ಪುಟಗಳು

ಭಾನುವಾರ, ಜನವರಿ 12, 2025

ಡಾ.ರೇಣುಕಾ ಎಂ.ಸ್ವಾಮಿ

ಕವಯತ್ರಿ ಡಾ.ರೇಣುಕಾ ಎಂ.ಸ್ವಾಮಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಪಂಚಯ್ಯಾ ಸ್ವಾಮಿ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೧-೧೯೮೨ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್. ಪಿ.ಎಚ್.ಡಿ. ಪದವಿಧರರಾದ ಇವರು ೨೦೧೪ರಲ್ಲಿ ರಾಯಚೂರು ಜಿಲ್ಲೆ ಶಕ್ತಿನಗರದ ಸರ್ಕಾರಿ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೧೫ರಲ್ಲಿ `ಬಸವ ಪರಿಶೋಧ' ಮತ್ತು `ತೆಲಂಗಾಣ ಕಿರಣ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ `ಕನ್ನಡ ಮಾಧ್ಯಮ ಪ್ರಶಸ್ತಿ' ಹಾಗೂ ಔರಾದ ತಾಲೂಕಿನ ಕಾಯಕ ಯೋಗಿ ಟ್ರಸ್ಟ್ ಸಂತಪೂರ ವತಿಯಿಂದ `ಕಾಯಕ ಯೋಗಿ ಪ್ರಶಸ್ತಿ, ಬೀದರದ ದಾಸ ಸಾಹಿತ್ಯ ಪರಿಷತ್ತಿನ ವತಿಯಿಂದ. `ತಲ್ಲಣಿಸದಿರು ತಾಳು ಮನವೇ’ ಎಂಬ ಪ್ರಶಸ್ತಿಯು ಪಡೆದಿದ್ದಾರೆ. ಹಾಗೂ ಸೇಡಂ ತಾಲೂಕಿನ ಮೇದಕ್ ಗ್ರಾಮದಲ್ಲಿ ನಡೆದ ೩ನೇ ಕಲ್ಯಾಣ ಕರ್ನಾಟಕ ಗಡಿನಾಡು ಉತ್ಸವ ಹಾಗೂ ತೆಲಂಗಾಣ ಕನ್ನಡ ಸಂಘದ ವತಿಯಿಂದ ಕೃಷ್ಣಾದಲ್ಲಿ ನಡೆದ ಗಡಿನಾಡು ಉತ್ಸವ, ಮತ್ತು ಔರಾದ ಕಸಾಪ ಸಾಹಿತ್ಯ ಸಮ್ಮೇಳನ ಚಿಂತಾಕಿ ಸೇರಿದಂತೆ ಹಲವಾರು ಸಮ್ಮೇಳನಗಳಲ್ಲಿ ಪಾಲ್ಗೊಂಡು ಉಪನ್ಯಾಸ, ಕವನ ವಾಚನ ಮಾಡಿದ್ದಾರೆ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ