ಬೀದರ ಮೂಲದ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಬೀದರ ಮೂಲದ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಭಾನುವಾರ, ಜನವರಿ 12, 2025
ಡಾ.ಅನುಸೂಯ ಪಾಟೀಲ್.
ಯುವ ಬರಹಗಾರ್ತಿಯಾದ ಡಾ.ಅನುಸೂಯ ಪಾಟೀಲ್ ರವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದವರಾಗಿದ್ದು, ಇವರು ಯಾದಗಿರಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಲೇಖನ, ಪ್ರಬಂಧ, ಮೊದಲಾದವುಗಳಲ್ಲಿ ಸಾಹಿತ್ಯದಲ್ಲಿ ಕೃಷಿ ಮಾಡಿ ಕೆಲ ಕೃತಿಗಳು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಸದ್ಯ ಇವರು ರಾಯಚೂರಿನಲ್ಲಿ ನೆಲೆಸಿದ್ದಾರೆ.
ಎಸ್. ಕೆ. ಕಿನ್ನಿ
ಯುವ ಸಾಹಿತಿ ಎಸ್.ಕೆ.ಕಿನ್ನಿ. ಇವರ ಪೂರ್ಣನಾಮ ಶಿವಕುಮಾರ ತಂದೆ ಕಾಶಿನಾಥ ಕಿನ್ನಿ ಎಂದಾಗಿದೆ. ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಕಾಶಿನಾಥ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೨೪-೪-೧೯೮೧ರಲ್ಲಿ ಜನಿಸಿದ್ದಾರೆ. ಇವರು ಕಲಬುರಗಿಯಲ್ಲಿ ವಾಸವಿದ್ದು ತಮ್ಮ ಶಿಕ್ಷಣವನ್ನು ಕಲಬುರಗಿಯಲ್ಲಿಯೇ ಅಧ್ಯಯನ ಮಾಡಿ ಎಂ.ಬಿ.ಎ. ಮತ್ತು ಇಂಜಿನಿಯರಿAಗ್ ಪದವಿಧರಾಗಿ, ಸುಮಾರು ೧೫ವರ್ಷಗಳಿಂದ ವಿದ್ಯುತ್ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಬೆಂಗಳೂರಿನ ಪ್ರಸಿದ್ಧ ಕಂಪನಿಯೊAದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು `ಭಾವ ಬಿಂಬ' (ಕವನ ಸಂಕಲನ) `ವಿಜ್ಞಾನ ಬರಹಗಳು' (ವೈಚಾರಿಕ ಪ್ರಬಂಧ) `ಚಂದ್ರಶೇಖರ್ ಅಜಾದ್' (ಚರಿತ್ರೆ) `ಚಿಗುರು ಚೇತನ', `ಹೊಂಬೆಳಕು', `ಅವ್ವ', `ಅಪ್ಪ', `ಅಭಿವ್ಯಕ್ತಿ', `ಪ್ರಣತಿ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ರಾಜ್ಯ ಮಟ್ಟದ ಸಾಹಿತ್ಯ ಮಂದಾರ ಪ್ರಶಸ್ತಿ, ಹಾಗೂ ಬೆಂಗಳೂರಿನ ಜ್ಞಾನ ಮಂದಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರೆತ್ತಿದೆ. ರಾಜ್ಯ ಮಟ್ಟದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವು ಪಡೆದಿದೆ. ಕಲಬುರಗಿಯಲ್ಲಿ ಯುವ ಅಜಾಧ ವಿಚಾರ ವೇದಿಕೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಕೆಲ ಪ್ರಾತಿನಿಧಿಕ ಕೃತಿಗಳು ಪ್ರಕಟಿಸಿದ್ದಾರೆ.
ರಶ್ಮಿ ಎಸ್.
ಕವಯತ್ರಿ ಹಾಗೂ ಪತ್ರಕರ್ತರಾದ ರಶ್ಮಿ ಎಸ್ ರವರು ಬೀದರದ ಶರಣಬಸಯ್ಯಾ ಮತ್ತು ಭಾರತಿ ದಂಪತಿಗಳಿಗೆ ದಿನಾಂಕ ೪-೯-೧೯೭೮ರಲ್ಲಿ ಜನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಪ್ರಜಾವಾಣಿಯಲ್ಲಿ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು `ಅಂತರಾಳ' (ಕವನ ಸಂಕಲನ) `ಅಂಕುರ' (ಅಂಕಣ ಬರಹ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಪ್ರಜಾವಾಣಿಯ ಗ್ರಾಮೀಣ ವಿಭಾಗ, ಜನರಲ್ ಡೆಸ್ಕ್ ಪುರವಣಿಗಳಲ್ಲಿ ಕೆಲಸ ಮಾಡಿದ್ದಾರೆ. ಭೂಮಿಕಾ, ಶಿಕ್ಷಣ, ಕ್ಷೇಮಕುಶಲ, ಗುಲ್ಮೊಹರ್ ಪುರವಣಿಗಳನ್ನು ರೂಪಿಸಿ, ನಿರ್ವಹಿಸಿದ್ದು, ೨೦೧೬ರಲ್ಲಿ ಶಾಲಾ ಆವೃತ್ತಿ ‘ಸಹಪಾಠಿ’ಯನ್ನು ರೂಪಿಸಿ, ನಿರ್ವಹಿಸಿದ್ದಾರೆ. ೨೦೧೩ರಿಂದ ೨೦೧೫ರ ಮಾರ್ಚ್ವರೆಗೂ ‘ಮೃದುಲಾ’ ಎಂಬ ಹೆಸರಿನಲ್ಲಿ ‘ಮಿದುಮಾತು’ ಅಂಕಣವನ್ನು ನಿರ್ವಹಿಸಿರುತ್ತಾರೆ. ೨೦೦೭ರಿಂದ ೨೦೧೧ರವರೆಗೆ ಕಲಬುರ್ಗಿ ಬ್ಯುರೊ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ ಇವರು, ಗ್ರಾಮೀಣ ಪತ್ರಿಕೋದ್ಯಮ, ಅಭಿವೃದ್ಧಿಪರ ಪತ್ರಿಕೋದ್ಯಮದ ಅನುಭವವು ಹೊಂದಿದ್ದಾರೆ. ಮತ್ತು ಪತ್ರಿಕೋದ್ಯಮದ ಎಲ್ಲ ೨೦೧೮ರ ಮೇ ತಿಂಗಳಿನಿAದ ೨೦೧೯ರವರೆಗೆ ಬೆಂಗಳೂರು ಮೆಟ್ರೊ ತಂಡವನ್ನು ಮುನ್ನಡೆಸಿ. ೨೦೧೧ರಲ್ಲಿ ನಡೆದ ಬೆಳಗಾವಿಯ ೨ನೇ ವಿಶ್ವಕನ್ನಡ ಸಮ್ಮೇಳನ, ಹಾಗೂ ಗಂಗಾವತಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಉತ್ತಮ ವರದಿಗಾರಿಕೆಯು ಮಾಡಿದ್ದಾರೆ. ಮತ್ತು ೨೦೧೯ರಲ್ಲಿ ಯುವ ಸಂಸದ ರಾಜ್ಯಮಟ್ಟದ ಸ್ಪರ್ಧೆಯ ತೀರ್ಪುಗಾರರಾಗಿಯು ಸೇವೆ ಸಲ್ಲಿಸಿದ್ದಾರೆ, ೨೦೦೯ರಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರದಿAದ ಮಹಿಳಾ ಸಬಲೀಕರಣಕ್ಕಾಗಿ ‘ಸೂರ್ಯಮುಖಿ’ ಎಂಬ ಸರಣಿ ಕಾರ್ಯಕ್ರಮವನ್ನು ನೀಡಿದ್ದಾರೆ. ಮತ್ತು ಆಕಾಶವಾಣಿಯ ಡ್ರಾಮಾ ಬಿ. ಹೈ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಬರೆದ ಪ್ರಜಾವಾಣಿಯ ಶಿಕ್ಷಣ ಪುರವಣಿ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಳಸಿಕೊಂಡಿದ್ದಾರೆ. ಇವರು ಸಾಹಿತ್ಯ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೀದರ ಜಿಲ್ಲಾ ಆಡಳಿತವು ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಕಲಬುರಗಿಯ ರೋಟರಿ ಕ್ಲಬ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.
ಅನುಪಮಾ ಗು.ಅಪಗುಂಡೆ
ಸಾಹಿತಿ ಅನುಪಮಾ ಗು.ಅಪಗುಂಡೆ ಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ಗುರುಲಿಂಗಪ್ಪಾ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೪-೬-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಎಂ.ಎಡ್. ಪದವಿಧರರಾದ ಇವರು ಅಫಜಲಪುರ ತಾಲೂಕಿನ ಹಿರೆಜೇವರಗಿಯ ಶ್ರೀ ಶಾಂತಲಿAಗೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಆಸಕ್ತರಾಗಿ `ಹನಿದನಿ' ಎಂಬ ಚುಟುಕು ಸಂಕಲನ ಪ್ರಕಟಿಸಿದ್ದಾರೆ. ಮತ್ತು ಕೆಲ ಕತೆ, ಕವನ, ಲೇಖನ,ಪ್ರಬಂಧಗಳು ಬರೆದಿದ್ದಾರೆ. ಇವರಿಗೆ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಹಾಗೂ ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನದಿಂದ ಶಿಕ್ಷಣ ರತ್ನ ಪ್ರಶಸ್ತಿ , ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಇವರ ಕುರಿತು ಈಗಾಗಲೇ ದೂರದರ್ಶನ ಚಂದನ ವಾಹಿನಿಯು ಸಂದರ್ಶನವೊAದು ಪ್ರಸಾರ ಮಾಡಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನಿವಾಸಿಯಾಗಿದ್ದಾರೆ.
ಜ್ಯೋತಿ ಡಿ.ಬೊಮ್ಮಾ
ಕವಯತ್ರಿ ಜ್ಯೋತಿ ಡಿ.ಬೊಮ್ಮಾ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ಡಾ.ಸುಭಾಷ ಮೀಸೆ ಮತ್ತು ವಿಜಯಲಕ್ಷ್ಮಿ ಮೀಸೆ ದಂಪತಿಗಳಿಗೆ ದಿನಾಂಕ ೧೪-೭-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಮತ್ತು ಎಲ್.ಎಲ್.ಬಿ ಪದವಿಧರರಾದ ಇವರು ಗೃಹಿಣಿಯಾಗಿದ್ದು, ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ. ಇವರು ೨೦೧೯ರಲ್ಲಿ `ನಮ್ಮೊಳಗಿನರಿವು' ಮತ್ತು `ಪರಿಧಿ' ಎಂಬ ಕವನ ಸಂಕಲನಗಳು ಪ್ರಕಟಿಸಿದ ಇವರು ಕೆಲ ಹಾಸ್ಯ, ವೈಚಾರಿಕ ಲೇಖನ, ಲಲಿತ ಪ್ರಬಂಧಗಳು ಬರೆದಿದ್ದು ಅವು ಶಿವರಂಜನ್ ಸತ್ಯಂಪೇಟೆಯವರ `ಶರಣ ಮಾರ್ಗ’ ಮತ್ತು ಬಿ.ಎಚ್.ನಿರಗುಡಿಯವರ `ಸಾಹಿತ್ಯ ಸಾರಥಿ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೀದರನಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿಯರ ಸಾಹಿತ್ಯ ಸಮ್ಮೇಳನ, ಮತ್ತು ಕಲಬುರಗಿಯ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ ಕವಿಗೊಷ್ಠಿಗಳಲ್ಲಿಯೂ ಪಾಲ್ಗೊಂಡು ಕವನ ವಾಚನವು ಮಾಡಿರುತ್ತಾರೆ. ಸದ್ಯ ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ವಾಸವಾಗಿದ್ದಾರೆ.
ಡಾ. ಶಾಂತಾ ಅಷ್ಟಗಿ.
ಮಹಿಳಾ ಸಾಹಿತಿಗಳಾದ ಡಾ.ಶಾಂತಾ ಅಷ್ಟಗಿಯವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಪ್ರತಾಪೂರ ಗ್ರಾಮದವರಾಗಿದ್ದು, ಇವರು ಕಲಬುರಗಿ ಜಿಲ್ಲೆ ಕಮಲಾಪೂರ ತಾಲೂಕಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಹಲವಾರ ಕತೆ, ಕವನ, ಲೇಖನಗಳನ್ನು ಬರೆದಿರುವ ಇವರು ಅನೇಕ ಪುಸ್ತಕಗಳು ಬರೆದು ಪ್ರಕಟಿಸಿದ್ದಾರೆ, ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ,ಪ್ರಸಾರವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಕಲಬುರಗಿ ಜಿಲ್ಲೆಯಲ್ಲಿ ನೆಲೆಸಿದ್ದಾರೆ.
ಡಾ.ಇಂದುಮತಿ ಪಾಟೀಲ್
ಸಾಹಿತಿ ಡಾ.ಇಂದುಮತಿ ಪಾಟೀಲ್ ರವರು ಬೀದರದ ಪದ್ಮಣ ಪಾಟೀಲ್ ಮತ್ತು ಪ್ರೇಮಿಳಾ ಪಾಟೀಲ್ ದಂಪತಿಗಳಿಗೆ ದಿನಾಂಕ ೧೧-೬-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ. ಪದವೀಧರರಾದ ಇವರು ಕಲಬುರಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತಿಹಾಸ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಬೀದರ ಜಿಲ್ಲೆಯ ವೀರ ಶೈವ ಮಠಗಳು, ಸಾಮಾಜಿಕ ಪರಿವರ್ತನೆ, ಬೀದರ ಜಿಲ್ಲೆಯ ಅರಸು ಮನೆತನಗಳು, ಪ್ರಾಚೀನ ಭಾರತದ ಇತಿಹಾಸ, ಮಧ್ಯ ಕಾಲಿನ ಭಾರತದ ಇತಿಹಾಸ, ಹಿರೇಮಠ ಮತ್ತು ದಲಿತೋದ್ಧಾರ, ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು, ಕ್ಲಸ್ಟರ್ ಹಿಸ್ಟರಿ ಆಫ್ ಚಾಲುಕ್ಯ ಸ್, ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ, ಪ್ರಾಚೀನ ಭಾರತದ ಇತಿಹಾಸ ಮತ್ತು ಪುರಾತತ್ವ, ಆಧುನಿಕ ಭಾರತದ ಇತಿಹಾಸ, ಸುಲಫಲ ಮಠ ಕಲಬುರಗಿ, ಕರ್ನಾಟಕ ಪ್ರವಾಸಿ ತಾಣಗಳು, ಕಲಬುರಗಿ ಜಿಲ್ಲೆಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ, ಇತ್ಯಾದಿ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಅಕ್ಕ ಮಹಾದೇವಿ ಪ್ರಶಸ್ತಿ, ಆದರ್ಶ ದಂಪತಿ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಕಲಬುರಗಿಯಲ್ಲಿ ನೆಲೆಸಿದ್ದಾರೆ.
ಕಾವ್ಯಶ್ರೀ ಮಹಾಗಾಂವಕರ್
‘ಸಿಕಾ’ ಎಂಬ ಕಾವ್ಯನಾಮ ಹೊಂದಿರುವ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ಸಾಹಿತಿಗಳಾದ ಬಿ.ಜಿ.ಸಿದ್ದಬಟ್ಟೆ ಮತ್ತು ಯಶೋದಮ್ಮ ಸಿದ್ದಬಟ್ಟೆ ದಂಪತಿಗಳಿಗೆ ದಿನಾಂಕ ೧೧-೪-೧೯೬೯ರಲ್ಲಿ ಜನಿಸಿದ್ದಾರೆ. ಡಿ.ಇ.ಮತ್ತು ಸಿ.ಇ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಕಲಬುರಗಿಯ ಸುರೇಶ ಮಹಾಗಾಂವಕರ್ ರವರ ಧರ್ಮಪತ್ನಿಯಾಗಿದ್ದು, ಬಾಲ್ಯದಿಂದಲೇ ತಮ್ಮ ತಾಯಿಯ ಮಾರ್ಗದರ್ಶನದ ಮೂಲಕ ಸಾಹಿತ್ಯದ ಗೀಳು ಹಚ್ಚಿಕೊಂಡು ಕತೆ, ಕವನ, ಕಾದಂಬರಿ, ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಹಲವಾರು ಪತ್ರಿಕೆ ಮತ್ತು ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ‘ಪ್ರೇಮ ಕಾವ್ಯ’, ‘ಬೆಳಕಿನೆಡೆಗೆ’, ‘ಪ್ರಳಯದಲೊಂದು ಪ್ರಣತಿ’, ‘ಜೀವ ಜಗತ್ತಿಗೆ’, ‘ಜೇನಹ£’,’ ‘ಪಿಸುಮಾತುಗಳ ಜುಗಲ್’, ‘ಒಳ್ಕಲ್ಲ ಒಡಲು’, ‘ಬ್ಯಾಸರಿಲ್ಲದ ಜೀವ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಗೃಹಿಣಿಯಾಗಿದ್ದುಕೊಂಡು ೨೦೧೯ರಿಂದ ಪಿ.ಎಚ್.ಡಿ.ಅಧ್ಯಯನದೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಕೆ.ನೀಲಾ
ಸಾಹಿತಿ ಕೆ.ನೀಲಾ ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಕಾಶಿನಾಥ ಸ್ವಾಮಿ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೬೬ರಲ್ಲಿ ಜನಿಸಿದ್ದಾರೆ. ಇವರು ಓದಿದ್ದು ಬರಿ ಪಿ.ಯು.ಸಿ.ವರೆಗೆ ಮಾತ್ರ. ಆದರೆ ಕನ್ನಡ, ಹಿಂದಿ,ಮರಾಠಿ, ಆಂಗ್ಲ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ೧೯೯೫ರಲ್ಲಿ `ಬದುಕು ಬೀದಿಯ ಪಯಣ' ೨೦೧೬ರಲ್ಲಿ `ಜಾತಿ ಸೂತಕವಳಿದು' (ಕವನ ಸಂಕಲನಗಳು) ೨೦೦೯ರಲ್ಲಿ `ಜ್ಯೋತಿಯೋಳಗಣ ಕಾಂತಿ' ೨೦೧೧ರಲ್ಲಿ `ತಿಪ್ಪೆಯನ್ನರಸಿ' ಎಂಬ (ಕಥಾಸಂಕಲನಗಳು) ೨೦೦೯ರಲ್ಲಿ `ಬಾಳಕೌದಿ' ಮತ್ತು `ನೆಲದ ಪಿಸುಮಾತು' (ಅಂಕಣ ಬರಹ) ೨೦೦೧ರಲ್ಲಿ `ಬದುಕು ಬಂದಿಖಾನೆ' ೨೦೦೫ರಲ್ಲಿ `ಮಹಿಳಾ ಶೋಷಣೆ ನೆಲೆಗಳು’ ೨೦೧೯ರಲ್ಲಿ `ನೆಲದ ನಂಟು' ಮತ್ತು `ಬೇವರ ಬದುಕು' (ಲೇಖನ ಸಂಕಲನಗಳು) ೨೦೧೭ರಲ್ಲಿ `ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ' (ಚರಿತ್ರೆ) `ರಾಮಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು’, `ಎಲೆ ರಾಜೊಳಿ ಕರಿಗೂಳೇಶ ಮತ್ತು ಇತರರ ತತ್ವಪದಗಳು', ಕನ್ನಡ ತತ್ವಪದಗಾರ್ತಿಯ ವಾಚಿಕೆ, ಮತ್ತು `ಭಾರತದ ಮೇಲೆ ಧಾಳಿ'. (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಕರುಳಿರಿಯುವ ನೋವು' ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮತ್ತು `ತಿಪ್ಪೆಯನ್ನರಸಿ' ಎಂಬ ಕತೆಯು ೨೦೧೦ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಮತ್ತೆರಡು ಕತೆಗಳು ಮೆಚ್ಚುಗೆ ಪಡೆದಿವೆ. `ಕೊಂದಹರುಳಿದರೆ' ಎಂಬ ಕತೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿನ್ನದ ಪದಕ ಪಡೆದಿದೆ. ೨೦೦೯ರಲ್ಲಿ ಸೇಡಂ ಮುನ್ನೂರು ಪ್ರತಿಷ್ಠಾನದ ವತಿಯಿಂದ `ಅಮ್ಮಾ' ಪ್ರಶಸ್ತಿ, ೨೦೧೧ರಲ್ಲಿ ಮೈಸೂರಿನ `ಶ್ರೀಮತಿ ರಾಗೌ ಪ್ರಶಸ್ತಿ' ೨೦೧೯ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಮತ್ತು ಶಿವಮೊಗ್ಗ ದಿಂದ `ಹಾಮಾನಾ ಪ್ರಶಸ್ತಿ, ಪಡೆದಿದ್ದಾರೆ. ೨೦೧೨ರಲ್ಲಿ ಬಸವಕಲ್ಯಾಣದ ಬೇಲೂರಿನಲ್ಲಿ ನಡೆದ ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ, ೨೦೧೩ರಲ್ಲಿ ಬೀದರನಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೬ರಿಂದ ೨೦೧೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.
ಮುಡಬಿ ಗುಂಡೆರಾವ್
ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿಯವರಾದ ಇವರು `ಮುಡಬಿ ಗುಂಡೆರಾವ್' ಎಂದೇ ಖ್ಯಾತರಾಗಿ ಸಂಶೋಧನಾ ಸಾಹಿತ್ಯ ರಚಿಸಿ, ಮೂರು ದಶಕಗಳಿಂದ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕಲಬುರಗಿ ಜಿಲ್ಲೆ ನೂತನ ಕಮಲಾಪೂರ ತಾಲ್ಲೂಕಿನ ಹೊಡಲ್ ಗ್ರಾಮದ ಅಂಬಾರಾಯ ಪೋಲಿಸ್ ಪಾಟೀಲ್. ಮತ್ತು ಮಹಾಂತಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್ ಪದವಿಧರರಾದ ಇವರು ಸೇಡಂ ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೨೦ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸೇಡಂ ತಾಲ್ಲೂಕಿನ ಸ್ಮಾರಕಗಳ ಸಾಂಸ್ಕೃತಿಕ ಒಂದು ಅಧ್ಯಯನ' ಎಂಬುದು ಇವರ ಎಂ.ಫೀಲ್ ಪ್ರಬಂಧವಾಗಿದೆ. ವಿದ್ಯಾರ್ಥಿಯಾಗಿರುವಾಗಲೇ ಸಂಶೋಧನಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು `ಸೇಡಂ ಐತಿಹಾಸಿಕ ಸ್ಮಾರಕಗಳು, ಸೇಡಿಂಬ ದುರ್ಗದ ಶಾಸನಗಳು, ಸೇಡಂ ತಾಲ್ಲೂಕು ದರ್ಶನ, ಮನ್ನೆದಡಿ ಸಾಸಿರ ನಾಡು, ಮಾನ್ಯಖೇಟದ ಸಿರಿ, ಆಳಂದ ಸಾಸಿರ ನಾಡು, ಕಾಳಗಿ ಕಾಳೇಶ್ವರ, ಮಾನ್ಯಖೇಟ'. (ಸಂಶೋಧನಾ ಕೃತಿಗಳು) `ಸ್ವಾಭಿಮಾನ- ೧.೨, `ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಜಿ,’ ಮತ್ತು `ಆಲ್ಲೂರಿನ ಕೆಂಚ ವೃಷಭೇಂದ್ರ ಶ್ರೀಗಳು' (ಚರಿತ್ರೆಗಳು) `ಸಂಗೀತ ಸಂಪದ' (ವ್ಯಕ್ತಿ ಚಿತ್ರಗಳು) `ಭಾವೈಕ್ಯದ ಕ್ಷೇತ್ರ ಮಳಖೇಡ ದರ್ಗಾ' (ಲೇಖನ) `ಸಾಹಿತ್ಯ ಚಿಲುಮೆ' (ಸಂಪಾದನೆ) ಇತ್ಯಾದಿ ೧೮ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಂಶೋಧನಾ, ಲೇಖನ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ೨೦ವರ್ಷಗಳಿಂದ ಸೇಡಂ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಮತ್ತು ಒಂದು ಅವಧಿಗೆ ಕಸಾಪ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಸಾಪ ಅವಧಿಯಲ್ಲಿ ಒಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹಲವು ಹೋಬಳಿ, ಗ್ರಾಮ ಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇವರಿಗೆ ೨೦೦೯ರಲ್ಲಿ ಕಲಬುರಗಿ ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೯ರಲ್ಲಿ ಸೇಡಂ ತಾಲ್ಲೂಕಿನ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಅಷ್ಟೇಯಲ್ಲದೆ ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಸೇಡಂ ತಾಲ್ಲೂಕಿನಲ್ಲಿ ವಾಸವಾಗಿದ್ದಾರೆ.
ಡಾ.ಕಲ್ಯಾಣಮ್ಮ ಲಂಗೋಟಿ
ಸಾಹಿತಿ ಡಾ.ಕಲ್ಯಾಣಮ್ಮ ಲಂಗೋಟಿ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬೀರಗಿ ಗ್ರಾಮದ ಹಾವಪ್ಪ ಕೋಟೆನವರ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ದಿನಾಂಕ ೫-೨-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಬಿಜಾಪುರದ ಶರಣ ಸಾಹಿತಿ ಪ್ರೊ. ಸಿದ್ಧಣ್ಣ ಲಂಗೋಟಿಯವರ ಧರ್ಮ ಪತ್ನಿಯಾಗಿದ್ದು, ೧೯೮೦ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೆಂಬಳಗಿ ಡಿಗ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ೧೯೭೯ರಲ್ಲಿ `ಮರಣವೇ ಮಹಾ ನವಮಿ’ (ಲೇಖನ) ೧೯೮೦ರಲ್ಲಿ `ಗಣನಾಯಕ ಮಡಿವಾಳ ಮಾಚಿದೇವರು’ ೧೯೮೨ರಲ್ಲಿ `ಷಣ್ಮುಖ ಶಿವಯೋಗಿಗಳು ಕಂಡ ಬಸವಣ್ಣನವರು’ ೧೯೮೫ರಲ್ಲಿ `ಶರಣೆಯರ ವಚನಾಮೃತ’ ೧೯೮೮ರಲ್ಲಿ `ಶರಣೆಯರ ವಚನಗಳು’ ೧೯೮೯ರಲ್ಲಿ `ಸಿದ್ಧಲಿಂಗೇಶ್ವರರು ಕಂಡ ಬಸವಣ್ಣನವರು’ `ದೇವದಾಸಿ ಪದ್ದತಿ ವಿಮೋಚನೆ ಹಾಗೂ ಬಸವಣ್ಣನವರು’ ಮತ್ತು `ಅಕ್ಕ ಮಹಾದೇವಿಯ ವಚನಗಳು’ ೧೯೯೦ರಲ್ಲಿ `ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳು’ ಮತ್ತು `ನೀಲಾಂಬಿಕೆಯ ವಚನಗಳು’ ೨೦೦೦ರಲ್ಲಿ `ಸ್ತ್ರೀ ಸಂವೇದನೆಗಳು' (ಕವನ ಸಂಕಲನ) ೨೦೦೧ರಲ್ಲಿ `ಜಯದೇವಿ ತಾಯಿ ಲಿಗಾಡೆ' ಮತ್ತು `ಕವಿಗಳು ಕಂಡ ಮಹಾಂತ ಶಿವಯೋಗಿಗಳು’ ೨೦೦೪ರಲ್ಲಿ `ಹಡಪದ ಲಿಂಗಮ್ಮ’ ೨೦೦೫ರಲ್ಲಿ `ಬಸವಾದಿ ಶರಣರ ವಚನಾಂಕಿತಗಳು’ ೨೦೦೬ರಲ್ಲಿ `ನೂತನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು’ ೨೦೦೮ರಲ್ಲಿ `ವರಕವಿ-ಜಗದಕವಿ ಈಶ್ವರ ಸಣ್ಣಕಲ್ಲರು’ ಇವು ಅವರ ಪ್ರಮುಖ ಶರಣ ಸಾಹಿತ್ಯದ ಕೃತಿಗಳಾಗಿವೆ. ಇವರಿಗೆ ೧೯೯೯ರಲ್ಲಿ ಇಳಕಲ್ ಶ್ರೀ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಆದರ್ಶ ಶರಣೆ ದಾಂಪತ್ಯ ಪ್ರಶಸ್ತಿ, ಮತ್ತು ಲಚ್ಚೆಯಬ್ಬರಸಿ' ಎಂಬ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಶ್ರೀಶೈಲದಲ್ಲಿ ಜರುಗಿದ ಬಸವಭೂಮಿ ೫ನೇ ಶರಣ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಕುರಿತು ಭಾಲ್ಕಿ ಸಾಹಿತಿ ವೀರಶೆಟ್ಟಿ ಭಾವುಗೆಯವರು ಲೇಖನಗಳು ಬರೆದು ಪ್ರಕಟಿಸಿದ್ದಾರೆ.
ಡಾ. ನೀಲಾಂಬಿಕಾ ಶೇರಿಕಾರ
ಸಾಹಿತಿ ಡಾ.ನೀಲಾಂಬಿಕಾ ಶೇರಿಕಾರ ರವರು ಬೀದರ ಜಿಲ್ಲೆ ಬಸವಕಲ್ಯಾಣದ ಶೇರಿಕಾರ ಎಂಬ ದೊಡ್ಡ ಮನೆತನದ ನಾಗಶೆಟ್ಟೆಪ್ಪಾ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೨-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಹಾಡಿದೇನು ಹಾಡು' `ಮಹಾ ಮನೆಯ ಮಹಿಮಾ' `ನನ್ನವ್ಬ' ಎಂಬ ಕವನ ಸಂಕಲನಗಳು, `ಬಹುರೂಪಿ ಚೌಡಯ್ಯ , `ಪೂಜ್ಯ ಚನ್ನಬಸವ ಪಟ್ಟದ್ದೆವರು'. 'ಕಲ್ಯಾಣ ಕಣ್ಮಣಿ ಬಾಬಾಸಾಹೇಬ ವಾರದ, ' `ಪೂಜ್ಯ ದೊಡ್ಡಪ್ಪ ಅಪ್ಪ' `ನಿರವತಾರೆ ಅಕ್ಕ ನಾಗಮ್ಮ' `ವೈದ್ಯ ನಕ್ಷತ್ರ'. 'ಅಷ್ಟಾವರಣೆ'. `ಅನುಭವ ಮಂಟಪ'. `ಮಹಾಮನೆ'. ಎಂಬ ಶರಣ ಸಾಹಿತ್ಯ ಕೃತಿಗಳು `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು' `ಶರಣಬಸವರ ಹಂತಿಯ ಹಾಡು'. `ಶರಣಬಸರ ಲಾವಣಿ ಪದಗಳು' `ಜನಪದ ಜ್ಯೋತಿ ಶರಣಬಸವ' `ಶರಣಬಸವರ ಶಿವಲೀಲೆಗಳು ' ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು' ಕೃತಿಗೆ ಮುಖ್ಯ ಮಂತ್ರಿಯಿAದ ಪ್ರಶಸ್ತಿಯು ಲಭಿಸಿದೆ. ಮತ್ತು ಇವರ `೭೭೦ ಅಮರ ಗಣಂಗಳು' `ಬಸವಕಲ್ಯಾಣ ಶರಣರ ನೆಲೆಗಳು' `ತಾಯಿಯ ಪದ' `ಹೇಮರೆಡ್ಡಿ ಮಲ್ಲಮ್ಮ' ಈ ಕೃತಿಗಳು ಮುದ್ರಣದ ಹಂತದಲ್ಲಿವೆ. `ದಾಸೋಹ ಬಂಡಾರಿ ಶರಣಬಸವ' ಎಂಬ ಜನಪದ ಮಹಾಕಾವ್ಯ ರಚಸಿದ ಇವರು ತ್ರಿಪದಿಯಲ್ಲಿ ಭಾಲ್ಕಿ ಶ್ರೀಗಳ ಕುರಿತು ಮತ್ತು ಜನಪದ ಜ್ಯೋತಿ ಶರಣಬಸವ ಕೃತಿಗಳನ್ನು ರಚಿಸಿದ್ದಾರೆ. ಹಂಪಿ, ಗುಲ್ಬರ್ಗ ವಿಶ್ವವಿದ್ಯಾಲಯಗಳ ಎಂ.ಫಿಲ್.ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಇವರ ಮನೆತನದ ಇನ್ನೊಂದು ಹೆಮ್ಮೆಯ ವಿಷಯವೆಂದರೆ ನಿಜಾಮ ಆಡಳಿತದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರ ಕುಟುಂಬವು ಬಡವರಿಗೆ ಅನ್ನ ಅರಿವೆ ಆಶ್ರಯ ನೀಡಿ ಹಿಂದು ಮುಸ್ಲಿಂ ಎನ್ನದೆ ಎಲ್ಲ ಸಮೂದಾಯದವರ ಜೀವ ರಕ್ಷಣೆ ಮಾಡಿರುವುದು ಈಗ ಐತಿಹ್ಯವಾಗಿದೆ. ಸದ್ಯ ಇವರು ಕಲಬುರಗಿಯಲ್ಲಿ ನೆಲೆಸಿದ್ದಾರೆ.
ಡಾ.ವಿಜಯಶ್ರೀ ಸಬರದ
ಹಿರಿಯ ಸಾಹಿತಿಗಳಾದ ಡಾ.ವಿಜಯಶ್ರೀ ಸಬರದ ಇವರು ಮೂಲತಃ ಬೀದರ ಜಿಲ್ಲೆ ಔರಾದ ತಾಲೂಕಿನ ಹಕ್ಯಾಳ ಗ್ರಾಮದವರು .ಇವರು ದಿನಾಂಕ ೧೦-೨-೧೯೫೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಖ್ಯಾತ ಸಾಹಿತಿ ಡಾ. ಬಸವರಾಜ ಸಬರದ ಅವರ ಧರ್ಮಪತ್ನಯಾಗಿದ್ದು, `ವಿಜಯ ಪ್ರಿಯ ಬಸವ' ಎಂಬ ವಚನಾಂಕಿತದಿAದ ಆಧುನಿಕ ವಚನ ಬರೆದು ಕವನ, ಲೇಖನ, ಪ್ರಬಂಧ ಮೊದಲಾದವು ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಕ್ಷಿತಿಜ್ ಬೀದರ್
`ಕ್ಷಿತಿಜ್ ಬೀದರ್' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸಿ ನಾಡಿನಾದ್ಯಂತ ಖ್ಯಾತರಾದ ಇವರ ನಿಜನಾಮ `ಬಸವರಾಜ ಮಠಪತಿ' ಎಂದಾಗಿದೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ನಾಗಯ್ಯ ಸ್ವಾಮಿ ಮಠಪತಿ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧-೬-೧೯೫೪ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಎಂ.ಎ.ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ೧೯೮೩ರಲ್ಲಿ `ನಾನು ಮತ್ತು ನಮ್ಮವರು' (ಕವನಸಂಕಲನ) ೧೯೮೭ರಲ್ಲಿ `ಹೇಗಾದರೂ ಬದುಕು' (ವೈಚಾರಿಕ) `ಅಮಲು’, `ಪ್ರೀತಿಸಿದವನು ನೀನೊಬ್ಬನೆ ಅಲ್ಲ', `ಕಬ್ಬಿನ ಬನದಲ್ಲಿ', `ನಿಶ್ಯಬ್ದದೆಡೆಗೆ', `ಅಪರಿಚಿತರು', `ಹೊಸ್ತಿಲಾಚೆ', `ಬೆಲೆ', `ಕ್ಷಿತಿಜದೆಡೆಗೆ', `ಕತ್ತಲೋಳಗೆ', `ಪ್ರೀತಿ ಅರಳಿತ್ತು', `ಅಮಾತ್ರ', `ಅಸ್ಪಷ್ಟ', `ಕೀ-ರಿಂಗ್', `ಇ-ಮನಸ್ಸು@ವೀರಭದ್ರ'. (ಕಾದಂಬರಿಗಳು) `ಕಥೆಗಳು ಕಾಯುವುದಿಲ್ಲ', `ಅದ್ರುವ', 'ದರ್ಶನ', `ಅನರ್ಥ', `ಅಡ್ಡಫಲ', `ಬೇರಿಲ್ಲದ ಹೂ ಗರಿ', `ನೆರಳಿನಷ್ಟೇ ಕತ್ತಲು', (ಕಥಾ ಸಂಕಲನಗಳು) `ಪತ್ತೆದಾರಿ ಇರುವೆ' ಮತ್ತು `ಗಿಳಿಮಣಿ' (ಮಕ್ಕಳ ಕಥಾಸಂಕಲನಗಳು) `ಭಾವಸುದ್ದಿ', 'ದೇಹವೆ ದೇಗುಲ', `ಕ್ಷಣಿಕ', `ಪ್ರಜ್ಚಾಯಾನ', `ಮನತುಂಬಿ', (ಚಿಂತನೆ) `ಶಿಖರ ಜ್ಯೋತಿ', `ಹಿಪ್ಪುನೆರಳೆಯಿಂದ ರೇಷ್ಮೆ', `ಉದ್ಯಮ ಮಾಹಿತಿ' (ಲೇಖನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನ, ಕಾದಂಬರಿಗಳು ತುಷಾರ, ಮಯೂರ, ಪ್ರಜಾವಾಣಿ, ಕನ್ನಡ ಪ್ರಭ, ತರಂಗ ಉಷಾ, ಬೆಳಕಿಂಡಿ, ಚಂದನ, ಪ್ರಜಾರಂಗ ಸುಧಾ, ಕರ್ಮವೀರ, ರಾಗಸಂಗಮ, ನವರಾಗಸಂಗಮ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಕೆಲ ಕಾದಂಬರಿ ಬರಹಗಳು ಧಾರಾವಾಹಿ ಅಂಕಣ ಬರಹಗಳಾಗಿಯೂ ಪ್ರಕಟವಾಗಿವೆ. ಸದ್ಯ ಇವರು ತುಮಕೂರಿನಲ್ಲಿ ವಾಸವಾಗಿದ್ದಾರೆ.
ಆರ್.ಕೆ.ಹುಡಗಿ
ಹಿರಿಯ ಬಂಡಾಯ ಸಾಹಿತಿ ಆರ್.ಕೆ.ಹುಡಗಿಯವರ `ಪೂರ್ಣನಾಮ ರಾಮಶೆಟ್ಟಿ ತಂದೆ ಕರಿಬಸಪ್ಪಾ ಹುಡಗಿ' ಎಂದಾಗಿದೆ. `ರಾಹು' ಎಂಬುದು ಇವರ ಕಾವ್ಯನಾಮವಾಗಿದೆ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಮುಚಳಂಬಿ ಗ್ರಾಮದ ಕರಿಬಸಪ್ಪಾ ಮತ್ತು ವೀರಮ್ಮಾ ದಂಪತಿಗಳಿಗೆ ದಿನಾಂಕ ೧-೯-೧೯೪೮ರಲ್ಲಿ ಜನಿಸಿದ್ದಾರೆ. ಎಂ.ಎ. ಇಂಗ್ಲೀಷ್ ಸ್ನಾತಕೋತ್ತರ ಪದವಿಧರರಾದ ಇವರು ೧೯೭೪ರಲ್ಲಿ ಕಲಬುರಗಿಯ ಪಿ.ಡಿ.ಎ.ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಹುಟ್ಟು ಹೋರಾಟಗಾರರಾದ ಇವರು ಎಡಪಂಥೀಯ ವಿಚಾರಗಳಿಂದ ಪ್ರತಿಭಟಿಸುತ್ತಾ ಬೆಳೆದವರು. ಮತ್ತು ಆ ವಿಚಾರಧಾರೆಗಳಿಂದ ಸಾಹಿತ್ಯವು ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಇವರು ಬರೆದ ಕೆಲ ಕೃತಿಗಳೆಂದರೆ, `ಈರೋಬಿ' (ಗೀತ ನಾಟಕ) 'ಬಾಯಿಂದ ಬಾದಶಹ ಪುರಾಣ', `ಹೆಮ್ಮಾರಿಯ ರಸ ಪುರಾಣ', `ಪ್ರಳಯಾಂತಕ ಪ್ರತಿಕಾರ', `ಅಸಮಾನತೆಯ ಅಸುರಿ ಮುಖಗಳು', `ಸಂಸ್ಥಾ' (ರಂಗನಾಟಕ) `ಬರದ ಬಯಲಾಟ'. `ಅಕ್ಷರ' `ಒರೆಗಲ್ಲು'. `ಪಾದಚಾರಿಯ ಪುರಾಣ' `ಸಾಕು ನಾಯಿ' `ಜ್ಯೊಲ್ಯಾ ನಾಯಿ' `ಬತ್ತಲೆ ಎಲ್ಲವ್ವನ ವಸ್ತ್ರಾಪಹರಣ' `ಅನ್ನದಾತನ ಅರ್ತನಾದ' `ಅನಾಮಿ ಪಿಂಡದ ಅರ್ತನಾದ' `ನರಗುಂದ ರೈತನ ಬಂಡಾಯ' `ಗುರು ಸಾರಥಿ- ಶಿಷ್ಯ ಅತಿಥಿ' `ಭಗಾವತ್ ಗೀತೆ' (ಬೀದಿ ನಾಟಕಗಳು) ಬರೆದು ಪ್ರದರ್ಶಿಸಿದ್ದಾರೆ. ಈ ನಾಟಕಗಳು ಸಂಸ್ಕೃತ ಜಾಥ, ವಿಜ್ಞಾನ ಜಾಥ,ಅಕ್ಷರ ಜಾಥ,ಬರಗಾಲ ಜಾಥ,ಮಹಿಳಾ ಜಾಥಾ,ಭ್ರಷ್ಟಾಚಾರ ವಿರುದ್ಧದ ಜಾಥಾ ಸೇರಿದಂತೆ ಹಲವಾರು ಕಡೆಗಳಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ೧೬೬೫ ಪ್ರದರ್ಶನಗಳು ಕಂಡು ಜನ ಮೆಚ್ಚುಗೆ ಪಡೆದಿವೆ. ಅಷ್ಟೇಯಲ್ಲದೆ ಇವರು ಉತ್ತಮ ಅನುವಾದಕರು ಆಗಿದ್ದರಿಂದ ಇಂಗ್ಲೀಷ್, ಮರಾಠಿ, ಹಿಂದಿ ಭಾಷೆಯ ಕೃತಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನೇಕೆ ನಾಸ್ತಿಕ (ಭಗತ್ ಸಿಂಗ) ವಿಮೋಚನೆಯ ದಾರಿ, (ಇ.ಎಂ.ಎನ್.ಎನ್) ವಿಮೋಚನೆಯೆಡೆಗೆ (ಮೈಥಿಲಿ ಶಿವರಾಮನ್) ಸಮರ್ಥ ಸಾಮ್ಯವಾದಿ (ಲಿವು-ಶಾವೊಕಿ) ಜ್ಯೋತಿ ಬಸು, (ಸುರಭಿ ಬ್ಯಾನರ್ಜಿ) ದಲಿತ ಸಂಘರ್ಷ: ದಾರಿ-ದಿಕ್ಕು (ಆನಂದ ತೇಲತುಂಬ್ಡೆ), ದಲಿತರು :ಭೂತ-ಭವಿಷ್ಯ, (ಆನಂದ ತೇಲತುಂಬ್ಡೆ) ಜಾತಿ ವ್ಯವಸ್ಥೆ- ಸಮಸ್ಯೆ ಸವಾಲುಗಳು, (ಬಾಬು ಜಗಜೀವನರಾಮ), ಜಾತಿ ವ್ಯವಸ್ಥೆ:- ಉಗಮ-ವಿಕಾಸ-ವಿನಾಶ (ಡಾ.ಬಿ.ಆರ್.ಅಂಬೇಡ್ಕರ್) ಮೈ ಫ್ಯುಡಲ್ ಲಾರ್ಡ್ ತೆಹಮಿನಾ ದುರ್ರಾನಿ ಅವರ ಆತ್ಮಕಥನ ‘ಆರನೆ ಹೆಂಡತಿಯ ಆತ್ಮಕಥನ‘, ಪೀಠಾಧಿಪತಿಯ ಪತ್ನಿ, ತುರಣ್ ತೇಜಪಾಲ್ ಅವರ ‘ದಿ ಅಲ್ಕೆಮಿ ಆಫ್ ಡಿಸೈರ್’ ‘ಕಾಮರಾಸಾಯನ ಶಾಸ್ತ್ರ’ ಬೆಸ್ಟ್ಸೆಲ್ಲರ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರು ೧೯೭೬ ರಲ್ಲಿ ಕಲಬುರಗಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ,೧೯೮೬ರಲ್ಲಿ ೧೦೦ ಅಡಿಗಳ ಬಣ್ಣದ ಜಾಗದಲ್ಲಿ ಸಂಘಟಕರಾಗಿ, ೧೯೯೧ ಸಾಕ್ಷರತೆ ಜಾಥ,೧೯೯೨ರಲ್ಲಿ ಜನವಿಜ್ಞಾನ ಜಾಥ, ೨೦೦೫ರಲ್ಲಿ ಭ್ರೂಣ ಹತ್ಯೆ ವಿರುದ್ಧ ಪ್ರಚಾರ ಜಾಥ, ೨೦೦೯ರಲ್ಲಿ ರೈತ ಪರ ಜಾಥಗಳಲ್ಲಿ ಲೇಖಕ ಮತ್ತು ಸಂಘಟಕರಾಗಿ ಸೇವೆ ಸಲ್ಲಿಸಿದ ಇವರು ೨೦೧೧ರಲ್ಲಿ ನಾಡಿನ ನೆಲ-ಜಲ ಉಳಿಸಲು ಬೀದರನಿಂದ ಬಳ್ಳಾರಿವರೆಗೆ ಸಂಘಟಕರಾಗಿ ಹೋರಾಟ ಮಾಡಿದ್ದಾರೆ. ಮತ್ತು ೧೯೮೫ರಿಂದ ೧೯೯೩ವರೆಗೆ ೧೯೯೮ರಿಂದ ೨೦೦೫ವರೆಗೆ ಕೋಮು ಸೌಹಾರ್ದತೆಗಾಗಿ ರಂಗೋತ್ಸವಗಳ ಸಂಘಟಕರಾಗಿ ದುಡಿದಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಶತಮಾನೋತ್ಸವದ ಸಂದರ್ಭದಲ್ಲಿ ೧೧೭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ೧೯೮೭ರಲ್ಲಿ ಬಿಜಾಪುರ ಜಿಲ್ಲೆಯಲ್ಲಿಯ ದೇವದಾಸಿ ಪದ್ದತಿಯ ವಿರುದ್ಧ ಒಂದು ತಿಂಗಳ ಕಾಲ ಜೋಗತಿ ನಾಟಕ ಪ್ರದರ್ಶನ ಸಂಘಟರಾಗಿದ್ದರು. ೧೯೭೭ರಿಂದಲೂ ಸಮುದಾಯ ಸಕ್ರಿಯ ಸದಸ್ಯರಾಗಿ, ಪೀಪಲ್ ಸೋಸಿಯೊ ಕಲ್ಚರಲ್ ಆರ್ಗನೈಸೇಷನ್ ಅಧ್ಯಕ್ಷರಾಗಿ, ಇಂಡೋ-ಸೋವಿಯತ್ ಕಲ್ಚರಲ್ ಸೊಸೈಟಿ ಕಲಬುರಗಿ ವಿಭಾಗದ ಅಧ್ಯಕ್ಷರಾಗಿ ೧೯೮೪ರಿಂದ ೧೯೯೦ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಯುನಿಯನ್ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿ ಸುಮಾರು ೨೭ವರ್ಷ ಸೇವೆ ಸಲ್ಲಿಸಿದ್ದಾರೆ. ಮತ್ತು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷರಾಗಿ, ಭಾರತ ಜ್ಞಾನ-ವಿಜ್ಞಾನ ಸಮಿತಿಯ ಅಧ್ಯಕ್ಷರಾಗಿ, ಕಲಬುರಗಿ ಸಮುದಾಯ ಘಟಕದ ಅಧ್ಯಕ್ಷರಾಗಿ, ಉತ್ತರ ವಲಯದ ಕಾರ್ಯದರ್ಶಿ, ಹಾಗೂ ೨೦೦೬ರಿಂದ ರಾಜ್ಯ ಸಮುದಾಯದ ಅಧ್ಯಕ್ಷರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಶುದ್ಧೀಕರಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ೧೯೭೯-೮೦ರಲ್ಲಿ ಕಲಬುರಗಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿ, ಗುಲಬರ್ಗಾ ರಾಜಕೀಯ ಶಾಂತಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೫ರಲ್ಲಿ ಕಲಬುರಗಿ ಮೊದಲ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ೧೯೯೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ೨೦೧೨ರಲ್ಲಿ ಇವರ `ಕಾರ್ಪೊರೇಟ್ ಕಾಲದಲ್ಲಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ೨೦೧೫ರಲ್ಲಿ ಇವರು ಮಾಡಿದ ಭಾಷಾಂತರ ಜೀವಮಾನ ಸಾಧನೆಗೆ `ಕುವೆಂಪು ಭಾಷಾ ಭಾರತಿ ಪ್ರಶಸ್ತಿ'ಯು ಲಭಿಸಿದೆ. ಸದ್ಯ ಇವರು ಕಲಬುರಗಿ ನಿವಾಸಿಯಾಗಿದ್ದು ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು ಸಾವಿರಾರು ಮಹತ್ವದ ಪುಸ್ತಕಗಳು ಸಂಗ್ರಹಿಸಿದ ಮಹಾನ್ ಪುಸ್ತಕ ಪ್ರೇಮಿಯು ಇವರಾಗಿದ್ದಾರೆ.
ಡಾ.ಕಾಶಿನಾಥ ಅಂಬಲಗೆ
ಹಿರಿಯ ಸಾಹಿತಿ ಹಾಗೂ ಅನುವಾದಕರಾದ ಡಾ.ಕಾಶಿನಾಥ ಅಂಬಲಗೆಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಚಳಂಬಿ ಗ್ರಾಮದ ರಾಚಪ್ಪ ಮತ್ತು ಗುರಮ್ಮ ದಂಪತಿಗಳಿಗೆ ದಿನಾಂಕ ೧೦-೭-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ.ಪಿಎಚ್.ಡಿ ಪದವಿಧರರಾದ ಇವರು ಪದವಿ ಕಾಲೇಜು ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಮೂವತ್ತೈದು ಕವನಗಳು, ಇನ್ನಷ್ಟು ಕವನಗಳು, ಕೌದಿ, ಹುಲ್ಲು ಮೇಲಿನ ಹನಿಗಳು, ಚುಳುಕಾದಿರಯ್ಯ, ಬೇವು-ಬೆಲ್ಲ, ಹಾಡುಗಳು ಉಳದಾವ, ಮೂವತ್ತಕ್ಕೆ ಮುನ್ನೂರು, ಶರಣು ಶರಣಾರ್ಥಿ ಗಜಲ್ ಗಳು. ಎಂಬ ಕವನ ಸಂಕಲನಗಳು, ಕಬೀರದಾಸರು, ಜ್ಞಾನ ಪೀಠ ಪ್ರಶಸ್ತಿ ವಿಜೇತ ಗುಜರಾತಿ ಕವಿ ಉಮಾಶಂಕರ ಜೋಶಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಭಗತ್ ಸಿಂಗ್, ಜಗದ ಮಹಾ ನಟ ಚಾರ್ಲಿಚಾಂಪ್ಲಿನ್, ಮಹಾತ್ಮ ಜ್ಯೋತಿಬಾಪುಲೆ, ನಾರಾಯಣ ಗುರು, ಡಾ.ರಾಜಕುಮಾರ, ಸಾವಿತ್ರಿಬಾಯಿ ಪುಲೆ, ಸ್ವಾಮಿ ವಿವೇಕಾನಂದ, ಬಾಬಾ ಆಮಟೆ, ಜಗದಗಲ ಮುಗಿಲಗಳು, ದಾರಿ ದೀಪಗಳು, ಶಿವಶರಣೆಯರು ಹಾಗೂ ಮಹಿಳಾ ಸಂಪನ್ಮೂಲ, ವಚನ ಸಾಹಿತ್ಯ- ಸಂತ ಸಾಹಿತ್ಯ, ವಚನ ಬೆಳಕು, ಸತಿಯೆ ಸಾಕಿಯಾದ ಕವಿ ಸಮಯ, ವಚನವಿಚಾರೋತ್ಸವ, ಗಾಂಧಿ ವಿಚಾರಧಾರೆ, ಆಯ್ದ ೭೨ ಅನಿಕೇತನ ಕನ್ನಡ ಗಜಲ್ ಗಳು, ಆಯ್ದ ೭೧ ಕವಿತೆಗಳು, ಆಯ್ದ ೭೧ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಅನಿಕೇತನ ಕನ್ನಡ ಕವಿತೆಗಳು, ಇತ್ಯಾದಿ ಅವರ ಕನ್ನಡದ ಪ್ರಮುಖ ಕೃತಿಗಳು ರಚಿಸಿದ್ದಾರೆ.
`ಅಧೂರೆ ಶಬ್ದ, ಸಂತ ಔರ ಶಿವಶರಣೋಂ ಕೆ ಕಾವ್ಯ ಮೇ ಸಾಮಾಜಿಕ ಚೇತನಾ, ಶರಣ ಔರ ಸಂತ: ಸಾಮಾಜಿಕ ಚಿಂತನ, ಬಸವೇಶ್ವರ: ಕಾವ್ಯ ಶಕ್ತಿ ಔರ ಸಾಮಾಜಿಕ ಶಕ್ತಿ, ವಚನ ಸಾಹಿತ್ಯ ಔರ ಸಂತ ಸಾಹಿತ್ಯ ಕಾ ಸಮಾಜ ಶಾಸ್ತ್ರ, ಬಾರವಿ ಶಾದೀ ಕೀ ಕನ್ನಡ ಕವಿತ್ರಿ ಅಕ್ಕಮಹಾದೇವಿ ಔರ ಸ್ತ್ರೀ ವಿಮರ್ಶ, ಬಸವಾದಿ ಶರಣೋಂ ಕೆ ಸಾಹಿತ್ಯ ಕಿ ಸಾಮಾಜಿಕ ಚೇತನಾ, ಸಿದ್ದರಾಮೇಶ್ವರ, ಗಾಂದಿಗಿರಿ, ಬಸವೇಶ್ವರ ಸಮತಾ ಕಿ ಧ್ವನಿ, ಅಲ್ಲಮಪ್ರಭು: ಪ್ರತಿಭಾ ಕಾ ಶಿಬಿರ, ಚೆನ್ನ ಬಸವಣ್ಣ: ಮಹಾಜ್ಞಾನಿ, ಮೋಳಿಗೆ ಮಾರಯ್ಯ, ಮೋಳಿಗೆ ಮಹಾದೇವಿ, ಆಯ್ದಕ್ಕಿ ಮಾರಯ್ಯ- ಲಕ್ಕಮ್ಮ, ಹಡಪದ ಅಪ್ಪಣ- ಲಿಂಗಮ್ಮ, ಉರಿಲಿಂಗ ಪೆದ್ದಿ - ಕಾಳವ್ವೆ, ವಚನ ಚಿಂತನ, ಕಾವ್ಯ ಕೇವಲ ಕಾವ್ಯ. ಇವು ಅವರು ಬರೆದ ಹಿಂದಿ ಭಾಷೆಯ ಕೃತಿಗಳು. ಅಷ್ಟೇಯಲ್ಲದೆ ಇವರು ಅನುವಾದಕರಾಗಿಯು ಉತ್ತಮ ಕೃಷಿ ಮಾಡಿದ್ದಾರೆ. ಹಿಂದಿ ಭಾಷೆಯಿಂದ ಕನ್ನಡಕ್ಕೆ ೧೯. ಕನ್ನಡದಿಂದ ಹಿಂದಿಗೆ ೫ಕೃತಿಗಳು ಅನುವಾದಿಸಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಸಾಹಿತ್ಯ ರಚಿಸುವುದರೊಂದಿಗೆ ಆ ಎರಡು ಭಾಷೆಗಳಲ್ಲಿ ಒಟ್ಟು ಇಲ್ಲಿಯವರೆಗೆ ೮೭ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕವನಗಳು ಪಂಜಾಬಿ, ಉರ್ದು, ಬಂಗಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಮತ್ತು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಮತ್ತು ಬೀದರದ ೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಇವರನ್ನು ಗೌರವಿಸಲಾಗಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿ.ರಾ.ಚಾಂಬಾಳ
ದಲಿತಕವಿ ವಿ.ರಾ.ಚಾಂಬಾಳ ರವರ ಪೂರ್ಣ ನಾಮ ವಿಠಲ ತಂದೆ ರಾಮಚಂದ್ರ ಚಾಂಬಾಳ ಎಂದಾಗಿದೆ. ಇವರು ಬೀದರ ತಾಲೂಕಿನ ಚಾಂಬಾಳ ಗ್ರಾಮದ ರಾಮಚಂದ್ರ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೬-೧೯೪೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ೧೯೬೯ರಲ್ಲಿ ಕಲಬುರಗಿಯ ಸರ್ಕಾರಿ ಮುದ್ರಣಾಲಯದಲ್ಲಿ ಸಹಾಯಕ ಯಂತ್ರ ಚಾಲಕರಾಗಿ, ಅಗ್ರ ಕಾರ್ಮಿಕ, ಪೊರಮನ್ ಆಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತಿಯಾಗಿದ್ದಾರೆ. ಮತ್ತು ಇವರು ೧೯೮೦ರಲ್ಲಿ ಭೀಮ ಗೀತೆ, ೧೯೮೮ರಲ್ಲಿ ಭೀಮನಾಮ ಗೀತಾವಳಿ, ೧೯೮೯ರಲ್ಲಿ ಭೀಮ ಭಜನೆ, ೧೯೯೦ರಲ್ಲಿ ಭೀಮ ಜ್ಯೋತಿ, ೧೯೯ರಲ್ಲಿ ಭೀಮ ಬೆಳಕು, ೨೦೦೨ರಲ್ಲಿ ಭೀಮ ಧ್ವನಿ, ೨೦೦೩ರಲ್ಲಿ ಭೀಮ ಶಕ್ತಿ, ೨೦೦೫ರಲ್ಲಿ ಭೀಮ ಸ್ವಾಭಿಮಾನಿ, ೨೦೦೬ರಲ್ಲಿ ಭೀಮ ಸಿಡಿಲು, ೨೦೦೭ರಲ್ಲಿ ಭೀಮ ಮಂಗಲ. ಎಂಬ ಅಂಬೇಡ್ಕರ್ ಕುರಿತಾದ ಗೀತೆಗಳು ಮತ್ತು ೨೦೧೧ರಲ್ಲಿ ಬುದ್ಧ-ಭಾನು ಭೀಮ-ಕಿರಣ, ೨೦೧೨ರಲ್ಲಿ ಮಾನವ ಯಾರು ? ೨೦೧೩ರಲ್ಲಿ ಸ್ವರ್ಗ ಮತ್ತು ನರಕ, ೨೦೧೪ರಲ್ಲಿ ಪ್ರೀತಿ ಮತ್ತು ಸಂಬAಧಗಳು, ೨೦೧೫ರಲ್ಲಿ `ಶಾಂತಿಯ ಕೇಂದ್ರ, ಮತ್ತು ಬೌದ್ಧ ಧರ್ಮದ ತಿರುಳು.’ ಎಂಬ ವೈಚಾರಿಕ ಬೌದ್ಧ ಸಾಹಿತ್ಯ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೧೨ರಲ್ಲಿ ಭಾರತೀಯ ದಲಿತ ಸಾಹಿತ್ಯ ಪರಿಷತ್ತು ನವದೆಹಲಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ, ಕಲಬುರಗಿ ಕಸಾಪದಿಂದ ಭೀಮ ಕವಿ ಪ್ರಶಸ್ತಿ, ಖರ್ಗೆ ೭೨ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಕುಶಾಗ್ರಮತಿ ಖರ್ಗೆ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ೨೦೧೪ರಲ್ಲಿ ಮೈಸೂರು ದಸರಾ ಕವಿಗೊಷ್ಠಿಯಲ್ಲಿ, ೨೦೨೦ರಲ್ಲಿ ಕಲಬುರಗಿಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.
ಶಶಿಕಲಾ ಎಸ್.ಗಿರಿ
ಸಾಹಿತಿ ಶಶಿಕಲಾ ಎಸ್.ಗಿರಿಯವರು ಬೀದರ ಜಿಲ್ಲೆ ಬಸವಕಲ್ಯಾಣದ ವೀರಭದ್ರಪ್ಪ ದುರ್ಗೆ ಮತ್ತು ಕಾಶಿಬಾಯಿ ದುರ್ಗೆ ದಂಪತಿಗಳಿಗೆ ದಿನಾಂಕ ೬-೧೨-೧೯೪೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಓದಿದ ಇವರು ಬೀದರದ ಲಾಡಗೇರಿಯ ಡಾ.ಶರಣಪ್ಪ ಗಿರಿಯವರ ಧರ್ಮ ಪತ್ನಿಯಾಗಿದ್ದಾರೆ. ಸಾಹಿತ್ಯ ರಚನೆಯಲ್ಲಿ ಆಸಕ್ತರಾದ ಇವರು `ಅಕ್ಕಮಹಾದೇವಿಯ ೧೦೮ ನಾಮಾವಳಿ' ಮತ್ತು `ಗಿರಿ ಕೋಗಿಲೆ' ಎಂಬ ಜಾನಪದ ಗೀತೆಗಳ ಸಂಗ್ರಹ, `ಶಶಿ ಶರಣ' ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಪ್ರವಾಸ ಕಥನವು ಬರೆದಿದ್ದು ಅದು ಅಪ್ರಕಟಿತವಾಗಿವೆ. ಇವರಿಗೆ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ಮಹಿಳಾ ಕವಯತ್ರಿಯರ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಕಲಬುರಗಿಯಲ್ಲಿ ನಡೆದ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಮ್ಮಾನ ಮತ್ತು ಕಲಬುರಗಿಯ ಅಡಿಯಲ್ ಸಂಸ್ಥೆಯಿAದ ವುಮನ್ ಸುಭದ್ರ ಕುಟುಂಬ ಮತ್ತು ಆರೋಗ್ಯ ಪೂರ್ಣ ಸಮಾಜಕ್ಕೆ ಮಾದರಿ ಮಹಿಳೆಯೆಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೀದರನಲ್ಲಿ ನಡೆದ ೧೮ನೇ ಅಖಿಲ ಭಾರತ ಮಹಿಳಾ ಕವಯತ್ರಿಯರ ಸಮ್ಮೇಳನ ಸೇರಿದಂತೆ ಮೊದಲಾದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರಿಗೆ ೨೦೧೮ರಲ್ಲಿ ಕಲಬುರಗಿಯ ಅನುಭವ ಮಂಟಪ ಮತ್ತು ಬಸವ ಸಮಿತಿಯ ಸಹಯೋಗದಲ್ಲಿ ನಡೆದ ಮಹಾದೇವಿಯಕ್ಕಂಗಳ ೧೧ನೇ ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಸದ್ಯ ಇವರು ಕಲಬುರಗಿಯ ವೆಂಕಟೇಶನಗರದ ನಿವಾಸಿಯಾಗಿದ್ದು ತಮ್ಮ ಓಣಿಯಲ್ಲಿಯ ಮುಕ್ತಾಯಕ್ಕ ಅಕ್ಕನ ಬಳಗದ ವತಿಯಿಂದ ಪ್ರತಿ ಸೋಮವಾರ ಶರಣರ ಕುರಿತು ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರು ಸಂಗ್ರಹಿಸಿದ ಜಾನಪದ ಹಾಡುಗಳು ಕಲಬುರಗಿ ಆಕಾಶವಾಣಿಯಿಂದಲೂ ಹಾಡಿ ಪ್ರಸಾರ ಮಾಡಿದ್ದಾರೆ.
ಜ್ಯೋತಿ ಮಠಪತಿ.
ಉದಯೋನ್ಮುಖ ಕವಯತ್ರಿಯಾದ ಜ್ಯೋತಿ ಮಠಪತಿ ಯವರು ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ನೀಲಕಂಠಯ್ಯಾ ಸ್ವಾಮಿ ಮತ್ತು ಕಲಾವತಿ ಸ್ವಾಮಿ ದಂಪತಿಗಳಿಗೆ ದಿನಾಂಕ ೧-೧-೧೯೮೭ರಲ್ಲಿ ಜನಿಸಿದ್ದಾರೆ. ಬಿ.ಇ.ಪದವಿಧರರಾದ ಇವರು ಸಂತೋಷ ಮುತ್ತಂಗಿಯವರ ಧರ್ಮಪತ್ನಿಯಾಗಿದ್ದು, ಗೃಹಿಣಿಯಾಗಿದ್ದುಕೊಂಡೆ ಕವನ, ಲೇಖನ, ಆಧುನಿಕ ವಚನಗಳನ್ನು ಬರೆದಿದ್ದಾರೆ. ೨೦೧೮ರಲ್ಲಿ `ಭಕ್ತಳ ಭಕ್ತಿಗೆ ಪ್ರತ್ಯಕ್ಷನಾದ ರಾಚೋಟೇಶ್ವರ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಮತ್ತು `ರಾಚೋಟೆಶ್ವರ’ ಎಂಬ ಅಂಕಿತನಾಮದಲ್ಲಿ ನೂರಾರು ಆಧುನಿಕ ವಚನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ
ಡಾ.ರೇಣುಕಾ ಎಂ.ಸ್ವಾಮಿ
ಕವಯತ್ರಿ ಡಾ.ರೇಣುಕಾ ಎಂ.ಸ್ವಾಮಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಪಂಚಯ್ಯಾ ಸ್ವಾಮಿ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೧-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್. ಪಿ.ಎಚ್.ಡಿ. ಪದವಿಧರರಾದ ಇವರು ೨೦೧೪ರಲ್ಲಿ ರಾಯಚೂರು ಜಿಲ್ಲೆ ಶಕ್ತಿನಗರದ ಸರ್ಕಾರಿ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೫ರಲ್ಲಿ `ಬಸವ ಪರಿಶೋಧ' ಮತ್ತು `ತೆಲಂಗಾಣ ಕಿರಣ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ `ಕನ್ನಡ ಮಾಧ್ಯಮ ಪ್ರಶಸ್ತಿ' ಹಾಗೂ ಔರಾದ ತಾಲೂಕಿನ ಕಾಯಕ ಯೋಗಿ ಟ್ರಸ್ಟ್ ಸಂತಪೂರ ವತಿಯಿಂದ `ಕಾಯಕ ಯೋಗಿ ಪ್ರಶಸ್ತಿ, ಬೀದರದ ದಾಸ ಸಾಹಿತ್ಯ ಪರಿಷತ್ತಿನ ವತಿಯಿಂದ. `ತಲ್ಲಣಿಸದಿರು ತಾಳು ಮನವೇ’ ಎಂಬ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಸೇಡಂ ತಾಲೂಕಿನ ಮೇದಕ್ ಗ್ರಾಮದಲ್ಲಿ ನಡೆದ ೩ನೇ ಕಲ್ಯಾಣ ಕರ್ನಾಟಕ ಗಡಿನಾಡು ಉತ್ಸವ ಹಾಗೂ ತೆಲಂಗಾಣ ಕನ್ನಡ ಸಂಘದ ವತಿಯಿಂದ ಕೃಷ್ಣಾದಲ್ಲಿ ನಡೆದ ಗಡಿನಾಡು ಉತ್ಸವ, ಮತ್ತು ಔರಾದ ಕಸಾಪ ಸಾಹಿತ್ಯ ಸಮ್ಮೇಳನ ಚಿಂತಾಕಿ ಸೇರಿದಂತೆ ಹಲವಾರು ಸಮ್ಮೇಳನಗಳಲ್ಲಿ ಪಾಲ್ಗೊಂಡು ಉಪನ್ಯಾಸ, ಕವನ ವಾಚನ ಮಾಡಿದ್ದಾರೆ,
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)