, ಹನಿಗವನ, ಬರಹಗಳು 'ಅಸ್ಮೀತಾ' ಮತ್ತು 'ಅನುಬಂಧ' ಎಂಬ ಮರಾಠಿ ತ್ರೈಮಾಸಿಕ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

ಭಾನುವಾರ, ಜನವರಿ 12, 2025

ಮಾಣಿಕರಾವ ಸಿ.ಪಾಟೀಲ್

ಉದಯೋನ್ಮುಖ ಯುವ ಬರಹಗಾರ ಮಾಣಿಕರಾವ ಪಾಟೀಲ್ ರವರು ಕನ್ನಡ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಸಾಹಿತ್ಯ ರಚಿಸುತ್ತಿದ್ದಾರೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಚಂದ್ರಶೇಖರ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೯೫ರಲ್ಲಿ ಜನಿಸಿದ್ದಾರೆ. ಮತ್ತು ಅವರ ಬಾಲ್ಯ ಸ್ನೇಹಿತ ಆಕಾಶ ಹಿರಿವಗ್ಗೆ ಅವರೊಂದಿಗೆ `ದಕ್ಷಿಣ ಕಾಶಿ ದರ್ಶನ' ಎಂಬ ಪೌರಾಣಿಕ ಹಾಗೂ ಐತಿಹಾಸಿಕ ಕೃತಿಯನ್ನು ರಚಿಸಿದ್ದಾರೆ. ಇದು ಭಾಲ್ಕಿ ತಾಲೂಕಿನ ಪ್ರಸಿದ್ಧ ಮೈಲಾರ ಮಲ್ಲಣ್ಣನ ಚರಿತ್ರೆ ಹೇಳುತ್ತದೆ. ಮೈಲಾರ ಮಲ್ಲಣ್ಣನ ಕ್ಷೇತ್ರಕ್ಕೆ ಇತಿಹಾಸದಲ್ಲಿ `ದಕ್ಷಿಣ ಕಾಶಿ' ಎಂದು ಹೆಸರು ಪಡೆದಿದೆ. ಆ ಹೆಸರೆ ಸೂಚಿಸುವ ಪುಸ್ತಕ ಇದಾಗಿದೆ. ಮೈಲಾರ ಮಲ್ಲಣ್ಣ ದೇವಸ್ಥಾನ ಕ್ಷೇತ್ರಕ್ಕೆ ಮೊದಲು ಪ್ರೇಮಾಪೂರ, ಮೈಲಾಪೂರ,ಖಾನಾಪೂರ, ಮತ್ತು ದಕ್ಷಿಣ ಕಾಶಿ, ಎಂಬ ವಿವಿಧ ಹೆಸರಿನಿಂದ ಕರೆಯುತ್ತಿದ್ದರೆಂದು, ಆ ಗ್ರಾಮದ ಕುರಿತು ಇತಿಹಾಸ ಹೇಳುವ ಈ ಕೃತಿ ಪ್ರವಾಸಿಗರಿಗೆ ಉತ್ತಮ ಮಾರ್ಗದರ್ಶಿ ಕೈಪಿಡಿಯಾಗಿ ಕಂಡು ಬರುತ್ತದೆ

ಆಕಾಶ ಹಿರಿವಗ್ಗೆ

ಉದಯೋನ್ಮುಖ ಯುವ ಬರಹಗಾರ ಆಕಾಶ ಹಿರಿವಗ್ಗೆಯವರು ಇಂಜಿನಿಯರಿAಗ್ ಪದವಿಧರರಾಗಿದ್ದರು ಕೂಡ ಕನ್ನಡ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ ಚುಟುಕು ಲೇಖನಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಬಸಪ್ಪಾ ಮತ್ತು ಸವಿತಾ ದಂಪತಿಗಳಿಗೆ ದಿನಾಂಕ ೮-೧-೧೯೯೪ ಜನಿಸಿದ್ದಾರೆ. ಇವರು ಗ್ರಾಮದ ಅವರ ಬಾಲ್ಯ ಸ್ನೇಹಿತರಾದ ಮಾಣಿಕರಾವ ಪಾಟೀಲ್ ಅವರೊಂದಿಗೆ ಸೇರಿ `ದಕ್ಷಿಣ ಕಾಶಿ ದರ್ಶನ' ಎಂಬ ಪೌರಾಣಿಕ ಹಾಗೂ ಐತಿಹಾಸಿಕ ಕೃತಿ ರಚಿಸಿದ್ದಾರೆ. ಮತ್ತು ವಿವಿಧ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡುವ ಇವರು ಕತೆ, ಕವನ, ಲೇಖನ, ಮೊದಲಾದ ಪ್ರಕಾರದ ಪುಸ್ತಕ ಹೊರತರುವ ಉದ್ದೇಶವಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೇಳವಣಿಗೆಯಾಗಿದೆ.

ಅಜಿತ ನೆಳಗೆ

ಉದಯೋನ್ಮುಖ ಬರಹಗಾರ ಅಜಿತ ನೆಳಗೆಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ `ನೆಳಗಿ' ಗ್ರಾಮದ ನೀಲಕಂಠ ಮತ್ತು ರಾಜಾಬಾಯಿ ದಂಪತಿಗಳಿಗೆ ದಿನಾಂಕ ೭-೧೦-೧೯೯೩ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಬಿ.ಎಡ್.ಪದವಿಧರರಾದ ಇವರು ವಿದ್ಯಾರ್ಥಿಯಾಗಿವಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ, ಹನಿಗವನ, ಆಧುನಿಕ ವಚನ ಮೊದಲಾದವು ಬರೆದು ೨೦೧೬ರಲ್ಲಿ `ಬಯಕೆ' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ತ್ರೆöÊಮಾಸಿಕ ಸೇರಿ ಮೊದಲಾದ ಕಡೆಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ರತ್ನಾಕರ' ಎಂಬ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.

ದಿಲೀಪ ವಿ.ತರನಳ್ಳಿ

ಉದಯೋನ್ಮುಖ ಬರಹಗಾರ ದಿಲೀಪ ವಿ.ತರನಳ್ಳಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ವಿಜಯಕುಮಾರ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಬಿ.ಇಡಿ. ಪದವೀಧರರಾದ ಇವರು ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೨೦ರಲ್ಲಿ `ಹಸಿದ ಹೊಟ್ಟೆ' ಎಂಬ ಕವನಸಂಕಲನ ಪ್ರಕಟಿಸಿದ್ದು, ಅದು ೨೦೧೯ನೇ ಸಾಲಿನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯ ಧನಕ್ಕೆ ಆಯ್ಕೆಯಾಗಿ ಪ್ರಕಟವಾಗಿದೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ರೇಣುಕಾ ಎನ್.ಬಿ.

ಕವಯತ್ರಿ, ರೇಣುಕಾ ಎನ್.ಬಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿ ತುಗಾಂವ ಗ್ರಾಮದ ನೆಹರು ಭಂಡೆ ಮತ್ತು ಪದ್ಮಾವತಿ ಭಂಡೆ ದಂಪತಿಗಳಿಗೆ ದಿನಾಂಕ ೨೦-೧೧-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ತಾಲೂಕಿನ ಕಂದಗೂಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೦ರಲ್ಲಿ `ಭಾವ ಕಾರಂಜಿ’ ೨೦೧೩ರಲ್ಲಿ `ಗರಿ ಬಿಚ್ಚಿದ ನವಿಲು’ ೨೦೧೫ರಲ್ಲಿ `ವಚನಾಂಜಲಿ.' ಎಂಬ ಕವನ ಸಂಕಲನಗಳು, ಮತ್ತು ೨೦೧೮ರಲ್ಲಿ ಹಿಂದಿ ಕಾದಂಬರಿಕಾರ ಕುಶಲೋಶ ಶಾಖ್ಯ ರವರ `ಸ್ತ್ರೀ ಶಕ್ತಿ ಯಶೋಧರ' ಎಂಬ ಕಾದಂಬರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ೨೦೧೯ರಲ್ಲಿ `ಭೂಮಿಗೆ ಬಂದ ಭಗವಂತ' ಎಂಬ ಜೀವನ ಚರಿತ್ರೆ ಶಿವರಾಮ ಮಹಾರಾಜರ ಕುರಿತು ಪ್ರಕಟಿಸಿದ್ದಾರೆ. ಇವರ `ಭಾವ ಕಾರಂಜಿ' ಕವನ ಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಧನ ಪಡೆದುಕೊಂಡಿರುತ್ತದೆ. ಇವರ ಕಲೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬೀದರ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಮೊದಲಾದ ಕಡೆಗಳಿಂದ ಹಲವು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಬೀದರ ಕದಂಬ ಕನ್ನಡ ಸಾಹಿತ್ಯ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಗಾನ ಕಲಾವಿದೆಯಾಗಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ `ಗಾನಸುಧೆ’ ಕಾರ್ಯಕ್ರಮವು ನೀಡಿ ಜನಮನ ರಂಜಿಸಿದ್ದಾರೆ. ಇವರ ಕತೆ, ಕವನ,ಲೇಖನ,ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮಹಾರುದ್ರ ಡಾಕುಳಗೆ

ಸಾಹಿತಿ ಮಹಾರುದ್ರ ಡಾಕುಳಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ಶ್ರೀ ಮಲ್ಲಯ್ಯ ಮತ್ತು ಶ್ರೀಮತಿ ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೬-೧೦-೧೯೮೪ ರಲ್ಲಿ ಜ£ಸಿದ್ದಾರೆ. ಬಿ.ಎ.ಬಿ.ಎಡ್. ಪದವಿಧರರಾದ ಇವರು ಬೀದರನಲ್ಲಿ ಕಂಪ್ಯೂಟರ್ ಡಿಸೈನರ್ ಮತ್ತು ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶರಣ ಸಾಹಿತ್ಯದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಇವರು ‘ಎಲ್ಲಿಗೆ ಪಯಣ’ (ಕವನಸಂಕಲನ) ‘ಪ್ರಥಮಂತು ಬಸವಣ್ಣ’ ಮತ್ತು ‘ಬಸವ ಮಹಾಮನೆ ದರ್ಶನ’ ಎಂಬ ಶರಣ ಸಾಹಿತ್ಯ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಭಾರತ ಸರ್ಕಾರದಿಂದ ರಾಷ್ಟ್ರೀಯ ಜೂ£ಯರ್ ಫೆಲೋಶಿಪ್. ಮತ್ತು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ವತಿಯಿಂದ ‘ರಾಷ್ಟ್ರೀಯ ಲೋಕಕಲಾ ಪ್ರಶಸ್ತಿ. ಹುಲಸೂರು ಮಠದಿಂದ ಸೇವಾ ವಿದುರ ಪ್ರಶಸ್ತಿ, ಹಾಗೂ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ‘ಶರಣಧರ್ಮ ರತ್ನ ಪ್ರಶಸ್ತಿ. ಸೇರಿದಂತೆ ಮೊದಲಾದವು ಪಡೆದಿದ್ದಾರೆ.

ಕಲ್ಲಪ್ಪಾ ಮೊಳಕೇರೆ

ಯುವ ಬರಹಗಾರ ಕಲ್ಲಪ್ಪಾ ಮೊಳಕೇರೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕೊನಮೇಳಕುಂದಾ ಗ್ರಾಮದ ತುಕಾರಾಮ ಮತ್ತು ಕಮಳಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಪದವಿಧರರಾದ ಇವರು ಕೊನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು `ಬೇಸರಾಗಬೇಡ’ ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮತ್ತು ೨೦೧೬ರಲ್ಲಿ ರಾಯಚೂರಿನಲ್ಲಿ ನಡೆದ ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಮತ್ತು ಬೀದರ ಸಮ್ಮೇಳನದಲ್ಲಿ ಪ್ರಕಟವಾದ `ಭಾಹತ್ತರ' ಕವನ ಸಂಕಲನದಲ್ಲಿ ಇವರ ಕವಿತೆಯು ಪ್ರಕಟವಾಗಿದೆ.

ಮಹೇಶ ಬನ್ನಾಳೆ

ಉದಯೋನ್ಮುಖ ಬರಹಗಾರ ಮಹೇಶ ಬನ್ನಾಳೆಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ `ಕೋನಮೇಳಕುಂದಾ' ಗ್ರಾಮದ ಸಂಗಶೆಟ್ಟಿ ಮತ್ತು ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಭಾಲ್ಕಿ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕತೆ, ಕವನ, ಲೇಖನ ಮೊದಲಾದ ಬರಹಗಳನ್ನು ಬರೆಯುವ ಗೀಳು ಬೆಳೆಸಿಕೊಂಡ ಇವರು `ಜ್ಣಾನ ಜ್ಯೋತಿ ಡಾ.ಚನ್ನಬಸವಲಿಂಗ ಪಟ್ಟದ್ದೆವರು' (ಕವನ ಸಂಕಲನ) 'ಭಾಲ್ಕಿಯ ಬೆಳಗು ಬಸವಲಿಂಗ ಪಟ್ಟದ್ದೆವರು' (ಚರಿತ್ರೆ). `ಗುರುಕುಲ ಕಿರಣ' (ಲೇಖನ) ಎಂಬ ಕೃತಿಗಳು ಬರೆದಿದ್ದಾರೆ. ಅಷ್ಟೇಯಲ್ಲದೆ ಇವರ ಕವನ ಲೇಖನ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ನಾಮದೇವ ಜ್ಯಾಂತೆ

ಸಾಹಿತಿ ನಾಮದೇವ ಜ್ಯಾಂತೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಭಾತಂಭ್ರಾ ಗ್ರಾಮದ ಶಂಕ್ರೇಪ್ಪಾ ಮತ್ತು ಇಂದಿರಾಬಾಯಿ ದಂಪತಿಗಳಿಗೆ ದಿನಾಂಕ ೨೦-೭-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ ಪದವಿಧರರಾದ ಇವರು ಭಾಲ್ಕಿಯ ಶಾಂತಿವರ್ಧಕ ಡಿ.ಇಡಿ ಕಾಲೇಜಿನಲ್ಲಿ ೧೪ ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಜೇವರ್ಗಿಯ ಶ್ರೀ ಬಸವೇಶ್ವರ ಬಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೧ರಲ್ಲಿ `ಭಾವನೆಗಳೆ ಹೀಗೆ' ಎಂಬ ಕವನಸಂಕಲನ, ೨೦೧೩ರಲ್ಲಿ `ಆಧುನಿಕ ಶಿಕ್ಷಣದ ಒಲವುಗಳು' ಎಂಬ ಡಿ.ಇಡಿ ವಿದ್ಯಾರ್ಥಿಗಳಿಗಾಗಿ ಬರೆದ ಪಠ್ಯ ಪುಸ್ತಕ ಆಧಾರಿತ ಕೃತಿ ಪ್ರಕಟಿಸಿದ್ದಾರೆ. ಇವರು ೨೦೦೦ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರದ (ಕಿಣ್ಣಿ) ಗ್ರಾಮದ ಜ್ಞಾನ ಸೂರ್ಯ ತರುಣ ಸಂಘ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಇವರ ಕವನ ಬಹುಮಾನಿತ ಬರಹವಾಗಿ `ಜ್ಞಾನ ಸೂರ್ಯ' ಎಂಬ ಮಚ್ಚೇಂದ್ರ ಪಿ ಅಣಕಲ್ ಸಂಪಾದಿಸಿದ ಕೃತಿಯಲ್ಲಿ ಪ್ರಕಟವಾಗಿದೆ. ಮತ್ತು ಬೆಂಗಳೂರಿನ `ವಿಶೂ' ಎಂಬ ಕವನ ಸಂಕಲನ ಸೇರಿದಂತೆ ಬೀದರ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಹಾಗೂ ಭಾಲ್ಕಿಯಲ್ಲಿ ಏರ್ಪಡಿಸಿದ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು, ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.

ಶನಿವಾರ, ಜನವರಿ 11, 2025

ಪಿ. ಕೆ. ಪ್ರಭು

ಕವಿ,ಸಾಹಿತಿ ಕಲಾವಿದ ಪಿ.ಕೆ.ಪ್ರಭು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ಪುಂಡಲೀಕ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಸಾಹಿತ್ಯ ಮತ್ತು ಸಂಗೀತದಲ್ಲಿ ತುಂಬ ಆಸಕ್ತರಾಗಿ `ಬುದ್ಧ ಭೀಮರ ಭಜನೆ ಗೀತೆಗಳು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಕವನ, ಹಾಡು, ಭಜನೆ ಗೀತೆ, ಭಾವಗೀತೆ, ಭಕ್ತಿ ಗೀತೆಗಳನ್ನು ಬರೆಯುವ ಇವರು ಸ್ವತಃ ಸಂಗೀತ ಸಂಯೋಜನೆ ಮಾಡಿ ಕರವೇ ಟ್ರಾಕ್, ಮದುವೆ ಮೊದಲಾದ ಸಾರ್ವಜನಿಕ ರಸಮಂಜರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡುವ ಕಲೆ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳು ನೀಡಿ ಕವಿ ಗಾಯಕರಾಗಿ ಹೆಸರುವಾಸಿಯಾಗಿದ್ದಾರೆ. ಮತ್ತು ಬೀದರನಲ್ಲಿ ನಡೆದ ಜಾನಪದ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ೨೦೧೯ರಲ್ಲಿ ದೆಹಲಿಯಿಂದ ಡಾ.ಅಂಬೇಡ್ಕರ್ ನ್ಯಾಷನಲ್ ಫಿಲೋಸಫ್ ಅವಾರ್ಡ ಕೂಡ ಪಡೆದಿದ್ದಾರೆ. ಮತ್ತು ಭಾಲ್ಕಿ ತಾಲೂಕು ಉತ್ಸವ ಪ್ರಶಸ್ತಿ, ಜನಪರ ಉತ್ಸವ ಪ್ರಶಸ್ತಿಗಳು ಪಡೆದಿದ್ದಾರೆ.

ಎಂ.ಪಿ.ಮುದಾಳೆ

ದಲಿತ, ಬಂಡಾಯ ಸಾಹಿತಿಯಾದ ಎಂ.ಪಿ.ಮುದಾಳೆ. ಇವರ ಪೂರ್ಣನಾಮ ಮಲ್ಲಪ್ಪ ತಂದೆ ಪೀರಪ್ಪ ಮುದಾಳೆ ಎಂದಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಚಂದಾಪೂರ ಗ್ರಾಮದ ಪೀರಪ್ಪಾ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೧೫-೬-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೧೯೯೫ರಲ್ಲಿ `ಚಿಗುರಿದ ಕನಸ್ಸು' (ಕವನ ಸಂಕಲನ) ೨೦೦೬ರಲ್ಲಿ `ಕನ್ನಡ ಸಿನಿಮಾ ಕ್ವಿಜ್' (ಸಾಮಾನ್ಯ ಜ್ಞಾನ) ೨೦೧೦ರಲ್ಲಿ `ಪ್ರೀತಿಯೆ ನನ್ನುಸಿರು' (ಲೇಖನ) ೨೦೧೨ರಲ್ಲಿ `ಡಾ.ರಾಜ್ ಕಾವ್ಯ ಕಂಬನಿ' (ಸಂ) ೨೦೧೩ರಲ್ಲಿ `ರಂಗ ಕಲಾವಿದ ಶಂಭುಲಿAಗ ವಾಲ್ದೊಡ್ಡಿ' (ಚರಿತ್ರೆ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಮತ್ತು ಇವರು ನಿಮ್ಮ ದೂತ, ಲಂಕೇಶ್ ಪತ್ರಿಕೆ, ಪೋಲಿಸ್ ವರ್ಲ್ಡ, ಕೆಂಡ ಪತ್ರಿಕೆಗಳ ವರದಿಗಾರರಾಗಿ, `ನಾರಂಜಾ ಎಕ್ಸ್ ಪ್ರೆಸ್’ ಪತ್ರಿಕೆಯ ವ್ಯವಸ್ಥಾಪಕ ಪ್ರಧಾನ ಸಂಪಾದಕರಾಗಿ, `ಬೀದರ ಮಿರಾರ್' ಎಂಬ ಆಂಗ್ಲ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ `ನಾರಂಜ್ ಎಕ್ಸ್ ಪ್ರೆಸ್’ ಪತ್ರಿಕೆ ಮತ್ತು ಯೂಟ್ಯೂಬ್ ಚಾನಲ್ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೧೦ರಲ್ಲಿ ಕರ್ನಾಟಕ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಪ್ರತಿವರ್ಷ ರಾಜ್ಯ ಮಟ್ಟದ ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಿ ಅವರಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಮತ್ತು ಜಿಲ್ಲಾ ಮಟ್ಟದ ಜಾನಪದ ಮೇಳವು ಸಂಘಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಕವನ, ಲೇಖನಗಳು ಸಿನಿಮಾ ಪತ್ರಿಕೆ ನಟರಾಜ ಮತ್ತು ಸ್ಥಳೀಯ ಪತ್ರಿಕೆ. ಆಕಾಶವಾಣಿಯಲ್ಲಿಯು ಪ್ರಕಟ,ಪ್ರಸಾರವಾಗಿವೆ. ಇವರು ೨೦೦೫ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ೨೦೧೬ರಲ್ಲಿ ಬೀದರದಲ್ಲಿ ನಡೆದ ಜನಪರ ದಲಿತ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಯೋಜಕರಾಗಿ, ೨೦೧೦ರಲ್ಲಿ ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾಗಿ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಉತ್ಸವದ ಸಂಚಾಲಕರಾಗಿಯು ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೦೮ರಲ್ಲಿ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ `ಅಗ್ನಿ ಅಸ್ತ್ರ' ಪತ್ರಿಕೆಯವರಿಂದ `ವಿಶ್ವ ಚೇತನ ಬುದ್ಧ ಶಾಂತಿ ಸದ್ಭಾವನ ಪ್ರಶಸ್ತಿ,ಯು ಪಡೆದಿದ್ದಾರೆ. ಇವರು ಕಲಬುರಗಿಯಲ್ಲಿ ನಡೆದ ೧೨ನೇ ರಾಜ್ಯ ಮಟ್ಟದ ದಲಿತ ಯುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ. ಸದ್ಯ ಇವರು ಕನ್ನಡ ಅಭೀವೃದ್ದಿ ಪ್ರಾಧಿಕಾರದ ಬೀದರ ಜಿಲ್ಲಾ ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುನೀತಾ ದಾಡಗೆ

ಕವಯತ್ರಿ ಸುನೀತಾ ದಾಡಗಿಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಶಂಕರರಾವ ಮತ್ತು ಮಲ್ಲಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಬೀದರ ಕೆ.ಎಚ್.ಬಿ.ಕಾಲೋನಿಯ ಶ್ರೀಧರ ಗೌಡರ ಧರ್ಮ ಪತ್ನಿಯಾಗಿದ್ದು, ೧೯೯೮ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ ಕೊಣಮೇಳಕುಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. `ಕನ್ನಡ ವ್ಯಾಕರಣ ಪ್ರವೇಶಿಕೆ ’ (ವ್ಯಾಕರಣ) `ಈ ಸುದಿನ' ಎಂಬ (ಲೇಖನ) `ಜನಪದ ಕಾಳಜಿಯ ಗೌರಮ್ಮ ಸಿದ್ದಾರೆಡ್ಡಿ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗೆ ೨೦೦೫ರಲ್ಲಿ ತಾಲೂಕಾ ಬೆಸ್ಟ್ ಗೈಡ್ ಕ್ಯಾಪ್ಟನ್ ಪ್ರಶಸ್ತಿ, ೨೦೦೯ರಲ್ಲಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೦ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಚಿತ್ರದುರ್ಗ ಶ್ರೀ ಮುರುಘಮಠದಿಂದ `ಶಿಕ್ಷಕ ರತ್ನ ಪ್ರಶಸ್ತಿ' ಬಸವಮುಕ್ತಿ ಮಂದಿರದಿAದ `ಸೃಜನಶೀಲ ಬರಹಗಾರ್ತಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕನ್ನಡ ಸೃಜನಶೀಲ ರತ್ನ ಪ್ರಶಸ್ತಿ, ಚಿತ್ರದುರ್ಗದ ಸಿರಿಗನ್ನಡ ಪ್ರತಿಷ್ಠಾನದಿಂದ `ಕನ್ನಡ ರತ್ನ ಪ್ರಶಸ್ತಿ' ಪುರಸ್ಕಾರಗಳು ಪಡೆದಿದ್ದಾರೆ.

ಪಾರ್ವತಿ ವಿ.ಸೋನಾರೆ

ಸಾಹಿತಿ ಪಾರ್ವತಿ ವಿ. ಸೋನಾರೆಯವರು. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಕೊಂಕಣಗಾAವ ಗ್ರಾಮದ ಜಟಿಂಗರಾಯ ಮತ್ತು ಭೀಮಬಾಯಿ ದಂಪತಿಗಳಿಗೆ ದಿನಾಂಕ ೧೮-೭-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ. ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬೀದರ ತಾಲೂಕಿನ ಮೈಲೂರು ಗ್ತಾಮದ ಪ್ರಾಥಮಿಕ ಕಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾಲ್ಕಿ ತಾಲೂಕಿನ ಮಾಸಿಮಾಡ ಗ್ರಾಮದ ವಿಜಯಕುಮಾರ್ ಸೋನಾರೆಯವರ ಪತ್ನಿಯಾದ ಇವರು `ನಾವಿಬ್ಬರು’ (ಕವನ ಸಂಕಲನ) `ಭವರಿ', 'ಅವ್ವ ನೀ ಸಾಯಬಾರದಿತ್ತು' (ಕಥಾ ಸಂಕಲನಗಳು) `ಅಂಬಿಗರ ಚೌಡಯ್ಯನವರ ಜೀವನ, ವಚನ, ಭಾವಾರ್ಥ.' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಗುಜ್ಜೆವ್ವನ ಗುಡಿಸಲು' ಎಂಬ ಕತೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. ಮೂರನೇ ಸೆಮಿಸ್ಟರ್ ಗೆ ಪಠ್ಯವಾಗಿದೆ. ಮತ್ತು `ಭವರಿ' ಎಂಬ ಕತೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಇವರು 'ಚಾಂದಿನಿ' ಎಂಬ ಕನ್ನಡ ಹಾಗೂ `ದ ಬ್ಲೇಂಡ್ ಫೇಲ್' ಎಂಬ ಹಿಂದಿ ಕಿರುಚಿತ್ರಗಳಲ್ಲಿ ಹಾಗೂ `ಸುರ್ಯ ಶಿಖಾರಿ' `ನಾಗಮಂಡಲ'. `ಕೊಡೆಗಳು ಸರ್ ಕೊಡೆಗಳು' ಮೊದಲಾದ ನಾಟಕಗಳಲ್ಲಿ ನಟಿಸಿದ್ದಾರೆ. ಇವರ ಕಲೆ ಸಾಹಿತ್ಯವನ್ನು ಕಂಡು ಶಾರದಾ ಪ್ರತಿಷ್ಠಾನದಿಂದ `ಕವಯತ್ರಿ ಕಲಾರತ್ನ ಪ್ರಶಸ್ತಿ .ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಇವರು ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬನಸಿಧರ ರಾಠೋಡ

ಕಾದಂಬರಿಕಾರ ಬನಸಿಧರ ರಾಠೋಡ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ರುದನೂರು ತಾಂಡಾದ ಗಣಪತಿ ಮತ್ತು ಗೋಮಾಬಾಯಿ ದಂಪತಿಗಳಿಗೆ ೧-೬-೧೯೭೩ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ೧೯೯೭ರಲ್ಲಿ `ಮಾಯಾಜಾಲ' ಎಂಬ ಕಾದಂಬರಿ ಬರೆದು ಪ್ರಕಟಿಸಿದ್ದಾರೆ.

ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿ

ಶರಣತತ್ವ ಪ್ರಚಾರ ಮತ್ತು ಸಾಹಿತ್ಯದಲ್ಲಿ ಕೃಷಿ ಮಾಡಿದ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿಯವರು. ಇವರ ಮೂಲನಾಮ `ಪೂಜ್ಯ ಶ್ರೀ ಶಿವಕುಮಾರ ಡಾಕುಳಗೆ ' ಎಂದಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಶ್ರೀ ಮಲ್ಲಯ್ಯ ಸ್ವಾಮಿ ಮತ್ತು ಶ್ರೀಮತಿ ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧೪-೧೧-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಕೆಲವರ್ಷ ಉತ್ತರ ಕರ್ನಾಟಕ ಪತ್ರಿಕೆ ವರದಿಗಾರರಾಗಿ, ಕೆಂಪುನೆಲ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ವಿಜಯವಾಣಿಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ ಪೂಜ್ಯರು ಸದ್ಯ ಬೆಂಗಳೂರಿನ ಕುಂಬಳಗೂಡಿನಲ್ಲಿರುವ `ಬಸವ ಗಂಗೋತ್ರಿ' ಆಶ್ರಮದ ಚಿನ್ಮಯಜ್ಞಾನಿ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾಗಿದ್ದಾರೆ. ಇವರು `ಅಂತರAಗ ದಿವ್ಯಜ್ಯೋತಿ', `ಅನುಭಾವದಮೃತ', `ಚಿಂತನ ಮಂಥನ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ೨ ಹಿಂದಿ ಸೇರಿ ೧೫ ಪ್ರವಚನ ಸಿ.ಡಿ.ಗಳು ಹೊರತಂದಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಗುರುಬಸವ ಕಾರುಣ್ಯ’ ಎಂಬ ಇವರ ಜೀವನ ಚರೀತ್ರೆಯು ಮೈಸೂರಿನ ಸಿ.ದೊಡ್ಡ ವೀರಪ್ಪನವರು ಬರೆದು ಪ್ರಕಟಿಸಿದ್ದಾರೆ. ಇವರು ನವದೆಹಲಿ ಬಸವ ಮಂಟಪದ ಪ್ರಧಾನ ಸಂಚಾಲಕರಾಗಿ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾಗಿ, ಫೆಡರೇಶನ್ ಆಫ್ ಇಂಡಿಯನ್ ರಿಲಿಜಸ್ ನ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದಾರೆ. ಮತ್ತು ಪೂಜ್ಯ ಲಿಂಗಾನAದ ಸ್ವಾಮೀಜಿಯವರ ಪ್ರವಚನದ ಪ್ರಭಾವದಿಂದ ವೈರಾಗ್ಯ ಹೊಂದಿ ಪೂಜ್ಯ ಮಾತೆ ಮಹಾದೇವಿಯವರಿಂದ `ಜಂಗಮ ದೀಕ್ಷೆ' ಗೈದು ಬಸವಾದಿ ಶರಣರ ಸೇವೆಯಲ್ಲಿ ತೊಡಗಿದ್ದಾರೆ.

ಡಾ. ರಘುಶಂಖ ಭಾತಂಬ್ರಾ

`ರಘುಶಂಖ ಭಾತಂಬ್ರಾ' ಎಂಬ ಕಾವ್ಯನಾಮದಿಂದ ಖ್ಯಾತರಾದ ಇವರ ನಿಜನಾಮ ರಘುನಾಥ ಖರಾಬೆ ಎಂದಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಶಂಕರೆಪ್ಪ ಹಾಗೂ ಗುರಮ್ಮ ಎಂಬ ದಂಪತಿಗಳಿಗೆ ದಿನಾಂಕ ೧-೧-೧೯೭೦ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್.ಪಿ.ಎಚ್.ಡಿ. ಪದವಿಧರರಾಗಿ ಕೆಲಕಾಲ ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೯೯೮ರಿಂದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಎರಡು ಮುಖ', `ಹೊನ್ನ ದಿವಿಗೆ', `ಕೊನೆಯೆಂದು’ (ಕವನ ಸಂಕಲನಗಳು) `ವಚನ ಸಾಹಿತ್ಯ ಹೊಸ ಪರಿಕಲ್ಪನೆ' `ವಚನ ಸಂಪದ', `ಭೂಮಿಕೆ’ (ಲೇಖನ) `ಓರೆಗಲ್ಲು' (ವಿಮರ್ಶೆ) `ಚರಿತ್ರೆಯ ಸುತ್ತ' (ಸಂಶೋಧನೆ) `ಶ್ರೀಗಂಧ ಪ್ರಭುರಾವ ಕಂಬಳಿವಾಲೆ', `ಮಹಾದಾಸೋಹಿ ಪಥಿಕ', `ಶಿಕ್ಷಣ ಸಿರಿ ಡಾ.ಪೂರ್ಣಿಮಾ ಜಿ' (ಚರಿತ್ರೆಗಳು) `ಕರ್ನಾಟಕೇತರ ಶರಣ ಶರಣೆಯರು', `ಅಟ್ಟಳೆ ನಾಡಿನ ಅಣಿಮುತ್ತುಗಳು', `ವರ್ತಮಾನದೊಡಲು', `ಬೀದರ ಪ್ರಾದೇಶಿಕ ಸ್ವಾತಂತ್ರ‍್ಯ ಸಂಗ್ರಾಮ', `ನಡೆ-ನುಡಿ ಸಿದ್ದಾಂತವಾದಲ್ಲಿ', `ಅರ್ಚನೆ ಪೂಜೆ ನೇಮದಲ್ಲಿ', `ಲೋಕನಾಯಕ ಭೀಮಣ್ಣ ಖಂಡ್ರೆ ’ ಎಂಬ ೨೨ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಕಂಬಳಿವಾಲೆ ಸಮಿತಿ ಸ್ಥಾಪಿಸಿ ಅದರ ಮೂಲಕ ಸಾಹಿತ್ಯ ಚಟುವಟಿಕೆಗಳು ನಡೆಸುತ್ತಿರುವ ಇವರು ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸದ್ಯ ಇವರು ಭಾಲ್ಕಿಯ `ಶಾಂತಿ ಕಿರಣ’ ದ್ವಿಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರ `ಹೊನ್ನ ದಿವಿಗೆ' ಎಂಬ ಕವನ ಸಂಕಲನ ಸೋಲಾಪುರ ವಿಶ್ವವಿದ್ಯಾಲಯದ ಕನ್ನಡ ಬಿ.ಎ.ವಿದ್ಯಾರ್ಥಿಗಳಿಗೆ ಪಠ್ಯವಾದರೆ `ಶ್ರೀಗಂಧ ಪ್ರಭುರಾವ ಕಂಬಳಿವಾಲೆ' ಎಂಬ ಕೃತಿಯು ನಾಂದೇಡದ ಸ್ವಾಮಿ ರಮಾನಂದ ವಿಶ್ವವಿದ್ಯಾಲಯದ ಬಿ.ಎ.ನಾಲ್ಕನೇ ಸೇಮಿಸ್ಟರ್ ವಿದ್ಯಾರ್ಥಿಗಳಿಗ ಪಠ್ಯ ಪುಸ್ತಕವಾಗಿದೆ.

ಗಣಪತಿ ಭೂರೆ

`ಸರಿದ ನಕ್ಷತ್ರ' ಎಂಬ ಕಥಾ ಸಂಕಲನದಿAದ ಹೆಸರುವಾಸಿಯಾದ ಕತೆಗಾರರೆಂದರೆ ಗಣಪತಿ ಭೂರೆಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದ ಚನ್ನಮಲ್ಲಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಇವರು ಬಿ.ಎ.ಬಿ.ಎಡ್ ಪದವಿಧರರಾಗಿದ್ದು ಸದ್ಯ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ನನಗೊಂದು ಬಯಕೆ', `ಬೆಂಕಿಯೊಳಗಿನ ಬೆಳಕು' (ಕವನ ಸಂಕಲನಗಳು) `ಸರಿದ ನಕ್ಷತ್ರ' (ಕಥಾ ಸಂಕಲನ) ಈ ಕೃತಿಗೆ ಜನಸೇವಾ ಸಂಘದಿAದ ಉತ್ತಮ ಕಥಾ ಪ್ರಶಸ್ತಿಯು ಲಭಿಸಿದೆ. ಮತ್ತು `ನಾವು' (ಕಾದಂಬರಿ) ಇದಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ. `ನಿಗೂಢ ಬದುಕು' (ಚಿಂತನಾತ್ಮಕ ಪ್ರಬಂಧಸAಕಲನ) ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. `ವಿದ್ಯೆಗೆ ಒದ್ದವ' ಎಂಬ ನಾಟಕ ಬರೆದಿದ್ದು ಅದು ಅಪ್ರಕಟಿತವಾಗಿದೆ. ಹೀಗೆ ಇವರು ಬರೆದ ಕತೆ, ಕವನ, ಕಾದಂಬರಿ ಸಾಹಿತ್ಯ ಸಾಧನೆಗೆ ಮೈಸೂರಿನಿಂದ ಕುವೆಂಪು ಕಾವ್ಯ ಪುರಸ್ಕಾರ, ಮತ್ತು ವರಕವಿ ಬೇಂದ್ರೆ ಕಾವ್ಯ ಪುರಸ್ಕಾರ ಲಭಿಸಿವೆ. ಅಷ್ಟೇಯಲ್ಲದೆ ನೂತನ ಸಾಹಿತ್ಯ ವಾರಪತ್ರಿಕೆಯವರು ಏರ್ಪಡಿಸಿದ ರಾಜ್ಯ ಮಟ್ಟದ `ಚುಟುಕು' ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನವು ಲಭಿಸಿದೆ. ಮತ್ತು ಭಾಲ್ಕಿ ತಾಲೂಕಾ `ರಾಜ್ಯೋತ್ಸವ ಪ್ರಶಸ್ತಿ' ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಈಶ್ವರಿ ಶಿವರಾಜ ಪಾಟೀಲ

ಕವಯತ್ರಿ ಈಶ್ವರಿ ಶಿವರಾಜ ಪಾಟೀಲ್. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದ ಗುರುಪಾದಪ್ಪ ಮತ್ತು ತಾರಾಬಾಯಿ ದಂಪತಿಗಳಿಗೆ ದಿನಾಂಕ ೦೪-೦೭-೧೯೬೮ರಲ್ಲಿ ಜನಿಸಿದ್ದಾರೆ. ಬಿ.ಎ,ಬಿ.ಇಡಿ.ಎಂ.ಎ ಪದವಿಧರರಾದ ಇವರು ೧೯೯೪ರಲ್ಲಿ ತಮ್ಮ ಹುಟ್ಟೂರಿನ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಬೆನಕನಳ್ಳಿ, ನೌಬಾದ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಬೀದರ ತಾಲೂಕಿನ ಅಮಲಾಪೂರ ಶಾಲಾ ಶಿಕ್ಷಕರಾಗಿದ್ದಾರೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು ೨೦೧೫ರಲ್ಲಿ `ನೀಲಮನ ಬಳಗದ ವಚನಗಳು' ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಗುರುಸ್ತುತ್ತಿ’ ಎಂಬ ಕೃತಿ, ಹಾಗೂ ಕೆಲ ಹಾಡುಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ನಾಟಕ ರೂಪಕಗಳಲ್ಲಿಯೂ ನಟಿಸಿ ಕಲಾವಿದರಾಗಿ ಗುರುತಿಸಿಕೊಂಡಿರುವ ಇವರು ಹುಬ್ಬಳ್ಳಿಯ `ಸಿದ್ದಾರೂಢ ಅಮೃತ’ ಎಂಬ ಮಾಸಪತ್ರಿಕೆಯಲ್ಲಿ ಹಲವು ಬರಹಗಳು ಪ್ರಕಟಿಸಿದ್ದಾರೆ. ೨೦೧೬ರಲ್ಲಿ ಇವರಿಗೆ ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಪ್ರತಿಷ್ಠಾನ ಬೆಂಗಳೂರಿನಿAದ `ಬಸವ ಶಿರೋಮಣಿ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ.

ಡಾ. ಚಂದ್ರಪ್ಪ ಭತಮುರ್ಗೆ

ಸಾಹಿತಿ ಡಾ.ಚಂದ್ರಪ್ಪ ಭತಮುರ್ಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಗೋಧಿಹಿಪ್ಪರಗಾ ಗ್ರಾಮದ ಧೂಳಪ್ಪ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೫-೬-೧೯೬೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ೧೯೯೬ರಿಂದ ದಾನಶೀಲ ಚಂದ್ರಪ್ಪ ಗೌರಶೆಟ್ಟಿ ಪದವಿ ಪೂರ್ವ (ಅನುದಾನಿತ) ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ನಿಡವಂಚಿ ಭದ್ರೇಶ್ವರರ ಅನುಭಾವ ಪದಗಳು' ಎಂಬುದು ಇವರ ಎಂ.ಫೀಲ್ ಪ್ರಬಂಧವಾದರೆ, `ಆರೂಢ ತತ್ವ ಪರಂಪರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿ ೨೦೦೪ರಲ್ಲಿ `ಚೆನ್ನಮಲ್ಲೇಶ್ವರ ತ್ಯಾಗಿಗಳು ಇಟಗಿ' (ಚರಿತ್ರೆ) ೨೦೧೧ರಲ್ಲಿ `ನನ್ನೂರು-ನನ್ನವ್ವ ಭಾಗ-೧' ಎಂಬ ಕೃತಿಯು ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿಯಿಂದ `ಅತ್ಯುತ್ತಮ ಪುಸ್ತಕ ಪ್ರಶಸ್ತಿ ಲಭೀಸಿದೆ. ೨೦೧೩ರಲ್ಲಿ `ಬಾನಶೀಲ ಚಂದ್ರಪ್ಪ ಗೌರಶೆಟ್ಟಿ' (ವ್ಯಕ್ತಿಚಿತ್ರ) ೨೦೧೪ರಲ್ಲಿ `ನಮ್ಮೂರು -ನನ್ನವ್ವ. ಭಾಗ -೨, ಹಾಗೂ ೨೦೧೫ರಲ್ಲಿ `ಆದರ್ಶ ಉದ್ಯಮಿ ಸಂಗಯ್ಯ ರೇಜಂತಲ್, ಮತ್ತು `ಅಣ್ಣನ ನೆನಪು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೨೦ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ. `ಕೈವಲ್ಯ ಕೌಸ್ತುಭ' ಎಂಬ ತ್ರೈಮಾಸಿಕದ ಸಂಪಾದಕರಾಗಿ ೧೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.