ಭಾನುವಾರ, ಜನವರಿ 12, 2025
ಶ್ರೀ. ವೇ.ಶಾಂತಲಿಂಗಸ್ವಾಮಿ ಹಿರೇಮಠ
ಅಧ್ಯಾತ್ಮಿಕ, ನೈತಿಕ, ವ್ಯಕ್ತಿತ್ವ ವಿಕಾಸನದ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಲೇಖಕರೆಂದರೆ ಶ್ರೀ.ವೇ.ಶಾಂತಲಿಂಗಸ್ವಾಮಿ ಹಿರೇಮಠ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಳಕೇರಿ ಗ್ರಾಮದ ಶ್ರೀ.ವೇ. ಬಸ್ಸಯ್ಯಾಸ್ವಾಮಿ ಮತ್ತು ಪಾರಮ್ಮ ದಂಪತಿಗಳಿಗೆ ದಿನಾಂಕ ೧೭-೯-೧೯೪೨ರಲ್ಲಿ ಜನಿಸಿದ್ದಾರೆ. ಇವರು ಐದನೇ ತರಬೇತಿಯವರೆಗೆ ಮಾತ್ರ ಕನ್ನಡದಲ್ಲಿ ಅಧ್ಯಯನ ಮಾಡಿದ್ದು, ಮುಂದೆ ತಮ್ಮ ಅಜ್ಜನವರಾದ ಶ್ರೀ.ವೇ.ರಾಚಯ್ಯ ಸ್ವಾಮಿಯವರಿಂದ ಮೊಡಿ, ಮರಾಠಿ, ಹಿಂದಿ, ಆಂಗ್ಲ ಸಂಸ್ಕçತ ಭಾಷೆಗಳನ್ನು ಕಲಿತು ಪುರೋಹಿತರಾಗಿ, ಜ್ಯೋತಿಷಿಗಳಾಗಿ, ಆಯುರ್ವೇದಕ ನಾಟಿ ವೈದ್ಯರಾಗಿ ಐತಿಹಾಸಿಕ ಸಂಶೋಧಕರಾಗಿ, ಸಾಹಿತಿಯಾಗಿ ಸಾಮಾಜಿಕ ಕಾರ್ಯನಿರ್ವಹಿಸಿದ ಇವರು ೧೯೫೩ರಲ್ಲಿ ಬೀದರದ ತಮ್ಮ ಚಿಕ್ಕಪ್ಪನವರಾದ ಶ್ರೀ ಶ್ರೀ ಶ್ರೀ ಷ.ಬ್ರ.ಪರ್ವತಲಿಂಗ ಶಿವಾಚಾರ್ಯರ ಹಿರೇಮಠ ಸಂಸ್ಥಾನಕ್ಕೆ ಬಂದು ಇಲ್ಲಿಯ ರುದ್ರಮುನಿ ಶಿವಾಚಾರ್ಯರ ಗದ್ದಗೆ ಪೂಜೆ, ಧ್ಯಾನ, ಅರಾಧನೆಯಲ್ಲಿ ತೊಡಗಿ, ಗುರುವಿನ ಆರ್ಶಿವಾದ ಪಡೆದು ೧೯೭೨ರಲ್ಲಿ ಮೇಹಕರದ ರಾಚೋಟೇಶ್ವರರ ಆದೇಶದ ಮೇರೆಗೆ ನೂತನ ಕಮಲಾಪೂರ ತಾಲೂಕಿನ ವಿ.ಕೆ.ಸಲಗರದ ಶ್ರೀ ಸಾಂಬಸ್ವಾಮಿ ಮಠದಲ್ಲಿ ತಪಸ್ಸು ಮಾಡಿ, ಆಧುನಿಕ ವಚನಗಳು ಬರೆಯಲು ಪ್ರಾರಂಭಿಸಿದ ಇವರು ಸುಮಾರು ೨೫೯೦ ವಚನಗಳು ಬರೆದಿದ್ದಾರೆ. ಮತ್ತು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ವೀರ ಸಂಗಯ್ಯನ ಭಜನೆಗಳು', `ಮೊದಲು ಮಾನವನಾಗು', `ನೀವು ಒಂದಾಗಿರಿ', `ಒಂದು ಕಿವಿ ಮಾತು', `ಜ್ಞಾನ ಪ್ರಸಾದ', `ಬದುಕಲು ಕಲಿಯಿರಿ', `ಹೊಸ ಬೆಳಕು', `ಮಾನವಿಯತೆಯ ಮೌಲ್ಯ', `ಸಾಧನೆಯ ಗುರಿ', `ಪರಮಾತ್ಮನ ಪರುಷವಾಣಿ' ಇವು ಅವರು ಬರೆದ ಅಧ್ಯಾತ್ಮಿಕ, ಕೃತಿಗಳಾದರೆ, `ವಚನಾಮೃತ', `ಬೊಮ್ಮಗೊಂಡೆಶ್ವರ ವಚನಗಳು', `ತ್ರಿಪದಿ ವಚನಗಳು', `ಶಾಂತಲಿAಗೇಶ್ವರ ವಚನಗಳು', `ನೀ ಹಾಡಿಸಿದಂತೆ ಹಾಡುವೆ ' ಎಂಬ ಆಧುನಿಕ ವಚನಗಳ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು `ಆರೋಗ್ಯ ದರ್ಶನ' ಎಂಬ ನಾಟಿ ವೈಧ್ಯ ಪದ್ದತಿ ಕೃತಿಯು ಬರೆದು ಸ್ವತಃ ಜನರಿಗೆ ನಾಟಿವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ `ವೀರಸಂಗಯ್ಯನ ಸಂಕ್ಷಿಪ್ತ ಜೀವನ ಚರಿತ್ರೆ', `ವೀರ ಸಂಗಯ್ಯನ ರೇಡಿಯೋ ನಾಟಕಗಳು' ಎಂಬ ಕೃತಿಗಳು ಬರೆದ ಇವರು `ನನ್ನ ಚಿಂತನೆಗಳು ' ಎಂಬ ಅಧ್ಯಾತ್ಮಿಕ ಚಿಂತನಾ ಕೃತಿ, ಹಾಗೂ `ಅಮೃತ ಹನಿಗಳು', `ಅಮೃತ ವಾಣಿಗಳು' ಎಂಬ ನುಡಿಮುತ್ತುಗಳ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಹಿಂದಿ ಭಾಷೆಯಲ್ಲಿ `ದೇಶ ಭಕ್ತಿ ಗೀತೆಗಳು' ಎಂಬ ಕೃತಿಯು ಬರೆದಿದ್ದಾರೆ. ಇವರ ಹತ್ತಾರು ಕೃತಿಗಳು ಇನ್ನೂ ಅಪ್ರಕಟಿತವಾಗಿಯೇ ಉಳಿದಿವೆ. ಇವರು ೨೭-೨-೨೦೧೨ರಲ್ಲಿ ಲಿಂಗಕ್ಕೆರಾಗಿದ್ದರಿAದ ಸಾಹಿತ್ಯ ಕ್ಷೇತ್ರದ ಅನರ್ಘ್ಯ ರತ್ನವೊಂದು ಕಳೆದುಕೊಂಡAತಾಗಿದೆ. ಇವರ ಬರಹಗಳು ಮರು ಮುದ್ರಣವಾದರೆ ಮುಂದಿನ ಪೀಳಿಗೆಗೆ ಅನುಕೂಲಕರವಾದಿತ್ತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ