ಪುಟಗಳು

ಭಾನುವಾರ, ಜನವರಿ 12, 2025

ಮಾಣಿಕರಾವ ಸಿ.ಪಾಟೀಲ್

ಉದಯೋನ್ಮುಖ ಯುವ ಬರಹಗಾರ ಮಾಣಿಕರಾವ ಪಾಟೀಲ್ ರವರು ಕನ್ನಡ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಸಾಹಿತ್ಯ ರಚಿಸುತ್ತಿದ್ದಾರೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಚಂದ್ರಶೇಖರ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೯೫ರಲ್ಲಿ ಜನಿಸಿದ್ದಾರೆ. ಮತ್ತು ಅವರ ಬಾಲ್ಯ ಸ್ನೇಹಿತ ಆಕಾಶ ಹಿರಿವಗ್ಗೆ ಅವರೊಂದಿಗೆ `ದಕ್ಷಿಣ ಕಾಶಿ ದರ್ಶನ' ಎಂಬ ಪೌರಾಣಿಕ ಹಾಗೂ ಐತಿಹಾಸಿಕ ಕೃತಿಯನ್ನು ರಚಿಸಿದ್ದಾರೆ. ಇದು ಭಾಲ್ಕಿ ತಾಲೂಕಿನ ಪ್ರಸಿದ್ಧ ಮೈಲಾರ ಮಲ್ಲಣ್ಣನ ಚರಿತ್ರೆ ಹೇಳುತ್ತದೆ. ಮೈಲಾರ ಮಲ್ಲಣ್ಣನ ಕ್ಷೇತ್ರಕ್ಕೆ ಇತಿಹಾಸದಲ್ಲಿ `ದಕ್ಷಿಣ ಕಾಶಿ' ಎಂದು ಹೆಸರು ಪಡೆದಿದೆ. ಆ ಹೆಸರೆ ಸೂಚಿಸುವ ಪುಸ್ತಕ ಇದಾಗಿದೆ. ಮೈಲಾರ ಮಲ್ಲಣ್ಣ ದೇವಸ್ಥಾನ ಕ್ಷೇತ್ರಕ್ಕೆ ಮೊದಲು ಪ್ರೇಮಾಪೂರ, ಮೈಲಾಪೂರ,ಖಾನಾಪೂರ, ಮತ್ತು ದಕ್ಷಿಣ ಕಾಶಿ, ಎಂಬ ವಿವಿಧ ಹೆಸರಿನಿಂದ ಕರೆಯುತ್ತಿದ್ದರೆಂದು, ಆ ಗ್ರಾಮದ ಕುರಿತು ಇತಿಹಾಸ ಹೇಳುವ ಈ ಕೃತಿ ಪ್ರವಾಸಿಗರಿಗೆ ಉತ್ತಮ ಮಾರ್ಗದರ್ಶಿ ಕೈಪಿಡಿಯಾಗಿ ಕಂಡು ಬರುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ